Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ಫೆ.4ಕ್ಕೆ ಗಣೇಶ ಜಯಂತಿ: ಮನೆಯಲ್ಲಿ ಯಾವ ಬಗೆಯ ಗಣೇಶನ ಪೂಜಿಸಬೇಕು?
ಫೆಬ್ರವರಿ 4ಕ್ಕೆ ಗಣೇಶ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಾಘ ಮಾಸದ ಶುಕ್ಲ ಪಕ್ಷದಂದು ಗಣೇಶ ಜನಿಸಿದ ಎಂದು ಪೌರಾಣಿಕ ಕತೆ ಹೇಳುತ್ತದೆ.

ಮಾಘಿ ಗಣಪತಿ, ಮಾಘ ಶುಕ್ಲ ಚತುರ್ಥಿ, ವರದ ಚತುರ್ಥಿ ಹೀಗೆ ಗಣೇಶ ಜಯಂತಿಯನ್ನು ಹಲವು ನಾಮಗಳಿಂದ ಆಚರಿಸಲಾಗುವುದು. ಗಣೇಶ ಜಯಂತಿಯ ದಿನದಂದು ಭಕ್ತರು ಉಪವಾಸವಿದ್ದು ಗಣೇಶನ ಮಂತ್ರಗಳನ್ನು ಹೇಳುತ್ತಾ ಪೂಜೆ ಸಲ್ಲಿಸುತ್ತಾರೆ. ಗಣೇಶನ ಆರಾಧನೆ ಮಾಡಿದರೆ ಇಷ್ಟಾರ್ಥಗಳು ನೆರವಾಗುವುದು.

ಗಣೇಶ ಜಯಂತಿ 2022: ತಿಥಿ ಹಾಗೂ ಪೂಜೆಗೆ ಮುಹೂರ್ತ ಸಮಯ
ದಿನಾಂಕ: ಫೆಬ್ರವರಿ4
ಗಣೇಶ ಪೂಜೆಗೆ ಮಹೂರ್ತ: ಬೆಳಗ್ಗೆ 11:44ರಿಂದ ಮಧ್ಯಾಹ್ನ 12:01ರವರೆಗೆ
ಚತುರ್ಥಿ ತಿಥಿ ಪ್ರಾರಂಭ: ಫೆಬ್ರವರಿ 4 ಬೆಳಗ್ಗೆ 04:38ಕ್ಕೆ
ಚತುರ್ಥಿ ತಿಥಿ ಮುಕ್ತಾಯ: ಫೆಬ್ರವರಿ 5 ಮುಂಜಾನೆ 03:47ಕ್ಕೆ

ಮನೆಯಲ್ಲಿ ಯಾವ ಬಗೆಯ ಗಣೇಶನ ಪೂಜಿಸಬೇಕು?
ಗಣೇಶನ ಆರಾಧನೆ ಮಾಡುವುದರಿಂದ ಅವನು ಬದುಕಿನಲ್ಲಿ ಎದುರಾಗುವ ಎಲ್ಲಾ ವಿಘ್ನಗಳನ್ನು ಓಡಿಸುತ್ತಾನೆ ಎಂಬುವುದನ್ನು ಭಕ್ತರು ಬಲವಾಗಿ ನಂಬುತ್ತಾರೆ. ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಮಾಡುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಕೆಯಾಗಲೇಬೇಕು. ಗಣೇಶನ ಪೂಜಿಸಿದರೆ ಎಲ್ಲಾ ವಿಘ್ನಗಳು ನಿವಾರಣೆಯಾಗುವುದು, ಸಂಕಲ್ಪ ನೆರವಾಗುವುದು. ಜನರು ಹಲವಾರು ಬಗೆಯ ಗಣೇಶನ ಮೂರ್ತಿಗಳನ್ನು ಪೂಜಿಸುತ್ತಾರೆ. ಮನೆಯಲ್ಲಿ ಪೂಜೆಗೆ ಯಾವ ಗಣೇಶನ ಇಟ್ಟು ಪೂಜಿಸುವುದು ಒಳ್ಳೆಯದು ಎಂದು ನೋಡುವುದಾದರೆ

ಶ್ವೇತಾರ್ಕ ಗಣಪತಿ-
ಆಕ ಗಿಡದ ಬೇರಿನಿಂದ ತಯಾರಿಸಿದ ಶ್ವೇತಾರ್ಕ ಗಣಪತಿಯನ್ನು ಪೂಜಿಸುವುದರಿಂದ ಯಾವುದೇ ರೀತಿಯ ವಾಮಾಚಾರ, ನೇತ್ರ ದೋಷ ಇತ್ಯಾದಿ ಭಯ ನಿವಾರಣೆಯಾಗುವುದು.

ಪರದ ಗಣೇಶ -
ಪಾದರಸದಿಂದ ಮಾಡಿದ ಗಣೇಶನ ಪೂಜೆಯನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪರದ ಗಣೇಶನನ್ನು ಪೂಜಿಸುವುದರಿಂದ ಯಾವುದೇ ಅಡ್ಡಿಗಳಿರುವುದಿಲ್ಲ, ಜೀವನದಲ್ಲಿ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ.

ಬೆಳ್ಳಿ ಗಣಪತಿ
ಶಾಸ್ತ್ರಗಳ ಪ್ರಕಾರ, ಬೆಳ್ಳಿಯಿಂದ ಮಾಡಿದ ಗಣಪತಿಯ ವಿಗ್ರಹವನ್ನು ಪೂಜಿಸುವುದರಿಂದ ಸಂಪತ್ತು, ಆಹಾರಕ್ಕೆ ಕೊರತೆ ಇರುವುದಿಲ್ಲ, ಮನೆಯಲ್ಲಿ ಸಂತೋಷಕ್ಕೆ ಕೊರತೆಯಿಲ್ಲ.

ಶ್ರೀಗಂಧದ ಗಣಪತಿ
ಶ್ರೀಗಂಧದ ಗಣಪತಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಪ್ರೀತಿ ಮತ್ತು ಸಾಮರಸ್ಯ ಇರುತ್ತದೆ.

ಹವಳದ ಗಣಪತಿ
ಸಿಂಧೂರ ಹವಳದಿಂದ ಮಾಡಿದ ಗಣೇಶನನ್ನು ಪೂಜಿಸುವುದರಿಂದ ಗೊತ್ತಿರುವ ಮತ್ತು ಅಪರಿಚಿತ ಶತ್ರುಗಳ ಭಯ ದೂರವಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಗಣಪತಿಯ ಕೃಪೆಯಿಂದ ನಿರ್ಭೀತರಾಗಿ ಸುಖ ಜೀವನ ನಡೆಸಬಹುದು

ಪನ್ನದ ಗಣೇಶ
ಪಚ್ಚೆ ರತ್ನದಿಂದ ಮಾಡಿದ ಗಣಪತಿಯನ್ನು ಪೂಜಿಸುವುದರಿಂದ ಬುದ್ಧಿವಂತಿಕೆ ಮತ್ತು ವಿದ್ಯೆಯ ಆಶೀರ್ವಾದ ಸಿಗುತ್ತದೆ. ಅದೇ ಸಮಯದಲ್ಲಿ, ಪರೀಕ್ಷೆ ಮತ್ತು ಸ್ಪರ್ಧೆಯಲ್ಲಿ ಯಶಸ್ಸು ಸಿಗುವುದು.



Click it and Unblock the Notifications











