Latest Updates
-
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ!
ಫೆ.4ಕ್ಕೆ ಗಣೇಶ ಜಯಂತಿ: ಮನೆಯಲ್ಲಿ ಯಾವ ಬಗೆಯ ಗಣೇಶನ ಪೂಜಿಸಬೇಕು?
ಫೆಬ್ರವರಿ 4ಕ್ಕೆ ಗಣೇಶ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಾಘ ಮಾಸದ ಶುಕ್ಲ ಪಕ್ಷದಂದು ಗಣೇಶ ಜನಿಸಿದ ಎಂದು ಪೌರಾಣಿಕ ಕತೆ ಹೇಳುತ್ತದೆ.

ಮಾಘಿ ಗಣಪತಿ, ಮಾಘ ಶುಕ್ಲ ಚತುರ್ಥಿ, ವರದ ಚತುರ್ಥಿ ಹೀಗೆ ಗಣೇಶ ಜಯಂತಿಯನ್ನು ಹಲವು ನಾಮಗಳಿಂದ ಆಚರಿಸಲಾಗುವುದು. ಗಣೇಶ ಜಯಂತಿಯ ದಿನದಂದು ಭಕ್ತರು ಉಪವಾಸವಿದ್ದು ಗಣೇಶನ ಮಂತ್ರಗಳನ್ನು ಹೇಳುತ್ತಾ ಪೂಜೆ ಸಲ್ಲಿಸುತ್ತಾರೆ. ಗಣೇಶನ ಆರಾಧನೆ ಮಾಡಿದರೆ ಇಷ್ಟಾರ್ಥಗಳು ನೆರವಾಗುವುದು.

ಗಣೇಶ ಜಯಂತಿ 2022: ತಿಥಿ ಹಾಗೂ ಪೂಜೆಗೆ ಮುಹೂರ್ತ ಸಮಯ
ದಿನಾಂಕ: ಫೆಬ್ರವರಿ4
ಗಣೇಶ ಪೂಜೆಗೆ ಮಹೂರ್ತ: ಬೆಳಗ್ಗೆ 11:44ರಿಂದ ಮಧ್ಯಾಹ್ನ 12:01ರವರೆಗೆ
ಚತುರ್ಥಿ ತಿಥಿ ಪ್ರಾರಂಭ: ಫೆಬ್ರವರಿ 4 ಬೆಳಗ್ಗೆ 04:38ಕ್ಕೆ
ಚತುರ್ಥಿ ತಿಥಿ ಮುಕ್ತಾಯ: ಫೆಬ್ರವರಿ 5 ಮುಂಜಾನೆ 03:47ಕ್ಕೆ

ಮನೆಯಲ್ಲಿ ಯಾವ ಬಗೆಯ ಗಣೇಶನ ಪೂಜಿಸಬೇಕು?
ಗಣೇಶನ ಆರಾಧನೆ ಮಾಡುವುದರಿಂದ ಅವನು ಬದುಕಿನಲ್ಲಿ ಎದುರಾಗುವ ಎಲ್ಲಾ ವಿಘ್ನಗಳನ್ನು ಓಡಿಸುತ್ತಾನೆ ಎಂಬುವುದನ್ನು ಭಕ್ತರು ಬಲವಾಗಿ ನಂಬುತ್ತಾರೆ. ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಮಾಡುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಕೆಯಾಗಲೇಬೇಕು. ಗಣೇಶನ ಪೂಜಿಸಿದರೆ ಎಲ್ಲಾ ವಿಘ್ನಗಳು ನಿವಾರಣೆಯಾಗುವುದು, ಸಂಕಲ್ಪ ನೆರವಾಗುವುದು. ಜನರು ಹಲವಾರು ಬಗೆಯ ಗಣೇಶನ ಮೂರ್ತಿಗಳನ್ನು ಪೂಜಿಸುತ್ತಾರೆ. ಮನೆಯಲ್ಲಿ ಪೂಜೆಗೆ ಯಾವ ಗಣೇಶನ ಇಟ್ಟು ಪೂಜಿಸುವುದು ಒಳ್ಳೆಯದು ಎಂದು ನೋಡುವುದಾದರೆ

ಶ್ವೇತಾರ್ಕ ಗಣಪತಿ-
ಆಕ ಗಿಡದ ಬೇರಿನಿಂದ ತಯಾರಿಸಿದ ಶ್ವೇತಾರ್ಕ ಗಣಪತಿಯನ್ನು ಪೂಜಿಸುವುದರಿಂದ ಯಾವುದೇ ರೀತಿಯ ವಾಮಾಚಾರ, ನೇತ್ರ ದೋಷ ಇತ್ಯಾದಿ ಭಯ ನಿವಾರಣೆಯಾಗುವುದು.

ಪರದ ಗಣೇಶ -
ಪಾದರಸದಿಂದ ಮಾಡಿದ ಗಣೇಶನ ಪೂಜೆಯನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪರದ ಗಣೇಶನನ್ನು ಪೂಜಿಸುವುದರಿಂದ ಯಾವುದೇ ಅಡ್ಡಿಗಳಿರುವುದಿಲ್ಲ, ಜೀವನದಲ್ಲಿ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ.

ಬೆಳ್ಳಿ ಗಣಪತಿ
ಶಾಸ್ತ್ರಗಳ ಪ್ರಕಾರ, ಬೆಳ್ಳಿಯಿಂದ ಮಾಡಿದ ಗಣಪತಿಯ ವಿಗ್ರಹವನ್ನು ಪೂಜಿಸುವುದರಿಂದ ಸಂಪತ್ತು, ಆಹಾರಕ್ಕೆ ಕೊರತೆ ಇರುವುದಿಲ್ಲ, ಮನೆಯಲ್ಲಿ ಸಂತೋಷಕ್ಕೆ ಕೊರತೆಯಿಲ್ಲ.

ಶ್ರೀಗಂಧದ ಗಣಪತಿ
ಶ್ರೀಗಂಧದ ಗಣಪತಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಪ್ರೀತಿ ಮತ್ತು ಸಾಮರಸ್ಯ ಇರುತ್ತದೆ.

ಹವಳದ ಗಣಪತಿ
ಸಿಂಧೂರ ಹವಳದಿಂದ ಮಾಡಿದ ಗಣೇಶನನ್ನು ಪೂಜಿಸುವುದರಿಂದ ಗೊತ್ತಿರುವ ಮತ್ತು ಅಪರಿಚಿತ ಶತ್ರುಗಳ ಭಯ ದೂರವಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಗಣಪತಿಯ ಕೃಪೆಯಿಂದ ನಿರ್ಭೀತರಾಗಿ ಸುಖ ಜೀವನ ನಡೆಸಬಹುದು

ಪನ್ನದ ಗಣೇಶ
ಪಚ್ಚೆ ರತ್ನದಿಂದ ಮಾಡಿದ ಗಣಪತಿಯನ್ನು ಪೂಜಿಸುವುದರಿಂದ ಬುದ್ಧಿವಂತಿಕೆ ಮತ್ತು ವಿದ್ಯೆಯ ಆಶೀರ್ವಾದ ಸಿಗುತ್ತದೆ. ಅದೇ ಸಮಯದಲ್ಲಿ, ಪರೀಕ್ಷೆ ಮತ್ತು ಸ್ಪರ್ಧೆಯಲ್ಲಿ ಯಶಸ್ಸು ಸಿಗುವುದು.



Click it and Unblock the Notifications