Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಲಕ್ಷ್ಮಿ ದೇವಿಗೆ ಈ ಹೂವುಗಳೆಂದರೆ ಅಚ್ಚುಮೆಚ್ಚು- ವರಮಹಾಲಕ್ಷ್ಮಿ ಪೂಜೆಗೆ ತಪ್ಪದೇ ಇಂತಹ ಹೂವುಗಳನ್ನು ಅರ್ಪಿಸಿ

ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಪ್ರಾಮುಖ್ಯತೆ ಇದ್ದು ಕೆಲವೊಂದು ಹಬ್ಬಗಳು ಅದರದ್ದೇ ಆದ ವಿಶೇಷತೆಗಳನ್ನು ಪಡೆದುಕೊಂಡಿದೆ. ಆಷಾಢ ಮುಗಿದು ಶ್ರಾವಣ ಬಂದ ಒಡನೆಯೇ ಹಬ್ಬಗಳದೇ ಕಾರುಬಾರು ಹೆಚ್ಚಾಗಿರುತ್ತದೆ. ಅಗಸ್ಟ್ ತಿಂಗಳಿನಲ್ಲಿ ನಾಗರ ಪಂಚಮಿಯಿಂದ ತೊಡಗಿ ವರಮಹಾಲಕ್ಷ್ಮೀ, ಗಣೇಶ ಹಬ್ಬ, ದಸರ, ದೀಪಾವಳಿ ಹೀಗೆ ಹಬ್ಬಗಳ ಸಾಲೇ ನಮ್ಮನ್ನು ಸ್ವಾಗತಿಸಿ ಮುಖದಲ್ಲಿ ಖುಷಿಯನ್ನು ತಂದೊಡ್ಡುತ್ತದೆ.
ಬೇರೆ ಬೇರೆ ದೇವರುಗಳಿಗೆ ಅವರವರ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಸಾರುವ ಕೆಲಸವನ್ನು ಈ ಹಬ್ಬಗಳು ಮಾಡುತ್ತವೆ. ಉದಾಹರಣೆಗೆ ನಾಗರ ಪಂಚಮಿ ಹಾವಿನ ಪೂಜೆಯ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿದರೆ ಚೌತಿ ಹಬ್ಬ ಗಣೇಶನಿಗೆ ವಿಶೇಷವಾದುದು. ವರಮಹಾಲಕ್ಷ್ಮೀ ಹಬ್ಬ ಲಕ್ಷ್ಮೀ ಪೂಜೆಯ ವಿಶೇಷತೆ ಸಾರಿದರೆ ಕೃಷ್ಣಾಷ್ಟಮಿ ಕೃಷ್ಣನ ಮಹತ್ವವನ್ನು ಸಾರುತ್ತದೆ. ಅಂತೆಯೇ ಪ್ರತಿಯೊಂದು ಹಬ್ಬ ಕೂಡ ಒಂದಿಲ್ಲೊಂದು ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಹಬ್ಬ ಯಾವುದೇ ಇರಲಿ ಹಬ್ಬದ ಸಮಯದಲ್ಲಿ ಪೂಜೆ ಮಾಡಲು ಹೂವುಗಳ ಸ್ಥಾನ ಅತಿಮುಖ್ಯವಾದುದು. ಲಕ್ಷ್ಮೀ ಮಾತೆಗೂ ಕೂಡ ಹೂವೆಂದರೆ ಪಂಚಪ್ರಾಣ. ಇನ್ನೇನು ವರಮಹಾಲಕ್ಷ್ಮೀ ಹಬ್ಬ ಬಂದೇ ಬಿಟ್ಟಿತು ಈ ಸಂದರ್ಭದಲ್ಲಿ ಲಕ್ಷ್ಮೀ ದೇವಿಯನ್ನು ಪ್ರೀತ್ಯರ್ಥಪಡಿಸಲು ದೇವಿಯನ್ನು ಅವರ ಮೆಚ್ಚಿನ ಹೂವುಗಳಿಂದ ಪೂಜಿಸಲೇಬೇಕು. ಮಹಾವಿಷ್ಣುವಿಗೆ ಮಲ್ಲಿಗೆ ಹೇಗೆ ಪ್ರಿಯವೋ ಶಿವನಿಗೆ ದತ್ತೂರ ಮತ್ತು ಬಿಲ್ವಪತ್ರೆ ಇಷ್ಟ. ಹೀಗೆ ಆಯಾಯ ದೇವರಿಗೆ ಅವರಿಗೆ ಪ್ರಿಯವಾಗುವ ಹೂವುಗಳಿಂದ ಪೂಜಿಸಿದರೆ ನಮಗೂ ನೆಮ್ಮದಿ ಮತ್ತು ಸಮಾಧಾನ ಉಂಟಾಗುತ್ತದೆ.
ಹಾಗಿದ್ದರೆ ಸೃಷ್ಟಿಕರ್ತ ಮತ್ತು ಲಯಕರ್ತರಿಗೆ ಮೆಚ್ಚುಗೆಯಾಗುವ ಹೂವುಗಳ ಬಗೆಗಳನ್ನು ನಾವು ತಿಳಿದುಕೊಂಡಿದ್ದೇವೆ. ವಿಷ್ಣುವು ಶಾಂತಪ್ರಿಯನಾಗಿದ್ದು ಎಲ್ಲಾ ಹೂವುಗಳು ಇಷ್ಟಪಡುತ್ತಾರೆ ಆದರೆ ಮಹಾದೇವ ನಾಶಮಾಡುವವರಾಗಿದ್ದರೂ ಕೆಟ್ಟದ್ದನ್ನು ಅಳಿಸಿ ಒಳ್ಳೆಯದ ಸೃಷ್ಟಿಗೆ ಕಾರಣಕರ್ತರಾಗಿರುವವರಾಗಿದ್ದಾರೆ. ಹಾಗಿದ್ದರೆ ವರನೀಡುವ ಲಕ್ಷ್ಮೀ ಮಾತೆಗೆ ಇಷ್ಟವಾಗುವ ಹೂವುಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಕಮಲ
ಲಕ್ಷ್ಮೀ ಮಾತೆಗೆ ಅತಿ ಪ್ರಿಯವಾಗಿರುವ ಹೂವಾಗಿದೆ ಕಮಲ. ನೀವು ಲಕ್ಷ್ಮೀ ಮಾತೆಯ ಫೋಟೋಗಳಲ್ಲಿ ಕೈಯಲ್ಲಿ ಹಿಡಿದಿಡಿರುವ ಕಮಲವನ್ನು ಕಂಡಿರಬಹುದು. ಹೀಗಾಗಿ ತಾವರೆ ದೇವಿಗೆ ಹೆಚ್ಚು ಪ್ರಿಯವಾದುದು. ವರಲಕ್ಷ್ಮೀ ಪೂಜೆಯಂದು ದೇವಿಗೆ ಕಮಲವನ್ನು ಅರ್ಪಿಸಬಹುದು.

ಕೆಂಪು ಗುಲಾಬಿ
ಲಕ್ಷ್ಮೀಯು ವಿವಾಹಿತ ಸ್ತ್ರೀಯಾಗಿದ್ದಾರೆ. ಹಾಗಾಗಿ ತಾಯಿಗೆ ಬಿಳಿ ಹೂವುಗಳನ್ನು ಅರ್ಪಿಸುವುದಿಲ್ಲ. ಲಕ್ಷ್ಮೀಗೆ ಕೆಂಪು ಗುಲಾಬಿ ಹೆಚ್ಚು ಪ್ರಿಯವಾದುದು. ಪೂಜೆಯ ದಿನ ದೇವಿಯನ್ನು ಗುಲಾಬಿ ಹೂವುಗಳಿಂದ ನೀವು ಅಲಂಕರಿಸಬಹುದಾಗಿದೆ.

ಕೆಂಪು ಮಲ್ಲಿಗೆ
ವರಮಹಾಲಕ್ಷ್ಮೀಯನ್ನು ವಿಧ ವಿಧ ಹೂವುಗಳಿಂದ ಪೂಜಿಸುವಾಗ ಹೂವನ್ನು ಮರೆಯಬಾರದು. ಸಣ್ಣನೆಯ ಪರಿಮಳವನ್ನು ಹೊಂದಿರುವ ಈ ಹೂವು ನೋಡಲು ಚೆನ್ನಾಗಿದೆ ಮತ್ತು ಲಕ್ಷ್ಮೀಗೆ ದಂಡೆಯಂತೆ ಅರ್ಪಿಸಬಹುದು.

ಹಳದಿ ಬಣ್ಣದ ಸ್ಕ್ರೂ ಪೈನ್
ಇತರ ಪೂಜೆಗಳಲ್ಲಿ ಈ ಹೂವನ್ನು ಬಳಸುವುದಿಲ್ಲ. ಆದರೆ ಲಕ್ಷ್ಮೀ ಮಾತೆಗೆ ಈ ಹೂವು ಬಲು ಪ್ರಿಯವಾದುದು. ಈ ಕಿತ್ತಳೆ ಬಣ್ಣದ ಹೂವನ್ನು ನೀಡಿ ಅವರನ್ನು ಒಲಿಸಿಕೊಳ್ಳಬಹುದು.

ಚೆಂಡು ಹೂವು
ಈ ಬಾರಿ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಚೆಂಡು ಹೂವಿನಿಂದ ದೇವಿಯನ್ನು ಅಲಂಕರಿಸಬಹುದು. ಹೂವಿನ ಹಾರವನ್ನು ಮಾಡಿ ಮನೆಯನ್ನೂ ಅಲಂಕರಿಸಬಹುದಾಗಿದೆ. ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣದಲ್ಲಿ ಚೆಂಡು ಹೂವು ಲಭ್ಯವಿದೆ.

ದಾಸವಾಳ
ಲಕ್ಷ್ಮೀಯು ವಿವಾಹಿತರಾಗಿದ್ದಾರೆ. ಆದ್ದರಿಂದ ಕೆಂಪು ದಾಸವಾಳದ ಅರ್ಪಣೆಯನ್ನು ಮಾಡಿ ದೇವಿಯನ್ನು ಒಲಿಸಿಕೊಳ್ಳೋಣ. ವರಮಹಾಲಕ್ಷ್ಮೀ ಪೂಜೆಯ ದಿನ ಕೆಂಪು ದಾಸವಾಳದಿಂದ ದೇವಿಯನ್ನು ಪೂಜಿಸೋಣ.

ಜಂಗಲ್ ಜರೇನಿಯಂ
ಈ ಹೆಸರು ಸಾಮಾನ್ಯವಾಗಿರುತ್ತದೆ, ಆದರೆ ಥೆಚಿ ನಿಮಗೆ ಗೊತ್ತಾ? ಹೌದು, ಲಕ್ಷ್ಮೀ ದೇವತೆಗೆ ಕೆಂಪು ಪುಷ್ಪಗಳ ಸಮರ್ಪಣೆಯನ್ನು ಮಾಡಬಹುದು. ಈ ಚಿಕ್ಕ ಕೆಂಪು ಹೂವುಗಳನ್ನು ಫ್ಲೇಮ್ ಆಫ್ ಜಂಗಲ್ ಎಂದೂ ಕರೆಯುತ್ತಾರೆ; ಮತ್ತು ನೀವು ಈ ಹೂವುಗಳೊಂದಿಗೆ ಪೂಜೆಯ ಜಾಗವನ್ನು ಅಲಂಕರಿಸಿದರೆ, ಅದು ಖಂಡಿತವಾಗಿಯೂ ರೋಮಾಂಚನಕಾರಿಯಾಗಿರುತ್ತದೆ.

ದರ್ಬೆ ಹುಲ್ಲು
ಹೂವುಗಳಲ್ಲದೆ, ಈ ಹುಲ್ಲು ಕೂಡಾ ವರಮಹಲಕ್ಷ್ಮಿ ಪೂಜೆಯ ದೇವತೆಗೆ ನೀಡಲಾಗುತ್ತದೆ. ಕಲಶವನ್ನು ಪೂಜೆಯ ಸಮಯದಲ್ಲಿ ಇಡಲಾಗಿರುವ ಸ್ಥಳದಲ್ಲಿ ಹರಡಲು ಇದನ್ನು ಬಳಸಲಾಗುತ್ತದೆ. ಧಾರ್ಮಿಕ ಸಮಾರಂಭಗಳಲ್ಲಿ ಈ ಹುಲ್ಲಿಗೆ ಪ್ರಮುಖ ಪ್ರಾಧಾನ್ಯತೆ ಇದೆ.

ತಾವರೆ
ಸಂಸ್ಕೃತದಲ್ಲಿ 'ಪದ್ಮ' ಎಂದೂ ಕರೆಯಲ್ಪಡುವ ಲೋಟಸ್ ಹೂವು ಹಿಂದೂ ಧರ್ಮದಲ್ಲಿನ ಅತ್ಯಂತ ಪ್ರಮುಖ ಧಾರ್ಮಿಕ ಸಂಕೇತಗಳಲ್ಲಿ ಒಂದಾಗಿದೆ. ಬಹಳಷ್ಟು ಹಿಂದೂ ದೇವತೆಗಳನ್ನು ಕಮಲದ ಹೂವಿನ ಮೇಲೆ ಕುಳಿತು ಅಥವಾ ಹೂವನ್ನು ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರದಿಂದ ಚಿತ್ರಿಸಲಾಗಿದೆ. ಕಮಲದ ಹೂವು ಶಾಶ್ವತತೆ, ಜ್ಞಾನೋದಯ, ಶುದ್ಧತೆ, ದೈವಿಕ ಸೌಂದರ್ಯ ಮತ್ತು ಉತ್ತಮ ಅದೃಷ್ಟವನ್ನು ಸಂಕೇತಿಸುತ್ತದೆ. ಸಂಪತ್ತು ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಸಾಮಾನ್ಯವಾಗಿ ಕಮಲದ ಹೂವಿನೊಂದಿಗೆ ಚಿತ್ರಿಸಲಾಗಿದೆ. ಅವರು ಸಾಮಾನ್ಯವಾಗಿ ಕಮಲದ ಹೂವಿನ ಮೇಲೆ ಕುಳಿತು ಅವರ ಕೈಯಲ್ಲಿ ಹೂವನ್ನು ಹಿಡಿದಿರುವಂತೆ ತೋರಿಸಲಾಗಿದೆ.
ಭಗವದ್ ಗೀತೆಯ 5 ನೇ ಅಧ್ಯಾಯದಲ್ಲಿ ಕೃಷ್ಣನು ತಾವರೆ ಹೂವಿನ ಪ್ರಾಮುಖ್ಯತೆಯನ್ನು ತಿಳಿಸುತ್ತಾರೆ: ಹೀಗಾಗಿ, ತಾವರೆಯು ಅಜ್ಞಾನದ ಮಧ್ಯೆ ಶುದ್ಧತೆ ಮತ್ತು ಜ್ಞಾನೋದಯ ಸಂಕೇತವಾಗಿದೆ. ನಿರಂತರವಾಗಿ ನೀರಿನಲ್ಲಿರುವಾಗಲೂ ಸಹ, ತಾವರೆ ಎಂದಿಗೂ ತೇವವಾಗುವುದಿಲ್ಲ. ಇದು ನಯವಾದ ಜೌಗು ಅಥವಾ ಕೊಳಕು ನೀರಿನಲ್ಲಿ ಬೆಳೆಯುತ್ತದೆ, ಆದರೆ ಅದರ ಕೊಳಕು ಸುತ್ತಮುತ್ತಲಿನ ಬಗ್ಗೆ ಚಿಂತಿಸುವುದಿಲ್ಲ. ಇದು ಅರಳಿ (ಅದರ ಕರ್ಮವನ್ನು ನಿರ್ವಹಿಸುತ್ತದೆ) ನಂತರ ಅದೃಶ್ಯವಾಗುತ್ತದೆ. ಹೀಗಾಗಿ ಕಮಲದ ಹೂವು ಈ ಭೂಮಿಯ ಮೇಲಿನ ಜೀವಂತ ಜೀವಿಗಳ ಅಂತಿಮ ಗುರಿಯೆಂದರೆ ಬಾಹ್ಯ ಅಂಶಗಳು ಅಥವಾ ಫಲಿತಾಂಶಗಳ ಬಗ್ಗೆ ಕಳವಳವಿಲ್ಲದೆಯೇ ಅವರ ಕರ್ಮಗಳನ್ನು (ಕರ್ತವ್ಯಗಳು) ನಿರ್ವಹಿಸುವುದು. ತಾವರೆ ಹೂವು ಸೃಷ್ಟಿಯಾದ ಕಾಸ್ಮಿಕ್ ನೀರಿನಿಂದ ಆದಿಸ್ವರೂಪದ ಜನನದ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ. ಭಗವಾನ್ ವಿಷ್ಣುವಿನ ಹೊಕ್ಕುಳದಿಂದ ಹೊರಹೊಮ್ಮುತ್ತಿರುವ ಬ್ರಹ್ಮ ಕಮಲದ ಹೂವಿನ ಮೇಲೆ ಕುಳಿತು, ಜೀವನ ನೀರಿನಲ್ಲಿ ಪ್ರಾರಂಭವಾಗುತ್ತದೆ ಎಂದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಾರೆ.



Click it and Unblock the Notifications











