Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹನುಮದೇವರ ಅನುಗ್ರಹ ಪಡೆಯಲು ಮಂಗಳವಾರ ಉಪವಾಸ ಅನುಸರಿಸಿ
ಹನುಮಂತ, ಬಜರಂಗಬಲಿ, ಅಂಜನಿ ಪುತ್ರ, ಮಾರುತಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಹನುಮದೇವರಿಗೆ ಮೀಸಲಾದ ದಿನವೆಂದರೆ ಮಂಗಳವಾರ. ದುಷ್ಟರನ್ನು ನಿವಾರಿಸುವ ದೇವರು ಎಂದೂ ಆತನನ್ನು ಕರೆಯಲಾಗುತ್ತದೆ.
ಹನುಮದೇವರ ಅನುಗ್ರಹವನ್ನು ಪಡೆಯಲು ಭಕ್ತರು ಮಂಗಳವಾರದಂದು ಉಪವಾಸ ಆಚರಿಸುತ್ತಾರೆ. ಈ ಉಪವಾಸದ ಅವಧಿ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ಇರುತ್ತದೆ. ಸೂರ್ಯೋದಯಕ್ಕೂ ಮುನ್ನ ಎದ್ದು ತಣ್ಣೀರಿನಲ್ಲಿ ಮಿಂದು ಗಣೇಶನನ್ನು ಪೂಜಿಸಿದ ಬಳಿಕ ಹನುಮದೇವರನ್ನೂ ಪೂಜಿಸಬೇಕು. ಈ ದಿನದಂದು ಕೆಂಪು ಬಣ್ಣದ ದಿರಿಸನ್ನು ತೊಡಬೇಕು ಹಾಗೂ ದಿನದ ಎಲ್ಲಾ ಪೂಜೆಗಳಲ್ಲಿ ದೇವರಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು.

ಈ ದಿನದ ಅವಧಿಯಲ್ಲಿ ಆದಷ್ಟೂ ಮಟ್ಟಿಗೆ ಹನುಮಾನ್ ಚಾಲೀಸಾ ಹಾಗೂ ಮಂಗಲ್ವಾರ್ ವ್ರತ್ ಕಥಾ ವನ್ನು ಪಠಿಸಬೇಕು. ಜೊತೆಗೇ ಸಂಕಟಮೋಚನ ಹನುಮಾನ್ ಅಷ್ಠಕ್ ಸಹಾ ಓದಬೇಕು .ಸಂಜೆಯ ಹೊತ್ತಿನಲ್ಲಿ ಹನುಮದೇವರನ್ನು ಪೂಜಿಸಿದ ಬಳಿಕ ಒಂದು ಹೊತ್ತಿನ ಆಹಾರವನ್ನು ಸೇವಿಸಬಹುದು. ಆದರೆ ಈ ಆಹಾರದಲ್ಲಿ ಕೇವಲ ಬೆಲ್ಲ ಹಾಗೂ ಗೋದಿ ಇರಬೇಕು, ಯಾವುದೇ ಕಾರಣಕ್ಕೂ ಇದರಲ್ಲಿ ಉಪ್ಪು ಇರಬಾರದು.
ಈ ಉಪವಾಸವನ್ನು ಅನುಸರಿಸುವ ಉದ್ದೇಶಗಳಲ್ಲಿ ಪ್ರಮುಖವಾಗಿ ಶಕ್ತಿಯನ್ನು ಪಡೆಯಲು, ವಿರೋಧಿಗಳ ವಿರುದ್ದ ಜಯ ಸಾಧಿಸಲು, ದಾವೆಗಳಲ್ಲಿ ಜಯಗಳಿಸಲು, ಆರೋಗ್ಯ ಉತ್ತಮಗೊಳ್ಳಲು, ದುಷ್ಟಶಕ್ತಿಯ ಹೆದರಿಕೆಯನ್ನು ಹೋಗಲಾಡಿಸಲು ಹಾಗೂ ಮಂಗಳ ಗ್ರಹದ ಅವಗಾಹನೆಯ ದುಷ್ಪರಿಣಾಮಗಳಿಂದ ರಕ್ಷಣೆ ಪಡೆಯುವುದಾಗಿವೆ. ವಾಸ್ತವವಾಗಿ, ಮಂಗಳ ಗ್ರಹದ ಹೆಸರಿನಿಂದಲೇ ಮಂಗಳವಾರದ ಹೆಸರು ಬಂದಿದ್ದು ಈ ದಿನ ಆಚರಿಸಲ್ಪಡುವ ಉಪವಾಸಕ್ಕೆ ಮಂಗಲ್ವಾರ್ ವ್ರತ್ ಎಂದು ಕರೆಯುತ್ತಾರೆ. ಎರಡನೆಯದಾಗಿ, ಪುತ್ರನನ್ನು ಪಡೆಯುವ ಅಭೀಷ್ಠೆಯುಳ್ಳ ದಂಪತಿಗಳು ಜೊತೆಯಾಗಿ ಈ ಉಪವಾಸವನ್ನು ಆಚರಿಸಬೇಕು.
ಅತ್ಯುತ್ತಮ ಪರಿಣಾಮವನ್ನು ಪಡೆಯಲು ಈ ಉಪವಾಸವನ್ನು ಸತತ ಇಪ್ಪತ್ತೊಂದು ವಾರಗಳವರೆಗೆ ಅನುಸರಿಸಬೇಕು. ಅಲ್ಲದೇ ಜೀವದಲ್ಲಿ ಎದುರಾಗುವ ಅಡ್ಡಿಗಳನ್ನು ಎದುರಿಸಿ ಯಶಸ್ವಿಯಾಗಲು, ಶಕ್ತಿ ಗಳಿಸಲು, ಸಾಮರ್ಥ್ಯ ಹಾಗೂ ಪ್ರಭಾವಗಳನ್ನು ಪಡೆಯಲು ಈ ಉಪವಾಸದ ಅವಧಿಯಲ್ಲಿ ಹನುಮದೇವರ ಬೀಜಮಂತ್ರವನ್ನು ಪಠಿಸಬೇಕು.
ಓಂ ಈಂ ಭ್ರೀಂ ಹನುಮತೇ, ಶ್ರೀ ರಾಮದೂತಯೇ ನಮಃ
ಇದರೊಂದಿಗೆ ಇತರ ಮಂತ್ರಗಳನ್ನೂ ಜಪಿಸಬಹುದು:
"ಓಂ ಶ್ರೀ ಹನುಮತೇ ನಮಃ"
ಅಥವಾ
"ಹಂಗ್ ಪವನ್ ನಂದನಾಯೇ ಸ್ವಾಹಾ"
ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅತ್ಯುತ್ತಮ.
ಒಂದು ವೇಳೆ ಯಾವುದೋ ಖಾಯಿಲೆಗೆ ಒಳಗಾಗಿದ್ದರೆ ಅಥವಾ ದುಷ್ಟಶಕ್ತಿಗಳಿಂದ ವಿಮೋಚನೆ ಪಡೆಯಬೇಕಾಗಿದ್ದರೆ ಅಥವಾ ವಿಕ್ಷುಬ್ದತೆ ಎದುರಾಗಿದ್ದರೆ ಈ ಉಪವಾಸದ ಅವಧಿಯಲ್ಲಿ ಕೆಳಗಿನ ಹನುಮಾನ್ ಮಂತ್ರವನ್ನು 21000 ಬಾರಿ ಪಠಿಸಬೇಕು.
" ಓಂ ನಮೋ ಭಗವಾತೆ ಆಂಜನೇಯಾಯಃ ಮಹಾಬಲಾಯಃ ಸ್ವಾಹಾ"
ಈ ಮಂತ್ರವನ್ನು ನಿಯಮಿತವಾಗಿ ಪಠಿಸುತ್ತಿರುವ ವ್ಯಕ್ತಿಗಳಿಗೆ ಯಾವುದೇ ಬಗೆಯ ದುಷ್ಟಶಕ್ತಿ, ಆತ್ಮ ಅಥವಾ ದೆವ್ವಗಳ ಕಾಟ ಎದುರಾಗುವುದಿಲ್ಲ ಎಂದು ನಂಬಲಾಗಿದೆ. ಹಾಗೂ ಈ ವ್ಯಕ್ತಿಗಳು ಅವರ ವೈರಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಲ್ಲದೇ ವಿಶೇಷವಾಗಿ ಮಕ್ಕಳಿಗೆ ಎದುರಾಗುವ ದುಃಸ್ವಪ್ನ ಹಾಗೂ ಭಯಬೀತರಾಗುವ ಯೋಚನೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ಸಾಡೆ ಸಾತಿ ಎಂಬ ಭೀಕರ ದುಷ್ಪರಿಣಾಮದಿಂದ ಎದುರಾಗುವ ತೊಂದರೆಗಳಿಂದ ಹೊರಬರಲು ನೆರವಾಗುತ್ತದೆ. ಒಂದು ವೇಳೆ ಹನುಮ ದೇವರನ್ನು ಭಕ್ತಿಯಿಂದ ಹಾಗೂ ಸ್ವಚ್ಛ ಹೃದಯದಿಂದ ಪ್ರಾರ್ಥಿಸಿದರೆ ತನ್ನ ಭಕ್ತನ ನೆರವಿಗೆ ಹನುಮದೇವರು ಖಂಡಿತಾ ಬರುತ್ತಾನೆ ಎಂದು ಭಕ್ತರು ನಂಬುತ್ತಾರೆ.



Click it and Unblock the Notifications













