Just In
- 8 min ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 1 hr ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 3 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹನುಮದೇವರ ಅನುಗ್ರಹ ಪಡೆಯಲು ಮಂಗಳವಾರ ಉಪವಾಸ ಅನುಸರಿಸಿ
ಹನುಮಂತ, ಬಜರಂಗಬಲಿ, ಅಂಜನಿ ಪುತ್ರ, ಮಾರುತಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಹನುಮದೇವರಿಗೆ ಮೀಸಲಾದ ದಿನವೆಂದರೆ ಮಂಗಳವಾರ. ದುಷ್ಟರನ್ನು ನಿವಾರಿಸುವ ದೇವರು ಎಂದೂ ಆತನನ್ನು ಕರೆಯಲಾಗುತ್ತದೆ.
ಹನುಮದೇವರ ಅನುಗ್ರಹವನ್ನು ಪಡೆಯಲು ಭಕ್ತರು ಮಂಗಳವಾರದಂದು ಉಪವಾಸ ಆಚರಿಸುತ್ತಾರೆ. ಈ ಉಪವಾಸದ ಅವಧಿ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ಇರುತ್ತದೆ. ಸೂರ್ಯೋದಯಕ್ಕೂ ಮುನ್ನ ಎದ್ದು ತಣ್ಣೀರಿನಲ್ಲಿ ಮಿಂದು ಗಣೇಶನನ್ನು ಪೂಜಿಸಿದ ಬಳಿಕ ಹನುಮದೇವರನ್ನೂ ಪೂಜಿಸಬೇಕು. ಈ ದಿನದಂದು ಕೆಂಪು ಬಣ್ಣದ ದಿರಿಸನ್ನು ತೊಡಬೇಕು ಹಾಗೂ ದಿನದ ಎಲ್ಲಾ ಪೂಜೆಗಳಲ್ಲಿ ದೇವರಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು.
ಈ ದಿನದ ಅವಧಿಯಲ್ಲಿ ಆದಷ್ಟೂ ಮಟ್ಟಿಗೆ ಹನುಮಾನ್ ಚಾಲೀಸಾ ಹಾಗೂ ಮಂಗಲ್ವಾರ್ ವ್ರತ್ ಕಥಾ ವನ್ನು ಪಠಿಸಬೇಕು. ಜೊತೆಗೇ ಸಂಕಟಮೋಚನ ಹನುಮಾನ್ ಅಷ್ಠಕ್ ಸಹಾ ಓದಬೇಕು .ಸಂಜೆಯ ಹೊತ್ತಿನಲ್ಲಿ ಹನುಮದೇವರನ್ನು ಪೂಜಿಸಿದ ಬಳಿಕ ಒಂದು ಹೊತ್ತಿನ ಆಹಾರವನ್ನು ಸೇವಿಸಬಹುದು. ಆದರೆ ಈ ಆಹಾರದಲ್ಲಿ ಕೇವಲ ಬೆಲ್ಲ ಹಾಗೂ ಗೋದಿ ಇರಬೇಕು, ಯಾವುದೇ ಕಾರಣಕ್ಕೂ ಇದರಲ್ಲಿ ಉಪ್ಪು ಇರಬಾರದು.
ಈ ಉಪವಾಸವನ್ನು ಅನುಸರಿಸುವ ಉದ್ದೇಶಗಳಲ್ಲಿ ಪ್ರಮುಖವಾಗಿ ಶಕ್ತಿಯನ್ನು ಪಡೆಯಲು, ವಿರೋಧಿಗಳ ವಿರುದ್ದ ಜಯ ಸಾಧಿಸಲು, ದಾವೆಗಳಲ್ಲಿ ಜಯಗಳಿಸಲು, ಆರೋಗ್ಯ ಉತ್ತಮಗೊಳ್ಳಲು, ದುಷ್ಟಶಕ್ತಿಯ ಹೆದರಿಕೆಯನ್ನು ಹೋಗಲಾಡಿಸಲು ಹಾಗೂ ಮಂಗಳ ಗ್ರಹದ ಅವಗಾಹನೆಯ ದುಷ್ಪರಿಣಾಮಗಳಿಂದ ರಕ್ಷಣೆ ಪಡೆಯುವುದಾಗಿವೆ. ವಾಸ್ತವವಾಗಿ, ಮಂಗಳ ಗ್ರಹದ ಹೆಸರಿನಿಂದಲೇ ಮಂಗಳವಾರದ ಹೆಸರು ಬಂದಿದ್ದು ಈ ದಿನ ಆಚರಿಸಲ್ಪಡುವ ಉಪವಾಸಕ್ಕೆ ಮಂಗಲ್ವಾರ್ ವ್ರತ್ ಎಂದು ಕರೆಯುತ್ತಾರೆ. ಎರಡನೆಯದಾಗಿ, ಪುತ್ರನನ್ನು ಪಡೆಯುವ ಅಭೀಷ್ಠೆಯುಳ್ಳ ದಂಪತಿಗಳು ಜೊತೆಯಾಗಿ ಈ ಉಪವಾಸವನ್ನು ಆಚರಿಸಬೇಕು.
ಅತ್ಯುತ್ತಮ ಪರಿಣಾಮವನ್ನು ಪಡೆಯಲು ಈ ಉಪವಾಸವನ್ನು ಸತತ ಇಪ್ಪತ್ತೊಂದು ವಾರಗಳವರೆಗೆ ಅನುಸರಿಸಬೇಕು. ಅಲ್ಲದೇ ಜೀವದಲ್ಲಿ ಎದುರಾಗುವ ಅಡ್ಡಿಗಳನ್ನು ಎದುರಿಸಿ ಯಶಸ್ವಿಯಾಗಲು, ಶಕ್ತಿ ಗಳಿಸಲು, ಸಾಮರ್ಥ್ಯ ಹಾಗೂ ಪ್ರಭಾವಗಳನ್ನು ಪಡೆಯಲು ಈ ಉಪವಾಸದ ಅವಧಿಯಲ್ಲಿ ಹನುಮದೇವರ ಬೀಜಮಂತ್ರವನ್ನು ಪಠಿಸಬೇಕು.
Most Read: ಭಗವಾನ್ ಹನುಮಂತನ ಬಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳು
ಓಂ ಈಂ ಭ್ರೀಂ ಹನುಮತೇ, ಶ್ರೀ ರಾಮದೂತಯೇ ನಮಃ
ಇದರೊಂದಿಗೆ ಇತರ ಮಂತ್ರಗಳನ್ನೂ ಜಪಿಸಬಹುದು:
"ಓಂ ಶ್ರೀ ಹನುಮತೇ ನಮಃ"
ಅಥವಾ
"ಹಂಗ್ ಪವನ್ ನಂದನಾಯೇ ಸ್ವಾಹಾ"
ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅತ್ಯುತ್ತಮ.
ಒಂದು
ವೇಳೆ
ಯಾವುದೋ
ಖಾಯಿಲೆಗೆ
ಒಳಗಾಗಿದ್ದರೆ
ಅಥವಾ
ದುಷ್ಟಶಕ್ತಿಗಳಿಂದ
ವಿಮೋಚನೆ
ಪಡೆಯಬೇಕಾಗಿದ್ದರೆ
ಅಥವಾ
ವಿಕ್ಷುಬ್ದತೆ
ಎದುರಾಗಿದ್ದರೆ
ಈ
ಉಪವಾಸದ
ಅವಧಿಯಲ್ಲಿ
ಕೆಳಗಿನ
ಹನುಮಾನ್
ಮಂತ್ರವನ್ನು
21000
ಬಾರಿ
ಪಠಿಸಬೇಕು.
"
ಓಂ
ನಮೋ
ಭಗವಾತೆ
ಆಂಜನೇಯಾಯಃ
ಮಹಾಬಲಾಯಃ
ಸ್ವಾಹಾ"
Most Read: ಹನುಮಂತನ ಪೂಜೆ ಹೀಗೆ ಮಾಡಿದರೆ-ಮನದ ಬಯಕೆ ಈಡೇರುವುದು
ಈ ಮಂತ್ರವನ್ನು ನಿಯಮಿತವಾಗಿ ಪಠಿಸುತ್ತಿರುವ ವ್ಯಕ್ತಿಗಳಿಗೆ ಯಾವುದೇ ಬಗೆಯ ದುಷ್ಟಶಕ್ತಿ, ಆತ್ಮ ಅಥವಾ ದೆವ್ವಗಳ ಕಾಟ ಎದುರಾಗುವುದಿಲ್ಲ ಎಂದು ನಂಬಲಾಗಿದೆ. ಹಾಗೂ ಈ ವ್ಯಕ್ತಿಗಳು ಅವರ ವೈರಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಲ್ಲದೇ ವಿಶೇಷವಾಗಿ ಮಕ್ಕಳಿಗೆ ಎದುರಾಗುವ ದುಃಸ್ವಪ್ನ ಹಾಗೂ ಭಯಬೀತರಾಗುವ ಯೋಚನೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ಸಾಡೆ ಸಾತಿ ಎಂಬ ಭೀಕರ ದುಷ್ಪರಿಣಾಮದಿಂದ ಎದುರಾಗುವ ತೊಂದರೆಗಳಿಂದ ಹೊರಬರಲು ನೆರವಾಗುತ್ತದೆ. ಒಂದು ವೇಳೆ ಹನುಮ ದೇವರನ್ನು ಭಕ್ತಿಯಿಂದ ಹಾಗೂ ಸ್ವಚ್ಛ ಹೃದಯದಿಂದ ಪ್ರಾರ್ಥಿಸಿದರೆ ತನ್ನ ಭಕ್ತನ ನೆರವಿಗೆ ಹನುಮದೇವರು ಖಂಡಿತಾ ಬರುತ್ತಾನೆ ಎಂದು ಭಕ್ತರು ನಂಬುತ್ತಾರೆ.