Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇಂಥವರಿಗೆ ತೊಂದರೆ ನೀಡಿದರೆ ಶನಿದೇವನಿಗೆ ತುಂಬಾ ಕೋಪ ಬರುತ್ತದೆ
ಶನಿದೇವನ ದಿನ ಶನಿವಾರ. ಈ ದಿನ ಶನಿಮಹಾತ್ಮನನ್ನು ಪೂಜಿಸಿದರೆ ವಿಶೇಷ ಫಲ ಸಿಗುತ್ತದೆ, ಆತನ ಮಂತ್ರಗಳನ್ನು ಪಠಿಸುವವರ ಮನೆಯಲ್ಲಿ ಸದಾ ಸಮೃದ್ಧಿ ಇರುತ್ತದೆ ಎಂಬುದು ನಂಬಿಕೆ. ಶನಿದೇವನನ್ನು ಮೆಚ್ಚಿಸಲು ಹಲವು ಕ್ರಮಗಳಲ್ಲಿ ಪೂಜಿಸಬಹುದು. ಹಾಗೆಯೇ ಬಹಳ ಶಿಸ್ತನ್ನು ಬಯಸುವ ಶನಿದೇವನಿಗೆ ಕೆಲವು ಕೆಲಸಗಳನ್ನು ಮಾಡಿದರೆ ಬಹಳ ಕೋಪ ಬರುತ್ತದೆ.

ಶನಿದೇವನಿಗೆ ಭಕ್ತರು ಇಂಥಾ ತಪ್ಪುಗಳನ್ನು ಮಾಡಿದರೆ ಬಹಳ ಬೇಗ ಅವನ ಕೆಟ್ಟ ಕಣ್ಣಿಗೆ ಗುರಿಯಾಗುವರು. ಯಾವೆಲ್ಲಾ ತಪ್ಪುಗಳು ಮುಂದೆ ನೋಡೋಣ:

ಬಡವರನ್ನು ನೋಯಿಸಬೇಡಿ
ಒಬ್ಬ ವ್ಯಕ್ತಿಯು ಬಡವರಿಗೆ ಕಿರುಕುಳ ನೀಡಿದರೆ ಅಥವಾ ನಿರ್ಗತಿಕರನ್ನು ಅವಮಾನಿಸಿದರೆ ಶನಿದೇವನು ಅವನ ಮೇಲೆ ಕೋಪಗೊಳ್ಳಬಹುದು.
ಯಾವುದೇ ಕೂಲಿ, ಭಿಕ್ಷುಕ ಅಥವಾ ನಿರ್ಗತಿಕರನ್ನು ಹಿಂಸಿಸಿದರೆ ಶನಿದೇವನು ತಕ್ಷಣವೇ ಕೋಪಗೊಳ್ಳುತ್ತಾನೆ. ಮತ್ತೊಂದೆಡೆ, ಬಡವರನ್ನು ಗೌರವಿಸುವ ಮತ್ತು ಅಗತ್ಯವಿರುವವರಿಗೆ ದಾನ ಮಾಡುವ ಜನರ ಮೇಲೆ ಶನಿಯು ವಿಶೇಷ ಅನುಗ್ರಹ ಹೊಂದಿದ್ದಾನೆ.

ಮನೆಯ ಸಹಾಯಕರಿಗೆ ತೊಂದರೆ ಕೊಡಬೇಡಿ
ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವವರನ್ನು ಸೇವಕರೆಂದು ಪರಿಗಣಿಸಿ ಅನುಚಿತವಾಗಿ ವರ್ತಿಸುತ್ತಾರೆ. ಆದರೆ ನೀವು ಅವರಿಗೆ ತೊಂದರೆ ನೀಡಿದರೆ, ಅದು ನಿಮ್ಮ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಶನಿದೇವನು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ. ಕೆಲಸ ಮಾಡುವವರನ್ನು ಎಂದಿಗೂ ಬೆದರಿಸಬೇಡಿ ಹಾಗೂ ನಿಂದಿಸಬೇಡಿ. ಒಬ್ಬ ವ್ಯಕ್ತಿಯಾಗಿ ಸದಾ ಗೌರವಿಸಿ.

ಕಪ್ಪು ನಾಯಿಯನ್ನು ನೋಯಿಸಬೇಡಿ
ಕಪ್ಪು ನಾಯಿ ಶನಿ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನೀವು ಎಂದಾದರೂ ಕಪ್ಪು ನಾಯಿಗೆ ಹಾನಿ, ನೋವು ಮಾಡಿದರೆ, ಅದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂಥಾ ಕೃತ್ಯದಿಂದ ಶನಿದೇವರು ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದು ನಂಬಲಾಗಿದೆ.

ಮಕ್ಕಳನ್ನು ನೋಯಿಸಬೇಡಿ
ಚಿಕ್ಕ ಮಕ್ಕಳನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಯಾರಾದರೂ ಮಕ್ಕಳನ್ನು ಯಾವುದೇ ಕಾರಣವಿಲ್ಲದೆ ಹಿಂಸಿಸಿದರೆ ಅವರ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳಿಗೆ ತೊಂದರೆ ನೀಡಿದರೆ ಶನಿದೇವನೂ ನಿಮ್ಮ ಮೇಲೆ ಕೋಪಗೊಳ್ಳಬಹುದು, ಇದರಿಂದ ನೀವು ಮಾಡಿದ ಕೆಲಸವೂ ಹಾಳಾಗಬಹುದು ಮತ್ತು ಮನೆಯಲ್ಲಿ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ.



Click it and Unblock the Notifications