Just In
- 4 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 12 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 13 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 14 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- News Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂಥವರಿಗೆ ತೊಂದರೆ ನೀಡಿದರೆ ಶನಿದೇವನಿಗೆ ತುಂಬಾ ಕೋಪ ಬರುತ್ತದೆ
ಶನಿದೇವನ ದಿನ ಶನಿವಾರ. ಈ ದಿನ ಶನಿಮಹಾತ್ಮನನ್ನು ಪೂಜಿಸಿದರೆ ವಿಶೇಷ ಫಲ ಸಿಗುತ್ತದೆ, ಆತನ ಮಂತ್ರಗಳನ್ನು ಪಠಿಸುವವರ ಮನೆಯಲ್ಲಿ ಸದಾ ಸಮೃದ್ಧಿ ಇರುತ್ತದೆ ಎಂಬುದು ನಂಬಿಕೆ. ಶನಿದೇವನನ್ನು ಮೆಚ್ಚಿಸಲು ಹಲವು ಕ್ರಮಗಳಲ್ಲಿ ಪೂಜಿಸಬಹುದು. ಹಾಗೆಯೇ ಬಹಳ ಶಿಸ್ತನ್ನು ಬಯಸುವ ಶನಿದೇವನಿಗೆ ಕೆಲವು ಕೆಲಸಗಳನ್ನು ಮಾಡಿದರೆ ಬಹಳ ಕೋಪ ಬರುತ್ತದೆ.
ಶನಿದೇವನಿಗೆ ಭಕ್ತರು ಇಂಥಾ ತಪ್ಪುಗಳನ್ನು ಮಾಡಿದರೆ ಬಹಳ ಬೇಗ ಅವನ ಕೆಟ್ಟ ಕಣ್ಣಿಗೆ ಗುರಿಯಾಗುವರು. ಯಾವೆಲ್ಲಾ ತಪ್ಪುಗಳು ಮುಂದೆ ನೋಡೋಣ:
ಬಡವರನ್ನು ನೋಯಿಸಬೇಡಿ
ಒಬ್ಬ ವ್ಯಕ್ತಿಯು ಬಡವರಿಗೆ ಕಿರುಕುಳ ನೀಡಿದರೆ ಅಥವಾ ನಿರ್ಗತಿಕರನ್ನು ಅವಮಾನಿಸಿದರೆ ಶನಿದೇವನು ಅವನ ಮೇಲೆ ಕೋಪಗೊಳ್ಳಬಹುದು.
ಯಾವುದೇ ಕೂಲಿ, ಭಿಕ್ಷುಕ ಅಥವಾ ನಿರ್ಗತಿಕರನ್ನು ಹಿಂಸಿಸಿದರೆ ಶನಿದೇವನು ತಕ್ಷಣವೇ ಕೋಪಗೊಳ್ಳುತ್ತಾನೆ. ಮತ್ತೊಂದೆಡೆ, ಬಡವರನ್ನು ಗೌರವಿಸುವ ಮತ್ತು ಅಗತ್ಯವಿರುವವರಿಗೆ ದಾನ ಮಾಡುವ ಜನರ ಮೇಲೆ ಶನಿಯು ವಿಶೇಷ ಅನುಗ್ರಹ ಹೊಂದಿದ್ದಾನೆ.
ಮನೆಯ ಸಹಾಯಕರಿಗೆ ತೊಂದರೆ ಕೊಡಬೇಡಿ
ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವವರನ್ನು ಸೇವಕರೆಂದು ಪರಿಗಣಿಸಿ ಅನುಚಿತವಾಗಿ ವರ್ತಿಸುತ್ತಾರೆ. ಆದರೆ ನೀವು ಅವರಿಗೆ ತೊಂದರೆ ನೀಡಿದರೆ, ಅದು ನಿಮ್ಮ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಶನಿದೇವನು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ. ಕೆಲಸ ಮಾಡುವವರನ್ನು ಎಂದಿಗೂ ಬೆದರಿಸಬೇಡಿ ಹಾಗೂ ನಿಂದಿಸಬೇಡಿ. ಒಬ್ಬ ವ್ಯಕ್ತಿಯಾಗಿ ಸದಾ ಗೌರವಿಸಿ.
ಕಪ್ಪು ನಾಯಿಯನ್ನು ನೋಯಿಸಬೇಡಿ
ಕಪ್ಪು ನಾಯಿ ಶನಿ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನೀವು ಎಂದಾದರೂ ಕಪ್ಪು ನಾಯಿಗೆ ಹಾನಿ, ನೋವು ಮಾಡಿದರೆ, ಅದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂಥಾ ಕೃತ್ಯದಿಂದ ಶನಿದೇವರು ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದು ನಂಬಲಾಗಿದೆ.
ಮಕ್ಕಳನ್ನು ನೋಯಿಸಬೇಡಿ
ಚಿಕ್ಕ ಮಕ್ಕಳನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಯಾರಾದರೂ ಮಕ್ಕಳನ್ನು ಯಾವುದೇ ಕಾರಣವಿಲ್ಲದೆ ಹಿಂಸಿಸಿದರೆ ಅವರ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳಿಗೆ ತೊಂದರೆ ನೀಡಿದರೆ ಶನಿದೇವನೂ ನಿಮ್ಮ ಮೇಲೆ ಕೋಪಗೊಳ್ಳಬಹುದು, ಇದರಿಂದ ನೀವು ಮಾಡಿದ ಕೆಲಸವೂ ಹಾಳಾಗಬಹುದು ಮತ್ತು ಮನೆಯಲ್ಲಿ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ.