Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಇಂಥವರಿಗೆ ತೊಂದರೆ ನೀಡಿದರೆ ಶನಿದೇವನಿಗೆ ತುಂಬಾ ಕೋಪ ಬರುತ್ತದೆ
ಶನಿದೇವನ ದಿನ ಶನಿವಾರ. ಈ ದಿನ ಶನಿಮಹಾತ್ಮನನ್ನು ಪೂಜಿಸಿದರೆ ವಿಶೇಷ ಫಲ ಸಿಗುತ್ತದೆ, ಆತನ ಮಂತ್ರಗಳನ್ನು ಪಠಿಸುವವರ ಮನೆಯಲ್ಲಿ ಸದಾ ಸಮೃದ್ಧಿ ಇರುತ್ತದೆ ಎಂಬುದು ನಂಬಿಕೆ. ಶನಿದೇವನನ್ನು ಮೆಚ್ಚಿಸಲು ಹಲವು ಕ್ರಮಗಳಲ್ಲಿ ಪೂಜಿಸಬಹುದು. ಹಾಗೆಯೇ ಬಹಳ ಶಿಸ್ತನ್ನು ಬಯಸುವ ಶನಿದೇವನಿಗೆ ಕೆಲವು ಕೆಲಸಗಳನ್ನು ಮಾಡಿದರೆ ಬಹಳ ಕೋಪ ಬರುತ್ತದೆ.

ಶನಿದೇವನಿಗೆ ಭಕ್ತರು ಇಂಥಾ ತಪ್ಪುಗಳನ್ನು ಮಾಡಿದರೆ ಬಹಳ ಬೇಗ ಅವನ ಕೆಟ್ಟ ಕಣ್ಣಿಗೆ ಗುರಿಯಾಗುವರು. ಯಾವೆಲ್ಲಾ ತಪ್ಪುಗಳು ಮುಂದೆ ನೋಡೋಣ:

ಬಡವರನ್ನು ನೋಯಿಸಬೇಡಿ
ಒಬ್ಬ ವ್ಯಕ್ತಿಯು ಬಡವರಿಗೆ ಕಿರುಕುಳ ನೀಡಿದರೆ ಅಥವಾ ನಿರ್ಗತಿಕರನ್ನು ಅವಮಾನಿಸಿದರೆ ಶನಿದೇವನು ಅವನ ಮೇಲೆ ಕೋಪಗೊಳ್ಳಬಹುದು.
ಯಾವುದೇ ಕೂಲಿ, ಭಿಕ್ಷುಕ ಅಥವಾ ನಿರ್ಗತಿಕರನ್ನು ಹಿಂಸಿಸಿದರೆ ಶನಿದೇವನು ತಕ್ಷಣವೇ ಕೋಪಗೊಳ್ಳುತ್ತಾನೆ. ಮತ್ತೊಂದೆಡೆ, ಬಡವರನ್ನು ಗೌರವಿಸುವ ಮತ್ತು ಅಗತ್ಯವಿರುವವರಿಗೆ ದಾನ ಮಾಡುವ ಜನರ ಮೇಲೆ ಶನಿಯು ವಿಶೇಷ ಅನುಗ್ರಹ ಹೊಂದಿದ್ದಾನೆ.

ಮನೆಯ ಸಹಾಯಕರಿಗೆ ತೊಂದರೆ ಕೊಡಬೇಡಿ
ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವವರನ್ನು ಸೇವಕರೆಂದು ಪರಿಗಣಿಸಿ ಅನುಚಿತವಾಗಿ ವರ್ತಿಸುತ್ತಾರೆ. ಆದರೆ ನೀವು ಅವರಿಗೆ ತೊಂದರೆ ನೀಡಿದರೆ, ಅದು ನಿಮ್ಮ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಶನಿದೇವನು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ. ಕೆಲಸ ಮಾಡುವವರನ್ನು ಎಂದಿಗೂ ಬೆದರಿಸಬೇಡಿ ಹಾಗೂ ನಿಂದಿಸಬೇಡಿ. ಒಬ್ಬ ವ್ಯಕ್ತಿಯಾಗಿ ಸದಾ ಗೌರವಿಸಿ.

ಕಪ್ಪು ನಾಯಿಯನ್ನು ನೋಯಿಸಬೇಡಿ
ಕಪ್ಪು ನಾಯಿ ಶನಿ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನೀವು ಎಂದಾದರೂ ಕಪ್ಪು ನಾಯಿಗೆ ಹಾನಿ, ನೋವು ಮಾಡಿದರೆ, ಅದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂಥಾ ಕೃತ್ಯದಿಂದ ಶನಿದೇವರು ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದು ನಂಬಲಾಗಿದೆ.

ಮಕ್ಕಳನ್ನು ನೋಯಿಸಬೇಡಿ
ಚಿಕ್ಕ ಮಕ್ಕಳನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಯಾರಾದರೂ ಮಕ್ಕಳನ್ನು ಯಾವುದೇ ಕಾರಣವಿಲ್ಲದೆ ಹಿಂಸಿಸಿದರೆ ಅವರ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳಿಗೆ ತೊಂದರೆ ನೀಡಿದರೆ ಶನಿದೇವನೂ ನಿಮ್ಮ ಮೇಲೆ ಕೋಪಗೊಳ್ಳಬಹುದು, ಇದರಿಂದ ನೀವು ಮಾಡಿದ ಕೆಲಸವೂ ಹಾಳಾಗಬಹುದು ಮತ್ತು ಮನೆಯಲ್ಲಿ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ.



Click it and Unblock the Notifications