Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
5 ಬಗೆಯ ಶ್ರಾದ್ಧಗಳು ಹಾಗೂ ಅವುಗಳನ್ನು ಯಾವಾಗ ಮಾಡಲಾಗುವುದು?
ಶ್ರಾದ್ಧ ಅಥವಾ ಪಿಂಡ ಪ್ರಧಾನ ಎನ್ನುವುದು ಒಂದು ಪುಣ್ಯ ಕಾರ್ಯ. ಶ್ರಾದ್ಧ ಮಾಡುವುದರಿಂದ ಪುಣ್ಯ ಲಭಿಸುವುದು. ನಮ್ಮನ್ನು ಬಿಟ್ಟು ಅಗಲಿದ ಹಿರಿಯರಿಗೆ ಶ್ರಾದ್ಧ ಮಾಡಿದರೆ ಅವರಿಗೆ ಮೋಕ್ಷ ಸಿಗುವುದು, ಇದರಿಂದ ತೃಪ್ತಿರಾಗಿ ನಮ್ಮ ಕುಟುಂಬದಲ್ಲಿ ಆರೋಗ್ಯ-ಐಶ್ವರ್ಯ ಎಂದು ಆಶೀರ್ವದಿಸುತ್ತಾರೆ.
ಪಿತೃದೋಷ ದೊಡ್ಡ ಶಾಪವಾಗಿದೆ. ಪಿತೃದೋಷಕ್ಕೆ ಗುರಿಯಾದರೆ ಕುಟುಂಬದಲ್ಲಿ ಅನೇಕ ಕಷ್ಟಗಳು ಎದುರಾಗುವುದು, ಏಳಿಗೆಯಾಗುವುದೇ ಇಲ್ಲ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಇದರಿಂದ ಪಿತೃಶಾಪಕ್ಕೆ ಗುರಿಯಾಗಬಾರದು ಎನ್ನುತ್ತಾರೆ. ಪಿತೃದೋಷದಿಂದ ಮುಕ್ತರಾಗಲು ಶಾದ್ಧ ಮಾಡಲಾಗುವುದು.
ಶ್ರಾದ್ಧ ಮಾಡಿದರೆ ಹಿರಿಯರ ಆಶೀರ್ವಾದ ನಮ್ಮ ಮೇಲಿರುತ್ತದೆ. 5 ಬಗೆ ಶ್ರಾದ್ಧ ಮಾಡಲಾಗುವುದು. ಒಂದೊಂದು ಬಗೆಯ ಶ್ರಾದ್ಧವನ್ನು ಒಂದೊಂದು ಸಮಯದಲ್ಲಿ ಮಾಡಲಾಗುವುದು. ಶ್ರಾದ್ಧದ ವಿಧಗಳು ಯಾವುವು? ಅವುಗಳ ಮಹತ್ವವೇನು ಎಂದು ತಿಳಿಯೋಣ ಬನ್ನಿ:

ನಿತ್ಯ ಶ್ರಾದ್ಧ
ನಿತ್ಯ ಶ್ರಾದ್ಧ ಎನ್ನುವುದು ದಿನಾ ಮಾಡುವ ಶ್ರಾದ್ಧ ಕಾರ್ಯವಾಗಿದೆ. ಈ ನಿತ್ಯ ಶ್ರಾದ್ಧದಲ್ಲಿ ನೀರನ್ನು ಮಾತ್ರ ಅರ್ಪಿಸಲಾಗುವುದು, ಪಿಂಡ ಪ್ರಧಾನ ಮಾಡುವುದಿಲ್ಲ.

ಏಕೋದಿಷ್ಟ ಶ್ರಾದ್ಧ
ಈ ಶ್ರಾದ್ಧವನ್ನು ಒಬ್ಬ ವ್ಯಕ್ತಿಗಾಗಿ ಮಾಡಲಾಗುವುದು. ವ್ಯಕ್ತಿ ಮರಣವೊಂದಿದಾಗ ಏಕೋದಿಷ್ಟ ಶ್ರಾದ್ಧ ಮಾಡಲಾಗುವುದು. ಪ್ರತೀವರ್ಷ ಅವರ ವರ್ಷ ತುಂಬುವಾಗ ಏಕೋದಿಷ್ಟ ಶ್ರಾದ್ಧ ಮಾಡಲಾಗುವುದು. ಇದನ್ನು ವಾರ್ಷಿಕ ಶ್ರಾದ್ಧ ಎಂದು ಕೂಡ ಕರೆಯಲಾಗುವುದು. ಭೀಷ್ಮ ಅಷ್ಟಮಿಯಂದು ಪಿತಾಮಕ ಭೀಷ್ಮನಿಗೆ ಏಕೋದಿಷ್ಟ ಶ್ರಾದ್ಧ ಮಾಡಲಾಗುವುದು.

ಕಾಮ್ಯಾ ಶ್ರಾದ್ಧ:
ವಿಶೇಷ ಬೇಡಿಕೆಗಳು ನೆರವೇರಲು ಈ ಶ್ರಾದ್ಧವನ್ನು ಮಾಡಲಾಗುವುದು. ಈ ಶ್ರಾದ್ಧವನ್ನು ರೋಹಿಣಿ ಅಥವಾ ಕೃತಿಕಾ ನಕ್ಷತ್ರದಲ್ಲಿ ಮಾಡಲಾಗುವುದು.

ವೃದ್ಧಿ ಶ್ರಾದ್ಧ:
ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಈ ಶ್ರಾದ್ಧ ಮಾಡಲಾಗುವುದು. ಈ ವೃದ್ಧಿ ಶ್ರಾದ್ಧವನ್ನು ಹಿರಿಯರ ಆಶೀರ್ವಾದ ಪಡೆಯಲು ಮಾಡಲಾಗುವುದು. ವೃದ್ಧಿ ಶ್ರಾದ್ಧವನ್ನು ನಂದಿ ಶ್ರಾದ್ಧ ಎಂದು ಕೂಡ ಕರೆಯಲಾಗುವುದು.

ಪಾರ್ವಣ ಶ್ರಾದ್ಧ
ಪಾರ್ವಣ ಶ್ರಾದ್ಧ ಪಿತೃಪಕ್ಷ, ಭಾದ್ರಪದ ಪೂರ್ಣಿಮೆ ಇಂಥ ವಿಶೇಷ ಸಂದರ್ಭಗಳಲ್ಲಿ ಮಾಡಲಾಗುವುದು. ಈ ಶ್ರಾದ್ಧದಲ್ಲಿ ಪಿಂಡ ಪ್ರಧಾನ ಮಾಡಲಾಗುವುದು.
ಪಾರ್ವಣ ಶ್ರಾದ್ಧ ಮಾಡಲು 2021ರಲ್ಲಿ ಸೆಪ್ಟೆಂಬರ್ 20 ಅಕ್ಟೋಬರ್ 6ರವರೆಗೆ ಸಮಯವಿದೆ.
ಪಿತೃ ಪಕ್ಷ ಯಾವಾಗ ಪ್ರಾರಂಭ, ಯಾವಾಗ ಮುಕ್ತಾಯ? (bold)
ಸೆಪ್ಟೆಂಬರ್ 2021
ಸೆಪ್ಟೆಂಬರ್ 20 : ಪೂರ್ಣಿಮಾ ಶ್ರಾದ್ಧ
ಸೆಪ್ಟೆಂಬರ್ 21 : ಪ್ರತಿಪಾದ ಶ್ರಾದ್ಧ
ಸೆಪ್ಟೆಂಬರ್ 22 : ದ್ವಿತೀಯಾ ಶ್ರಾದ್ಧ
ಸೆಪ್ಟೆಂಬರ್ 23 :ತ್ರಿತೀಯಾ ಶ್ರಾದ್ಧ
ಸೆಪ್ಟೆಂಬರ್ 24: ಚತುರ್ಥಿ ಶ್ರಾದ್ಧ
ಸೆಪ್ಟೆಂಬರ್ 25 : ಪಂಚಮಿ ಶ್ರಾದ್ಧ
ಸೆಪ್ಟೆಂಬರ್ 26 : ಷಷ್ಠಿ ಶ್ರಾದ್ಧ
ಸೆಪ್ಟೆಂಬರ್ 28: ಸಪ್ತಮಿ ಶ್ರಾದ್ಧ
ಸೆಪ್ಟೆಂಬರ್ 29: ಅಷ್ಟಮಿ ಶ್ರಾದ್ಧ
ಸೆಪ್ಟೆಂಬರ್ 30: ನವಮಿ ಶ್ರಾದ್ಧ
ಅಕ್ಟೋಬರ್ 2021
ಅಕ್ಟೋಬರ್ 1: ದಶಮಿ ಶ್ರಾದ್ಧ
ಅಕ್ಟೋಬರ್ 2: ಏಕಾದಶಿ ಶ್ರಾದ್ಧ
ಅಕ್ಟೋಬರ್ 3: ದ್ವಾದಶಿ ಶ್ರಾದ್ಧ
ಅಕ್ಟೋಬರ್ 3: ಮಘಾ ಶ್ರಾದ್ಧ
ಅಕ್ಟೋಬರ್ 4: ತ್ರಯೋದಶಿ ಶ್ರಾದ್ಧ
ಅಕ್ಟೋಬರ್ 5: ಚತುರ್ದಶಿ ಶ್ರಾದ್ಧ
ಅಕ್ಟೋಬರ್ 6: ಸರ್ವ ಪಿತೃ ಅಮವಾಸ್ಯೆ



Click it and Unblock the Notifications