Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ದಸರಾ 2023: ವಿಜಯದಶಮಿಯಂದು ಇವುಗಳನ್ನು ನೋಡಿದರೆ ಅದೃಷ್ಟ
ಅಕ್ಟೋಬರ್ 24ರಂದು ವಿಜಯದಶಮಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿಯ ವಿರುದ್ಧ ಸಾರಿದ ಜಯದ ಆಚರಣೆಯೇ ವಿಜಯದಶಮಿ. ದುರ್ಗಾ ದೇವಿ ಮಹಿಷಾಸುರ ಎಂಬ ಅಸುರನನ್ನು ಹತ್ಯೆ ಮಾಡಿದ ದಿನವೇ ವಿಜಯದಶಮಿ. ಪೌರಾಣಿಕ ಕತೆಯ ಪ್ರಕಾರ ರಾಮ ರಾವಣನನ್ನು ಕೊಂದ ದಿನವನ್ನು ವಿಜಯದಶಮಿಯೆಂದು ಆಚರಿಸಲಾಗುವುದು.

ವಿಜಯದಶಮಿಯಂದು ಕೆಲವು ವಸ್ತುಗಳನ್ನು ನೋಡುವುದರಿಂದ ಅಥವಾ ಕೆಲ ಕಾರ್ಯ ಮಾಡುವುದರಿಂದ ಅದೃಷ್ಟ ಒಲಿಯಲಿದೆ ಎಂದು ನಂಬಲಾಗುವುದು. ಅವುಗಳೇನು ಎಂದು ನೋಡೋಣ ಬನ್ನಿ:

ನೀರಿನಲ್ಲಿ ಮೀನು ನೋಡಿದರೆ
ವಿಜಯದಶಮಿಯಂದು ನೀರಿನಲ್ಲಿ ಮೀನು ನೋಡಿದರೆ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬ ನಂಬಿಕೆ ಇದೆ.

ನೀಲಕಂಠ ಪಕ್ಷಿಯನ್ನು ನೋಡುವುದು
ದಸರಾ ಹಬ್ಬದಂದು ನೀಲಕಂಠ ಪಕ್ಷಿಯನ್ನು ನೋಡಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಇದನ್ನು ನೋಡಿದವರ ಅದೃಷ್ಟ ಹೆಚ್ಚುವುದು ಅಲ್ಲದೆ ಜೀವನದಲ್ಲಿ ಏಳಿಗೆ ಉಂಟಾಗುವುದು.

ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗುವುದು
ದಸರಾ ಹಬ್ಬದಂದು ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುವುದರಿಂದ ಶುಭ ಉಂಟಾಗುವುದು. ಈ ದಿನ ರಾಮ ಹಾಗೂ ಶಿವನ ಆರಾಧನೆ ಮಾಡಬೇಕು.

ಹನುಮಂತನಿಗೆ ಪಾನ್ ಇಡುವುದು
ದಸರಾ ಹಬ್ಬದಂದು ರಾಮನ ಮಾತ್ರವಲ್ಲ ರಾಮನ ಭಕ್ತ ಹನುಮಂತನನ್ನು ಕೂಡ ಪೂಜಿಸಬೇಕು. ಹನುಮಂತನಿಗೆ ಪಾನ್ ಅರ್ಪಿಸುವುದರಿಂದ ಶುಭ ಉಂಟಾಗುವುದು. ಪಾನ್ ಪ್ರೀತಿ ಹಾಗೂ ಗೌರವ, ವಿಜಯದ ಸಂಕೇತವಾಗಿದೆ.



Click it and Unblock the Notifications