Just In
- 44 min ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 1 hr ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 2 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 2 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗರಪಂಚಮಿ ವಿಶೇಷ: ನಾಗ ದೇವತೆಗಳ ಹಲವು ರೂಪದ ತುಣುಕು ಕಥೆಗಳು
ನಾರಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಮಾತಂತೆ ನಾರಗರ ಪಂಚಮಿ ಹಿಂದೂಗಳ ಹಬ್ಬಗಳಲ್ಲಿ ಬಹಳ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಹಿಂದೂ ದೇವತೆಗಳಲ್ಲಿ ಒಂದಾದ ನಾಗನನ್ನು ಪ್ರತಿ ವರ್ಷವೂ ಶುಕ್ಲ ಪಕ್ಷದ ಶ್ರಾವಣ ಮಾಸದಲ್ಲಿ ಪೂಜಿಸುತ್ತಾರೆ. ಒಂದೊಂದು ಕ್ಷೇತ್ರದಲ್ಲೂ ನಾಗರ ಪಂಚಮಿಯನ್ನು ವಿಶೇಷವಾಗಿ ಆರಾಧಿಸುತ್ತಾರೆ. ಈ ಹಬ್ಬದಂದು ನಾಗನಿಗೆ ಭಕ್ತಿಯಿಂದ ಪೂಜಿಸಿದರೆ ದೋಷಗಳೆಲ್ಲಾ ನಿವಾರಣೆಯಾಗುವುದು, ಜೀವನದಲ್ಲಿ ಸದಾ ಸುಖ-ಶಾಂತಿಯು ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ.
ಶ್ರಾವಣ ಮಾಸದ ಶುಕ್ಲಪಕ್ಷ ಪಂಚಮಿಯಂದು ನಾಗರ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ ಜುಲೈ 27ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ನಾಗ ದೇವತೆಯಲ್ಲಿ ವಿವಿಧತೆ ಇರುವುದನ್ನು ನಾವು ನೋಡಬಹುದು. ಪುರಾಣದಲ್ಲಿ ಈ ದೇವತೆಗಳು ವಿವಿಧ ಅವತಾರಗಳಲ್ಲಿ ಬಂದು ಹೋಗಿದ್ದಾರೆ ಎನ್ನಲಾಗುವುದು. ನಾಗರ ಪಂಚಮಿಯ ಪ್ರಯುಕ್ತ ನಾವು ನಿಮಗೆ ಹಲವು ನಾಗದೇವತೆಗಳ ಪರಿಚಯವನ್ನು ಮಾಡಿಕೊಡುತ್ತೇವೆ....
ವಾಸುಕಿ ನಾಗ
ವಾಸುಕಿ ಹಿಂದೂ ಮತ್ತು ಬೌದ್ಧ ಪುರಾಣಗಳಲ್ಲಿರುವ ರಾಜ ಸರ್ಪಗಳ ರಾಜ. ಈ ನಾಗರಾಜನಿಗೆ ತಲೆಯ ಮೇಲೆ ಒಂದು ನಾಗ ಮಣಿಯಿತ್ತೆಂದು ಹೇಳುತ್ತಾರೆ. ಶಿವನ ಕುತ್ತಿಗೆಯಲ್ಲಿ ಕಂಗೊಳಿಸುವವನು ವಾಸುಕಿ ನಾಗನೇ. ಇವನಿಗೆ ಮನ್ನ ಎನ್ನುವ ಸಹೋದರಿ ಇದ್ದಳು. ಸಮುದ್ರ ಮಂಥನ ಮಾಡುವಾಗ ವಾಸುಕಿಯನ್ನೇ ಹಗ್ಗವನ್ನಾಗಿ ಬಳಸಿಕೊಳ್ಳಲಾಯಿತು ಎಂದು ಹೇಳಲಾಗುವುದು.
ಶೇಷನಾಗ
ಹಿಂದೂ ಧರ್ಮದಲ್ಲಿ ಶೇಷನಾಗ ಅಥವಾ ಆದಿಶೆ ಎಂದು ಕರೆಯಲ್ಪಡುವ ಶೇಷವು ಸೃಷ್ಟಿಗಳ ಮೂಲಭೂತ ಜೀವಿಗಳಲ್ಲಿ ಒಂದು. ಶೇಷನಾಗನು ಬ್ರಹ್ಮಾಂಡದ ಎಲ್ಲಾ ಗ್ರಹಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತಾನೆ. ಅಲ್ಲದೆ ಸದಾ ವಿಷ್ಣುವಿನ ಕೀರ್ತಿಯನ್ನು ಹಾಡುತ್ತಾನೆ ಎಂಬ ಪ್ರತೀತಿ ಇದೆ.
ತಕ್ಷನಾಗ
ಭಗವತ್ ಗೀತೆಯ ಪ್ರಕಾರ ತಕ್ಷಕನು ಇಕ್ಷ್ವಾಕು ರಾಜವಂಶಕ್ಕೆ ಸೇರಿದವನು. ಇವನು ಶ್ರೀರಾಮನ ವಂಶಸ್ಥರಾಗಿದ್ದರು. ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿರುವ ನಾಗಗಳ ಪೈಕಿ ತಕ್ಷಕನೂ ಒಬ್ಬನು. ತಕ್ಷಶಿಲಾ ಎಂಬ ಹೆಸರಿನ ಪಟ್ಟಣದಲ್ಲಿ ವಾಸಿಸುತ್ತಿದ್ದನು. ಪಾಂಡವ ಜನಾಂಗದವರು ಓಡಿ ಹೋದ ನಂತರ ರಾಜ ತಕ್ಷಕನ ಹೊಸ ಭೂ ಪ್ರದೇಶವಾಗಿತ್ತು ಎನ್ನಲಾಗುತ್ತದೆ.
ಕರ್ಕೋಟಕ್ ನಾಗ್
ಭಾರತೀಯ ಪುರಾಣದಲ್ಲಿ ಕಾರ್ಕೋಟಕ್ ಒಬ್ಬ ನಾಗ ರಾಜನಾಗಿದ್ದ. ಇಂದ್ರಾ ಅವರ ಕೋರಿಕೆಯ ಮೇರೆಗೆ ನಲನನ್ನು ಬಿಟ್ಟನು. ನಲನನ್ನು ಕೊಳಕು ಆಕಾರಕ್ಕೆ ಪರಿವರ್ತಿಸಿದನು. ಕಾರ್ಕೊಟಾಕನು ನಾರದನನ್ನು ಮೋಸಗೊಳಿಸಿದನು.
ಕರ್ಕೋಟಕ್ ನಾಗ್
ಕಾರ್ಕೊಟಕನು ನಲನ ಸ್ನೇಹಿತನಾಗಿದ್ದನು. ಇವನು ಅಯೋಧ್ಯೆಯ ರಿತುಪರ್ಣಕ್ಕೆ ಹೋಗಬೇಕೆಂದು ನಿರ್ಧರಿಸಿದನು. ನಂತರ ಬದಲಾದ ಹೆಸರಿನಿಂದಲೇ ಬಹುಕಾಲ ಕಳೆದನು ಎನ್ನಲಾಗುವುದು.
ಕಲಿಯಗದ ನಾಗ
ಹಿಂದೂ ಸಂಪ್ರದಾಯದ ಪ್ರಕಾರ ಕಲಿಯು, ಯಮುನಾ ನದಿಯಲ್ಲಿ ವಾಸಿಸುವ ಒಂದು ವಿಷಕಾರಿ ನಾಗ. ಅವನ ಹೆಂಡತಿಯೊಂದಿಗೆ ವೃಂದಾವನದ ನದಿಯ ನೀರನ್ನು ವಿಷಪೂರಿತಗೊಳಿಸಿದನು. ಇದನ್ನು ಪ್ರಾಣಿ-ಪಕ್ಷಿಗಳಾರು ಕುಡಿಯಲು ಸಾಧ್ಯವಾಗಲಿಲ್ಲ. ಕೃಷ್ಣ ಪರಮಾತ್ಮನು ಈ ಬಗ್ಗೆ ತಿಳಿದುಕೊಂಡಾಗ ಉದ್ದೇಶ ಪೂರ್ವಕವಾಗಿ ನದಿಯಲ್ಲಿ ಇಳಿದನು. ಕಲಿಯು ಕೃಷ್ಣನ ದೇಹವನ್ನು ಸುತ್ತಿಕೊಂಡನು. ಕೃಷ್ಣನು ಬೆಳೆಯುತ್ತಾ ಹೋದನು.
ಕಲಿಯಗದ ನಾಗ
ಆಗ ಕಲಿಯು ಬಿಡಲೇ ಬೇಕಾಯಿತು. ನಂತರ ಶ್ರೀಕೃಷ್ಣನು ಕಲಿಯ ತಲೆಯ ಮೇಲೆ ನೃತ್ಯ ಮಾಡಲು ಆರಂಭಿಸಿದನು. ಕಲಿಯು ನಿಧಾನವಾಗಿ ರಕ್ತ ವಾಂತಿಯನ್ನು ಮಾಡಲು ಪ್ರಾರಂಭಿಸಿದನು. ಕಲಿಯ ಹೆಂಡತಿಯು ಅದೇ ಸಮಯದಲ್ಲಿ ಭಕ್ತಿಯಿಂದ ಕೃಷ್ಣನಲ್ಲಿ ಕ್ಷಮೆಯಾಚಿಸಿದಳು. ನಂತರ ಕಲಿಯು ಕ್ಷಮೆಯಾಚಿಸಿ, ಯಾರಿಗೂ ತೊಂದರೆ ಕೊಡುವುದಿಲ್ಲವೆಂದು ಹೇಳಿದನು. ಆಗ ಕೃಷ್ಣನು ರಾಮನಕ ದ್ವೀಪಕ್ಕೆ ಹೋಗಲು ಆದೇಶಿಸಿದನು ಎನ್ನುವ ಪ್ರತೀತಿ ಇದೆ.