Latest Updates
-
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು?
ಗೃಹ ಪ್ರವೇಶ ಪೂಜೆಗೆ ಮುನ್ನ ಮನೆಯೊಳಗೆ ವಸ್ತುಗಳನ್ನು ತರಲೇಬಾರದು, ಏಕೆ?
ಒಂದು ಸ್ವಂತ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಒಂದು ಹೊಸ ಮನೆ ಕಟ್ಟಿ ಅಥವಾ ಖರೀದಿಸಿ ಆ ಮನೆಯಲ್ಲಿ ವಾಸ ಮಾಡುವ ಮುನ್ನ ಮನೆ ಗೃಹ ಪ್ರವೇಶ ಮಾಡುವುದು ಒಂದು ಸಂಪ್ರದಾಯ. ಎಲ್ಲಾ ಧರ್ಮದವರು ಗೃಹ ಪ್ರವೇಶ ಮಾಡಿಯೇ ಹೊಸ ಮನೆಯಲ್ಲಿ ಜೀವನ ಪ್ರಾರಂಭಿಸುತ್ತಾರೆ.
ಪೂಜೆಗಳನ್ನು ಮಾಡಿಸಿ ಅಥವಾ ಧಾರ್ಮಿಕ ಗುರುಗಳಿಂದ ಪ್ರಾರ್ಥನೆ ಮಾಡಿಸಿ, ಮನೆಯಲ್ಲಿ ಹಾಲು ಉಕ್ಕಿಸಿ ಗೃಹ ಪ್ರವೇಶ ಮಾಡಲಾಗುವುದು. ನಾವು ಮುಂದೆ ಬಾಳುವ ಮನೆಯಲ್ಲಿ ಸಂಪತ್ತಿಗೆ ಯಾವ ಕೊರತೆ ಉಂಟಾಗಬಾರದು, ಆ ಮನೆಯಲ್ಲಿ ನೆಮ್ಮದಿ ಇರಬೇಕು, ಮನೆ ಸದಸ್ಯರು ಆರೋಗ್ಯದಿಂದ ಇರಬೇಕು, ಆ ಮನೆ ನಮ್ಮ ಪಾಲಿಗೆ ಅದೃಷ್ಟದ ಮನೆಯಾಗಿರಬೇಕು ಎಂದು ಬಯಸುತ್ತೇವೆ.
ಅದೆಲ್ಲಾ ಸಿಗಬೇಕೆಂದರೆ ಗೃಹ ಪ್ರವೇಶಕ್ಕೆ ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಬೇಕು, ಇಲ್ಲದಿದ್ದರೆ ಮನೆಗೆ ದೋಷ ಉಂಟಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಲಾಗಿದೆ ನೋಡಿ:

ಗೃಹ ಪ್ರವೇಶ ಮಾಡುವಾಗ ಪಾಲಿಸಬೆಕಾದ ನಿಯಮಗಳು:
*ಮನೆಯ ಬಾಗಿ, ಮೇಲ್ಛಾವಣೆ, ಕಿಟಕಿಗಳ ಕೆಲಸ ಮುಗಿದಿರಬೇಕು.
* ಮನೆಗೆ ಪ್ರವೇಶಿಸುವ ಮುನ್ನ ತೆಂಗಿನಕಾಯಿ ಒಡೆಯುವುದು ಶುಭವೆಂದು ಪರಿಗಣಿಸಲಾಗಿದೆ.
* ಮನೆಯೊಳಗಡೆ ಬಲಗಾಲನ್ನು ಇಟ್ಟು ಪ್ರವೇಶ ಮಾಡಿ.
* ಮನೆಯ ಎಲ್ಲಾ ದಿಕ್ಕುಗಳಿಗೆ, ಕೋಣೆಗಳಿಗೆ ಉಪ್ಪು ನೀರನ್ನು ಸಿಂಪಡಿಸಿ, ಇದು ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತೆ ಎಂದು ಹೇಳಲಾಗುವುದು.
* ಈ ದಿನ ಕಪ್ಪು ಬಟ್ಟೆಯನ್ನು ಧರಿಸಬೇಡಿ.
* ಗೃಹ ಪ್ರವೇಶದಂದೂ ದೇವರ ಎಲ್ಲಾ ಫೋಟೋಗಳು ಪೂರ್ವಕ್ಕೆ ಮುಖ ಮಾಡಿರುವಂತೆ ಇಡಬೇಕು.
* ಮನೆಯ ಮುಖ್ಯದ್ವಾರವನ್ನು ಮಾವಿನ ಎಲೆಯ ತೋರಣ ಹಾಗೂ ಹೂಗಳಿಂದ ಅಲಂಕರಿಸಬೇಕು.
* ದ್ವಾರದ ಮುಂದುಗಡೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ.

ಗೃಹ ಪ್ರವೇಶಕ್ಕೆ ಮುನ್ನ ಸಾಮಾನುಗಳನ್ನು ಸಾಗಿಸಬೇಡಿ
ವಾಸ್ತು ಪೂಜೆ ಮಾಡುವ ಮುನ್ನ ಮನೆಯೊಳಗಡೆ ಯಾವ ವಸ್ತುಗಳನ್ನು ಸಾಗಿಸಬಾರದು, ಹಾಲು ಉಕ್ಕಿಸಲು ಸ್ಟೌವ್ ಕೊಂಡೊಯ್ಯಬಹುದು, ಇನ್ಯಾವ ವಸ್ತುಗಳನ್ನು ಸಾಗಿಸಬೇಡಿ. ಪೂಜೆ ಮಾಡುವಾಗ ಮನೆ ಖಾಲಿಯಿರಬೇಕು, ನಂತತರವಷ್ಟೇ ವಸ್ತುಗಳನ್ನು ಜೋಡಿಸಿ.

ಪೂಜೆ ಬಳಿಕ ಬರಿಗೈಯಲ್ಲಿ ಯಾರನ್ನು ಬಿಡಬೇಡಿ?
ಗೃಹ ಪ್ರವೇಶವಾದ ಬಳಿಕ ಮನೆಯೊಳಗಡೆ ಮೊದಲಿಗೆ ಚಿನ್ನ,ಬೆಳ್ಳಿ ಹಾಕಿದ ಡಬ್ಬ, ದೇವರ ವಿಗ್ರಹ, ಸಿಹಿತಿಂಡಿ, ತೊಟ್ಟಿಲಿನಲ್ಲಿರುವ ಮಗು, ಹಣ್ಣುಗಳು, ಧಾನ್ಯಗಳು ಇಂಥ ವಸ್ತುಗಳನ್ನು ಮೊದಲು ಸಾಗಿಸಬೇಕು. ಯಾವುದೇ ಕಾರಣಕ್ಕೆ ಬರಿಗೈಯಲ್ಲಿ ಮೊದಲು ಹೆಜ್ಜೆ ಹಾಕಬಾರದು.

ಗೃಹ ಪ್ರವೇಶ ಮಾಡಿದ ಬಳಿಕ ಮನೆಯನ್ನು ಖಾಲಿ ಬಿಡಬೇಡಿ
ಗೃಹ ಪ್ರವೇಶ ಮಾಡಿದ ಬಳಿಕ 3 ದಿನಗಳವರೆಗೆ ಮನೆಯನ್ನು ಖಾಲಿ ಬಿಡಬಾರದು, ಯಾರಾದರೂ ಒಬ್ಬರಾದರೂ ಆ ಮನೆಯಲ್ಲಿ ಉಳಿದುಕೊಳ್ಳಬೇಕು. ಖಾಲಿ ಬಿಟ್ಟರೆ ಮನೆಗೆ ದೋಷ ಉಂಟಾಗುವುದು.
* ಇನ್ನು ಗೃಹ ಪೂಜೆ ಮಾಡಿದ ಬ್ರಾಹ್ಮಣರಿಗೆ ಅಥವಾ ಧಾರ್ಮಿಕ ಗುರುವಿಗೆ ಹಣ, ಫಲಾಹಾರ, ಉಡುಗೆಗಳನ್ನು ನೀಡಿ ಗೌರವಿಸಬೇಕು.
ಮನೆಯಲ್ಲಿ ಯಾರಾದರೂ ಗರ್ಭಿಣಿಯಿದ್ದರೆ ಅಥವಾ ಸಮೀಪದಲ್ಲಿ ಮನೆ ಸದಸ್ಯರು ಮರಣವೊಂದಿದ್ದರೆ ಗೃಹ ಪ್ರವೇಶ ಮಾಡುವಂತಿಲ್ಲ.



Click it and Unblock the Notifications