Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಗಣಪತಿ ದೇವರ ಮೂರ್ತಿ ಖರೀದಿಸುವ ಮೊದಲು ಈ ಸಂಗತಿಗಳು ಗಮನದಲ್ಲಿಟ್ಟುಕೊಳ್ಳಿ
ಗಣೇಶ ಚತುದರ್ಶಿ ಬಂದೇಬಿಟ್ಟಿದೆ. ಎಲ್ಲೆಡೆಯು ಸಂಭ್ರಮ ಕೂಡ ಮನೆ ಮಾಡಿದೆ. ವರ್ಷ ಕಳೆದು ಹೇಗೆ ಗಣೇಶ ಚತುದರ್ಶಿ ಬಂದಿದೆ ಎಂದು ಗೊತ್ತೇ ಆಗುತ್ತಿಲ್ಲ. ಗಣೇಶ ಚತುದರ್ಶಿಗೆ ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಗಣಪತಿಯ ಮೂರ್ತಿಯನ್ನಿಟ್ಟು ಪೂಜೆ, ಆರತಿ ಮಾಡಲಾಗುತ್ತದೆ. ಗಣಪತಿ ಮೂರ್ತಿಯನ್ನು ರಚಿಸುವ ಕಲಾವಿದರು ಈಗಾಗಲೇ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿ ಆಗಿದೆ. ಮಾರುಕಟ್ಟೆಯಲ್ಲಿ ಸುಂದರ ಹಾಗೂ ಬಣ್ಣಬಣ್ಣದ ಗಣಪತಿಗಳು ಜನರನ್ನು ಆಕರ್ಷಿಸುತ್ತಿದೆ. ಪ್ರತಿಯೊಬ್ಬ ಗಣಪತಿ ಭಕ್ತ ಕೂಡ ತಾನು ಅತೀ ಸುಂದರವಾಗಿರುವ ಗಣಪತಿ ಮೂರ್ತಿ ಖರೀದಿಸಬೇಕೆಂದು ಬಯಸುವನು.

ಹಿಂದೂಗಳು ಅತೀ ಸಡಗರ, ಸಂಭ್ರಮದಿಂದ ಆಚರಿಸುವಂತಹ ಹಬ್ಬವೇ ಗಣೇಶ ಚತುದರ್ಶಿ. ಗಣಪತಿ ದೇವರ ಮೂರ್ತಿಯನ್ನು ಮನೆಗೆ ತಂದು ಹತ್ತು ದಿನಗಳ ಕಾಲ ಪೂಜೆ, ಆರತಿ ಮಾಡಲಾಗುತ್ತದೆ. ಇದರ ಬಳಿಕ ಮೂರ್ತಿಯ ಜಲಸ್ತಂಭ ಮಾಡಲಾಗುತ್ತದೆ. ಈ ವರ್ಷ ಸಪ್ಟೆಂಬರ್ 13ರಂದು ಗಣೇಶ ಚತುದರ್ಶಿ ಬಂದಿದೆ. ಅದಾಗ್ಯೂ, ಗಣಪತಿ ಮೂರ್ತಿಯನ್ನು ಖರೀದಿಸುವ ಮೊದಲು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಕುಳಿತಿರುವ ಗಣಪತಿ ಅಥವಾ ನಿಂತಿರುವ ಗಣಪತಿ?
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಗಣಪತಿ ಮೂರ್ತಿಗಳು ಲಭ್ಯವಿದೆ. ಇದರಿಂದ ಮಾರಾಟಗಾರರಿಗೆ ಲಾಭ. ಮನೆಯಲ್ಲಿ ಪೂಜೆ ಮಾಡಲು ಕುಳಿತಿರುವಂತಹ ಗಣಪತಿ ಒಳ್ಳೆಯದು. ಕಚೇರಿಗಳಿಗೆ ನಿಂತಿರುವ ಗಣಪತಿ ಆಗಬಹುದು. ಕುಳಿತಿರುವ ಗಣಪತಿಯು ಆರ್ಥಿಕ ಸ್ಥಿರತೆ ತರುತ್ತಾರೆ ಮತ್ತು ಹಣದ ದುರುಪಯೋಗ ತಡೆಯುವರು. ನಿಂತಿರುವ ಗಣಪತಿಯು ವೃತ್ತಿಯಲ್ಲಿ ಯಶಸ್ಸು ತಂದುಕೊಡುವರು.

ಗಣಪತಿ ಮೂರ್ತಿಯ ಸೊಂಡಿಲು ಬಲ ಅಥವಾ ಎಡಕ್ಕಿರಬೇಕೇ?
ಗಣಪತಿ ಮೂರ್ತಿಯನ್ನು ಖರೀದಿಸುವಾಗ ಹೆಚ್ಚಿನವರಲ್ಲಿ ಸೊಂಡಿಲು ಯಾವ ಕಡೆಗಿರಬೇಕು ಎನ್ನುವ ಗೊಂದಲ ಕಾಡುವುದು. ಬಾಲಗಣಪನು ಎರಡು ಕಡೆಯ ಸೊಂಡಿಲಿನಲ್ಲಿ ಸುಂದರವಾಗಿ ಕಾಣುವನು. ಆದರೆ ಇದೆರಡನ್ನು ಪೂಜೆಗೆ ಬಳಸಬಾರದು. ಗಣಪತಿಯ ಸೊಂಡಿಲು ಎಡಭಾಗಕ್ಕೆ ಇರಬೇಕು ಮತ್ತು ಇಂತಹ ಮೂರ್ತಿಯು ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗಿದೆ.

ಇಲಿ ಅಥವಾ ಮೋದಕ?
ಗಣಪತಿ ದೇವರ ಮೂರ್ತಿಯೊಂದಿಗೆ ಅವರ ವಾಹನ ಇಲಿ ಕೂಡ ಇರುವುದು. ದೇವರ ಪಾದದ ಕೆಳಗಡೆ ಮೋದಕ ತಿನ್ನುವ ಇಲಿಯನ್ನು ಕೆಲವೆಡೆ ತೋರಿಸಲಾಗಿದೆ. ಗಣಪತಿ ದೇವರಿಗೂ ಮೋದಕವು ತುಂಬಾ ಪ್ರಿಯವಾಗಿದೆ. ಗಣಪತಿ ದೇವರ ಮೂರ್ತಿಯೊಂದಿಗೆ ಇಲಿ ಮತ್ತು ಮೋದಕ ಇರುವುದನ್ನು ನೀವು ಖರೀದಿ ಮಾಡಿ.

ಮೂರ್ತಿ ತಯಾರಿಕೆಗೆ ಬಳಸುವ ಸಾಮಗ್ರಿಗಳು
ಗಣಪತಿ ದೇವರ ಮೂರ್ತಿಯನ್ನು ಮಣ್ಣು, ಪ್ಯಾರಿಸ್ ಆಫ್ ಪ್ಲಾಸ್ಟರ್ ಅಥವಾ ಇತರ ಯಾವುದೇ ಸಾಮಗ್ರಿಯಿಂದ ತಯಾರಿಸಬಹುದು. ಮೂರ್ತಿ ತಯಾರಿಕೆಗೆ ರಾಸಾಯನಿಕ ಬಳಕೆ ಮಾಡಬಾರದು. ಅದಾಗ್ಯೂ, ಮಣ್ಣು ಮತ್ತು ಮರಳು ಬಳಸಿಕೊಂಡು ಮನೆಯಲ್ಲೇ ಗಣಪತಿ ಮೂರ್ತಿ ತಯಾರಿಸಿದರೆ ಒಳ್ಳೆಯದು. ಹೀಗೀಗ ಹೆಚ್ಚಾಗಿ ಪ್ಯಾರಿಸ್ ಆಫ್ ಪ್ಲಾಸ್ಟರ್ ಬಳಸಿ ಮೂರ್ತಿ ತಯಾರಿಸಲಾಗುತ್ತದೆ. ಪೂಜೆಗೆ ಮರದ ಮೂರ್ತಿ ಬಳಸಬಾರದು. ಇದನ್ನು ಪೂಜಾಕೊಠಡಿಯಲ್ಲೂ ಇಡಬಾರದು.

ಮೂರ್ತಿಯ ಬಣ್ಣ
ಗಣೇಶ ಚತುದರ್ಶಿಗೆ ಖರೀದಿಸುವ ಗಣಪತಿ ಮೂರ್ತಿಯ ಬಣ್ಣವು ತುಂಬಾ ಮಹತ್ವ ಪಡೆಯುವುದು. ಕುಂಕುಮ ಬಣ್ಣವನ್ನು ಮೂರ್ತಿಗೆ ಬಳಸಬಹುದು. ಬಿಳಿ ಬಣ್ಣದಿಂದಲೂ ಮೂರ್ತಿ ತಯಾರಿಸಬಹುದು. ಇಂತಹ ಮೂರ್ತಿಗಳು ಮನೆಯಲ್ಲಿ ಶಾಂತಿ ತರುವುದು. ಗಣೇಶ ಚತುದರ್ಶಿ ವೇಳೆ ಇಂತಹ ಬಣ್ಣದ ಮೂರ್ತಿಗಳನ್ನು ಪೂಜಿಸಿದರೆ ಅದರಿಂದ ನಿಮ್ಮ ಇಷ್ಟಾರ್ಥಗಳು ಬೇಗನೆ ಈಡೇರುವುದು ಎಂದು ಹೇಳಲಾಗಿದೆ.



Click it and Unblock the Notifications