Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಏಕೆ ಇಷ್ಟೊಂದು ಮಹತ್ವ?

ಇಹಲೋಕ ತ್ಯಜಿಸಿರುವಂತಹ ಹಿರಿಯರ ಆತ್ಮಗಳಿಗೆ ಶಾಂತಿ ಸಿಗಲೆಂದು ಪಿತೃ ಪಕ್ಷದಲ್ಲಿ ಶ್ರಾದ್ಧ ಅಥವಾ ಪಿತೃ ಪಕ್ಷವನ್ನು ಮಾಡಲಾಗುತ್ತದೆ. ಪಿತೃ ಪಕ್ಷವು 15 ದಿನಗಳ ಕಾಲ ಇದ್ದು, ಭಾದ್ರಪದ ತಿಂಗಳ ಪೂರ್ಣಿಮೆಯಿಂದ ಅಶ್ವಿನಿ ತಿಂಗಳ ಅಮವಾಸ್ಯೆ ತನಕ ಪಿತೃ ಪಕ್ಷವಿರುವುದು. ಪಿತೃ ಪಕ್ಷವು 2018ರ ಸೆ.24ರಂದು ಆರಂಭವಾಗಿ ಅಕ್ಟೋಬರ್ 8ರ ಅಮವಾಸ್ಯೆಯಂದು ಕೊನೆಗೊಳ್ಳಲಿದೆ.
ಶ್ರಾದ್ಧವನ್ನು ಹಿರಿಯರು ನಿಧನರಾದ ತಿಥಿಗೆ ಅನುಗುಣವಾಗಿ ಮಾಡಲಾಗುವುದು. ಅದೇ ರೀತಿ ಅಮವಾಸ್ಯೆಯಂದು ಕೂಡ ಇದನ್ನು ಮಾಡಲಾಗುವುದು. ಅಮವಾಸ್ಯೆಯಂದು ಮೃತಪಟ್ಟ ಹಿರಿಯರನ್ನು ಪೂಜಿಸಲಾಗುವುದು. ತಿಂಗಳಲ್ಲಿ ಬರುವಂತಹ ಪ್ರತೀ ಅಮವಾಸ್ಯೆಯ ವೇಳೆಯು ಇದನ್ನು ಮಾಡಬಹುದು. ಈ ವೇಳೆ ಕಾಗೆಗಳಿಗೆ ಆಹಾರ ನೀಡುವಂತಹ ಪದ್ಧತಿಯು ಇದೆ. ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು. ಇದರ ಬಗ್ಗೆ ಕೆಲವೊಂದು ನಂಬಿಕೆಗಳು ಕೂಡ ಇವೆ. ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿಸಿಕೊಡಲಾಗಿದೆ...

ಹೂ ಅಥವಾ ಎಲೆಗಳನ್ನು ಹಿಡಿದಿರುವ ಕಾಗೆ
ಪಕ್ಷಿಗಳು ಹೂ ಅಥವಾ ಹೂವಿನ ದಳಗಳು ಅಥವಾ ಎಲೆಗಳನ್ನು ಹಿಡಿದುಕೊಂಡು ಹೋಗುವುದು ದೊಡ್ಡ ವಿಷಯವೇನಲ್ಲ. ಆದರೆ ಕಾಗೆಯು ಇದನ್ನು ಹಿಡಿದಿದ್ದರೆ ಆಗ ಅದು ಶುಭವೆಂದು ಪರಿಗಣಿಸಲಾಗಿದೆ. ತುಂಬಾ ಪವಿತ್ರವಾಗಿರುವುದು ಏನೋ ಸಂಭವಿಸಲಿದೆ ಎಂದು ನಂಬಲಾಗಿದೆ. ನಿಮ್ಮ ಬಯಕೆಯು ಈಡೇರಲಿದೆ ಎನ್ನುವುದರ ಸೂಚನೆ ಇದಾಗಿದೆ.

ದನ ಮೇಲೆ ಕಾಗೆ ಕುಳಿತಿರುವುದು
ಇದು ಮತ್ತೊಂದು ಅಪರೂಪದ ಘಟನೆ. ಕಾಗೆಯು ದನದ ಬೆನ್ನಿನ ಮೇಲೆ ಕುಳಿತುಕೊಂಡು ತನ್ನ ಕೊಕ್ಕನ್ನು ಉಜ್ಜಿಕೊಳ್ಳುತ್ತಿದ್ದರೆ ಆಗ ಇದನ್ನು ನೋಡಿದ ವ್ಯಕ್ತಿಗೆ ಒಳ್ಳೆಯ ಆಹಾರದ ತೃಪ್ತಿ ಸಿಗುತ್ತದೆ ಎನ್ನುವ ಸೂಚನೆಯಾಗಿದೆ ಎಂದು ನಂಬಲಾಗಿದೆ. ನೀವು ಹೀಗೆ ನೋಡಿದರೆ ಒಳ್ಳೆಯ ಆಹಾರ ಸಿಗುವುದು ಖಚಿತ.

ದಪ್ಪಗಿನ ಹಸಿರಾಗಿರುವ ಮರದ ಮೇಲೆ ಕಾಗೆ ಕುಳಿತಿರುವುದು
ಇದು ಅಪರೂಪವೆಂದು ಹೇಳಲಾಗದು. ಯಾಕೆಂದರೆ ಮರದ ಮೇಲೆ ಯಾವಾಗಲೂ ಕಾಗೆಗಳು ಕುಳಿತಿರುತ್ತದೆ. ಆದರೆ ಮರವು ಹಸಿರಾಗಿ, ದಪ್ಪಗಿರಬೇಕು. ಇಂತಹದ್ದನ್ನು ನೋಡಿದರೆ ಇದು ಹಣಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದನ್ನು ನೋಡಿದವರಿಗೆ ಧನಲಾಭವಾಗಲಿದೆ ಎಂದು ನಂಬಲಾಗಿದೆ.

ಕೊಕ್ಕಿನಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿರುವುದು
ಕಾಗೆ ಕೊಕ್ಕಿನಲ್ಲಿ ಒಣ ಹುಲ್ಲನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿದರೆ, ಆಗ ಇದು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದರ ಅರ್ಥವೆಂದರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಬೇಗನೆ ಪರಿಹಾರವಾಗಲಿದೆ. ನಿಂತುಹೋಗಿರುವಂತಹ ಯೋಜನೆಗಳೆಲ್ಲವೂ ಮುಂದುವರಿಯಲಿದೆ ಎಂದು ನಂಬಲಾಗಿದೆ.

ನಿಮ್ಮ ಎಡ ಬದಿಯಿಂದ ಬಂದು ಏನಾದರೂ ತಿಂದರೆ
ನಿಮ್ಮ ಎಡದ ಬದಿಯಿಂದ ಕಾಗೆಯು ಬಂದು ಏನಾದರೂ ತಿನ್ನುತ್ತಲಿದ್ದರೆ, ಆಗ ಇದು ಶುಭಸೂಚಕವಾಗಿದೆ. ವಿಳಂಬವಾಗಿರುವ ಪ್ರವಾಸವು ಬೇಗನೆ ಆಗಲಿದೆ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಯೋಜನೆಗಳು ಪೂರ್ಣವಾಗಲಿದೆ ಎಂದು ನಂಬಲಾಗಿದೆ.

ಹಂದಿ ಮೇಲೆ ಕಾಗೆಯು ಕುಳಿತಿರುವುದು
ಹಂದಿಯ ಬೆನ್ನ ಮೇಲೆ ಕಾಗೆ ಕುಳಿತಿರುವುದನ್ನು ನೀವು ನೋಡಿದರೆ ಆಗ ಬೇಗನೆ ಶ್ರೀಮಂತರಾಗಲಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಲಕ್ಷ್ಮೀ ದೇವಿಯು ನಿಮಗೆ ಒಲಿದಿದ್ದಾಳೆ ಮತ್ತು ಆಕೆಯು ಈ ಮೂಲಕ ಸೂಚನೆ ನೀಡಿದ್ದಾಳೆ ಎಂದು ತಿಳಿಯಿರಿ. ಧಾನ್ಯಗಳ ರಾಶಿ ಮೇಲೆ ಕಾಗೆ ಕುಳಿತಿದ್ದರೂ ಇದೇ ರೀತಿಯ ಆರ್ಥಿಕ ಲಾಭವಾಗುವುದು.



Click it and Unblock the Notifications











