Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಏಕೆ ಇಷ್ಟೊಂದು ಮಹತ್ವ?

ಇಹಲೋಕ ತ್ಯಜಿಸಿರುವಂತಹ ಹಿರಿಯರ ಆತ್ಮಗಳಿಗೆ ಶಾಂತಿ ಸಿಗಲೆಂದು ಪಿತೃ ಪಕ್ಷದಲ್ಲಿ ಶ್ರಾದ್ಧ ಅಥವಾ ಪಿತೃ ಪಕ್ಷವನ್ನು ಮಾಡಲಾಗುತ್ತದೆ. ಪಿತೃ ಪಕ್ಷವು 15 ದಿನಗಳ ಕಾಲ ಇದ್ದು, ಭಾದ್ರಪದ ತಿಂಗಳ ಪೂರ್ಣಿಮೆಯಿಂದ ಅಶ್ವಿನಿ ತಿಂಗಳ ಅಮವಾಸ್ಯೆ ತನಕ ಪಿತೃ ಪಕ್ಷವಿರುವುದು. ಪಿತೃ ಪಕ್ಷವು 2018ರ ಸೆ.24ರಂದು ಆರಂಭವಾಗಿ ಅಕ್ಟೋಬರ್ 8ರ ಅಮವಾಸ್ಯೆಯಂದು ಕೊನೆಗೊಳ್ಳಲಿದೆ.
ಶ್ರಾದ್ಧವನ್ನು ಹಿರಿಯರು ನಿಧನರಾದ ತಿಥಿಗೆ ಅನುಗುಣವಾಗಿ ಮಾಡಲಾಗುವುದು. ಅದೇ ರೀತಿ ಅಮವಾಸ್ಯೆಯಂದು ಕೂಡ ಇದನ್ನು ಮಾಡಲಾಗುವುದು. ಅಮವಾಸ್ಯೆಯಂದು ಮೃತಪಟ್ಟ ಹಿರಿಯರನ್ನು ಪೂಜಿಸಲಾಗುವುದು. ತಿಂಗಳಲ್ಲಿ ಬರುವಂತಹ ಪ್ರತೀ ಅಮವಾಸ್ಯೆಯ ವೇಳೆಯು ಇದನ್ನು ಮಾಡಬಹುದು. ಈ ವೇಳೆ ಕಾಗೆಗಳಿಗೆ ಆಹಾರ ನೀಡುವಂತಹ ಪದ್ಧತಿಯು ಇದೆ. ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು. ಇದರ ಬಗ್ಗೆ ಕೆಲವೊಂದು ನಂಬಿಕೆಗಳು ಕೂಡ ಇವೆ. ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿಸಿಕೊಡಲಾಗಿದೆ...

ಹೂ ಅಥವಾ ಎಲೆಗಳನ್ನು ಹಿಡಿದಿರುವ ಕಾಗೆ
ಪಕ್ಷಿಗಳು ಹೂ ಅಥವಾ ಹೂವಿನ ದಳಗಳು ಅಥವಾ ಎಲೆಗಳನ್ನು ಹಿಡಿದುಕೊಂಡು ಹೋಗುವುದು ದೊಡ್ಡ ವಿಷಯವೇನಲ್ಲ. ಆದರೆ ಕಾಗೆಯು ಇದನ್ನು ಹಿಡಿದಿದ್ದರೆ ಆಗ ಅದು ಶುಭವೆಂದು ಪರಿಗಣಿಸಲಾಗಿದೆ. ತುಂಬಾ ಪವಿತ್ರವಾಗಿರುವುದು ಏನೋ ಸಂಭವಿಸಲಿದೆ ಎಂದು ನಂಬಲಾಗಿದೆ. ನಿಮ್ಮ ಬಯಕೆಯು ಈಡೇರಲಿದೆ ಎನ್ನುವುದರ ಸೂಚನೆ ಇದಾಗಿದೆ.

ದನ ಮೇಲೆ ಕಾಗೆ ಕುಳಿತಿರುವುದು
ಇದು ಮತ್ತೊಂದು ಅಪರೂಪದ ಘಟನೆ. ಕಾಗೆಯು ದನದ ಬೆನ್ನಿನ ಮೇಲೆ ಕುಳಿತುಕೊಂಡು ತನ್ನ ಕೊಕ್ಕನ್ನು ಉಜ್ಜಿಕೊಳ್ಳುತ್ತಿದ್ದರೆ ಆಗ ಇದನ್ನು ನೋಡಿದ ವ್ಯಕ್ತಿಗೆ ಒಳ್ಳೆಯ ಆಹಾರದ ತೃಪ್ತಿ ಸಿಗುತ್ತದೆ ಎನ್ನುವ ಸೂಚನೆಯಾಗಿದೆ ಎಂದು ನಂಬಲಾಗಿದೆ. ನೀವು ಹೀಗೆ ನೋಡಿದರೆ ಒಳ್ಳೆಯ ಆಹಾರ ಸಿಗುವುದು ಖಚಿತ.

ದಪ್ಪಗಿನ ಹಸಿರಾಗಿರುವ ಮರದ ಮೇಲೆ ಕಾಗೆ ಕುಳಿತಿರುವುದು
ಇದು ಅಪರೂಪವೆಂದು ಹೇಳಲಾಗದು. ಯಾಕೆಂದರೆ ಮರದ ಮೇಲೆ ಯಾವಾಗಲೂ ಕಾಗೆಗಳು ಕುಳಿತಿರುತ್ತದೆ. ಆದರೆ ಮರವು ಹಸಿರಾಗಿ, ದಪ್ಪಗಿರಬೇಕು. ಇಂತಹದ್ದನ್ನು ನೋಡಿದರೆ ಇದು ಹಣಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದನ್ನು ನೋಡಿದವರಿಗೆ ಧನಲಾಭವಾಗಲಿದೆ ಎಂದು ನಂಬಲಾಗಿದೆ.

ಕೊಕ್ಕಿನಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿರುವುದು
ಕಾಗೆ ಕೊಕ್ಕಿನಲ್ಲಿ ಒಣ ಹುಲ್ಲನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿದರೆ, ಆಗ ಇದು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದರ ಅರ್ಥವೆಂದರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಬೇಗನೆ ಪರಿಹಾರವಾಗಲಿದೆ. ನಿಂತುಹೋಗಿರುವಂತಹ ಯೋಜನೆಗಳೆಲ್ಲವೂ ಮುಂದುವರಿಯಲಿದೆ ಎಂದು ನಂಬಲಾಗಿದೆ.

ನಿಮ್ಮ ಎಡ ಬದಿಯಿಂದ ಬಂದು ಏನಾದರೂ ತಿಂದರೆ
ನಿಮ್ಮ ಎಡದ ಬದಿಯಿಂದ ಕಾಗೆಯು ಬಂದು ಏನಾದರೂ ತಿನ್ನುತ್ತಲಿದ್ದರೆ, ಆಗ ಇದು ಶುಭಸೂಚಕವಾಗಿದೆ. ವಿಳಂಬವಾಗಿರುವ ಪ್ರವಾಸವು ಬೇಗನೆ ಆಗಲಿದೆ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಯೋಜನೆಗಳು ಪೂರ್ಣವಾಗಲಿದೆ ಎಂದು ನಂಬಲಾಗಿದೆ.

ಹಂದಿ ಮೇಲೆ ಕಾಗೆಯು ಕುಳಿತಿರುವುದು
ಹಂದಿಯ ಬೆನ್ನ ಮೇಲೆ ಕಾಗೆ ಕುಳಿತಿರುವುದನ್ನು ನೀವು ನೋಡಿದರೆ ಆಗ ಬೇಗನೆ ಶ್ರೀಮಂತರಾಗಲಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಲಕ್ಷ್ಮೀ ದೇವಿಯು ನಿಮಗೆ ಒಲಿದಿದ್ದಾಳೆ ಮತ್ತು ಆಕೆಯು ಈ ಮೂಲಕ ಸೂಚನೆ ನೀಡಿದ್ದಾಳೆ ಎಂದು ತಿಳಿಯಿರಿ. ಧಾನ್ಯಗಳ ರಾಶಿ ಮೇಲೆ ಕಾಗೆ ಕುಳಿತಿದ್ದರೂ ಇದೇ ರೀತಿಯ ಆರ್ಥಿಕ ಲಾಭವಾಗುವುದು.



Click it and Unblock the Notifications











