Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ನಾಗರ ಪಂಚಮಿಯಂದು ಕಾಳ ಸರ್ಪದೋಷ ನಿವಾರಣೆಗೆ ಪರಿಹಾರ
ಜ್ಯೋತಿಷ್ಯದ ಪ್ರಕಾರ ಹಾವು ರಾಹು-ಕೇತುವನ್ನು ಪ್ರತಿನಿಧಿಸುತ್ತದೆ. ಹಾವಿನ ತಲೆ ರಾಹು, ಬಾಲ ಕೇತುವನ್ನು ಪ್ರತಿನಿಧಿಸುತ್ತದೆ. ಉಳಿದ 7 ಗ್ರಹಗಳ ಮೇಲೆ ರಾಹು-ಕೇತು ಪ್ರಭಾವ ಬೀರುವುದು. ರಾಹು-ಕೇತು ದೋಷವಿರುವವರಲ್ಲಿ ಕಾಳಸರ್ಪ ದೋಷವಿರುತ್ತದೆ. ಕಾಳ ಸರ್ಪ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕಾಳಸರ್ಪ ದೋಷವಿದ್ದರೆ ಕೆಲವೊಂದು ಸೂಚನೆಗಳು ದೊರೆಯುತ್ತದೆ, ಆ ಸೂಚನೆಗಳು ಕಂಡು ಬಂದರೆ ಕಾಳ ಸರ್ಪದೋಷವಿದೆ ಎಂದರ್ಥ:

ಕಾಳಸರ್ಪ ದೋಷದ ಸೂಚನೆಗಳು
* ಕಾಳ ಸರ್ಪ ದೋಷವಿದ್ದರೆ ತೀರಿ ಹೋದವರು ಕನಸ್ಸಿನಲ್ಲಿ ಬರುತ್ತದೆ. ಇತ್ತೀಚೆಗೆ ಯಾರಾದರೂ ತೀರಿ ಹೋಗಿದ್ದರೆ ಅವರು ಕನಸ್ಸಿನಲ್ಲಿ ಬರುತ್ತದೆ.
* ನಮ್ಮೆಲ್ಲಾ ಕೆಲಸಗಳು ಯಾವುದೋ ಕಾರಣದಿಂದಾಗಿ ಅಡೆತಡೆಯಾಗುತ್ತಿದೆಯೆಲ್ಲಾ ಎಂದನಿಸಲಾರಂಭಿಸುವುದು
* ತಮ್ಮದೇ ಮನೆಯ ಕನಸು ಬೀಳಬಹುದು'
* ಸಾಮಾಜಿಕವಾಗಿ ಇಮೇಜ್ಗೆ ಧಕ್ಕೆಯಾಗಬಹುದು
* ಕಾಳಸರ್ಪದೋಷವಿದ್ದರೆ ಸಂತಾನದೋಷ ಉಂಟಾಗುವುದು
* ಹಾವು, ಹಾವು ಕಚ್ಚಿದಂಥ ಕನಸು ಬೀಳುವುದು
ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ದಿನ ನಾಗದೇವತೆಯನ್ನು ಪೂಜಿಸಲಾಗುವುದು. ನಾಗನ ಆರಾಧನೆ ಮಾಡದರೆ ನಾಗದೋಷದಿಂದ ಪರಿಹಾರ ಸಿಗುವುದು ಎಂಬ ನಂಬಿಕೆ. ಈ ದಿನ ಕಾಳ ಸರ್ಪ ದೋಷಕ್ಕೆ ಈ ರೀತಿ ಆರಾಧನೆ ಮಾಡಿದರೆ ಒಳ್ಳೆಯದು
* ಈ ದಿನ ನಾಗಮೂರ್ತಿಯನ್ನು ಆರಾಧಿಸಲಾಗುವುದು.
* ನೀರು, ಹಾಲು, ಆಹಾರ, ಹಣ್ಣುಗಳನ್ನು ನಾಗನಿಗೆ ಅರ್ಪಿಸಿ
* ಶ್ರೀ ಕೃಷ್ಣನ ಆರಾಧಿಸಿ, 11 ತೆಂಗಿನಕಾಯಿಯನ್ನು ಹರಿಯುವ ನೀರಿನಲ್ಲಿ ಬಿಡಿ
* ರಾಹು ಬೀಜ ಮಂತ್ರವನ್ನು ಪಠಿಸಿ.
ರಾಹು ಬೀಜ ಮಂತ್ರ: ಓಂ ಭ್ರಂ ಭ್ರೂಂ ಸಃ ರಾಹವೇ ನಮಃ
ಈ ಮಂತ್ರವನ್ನು 108 ಬಾರಿ ಪಠಿಸಿ.
* ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಪಠಿಸಿ
ಕಾಳಸರ್ಪ ದೋಷಕ್ಕೆ ಪರಿಹಾರ
* ಸರ್ಪ ಮಂತ್ರ , ಸರ್ಪ ಗಾಯತ್ರಿ ಮಂತ್ರ ಪಠಿಸಿ
* ಭೈರವ ದೇವನನ್ನು ಆರಾಧಿಸಿ
* ನಾಗರ ಪಂಚಮಿ ಸೋಮವಾರ ಬಂದಿದೆ, ಈ ದಿನ ನೀವು ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ.
* ಮಹಾ ಮೃತ್ಯುಂಜಯ ಮಂತ್ರ ಪಠಿಸಿ
* ಶಿವನಿಗೆ ಶ್ರೀಗಂಧವನ್ನು ಅರ್ಪಿಸಿ
* ಈ ದಿನ ಆಹಾರವನ್ನು ದಾನ ಮಾಡಿದರೆ ಒಳ್ಳೆಯದು
ಪ್ರತಿ ಶ್ರಾವಣ ಸೋಮವಾರ ಶಿವ ಲಿಂಗಕ್ಕೆ ತಪ್ಪದೆ ಜಲಾಭಿಷೇಕ ಮಾಡಿ.
ಮಂತ್ರ
ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್
ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ನಾಗದೋಷದಿಂದ ಪರಿಹಾರ ಸಿಗುವುದು ಮಾತ್ರವಲ್ಲ ಅಕಾಲಿಕ ಮರಣ ಭಯ ದೂರಾಗುವುದು.
ಈ ಮಂತ್ರವನ್ನು ದಿನದ ಯಾವುದೇ ಸಮಯದಲ್ಲಿ ಪಠಿಸಿ
ನೀವು ಈ ಮಂತ್ರವನ್ನು ದಿನದ ಯಾವುದೇ ಸಮಯದಲ್ಲಿ ಪಠಿಸಿ, ಸ್ನಾನದ ಬಳಿಕ ಈ ಮಂತ್ರವನ್ನು ಹೇಳುತ್ತಾ ದೇಹಕ್ಕೆ ವಿಭೂತಿ ಹಚ್ಚುವುದು ಒಳ್ಳೆಯದು.
ಮಂತ್ರ ಪಠಣೆ ವಿಧಾನ
ಈ ಮಂತ್ರವನ್ನು ಪಠಿಸುವಾಗ ಉಚ್ಛಾರಣೆ ದೋಷವಿರಬಹುದು. ಈ ಮಂತ್ರವನ್ನು ಪಠಿಸಲು ಒಂದೆಡೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿರಬೇಕು. ನಿಮ್ಮ ಮುಂದೆ ಒಂದು ಕಮಂಡಲದಲ್ಲಿ ನೀರನ್ನು ತುಂಬಿಡಿ, ನಿಮ್ಮ ಬಲ ಹಸ್ತದಿಂದ ಆ ಕಮಂಡಲವನ್ನು ಮುಚ್ಚಿ 108 ಬಾರಿ ಮಂತ್ರ ಫಠಣೆ ಮಾಡಬೇಕು, ನಂತರ ಆ ನೀರನ್ನು ಮನೆಯ ಒಳಗಡೆ ಪ್ರೋಕ್ಷಣೆ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಮನೆಗೆ ಶುಭಫಲ ಉಂಟಾಗುವುದು.



Click it and Unblock the Notifications