Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ನಾಗರ ಪಂಚಮಿಯಂದು ಕಾಳ ಸರ್ಪದೋಷ ನಿವಾರಣೆಗೆ ಪರಿಹಾರ
ಜ್ಯೋತಿಷ್ಯದ ಪ್ರಕಾರ ಹಾವು ರಾಹು-ಕೇತುವನ್ನು ಪ್ರತಿನಿಧಿಸುತ್ತದೆ. ಹಾವಿನ ತಲೆ ರಾಹು, ಬಾಲ ಕೇತುವನ್ನು ಪ್ರತಿನಿಧಿಸುತ್ತದೆ. ಉಳಿದ 7 ಗ್ರಹಗಳ ಮೇಲೆ ರಾಹು-ಕೇತು ಪ್ರಭಾವ ಬೀರುವುದು. ರಾಹು-ಕೇತು ದೋಷವಿರುವವರಲ್ಲಿ ಕಾಳಸರ್ಪ ದೋಷವಿರುತ್ತದೆ. ಕಾಳ ಸರ್ಪ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕಾಳಸರ್ಪ ದೋಷವಿದ್ದರೆ ಕೆಲವೊಂದು ಸೂಚನೆಗಳು ದೊರೆಯುತ್ತದೆ, ಆ ಸೂಚನೆಗಳು ಕಂಡು ಬಂದರೆ ಕಾಳ ಸರ್ಪದೋಷವಿದೆ ಎಂದರ್ಥ:

ಕಾಳಸರ್ಪ ದೋಷದ ಸೂಚನೆಗಳು
* ಕಾಳ ಸರ್ಪ ದೋಷವಿದ್ದರೆ ತೀರಿ ಹೋದವರು ಕನಸ್ಸಿನಲ್ಲಿ ಬರುತ್ತದೆ. ಇತ್ತೀಚೆಗೆ ಯಾರಾದರೂ ತೀರಿ ಹೋಗಿದ್ದರೆ ಅವರು ಕನಸ್ಸಿನಲ್ಲಿ ಬರುತ್ತದೆ.
* ನಮ್ಮೆಲ್ಲಾ ಕೆಲಸಗಳು ಯಾವುದೋ ಕಾರಣದಿಂದಾಗಿ ಅಡೆತಡೆಯಾಗುತ್ತಿದೆಯೆಲ್ಲಾ ಎಂದನಿಸಲಾರಂಭಿಸುವುದು
* ತಮ್ಮದೇ ಮನೆಯ ಕನಸು ಬೀಳಬಹುದು'
* ಸಾಮಾಜಿಕವಾಗಿ ಇಮೇಜ್ಗೆ ಧಕ್ಕೆಯಾಗಬಹುದು
* ಕಾಳಸರ್ಪದೋಷವಿದ್ದರೆ ಸಂತಾನದೋಷ ಉಂಟಾಗುವುದು
* ಹಾವು, ಹಾವು ಕಚ್ಚಿದಂಥ ಕನಸು ಬೀಳುವುದು
ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ದಿನ ನಾಗದೇವತೆಯನ್ನು ಪೂಜಿಸಲಾಗುವುದು. ನಾಗನ ಆರಾಧನೆ ಮಾಡದರೆ ನಾಗದೋಷದಿಂದ ಪರಿಹಾರ ಸಿಗುವುದು ಎಂಬ ನಂಬಿಕೆ. ಈ ದಿನ ಕಾಳ ಸರ್ಪ ದೋಷಕ್ಕೆ ಈ ರೀತಿ ಆರಾಧನೆ ಮಾಡಿದರೆ ಒಳ್ಳೆಯದು
* ಈ ದಿನ ನಾಗಮೂರ್ತಿಯನ್ನು ಆರಾಧಿಸಲಾಗುವುದು.
* ನೀರು, ಹಾಲು, ಆಹಾರ, ಹಣ್ಣುಗಳನ್ನು ನಾಗನಿಗೆ ಅರ್ಪಿಸಿ
* ಶ್ರೀ ಕೃಷ್ಣನ ಆರಾಧಿಸಿ, 11 ತೆಂಗಿನಕಾಯಿಯನ್ನು ಹರಿಯುವ ನೀರಿನಲ್ಲಿ ಬಿಡಿ
* ರಾಹು ಬೀಜ ಮಂತ್ರವನ್ನು ಪಠಿಸಿ.
ರಾಹು ಬೀಜ ಮಂತ್ರ: ಓಂ ಭ್ರಂ ಭ್ರೂಂ ಸಃ ರಾಹವೇ ನಮಃ
ಈ ಮಂತ್ರವನ್ನು 108 ಬಾರಿ ಪಠಿಸಿ.
* ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಪಠಿಸಿ
ಕಾಳಸರ್ಪ ದೋಷಕ್ಕೆ ಪರಿಹಾರ
* ಸರ್ಪ ಮಂತ್ರ , ಸರ್ಪ ಗಾಯತ್ರಿ ಮಂತ್ರ ಪಠಿಸಿ
* ಭೈರವ ದೇವನನ್ನು ಆರಾಧಿಸಿ
* ನಾಗರ ಪಂಚಮಿ ಸೋಮವಾರ ಬಂದಿದೆ, ಈ ದಿನ ನೀವು ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ.
* ಮಹಾ ಮೃತ್ಯುಂಜಯ ಮಂತ್ರ ಪಠಿಸಿ
* ಶಿವನಿಗೆ ಶ್ರೀಗಂಧವನ್ನು ಅರ್ಪಿಸಿ
* ಈ ದಿನ ಆಹಾರವನ್ನು ದಾನ ಮಾಡಿದರೆ ಒಳ್ಳೆಯದು
ಪ್ರತಿ ಶ್ರಾವಣ ಸೋಮವಾರ ಶಿವ ಲಿಂಗಕ್ಕೆ ತಪ್ಪದೆ ಜಲಾಭಿಷೇಕ ಮಾಡಿ.
ಮಂತ್ರ
ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್
ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ನಾಗದೋಷದಿಂದ ಪರಿಹಾರ ಸಿಗುವುದು ಮಾತ್ರವಲ್ಲ ಅಕಾಲಿಕ ಮರಣ ಭಯ ದೂರಾಗುವುದು.
ಈ ಮಂತ್ರವನ್ನು ದಿನದ ಯಾವುದೇ ಸಮಯದಲ್ಲಿ ಪಠಿಸಿ
ನೀವು ಈ ಮಂತ್ರವನ್ನು ದಿನದ ಯಾವುದೇ ಸಮಯದಲ್ಲಿ ಪಠಿಸಿ, ಸ್ನಾನದ ಬಳಿಕ ಈ ಮಂತ್ರವನ್ನು ಹೇಳುತ್ತಾ ದೇಹಕ್ಕೆ ವಿಭೂತಿ ಹಚ್ಚುವುದು ಒಳ್ಳೆಯದು.
ಮಂತ್ರ ಪಠಣೆ ವಿಧಾನ
ಈ ಮಂತ್ರವನ್ನು ಪಠಿಸುವಾಗ ಉಚ್ಛಾರಣೆ ದೋಷವಿರಬಹುದು. ಈ ಮಂತ್ರವನ್ನು ಪಠಿಸಲು ಒಂದೆಡೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿರಬೇಕು. ನಿಮ್ಮ ಮುಂದೆ ಒಂದು ಕಮಂಡಲದಲ್ಲಿ ನೀರನ್ನು ತುಂಬಿಡಿ, ನಿಮ್ಮ ಬಲ ಹಸ್ತದಿಂದ ಆ ಕಮಂಡಲವನ್ನು ಮುಚ್ಚಿ 108 ಬಾರಿ ಮಂತ್ರ ಫಠಣೆ ಮಾಡಬೇಕು, ನಂತರ ಆ ನೀರನ್ನು ಮನೆಯ ಒಳಗಡೆ ಪ್ರೋಕ್ಷಣೆ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಮನೆಗೆ ಶುಭಫಲ ಉಂಟಾಗುವುದು.



Click it and Unblock the Notifications