Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಕೃಷ್ಣ ಜನ್ಮಾಷ್ಟಮಿ 2023: ಶ್ರೀ ಕೃಷ್ಣನ ಪವರ್ಫುಲ್ ಮಂತ್ರಗಳಿವು
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6ರಂದು ಆಚರಿಸಲಾಗುವುದು. ಶ್ರೀ ಕೃಷ್ಣ ಜನಿಸಿದ ದಿನಾಂಕವನ್ನು ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಶ್ರೀ ವಿಷ್ಣುವಿನ 9ನೇ ಅವತಾರವೇ ಶ್ರೀಕೃಷ್ಣ ಎಂದು ಹೇಳಲಾಗುವುದು. ಶ್ರೀ ಕೃಷ್ಣ ಭಕ್ತಿಯಿಂದ ಪೂಜಿಸಿದರೆ ಬದುಕಿನಲ್ಲಿರುವ ಎಲ್ಲಾ ಗೊಂದಲಗಳು ದೂರಾಗುವುದು. ಶ್ರೀಕೃಷ್ಣನ ಜನ್ಮಾಷ್ಟಮಿಯಂದು ಶ್ರೀ ವಿಷ್ಣುವಿನ ಆರಾಧನೆ ಮಾಡುವಾಗ ಈ ಪವರ್ಫುಲ್ ಮಂತ್ರಗಳನ್ನು ಪಠಿಸಿ. ಇದರಿಂದ ನಿಮಗೆ ಎಲ್ಲಾ ರೀತಿಯಲ್ಲೂ ಒಳಿತಾಗಲಿದೆ.

ಕೃಷ್ಣ ಮೂಲ ಮಂತ್ರ
ಓಂ ಕೃಷ್ಣಾಯ ಮಂತ್ರ
ಈ ಮಂತ್ರವನ್ನು ಯಾವುದೇ ಸಮಯದಲ್ಲಿ ಬೇಕಾದರೂ ಪಠಿಸಬಹುದು.
ಹರೇ ಕೃಷ್ಣ ಮಹಾ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ
ಈ ಮಂತ್ರವನ್ನು ಮಹಾಮಂತ್ರ ಎಂದು ಕರೆಯಲಾಗುವುದು. ಈ ಮಂತ್ರವನ್ನು ಪ್ರತಿದಿನ ಪಠಿಸಿ.
ಕೃಷ್ಣ ಗಾಯತ್ರಿ ಮಂತ್ರ
|| ಓಂ ದೇವಕಿ ನಂದನಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್ ||
|| ಓಂ ದೇವಕಿನಂದನಾಯ ವಿದ್ಮಿಹೇ ವಾಸುದೇವಾಯ ಧೀಮಹಿ |
ತನ್ನೋ: ಕೃಷ್ಣಃ ಪ್ರಚೋದಯಾತ್ ||
ಈ ಮಂತ್ರವನ್ನು ಪಠಿಸುವುದರಿಂದ ಮನಸ್ಸಿನಲ್ಲಿ ಧೈರ್ಯ ಹೆಚ್ಚಾಗುವುದು. ಅಲ್ಲದ ಎಬದುಕಿನಲ್ಲಿರುವ ಕಷ್ಟಗಳು ದೂರಾಗುವುದು ಎಂದು ನಂಬಲಾಗುವುದು.
ಯಶಸ್ವಿಗೆ ಶ್ರೀ ಕೃಷ್ಣ ಮಂತ್ರ
ಓಂ ಶ್ರೀ ಕೃಷ್ಣ ಶರಣಂ ನಮಃ
ಈ ಮಂತ್ರವನ್ನು ಪಠಿಸುವುದರಿಂದ ಯಶಸ್ಸು ಸಿಗಲಿದೆ.
ಹಣದ ಸ್ಥಿತಿಗತಿ ಉತ್ತಮವಾಗಲು
ಕ್ಲೀಂ ಗ್ಲೈಂ ಕ್ಲೀಂ ಶ್ಯಾಮಲಾಂಗಾಯ ನಮಃ
ಪ್ರೇಮ ವಿವಾಹವಾಗಲು ಬಯಸಿದರೆ
ಓಂ ನಮೋ ಭಾಗ್ವತೇ ಶ್ರೀ ಗೋವಿಂದಾಯೇ
ಓಂ
ಕ್ಲೀಂ ಕೃಷ್ಣಾಯ ಗೋಪಿಜಾನ್ ವಲ್ಲಾಬಾಯ್ ಸ್ವಾಹಾ
ಕೃಷ್ಣ ಭಕ್ತಿ ಮಂತ್ರ
ಜೈ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಶ್ರೀ ಅದ್ವೈತ ಗದಾಧರ ಶ್ರೀವಾಸದಿ ಗೌರ ಭಕ್ತ ವೃಂದ
ಕೃಷ್ಣ ಕ್ಲೀಂ ಮಂತ್ರ
ಓಂ ಕ್ಲೀಂ ಕೃಷ್ಣಾಯ ನಮಃ
ಕೃಷ್ಣ ಮಂತ್ರವನ್ನು ಪಠಿಸುವುದರಿಂದ ದೊರೆಯುವ ಪ್ರಯೋಜನಗಳು
* ಆತ್ಮವಿಶ್ವಾಸ ಹೆಚ್ಚಾಗುವುದು
* ಭಯ ದೂರಾಗುವುದು, ಗೊಂದಲ ದೂರಾಗುವುದು
* ಜ್ಞಾನವನ್ನು ಹೆಚ್ಚಿಸುತ್ತದೆ
* ಕಾಯಿಲೆಯನ್ನು ಗುಣಪಡಿಸುತ್ತದೆ
* ಯಶಸ್ಸು ಸಿಗಲಿದೆ
* ಖುಷಿ ಸಿಗಲಿದೆ, ಮಾನಸಿಕ ನೆಮ್ಮದಿ ಸಿಗಲಿದೆ
* ಪಾಪಕರ್ಮಗಳಿಂದ ಮುಕ್ತಿ ಸಿಗಲಿದೆ
* ನಿಮ್ಮ ಇಷ್ಟಾರ್ಥಗಳು ನೆರವೇರುವುದು
ಕೃಷ್ಣ ಮಂತ್ರ
* ಕೃಷ್ಣ ಮಂತ್ರ ಪಠಿಸುವಾಗ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ
* ಹಳದಿ ಬಣ್ಣದ ಬಟ್ಟೆ ಧರಿಸಿ
* ಶ್ರೀ ಕೃಷ್ಣನಿಗೆ ತುಪ್ಪದ ದೀಪ ಹಚ್ಚಿ ಆರಾಧಿಸಿ



Click it and Unblock the Notifications