Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಈ ವರ್ಷ ನಾಗರ ಪಂಚಮಿ ಯಾವಾಗ? ಸರ್ಪದೋಷಕ್ಕೆ ಪರಿಹಾರವೇನು?
ನಾಗ ಪಂಚಮಿ ಅಥವಾ ನಾಗರ ಪಂಚಮಿ ಎಲ್ಲಾ ಹಬ್ಬಗಳಿಗೆ ಮುನ್ನಡಿಯಾಗಿ ಬರುತ್ತದೆ, ಅದಾದ ಬಳಿಕ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು.

ನಾಗರಪಂಚಮಿ ತಿಥಿ ಮತ್ತು ಶುಭ ಸಮಯ
ಆಗಸ್ಟ್ 21 ರಂದು ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 20 ರಂದು 12:23 ಕ್ಕೆ ಪಂಚಮಿ ತಿಥಿ ಇರುತ್ತದೆ. ಈ ದಿನಾಂಕವು 21 ರಂದು ರಾತ್ರಿ 2:01 ಕ್ಕೆ ಕೊನೆಗೊಳ್ಳುತ್ತದೆ.
ನಾಗಪಂಚಮಿಯ ಮಹತ್ವ
ಇದರ ಮಹತ್ವವನ್ನು ಕುರಿತ ಒಂದು ಕತೆಯಿದೆ. ಮಹಾಭಾರತದಲ್ಲಿ ಈ ಕುರಿತ ಒಂದು ಉಪಕಥೆಯಿದೆ, ರಾಜ ಜನಮೇಜಯ ಇಡೀ ನಾಗಾ ಜನಾಂಗವನ್ನು ನಾಶಮಾಡಲು ಯಾಗವನ್ನು ನಡೆಸುತ್ತಾನೆ. ಜನಮೇಜಯನ ಪಿತೃ ತಕ್ಷಕ ಸರ್ಪದ ಕಡಿತದಿಂದಾಗಿ ಸಾವನ್ನಪ್ಪಿರುತ್ತಾನೆ, ಇದಕ್ಕೆ ಪ್ರತೀಕಾರ ತೀರಿಸಲು ಇಡೀ ನಾಗ ಸಂಕುಲವನ್ನು ನಾಶ ಮಾಡಲು ಮುಂದಾಗುತ್ತಾನೆ. ಆಗ ಋಷಿ ಆಸ್ತಿಕನು ಜನಮಜೆಯ ಯಾಗವನ್ನು ತಡೆಯಲು ಯತ್ನಿಸುತ್ತಾರೆ, ಅದರಲ್ಲಿ ಯಶಸ್ವಿಯಾಗುತ್ತಾರೆ. ಈ ದಿನವನ್ನು ನಾಗರ ಪಂಚಮಿಯೆಂದು ಆಚರಿಸಲಾಗುವುದು ಎಂದು ಹೇಳಲಾಗುವುದು. ಗರುಡ ಪುರಾಣದ ಪ್ರಕಾರ, ನಾಗ ಪಂಚಮಿಯಂದು ಹಾವುಗಳನ್ನು ಪೂಜಿಸುವುದು ಭಕ್ತನಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ.
ನಾಗರ ಪಂಚಮಿಯಂದು ಭೂ ತಾಯಿಗೆ ನೋವುಂಟು ಮಾಡುವುದಿಲ್ಲ
ನಾಗರ ಪಂಚಮಿಯಂದು ಭೂಮಿಯನ್ನು ಅಗೆಯುವುದಿಲ್ಲ, ಈ ದಿನ ನಾಗರ ಕಲ್ಲು ಅಥವಾ ಹುತ್ತಕ್ಕೆ ಹಾಲೆರೆದು ಪೂಜೆಯನ್ನು ಮಾಡುತ್ತಾರೆ. (ಹುತ್ತಗಳಿಗೆ ಹಾಲೆರೆಯದಂತೆ ಉರಗ ತಜ್ಞರು ಸಲಹೆ ನೀಡುತ್ತಾರೆ). ಈ ಹಬ್ಬವನ್ನು ದೇಶದ ಎಲ್ಲೆಡೆ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಆಚರಿಸಲಾಗುವುದು.
ನಾಗ ಪ್ರತಿಷ್ಠಾಪನೆ
ಕೆಲವರು ಈ ದಿನ ನಾಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡುತ್ತಾರೆ. ಇದು ಹೆಂಗಳೆಯರ ಹಬ್ಬವಾಗಿದೆ, ವಿವಾಹಿತರು ಹಾವಿಗೆ ಹಾಲೆರೆದರೆ ಸೌಭಾಗ್ಯ ಹೆಚ್ಚುವುದು, ಅವಾಹಿತರು ಹಾವಿಗೆ ಹಾಲೆರೆದರೆ ವಿವಾಹ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ ಇದೆ.
ನಾಗರ ಪಂಚಮಿಯ ಆಚರಣೆ ವಿಧಾನ
* ನಾಗರಪಂಚಮಿಯ ದಿನದಂದು ಉಪವಾಸ ಮಾಡಲಾಗುವುದು. ನಾಗರ ಪಂಚಮಿ ಆಚರಣೆ ಮಾಡುವುದರಿಂದ ಸರ್ಪದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
* ಈ ದಿನ ನಾಗ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಲಾಗುವುದು.
* ಜಾತಕದಲ್ಲಿ ರಾಹು ಮತ್ತು ಕೇತುಗಳ ದೋಷವಿದ್ದರೆ ಆ ದೋಷ ನಿವಾರಣೆಗೆ ನಾಗರ ಪಂಚಮಿಯಂದು ನಾಗರ ಮೂರ್ತಿಗಳನ್ನು ಪೂಜಿಸಬೇಕು ಎಂದು ಹೇಳಲಾಗುವುದು.
* ಈ ದಿನ, ಶಿವಲಿಂಗಕ್ಕೆ ಹಿತ್ತಾಳೆಯ ಪಾತ್ರೆಯಿಂದ ಮಾತ್ರ ಹಾಲು, ನೀರನ್ನು ಅರ್ಪಿಸಿ.



Click it and Unblock the Notifications