Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ ವರ್ಷ ನಾಗರ ಪಂಚಮಿ ಯಾವಾಗ? ಸರ್ಪದೋಷಕ್ಕೆ ಪರಿಹಾರವೇನು?
ನಾಗ ಪಂಚಮಿ ಅಥವಾ ನಾಗರ ಪಂಚಮಿ ಎಲ್ಲಾ ಹಬ್ಬಗಳಿಗೆ ಮುನ್ನಡಿಯಾಗಿ ಬರುತ್ತದೆ, ಅದಾದ ಬಳಿಕ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು.

ನಾಗರಪಂಚಮಿ ತಿಥಿ ಮತ್ತು ಶುಭ ಸಮಯ
ಆಗಸ್ಟ್ 21 ರಂದು ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 20 ರಂದು 12:23 ಕ್ಕೆ ಪಂಚಮಿ ತಿಥಿ ಇರುತ್ತದೆ. ಈ ದಿನಾಂಕವು 21 ರಂದು ರಾತ್ರಿ 2:01 ಕ್ಕೆ ಕೊನೆಗೊಳ್ಳುತ್ತದೆ.
ನಾಗಪಂಚಮಿಯ ಮಹತ್ವ
ಇದರ ಮಹತ್ವವನ್ನು ಕುರಿತ ಒಂದು ಕತೆಯಿದೆ. ಮಹಾಭಾರತದಲ್ಲಿ ಈ ಕುರಿತ ಒಂದು ಉಪಕಥೆಯಿದೆ, ರಾಜ ಜನಮೇಜಯ ಇಡೀ ನಾಗಾ ಜನಾಂಗವನ್ನು ನಾಶಮಾಡಲು ಯಾಗವನ್ನು ನಡೆಸುತ್ತಾನೆ. ಜನಮೇಜಯನ ಪಿತೃ ತಕ್ಷಕ ಸರ್ಪದ ಕಡಿತದಿಂದಾಗಿ ಸಾವನ್ನಪ್ಪಿರುತ್ತಾನೆ, ಇದಕ್ಕೆ ಪ್ರತೀಕಾರ ತೀರಿಸಲು ಇಡೀ ನಾಗ ಸಂಕುಲವನ್ನು ನಾಶ ಮಾಡಲು ಮುಂದಾಗುತ್ತಾನೆ. ಆಗ ಋಷಿ ಆಸ್ತಿಕನು ಜನಮಜೆಯ ಯಾಗವನ್ನು ತಡೆಯಲು ಯತ್ನಿಸುತ್ತಾರೆ, ಅದರಲ್ಲಿ ಯಶಸ್ವಿಯಾಗುತ್ತಾರೆ. ಈ ದಿನವನ್ನು ನಾಗರ ಪಂಚಮಿಯೆಂದು ಆಚರಿಸಲಾಗುವುದು ಎಂದು ಹೇಳಲಾಗುವುದು. ಗರುಡ ಪುರಾಣದ ಪ್ರಕಾರ, ನಾಗ ಪಂಚಮಿಯಂದು ಹಾವುಗಳನ್ನು ಪೂಜಿಸುವುದು ಭಕ್ತನಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ.
ನಾಗರ ಪಂಚಮಿಯಂದು ಭೂ ತಾಯಿಗೆ ನೋವುಂಟು ಮಾಡುವುದಿಲ್ಲ
ನಾಗರ ಪಂಚಮಿಯಂದು ಭೂಮಿಯನ್ನು ಅಗೆಯುವುದಿಲ್ಲ, ಈ ದಿನ ನಾಗರ ಕಲ್ಲು ಅಥವಾ ಹುತ್ತಕ್ಕೆ ಹಾಲೆರೆದು ಪೂಜೆಯನ್ನು ಮಾಡುತ್ತಾರೆ. (ಹುತ್ತಗಳಿಗೆ ಹಾಲೆರೆಯದಂತೆ ಉರಗ ತಜ್ಞರು ಸಲಹೆ ನೀಡುತ್ತಾರೆ). ಈ ಹಬ್ಬವನ್ನು ದೇಶದ ಎಲ್ಲೆಡೆ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಆಚರಿಸಲಾಗುವುದು.
ನಾಗ ಪ್ರತಿಷ್ಠಾಪನೆ
ಕೆಲವರು ಈ ದಿನ ನಾಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡುತ್ತಾರೆ. ಇದು ಹೆಂಗಳೆಯರ ಹಬ್ಬವಾಗಿದೆ, ವಿವಾಹಿತರು ಹಾವಿಗೆ ಹಾಲೆರೆದರೆ ಸೌಭಾಗ್ಯ ಹೆಚ್ಚುವುದು, ಅವಾಹಿತರು ಹಾವಿಗೆ ಹಾಲೆರೆದರೆ ವಿವಾಹ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ ಇದೆ.
ನಾಗರ ಪಂಚಮಿಯ ಆಚರಣೆ ವಿಧಾನ
* ನಾಗರಪಂಚಮಿಯ ದಿನದಂದು ಉಪವಾಸ ಮಾಡಲಾಗುವುದು. ನಾಗರ ಪಂಚಮಿ ಆಚರಣೆ ಮಾಡುವುದರಿಂದ ಸರ್ಪದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
* ಈ ದಿನ ನಾಗ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಲಾಗುವುದು.
* ಜಾತಕದಲ್ಲಿ ರಾಹು ಮತ್ತು ಕೇತುಗಳ ದೋಷವಿದ್ದರೆ ಆ ದೋಷ ನಿವಾರಣೆಗೆ ನಾಗರ ಪಂಚಮಿಯಂದು ನಾಗರ ಮೂರ್ತಿಗಳನ್ನು ಪೂಜಿಸಬೇಕು ಎಂದು ಹೇಳಲಾಗುವುದು.
* ಈ ದಿನ, ಶಿವಲಿಂಗಕ್ಕೆ ಹಿತ್ತಾಳೆಯ ಪಾತ್ರೆಯಿಂದ ಮಾತ್ರ ಹಾಲು, ನೀರನ್ನು ಅರ್ಪಿಸಿ.



Click it and Unblock the Notifications