Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಈ ವರ್ಷ ನಾಗರ ಪಂಚಮಿ ಯಾವಾಗ? ಸರ್ಪದೋಷಕ್ಕೆ ಪರಿಹಾರವೇನು?
ನಾಗ ಪಂಚಮಿ ಅಥವಾ ನಾಗರ ಪಂಚಮಿ ಎಲ್ಲಾ ಹಬ್ಬಗಳಿಗೆ ಮುನ್ನಡಿಯಾಗಿ ಬರುತ್ತದೆ, ಅದಾದ ಬಳಿಕ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು.

ನಾಗರಪಂಚಮಿ ತಿಥಿ ಮತ್ತು ಶುಭ ಸಮಯ
ಆಗಸ್ಟ್ 21 ರಂದು ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 20 ರಂದು 12:23 ಕ್ಕೆ ಪಂಚಮಿ ತಿಥಿ ಇರುತ್ತದೆ. ಈ ದಿನಾಂಕವು 21 ರಂದು ರಾತ್ರಿ 2:01 ಕ್ಕೆ ಕೊನೆಗೊಳ್ಳುತ್ತದೆ.
ನಾಗಪಂಚಮಿಯ ಮಹತ್ವ
ಇದರ ಮಹತ್ವವನ್ನು ಕುರಿತ ಒಂದು ಕತೆಯಿದೆ. ಮಹಾಭಾರತದಲ್ಲಿ ಈ ಕುರಿತ ಒಂದು ಉಪಕಥೆಯಿದೆ, ರಾಜ ಜನಮೇಜಯ ಇಡೀ ನಾಗಾ ಜನಾಂಗವನ್ನು ನಾಶಮಾಡಲು ಯಾಗವನ್ನು ನಡೆಸುತ್ತಾನೆ. ಜನಮೇಜಯನ ಪಿತೃ ತಕ್ಷಕ ಸರ್ಪದ ಕಡಿತದಿಂದಾಗಿ ಸಾವನ್ನಪ್ಪಿರುತ್ತಾನೆ, ಇದಕ್ಕೆ ಪ್ರತೀಕಾರ ತೀರಿಸಲು ಇಡೀ ನಾಗ ಸಂಕುಲವನ್ನು ನಾಶ ಮಾಡಲು ಮುಂದಾಗುತ್ತಾನೆ. ಆಗ ಋಷಿ ಆಸ್ತಿಕನು ಜನಮಜೆಯ ಯಾಗವನ್ನು ತಡೆಯಲು ಯತ್ನಿಸುತ್ತಾರೆ, ಅದರಲ್ಲಿ ಯಶಸ್ವಿಯಾಗುತ್ತಾರೆ. ಈ ದಿನವನ್ನು ನಾಗರ ಪಂಚಮಿಯೆಂದು ಆಚರಿಸಲಾಗುವುದು ಎಂದು ಹೇಳಲಾಗುವುದು. ಗರುಡ ಪುರಾಣದ ಪ್ರಕಾರ, ನಾಗ ಪಂಚಮಿಯಂದು ಹಾವುಗಳನ್ನು ಪೂಜಿಸುವುದು ಭಕ್ತನಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ.
ನಾಗರ ಪಂಚಮಿಯಂದು ಭೂ ತಾಯಿಗೆ ನೋವುಂಟು ಮಾಡುವುದಿಲ್ಲ
ನಾಗರ ಪಂಚಮಿಯಂದು ಭೂಮಿಯನ್ನು ಅಗೆಯುವುದಿಲ್ಲ, ಈ ದಿನ ನಾಗರ ಕಲ್ಲು ಅಥವಾ ಹುತ್ತಕ್ಕೆ ಹಾಲೆರೆದು ಪೂಜೆಯನ್ನು ಮಾಡುತ್ತಾರೆ. (ಹುತ್ತಗಳಿಗೆ ಹಾಲೆರೆಯದಂತೆ ಉರಗ ತಜ್ಞರು ಸಲಹೆ ನೀಡುತ್ತಾರೆ). ಈ ಹಬ್ಬವನ್ನು ದೇಶದ ಎಲ್ಲೆಡೆ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಆಚರಿಸಲಾಗುವುದು.
ನಾಗ ಪ್ರತಿಷ್ಠಾಪನೆ
ಕೆಲವರು ಈ ದಿನ ನಾಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡುತ್ತಾರೆ. ಇದು ಹೆಂಗಳೆಯರ ಹಬ್ಬವಾಗಿದೆ, ವಿವಾಹಿತರು ಹಾವಿಗೆ ಹಾಲೆರೆದರೆ ಸೌಭಾಗ್ಯ ಹೆಚ್ಚುವುದು, ಅವಾಹಿತರು ಹಾವಿಗೆ ಹಾಲೆರೆದರೆ ವಿವಾಹ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ ಇದೆ.
ನಾಗರ ಪಂಚಮಿಯ ಆಚರಣೆ ವಿಧಾನ
* ನಾಗರಪಂಚಮಿಯ ದಿನದಂದು ಉಪವಾಸ ಮಾಡಲಾಗುವುದು. ನಾಗರ ಪಂಚಮಿ ಆಚರಣೆ ಮಾಡುವುದರಿಂದ ಸರ್ಪದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
* ಈ ದಿನ ನಾಗ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಲಾಗುವುದು.
* ಜಾತಕದಲ್ಲಿ ರಾಹು ಮತ್ತು ಕೇತುಗಳ ದೋಷವಿದ್ದರೆ ಆ ದೋಷ ನಿವಾರಣೆಗೆ ನಾಗರ ಪಂಚಮಿಯಂದು ನಾಗರ ಮೂರ್ತಿಗಳನ್ನು ಪೂಜಿಸಬೇಕು ಎಂದು ಹೇಳಲಾಗುವುದು.
* ಈ ದಿನ, ಶಿವಲಿಂಗಕ್ಕೆ ಹಿತ್ತಾಳೆಯ ಪಾತ್ರೆಯಿಂದ ಮಾತ್ರ ಹಾಲು, ನೀರನ್ನು ಅರ್ಪಿಸಿ.



Click it and Unblock the Notifications