Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಈ ವರ್ಷ ನಾಗರ ಪಂಚಮಿ ಯಾವಾಗ? ಸರ್ಪದೋಷಕ್ಕೆ ಪರಿಹಾರವೇನು?
ನಾಗ ಪಂಚಮಿ ಅಥವಾ ನಾಗರ ಪಂಚಮಿ ಎಲ್ಲಾ ಹಬ್ಬಗಳಿಗೆ ಮುನ್ನಡಿಯಾಗಿ ಬರುತ್ತದೆ, ಅದಾದ ಬಳಿಕ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು.

ನಾಗರಪಂಚಮಿ ತಿಥಿ ಮತ್ತು ಶುಭ ಸಮಯ
ಆಗಸ್ಟ್ 21 ರಂದು ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 20 ರಂದು 12:23 ಕ್ಕೆ ಪಂಚಮಿ ತಿಥಿ ಇರುತ್ತದೆ. ಈ ದಿನಾಂಕವು 21 ರಂದು ರಾತ್ರಿ 2:01 ಕ್ಕೆ ಕೊನೆಗೊಳ್ಳುತ್ತದೆ.
ನಾಗಪಂಚಮಿಯ ಮಹತ್ವ
ಇದರ ಮಹತ್ವವನ್ನು ಕುರಿತ ಒಂದು ಕತೆಯಿದೆ. ಮಹಾಭಾರತದಲ್ಲಿ ಈ ಕುರಿತ ಒಂದು ಉಪಕಥೆಯಿದೆ, ರಾಜ ಜನಮೇಜಯ ಇಡೀ ನಾಗಾ ಜನಾಂಗವನ್ನು ನಾಶಮಾಡಲು ಯಾಗವನ್ನು ನಡೆಸುತ್ತಾನೆ. ಜನಮೇಜಯನ ಪಿತೃ ತಕ್ಷಕ ಸರ್ಪದ ಕಡಿತದಿಂದಾಗಿ ಸಾವನ್ನಪ್ಪಿರುತ್ತಾನೆ, ಇದಕ್ಕೆ ಪ್ರತೀಕಾರ ತೀರಿಸಲು ಇಡೀ ನಾಗ ಸಂಕುಲವನ್ನು ನಾಶ ಮಾಡಲು ಮುಂದಾಗುತ್ತಾನೆ. ಆಗ ಋಷಿ ಆಸ್ತಿಕನು ಜನಮಜೆಯ ಯಾಗವನ್ನು ತಡೆಯಲು ಯತ್ನಿಸುತ್ತಾರೆ, ಅದರಲ್ಲಿ ಯಶಸ್ವಿಯಾಗುತ್ತಾರೆ. ಈ ದಿನವನ್ನು ನಾಗರ ಪಂಚಮಿಯೆಂದು ಆಚರಿಸಲಾಗುವುದು ಎಂದು ಹೇಳಲಾಗುವುದು. ಗರುಡ ಪುರಾಣದ ಪ್ರಕಾರ, ನಾಗ ಪಂಚಮಿಯಂದು ಹಾವುಗಳನ್ನು ಪೂಜಿಸುವುದು ಭಕ್ತನಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ.
ನಾಗರ ಪಂಚಮಿಯಂದು ಭೂ ತಾಯಿಗೆ ನೋವುಂಟು ಮಾಡುವುದಿಲ್ಲ
ನಾಗರ ಪಂಚಮಿಯಂದು ಭೂಮಿಯನ್ನು ಅಗೆಯುವುದಿಲ್ಲ, ಈ ದಿನ ನಾಗರ ಕಲ್ಲು ಅಥವಾ ಹುತ್ತಕ್ಕೆ ಹಾಲೆರೆದು ಪೂಜೆಯನ್ನು ಮಾಡುತ್ತಾರೆ. (ಹುತ್ತಗಳಿಗೆ ಹಾಲೆರೆಯದಂತೆ ಉರಗ ತಜ್ಞರು ಸಲಹೆ ನೀಡುತ್ತಾರೆ). ಈ ಹಬ್ಬವನ್ನು ದೇಶದ ಎಲ್ಲೆಡೆ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಆಚರಿಸಲಾಗುವುದು.
ನಾಗ ಪ್ರತಿಷ್ಠಾಪನೆ
ಕೆಲವರು ಈ ದಿನ ನಾಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡುತ್ತಾರೆ. ಇದು ಹೆಂಗಳೆಯರ ಹಬ್ಬವಾಗಿದೆ, ವಿವಾಹಿತರು ಹಾವಿಗೆ ಹಾಲೆರೆದರೆ ಸೌಭಾಗ್ಯ ಹೆಚ್ಚುವುದು, ಅವಾಹಿತರು ಹಾವಿಗೆ ಹಾಲೆರೆದರೆ ವಿವಾಹ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ ಇದೆ.
ನಾಗರ ಪಂಚಮಿಯ ಆಚರಣೆ ವಿಧಾನ
* ನಾಗರಪಂಚಮಿಯ ದಿನದಂದು ಉಪವಾಸ ಮಾಡಲಾಗುವುದು. ನಾಗರ ಪಂಚಮಿ ಆಚರಣೆ ಮಾಡುವುದರಿಂದ ಸರ್ಪದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
* ಈ ದಿನ ನಾಗ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಲಾಗುವುದು.
* ಜಾತಕದಲ್ಲಿ ರಾಹು ಮತ್ತು ಕೇತುಗಳ ದೋಷವಿದ್ದರೆ ಆ ದೋಷ ನಿವಾರಣೆಗೆ ನಾಗರ ಪಂಚಮಿಯಂದು ನಾಗರ ಮೂರ್ತಿಗಳನ್ನು ಪೂಜಿಸಬೇಕು ಎಂದು ಹೇಳಲಾಗುವುದು.
* ಈ ದಿನ, ಶಿವಲಿಂಗಕ್ಕೆ ಹಿತ್ತಾಳೆಯ ಪಾತ್ರೆಯಿಂದ ಮಾತ್ರ ಹಾಲು, ನೀರನ್ನು ಅರ್ಪಿಸಿ.



Click it and Unblock the Notifications