Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೊನೆಯ ಶ್ರಾವಣ ಶುಕ್ರವಾರ: ಲಕ್ಷ್ಮಿ ಪೂಜೆಯಲ್ಲಿ ಈ ಪರಿಹಾರ ಮಾಡಿದರೆ ಆರ್ಥಿಕ ಸಂಕಷ್ಟ ದೂರಾಗುವುದು
ಸೆಪ್ಟೆಂಬರ್ 15 ಶುಕ್ರವಾರ ಅದರಲ್ಲೂ ಕೊನೆಯ ಶ್ರಾವಣ ಶುಕ್ರವಾರ. ಶುಕ್ರವಾರ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಸಂಪತ್ತು ವೃದ್ಧಿಸುವುದು ಎಂದು ಹೇಳಲಾಗಿದೆ. ಇಂದು ಸಂಜೆ ನೀವು ಲಕ್ಷ್ಮಿ ಪೂಜೆ ಮಾಡುವಾಗ ನಿಮ್ಮ ಇಷ್ಟಾರ್ಥಗಳು ನೆರವೇರಲು, ವ್ಯಾಪಾರದಲ್ಲಿ ಪ್ರಗತಿ ಸಾಧಿಸಲು, ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಪರಿಹಾರ ಮಾಡಿ.

* ನಿಮ್ಮ ವ್ಯಾಪಾರ ಲಾಸ್ನಲ್ಲಿ ನಡೆಯುತ್ತಿದ್ದರೆ
| ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ || ಮಂತ್ರವನ್ನು 21 ಬಾರಿ ಪಠಿಸಿ. ಬಿಳಿ ಬಟ್ಟೆಯಲ್ಲಿ ಶ್ರೀಗಂಧವನ್ನುಇಟ್ಟು ಅದನ್ನು ನೀವು ಕೆಲಸ ಮಾಡುವ ಜಾಗದಲ್ಲಿ ಇಟ್ಟಿರಿ, ಇದರಿಂದ ನಿಮ್ಮ ವ್ಯಾಪಾರವು ಹೆಚ್ಚಾಗುತ್ತದೆ, ಅಂಗಡಿ ವ್ಯಾಪಾರ ಚುರುಕಾಗುತ್ತದೆ ಎಂದು ಜ್ಯೋತಿಷ್ಯ ಪರಿಹಾರದಲ್ಲಿ ಹೇಳಲಾಗಿದೆ.
* ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ
ನೀವು ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ ಅವರು ಆರಾಧಿಸಿ. ತುಪ್ಪದ ದೀಪ ಹಚ್ಚುವಾಗ ನಿಮ್ಮ ಮನಸ್ಸಿನ ಬೇಡಿಕೆಗಳನ್ನು ಅವಳ ಬಳಿ ಹೇಳಿಕೊಳ್ಳುತ್ತಾ ಆರ್ಥಿಕ ಸಂಕಷ್ಟದಿಂದ ಪಾರು ಮಾಡು ಎಂದು ಕೇಳಿಕೊಳ್ಳಿ.
ಲಕ್ಷ್ಮಿಗೆ ಕೆಂಪು ಹೂಗಳನ್ನು ಅರ್ಪಿಸಿ
ಕೆಂಪು ಹೂವುಗಳೆಂದರೆ ಲಕ್ಷ್ಮಿಗೆ ತುಂಬಾನೇ ಇಷ್ಟ. ಲಕ್ಷ್ಮಿಗೆ ತಾವರೆ ಹೂಗಳನ್ನು ಅರ್ಪಿಸಬೇಕು. ನೀವು ದಾಸವಾಳದ ಹೂಗಳನ್ನು ಕೂಡ ನೀವು ಅರ್ಪಿಸಬಹುದು.
ಆರತಿ ಮಾಡುವಾಗ ಇವುಗಳನ್ನು ಹಾಕಿ
ನೀವು ಲಕ್ಷ್ಮಿಗೆ ಆರತಿ ಮಾಡುವಾಗ ನೀವು 4 ಕರ್ಪೂರ ಹಾಕಿ ಅದರಲ್ಲಿ 2 ಲವಂಗ ಹಾಕಿ ಮಾತೆ ಲಕ್ಷ್ಮಿಗೆ ಆರತಿ ಮಾಡಿ. ಹೀಗೆ ಮಾಡುವುದರಿಂದ ಆರ್ಥಿಕವಾಗಿ ಸಮೃದ್ಧಿ ಹೆಚ್ಚುವುದು.
ಈ ದಿನ ಹೀಗೆ ಮಾಡಿ
ಈ ದಿನ ಲಕ್ಷ್ಮಿಗೆ ಖೀರ್ ಅನ್ನು ಅರ್ಪಿಸಿ , ನಂತರ ಆ ಖೀರ್ ಅನ್ನು ಚಿಕ್ಕ ಹೆಣ್ಣು ಮಕ್ಕಳಿಗೆ ನೀಡಿ. ನೀವು ಇದನ್ನು ಈ ಶುಕ್ರವಾರದಿಂದ ಪ್ರಾರಂಭಿಸಿ 21 ಶುಕ್ರವಾರದವರೆಗೆ ಮಾಡಬಹುದು.
ಲಕ್ಷ್ಮಿಯ ಆರಾಧನೆ ಹೇಗೆ ಮಾಡಬೇಕು?
* ನೀವು ಲಕ್ಷ್ಮಿ ಮೂರ್ತಿ ಅಥವಾ ಫೋಟೊವನ್ನು ಇಟ್ಟು ಅಲಂಕರಿಸಿ
* ದೇವಿಗೆ ಆಭರಣಗಳನ್ನು ಅರ್ಪಿಸಿ
* ನೀರು ತುಂಬಿದ ಕಳಸವನ್ನು ಇಡಿ
* ನಂತರ ಕಣ್ಣುಗಳನ್ನು ಮುಚ್ಚಿ ಲಕ್ಷ್ಮಿಯ ಧ್ಯಾನ ಮಾಡಿ, ಲಕ್ಷ್ಮಿ ಮಂತ್ರಗಳನ್ನು ಹೇಳಿ
* ನಂತರ ಆರತಿ ಬೆಳಗಿ ಪೂಜೆಯನ್ನು ಪೂರ್ಣಗೊಳಿಸಿ.
ಶುಕ್ರವಾರ ಈ ಕಾರ್ಯಗಳನ್ನು ಮಾಡಬೇಡಿ
* ಶಾಸ್ತ್ರದ ಪ್ರಕಾರ ಶುಕ್ರವಾರದಂದು ಹಣದ ವ್ಯವಹಾರ ಮಾಡಬಾರದು ಎಂದು ಹೇಳಲಾಗುವುದು.
* ಶುಕ್ರವಾರದಂದು ಯಾವುದೇ ಅಡುಗೆ ವಸ್ತುಗಳನ್ನು ಖರೀದಿಸಬಾರದು, ಶುಕ್ರವಾರದ ಪೂಜೆಯ ಸಮಯದಲ್ಲಿ ಏನನ್ನೂ ಖರೀದಿಸುವುದನ್ನು ನಿಷೇಧಿಸಲಾಗಿದೆ.
* ಈ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು, ಈ ಕೆಲಸಗಳನ್ನು ಮಾಡಿದರೆ ನಷ್ಟವನ್ನು ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ.
* ಶುಕ್ರವಾರ ಸಕ್ಕರೆಯನ್ನು ಸಾಲ ಪಡೆಯಬೇಡಿ.
ಈ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು
ಶುಕ್ರವಾರದಂದು ಸಂಗೀತ, ಅಲಂಕಾರ, ಸೌಂದರ್ಯ ಮತ್ತು ಕಲೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಶುಭ. ಈ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುವುದು.



Click it and Unblock the Notifications
