Latest Updates
-
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ
ಕೊನೆಯ ಶ್ರಾವಣ ಶುಕ್ರವಾರ: ಲಕ್ಷ್ಮಿ ಪೂಜೆಯಲ್ಲಿ ಈ ಪರಿಹಾರ ಮಾಡಿದರೆ ಆರ್ಥಿಕ ಸಂಕಷ್ಟ ದೂರಾಗುವುದು
ಸೆಪ್ಟೆಂಬರ್ 15 ಶುಕ್ರವಾರ ಅದರಲ್ಲೂ ಕೊನೆಯ ಶ್ರಾವಣ ಶುಕ್ರವಾರ. ಶುಕ್ರವಾರ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಸಂಪತ್ತು ವೃದ್ಧಿಸುವುದು ಎಂದು ಹೇಳಲಾಗಿದೆ. ಇಂದು ಸಂಜೆ ನೀವು ಲಕ್ಷ್ಮಿ ಪೂಜೆ ಮಾಡುವಾಗ ನಿಮ್ಮ ಇಷ್ಟಾರ್ಥಗಳು ನೆರವೇರಲು, ವ್ಯಾಪಾರದಲ್ಲಿ ಪ್ರಗತಿ ಸಾಧಿಸಲು, ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಪರಿಹಾರ ಮಾಡಿ.

* ನಿಮ್ಮ ವ್ಯಾಪಾರ ಲಾಸ್ನಲ್ಲಿ ನಡೆಯುತ್ತಿದ್ದರೆ
| ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ || ಮಂತ್ರವನ್ನು 21 ಬಾರಿ ಪಠಿಸಿ. ಬಿಳಿ ಬಟ್ಟೆಯಲ್ಲಿ ಶ್ರೀಗಂಧವನ್ನುಇಟ್ಟು ಅದನ್ನು ನೀವು ಕೆಲಸ ಮಾಡುವ ಜಾಗದಲ್ಲಿ ಇಟ್ಟಿರಿ, ಇದರಿಂದ ನಿಮ್ಮ ವ್ಯಾಪಾರವು ಹೆಚ್ಚಾಗುತ್ತದೆ, ಅಂಗಡಿ ವ್ಯಾಪಾರ ಚುರುಕಾಗುತ್ತದೆ ಎಂದು ಜ್ಯೋತಿಷ್ಯ ಪರಿಹಾರದಲ್ಲಿ ಹೇಳಲಾಗಿದೆ.
* ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ
ನೀವು ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ ಅವರು ಆರಾಧಿಸಿ. ತುಪ್ಪದ ದೀಪ ಹಚ್ಚುವಾಗ ನಿಮ್ಮ ಮನಸ್ಸಿನ ಬೇಡಿಕೆಗಳನ್ನು ಅವಳ ಬಳಿ ಹೇಳಿಕೊಳ್ಳುತ್ತಾ ಆರ್ಥಿಕ ಸಂಕಷ್ಟದಿಂದ ಪಾರು ಮಾಡು ಎಂದು ಕೇಳಿಕೊಳ್ಳಿ.
ಲಕ್ಷ್ಮಿಗೆ ಕೆಂಪು ಹೂಗಳನ್ನು ಅರ್ಪಿಸಿ
ಕೆಂಪು ಹೂವುಗಳೆಂದರೆ ಲಕ್ಷ್ಮಿಗೆ ತುಂಬಾನೇ ಇಷ್ಟ. ಲಕ್ಷ್ಮಿಗೆ ತಾವರೆ ಹೂಗಳನ್ನು ಅರ್ಪಿಸಬೇಕು. ನೀವು ದಾಸವಾಳದ ಹೂಗಳನ್ನು ಕೂಡ ನೀವು ಅರ್ಪಿಸಬಹುದು.
ಆರತಿ ಮಾಡುವಾಗ ಇವುಗಳನ್ನು ಹಾಕಿ
ನೀವು ಲಕ್ಷ್ಮಿಗೆ ಆರತಿ ಮಾಡುವಾಗ ನೀವು 4 ಕರ್ಪೂರ ಹಾಕಿ ಅದರಲ್ಲಿ 2 ಲವಂಗ ಹಾಕಿ ಮಾತೆ ಲಕ್ಷ್ಮಿಗೆ ಆರತಿ ಮಾಡಿ. ಹೀಗೆ ಮಾಡುವುದರಿಂದ ಆರ್ಥಿಕವಾಗಿ ಸಮೃದ್ಧಿ ಹೆಚ್ಚುವುದು.
ಈ ದಿನ ಹೀಗೆ ಮಾಡಿ
ಈ ದಿನ ಲಕ್ಷ್ಮಿಗೆ ಖೀರ್ ಅನ್ನು ಅರ್ಪಿಸಿ , ನಂತರ ಆ ಖೀರ್ ಅನ್ನು ಚಿಕ್ಕ ಹೆಣ್ಣು ಮಕ್ಕಳಿಗೆ ನೀಡಿ. ನೀವು ಇದನ್ನು ಈ ಶುಕ್ರವಾರದಿಂದ ಪ್ರಾರಂಭಿಸಿ 21 ಶುಕ್ರವಾರದವರೆಗೆ ಮಾಡಬಹುದು.
ಲಕ್ಷ್ಮಿಯ ಆರಾಧನೆ ಹೇಗೆ ಮಾಡಬೇಕು?
* ನೀವು ಲಕ್ಷ್ಮಿ ಮೂರ್ತಿ ಅಥವಾ ಫೋಟೊವನ್ನು ಇಟ್ಟು ಅಲಂಕರಿಸಿ
* ದೇವಿಗೆ ಆಭರಣಗಳನ್ನು ಅರ್ಪಿಸಿ
* ನೀರು ತುಂಬಿದ ಕಳಸವನ್ನು ಇಡಿ
* ನಂತರ ಕಣ್ಣುಗಳನ್ನು ಮುಚ್ಚಿ ಲಕ್ಷ್ಮಿಯ ಧ್ಯಾನ ಮಾಡಿ, ಲಕ್ಷ್ಮಿ ಮಂತ್ರಗಳನ್ನು ಹೇಳಿ
* ನಂತರ ಆರತಿ ಬೆಳಗಿ ಪೂಜೆಯನ್ನು ಪೂರ್ಣಗೊಳಿಸಿ.
ಶುಕ್ರವಾರ ಈ ಕಾರ್ಯಗಳನ್ನು ಮಾಡಬೇಡಿ
* ಶಾಸ್ತ್ರದ ಪ್ರಕಾರ ಶುಕ್ರವಾರದಂದು ಹಣದ ವ್ಯವಹಾರ ಮಾಡಬಾರದು ಎಂದು ಹೇಳಲಾಗುವುದು.
* ಶುಕ್ರವಾರದಂದು ಯಾವುದೇ ಅಡುಗೆ ವಸ್ತುಗಳನ್ನು ಖರೀದಿಸಬಾರದು, ಶುಕ್ರವಾರದ ಪೂಜೆಯ ಸಮಯದಲ್ಲಿ ಏನನ್ನೂ ಖರೀದಿಸುವುದನ್ನು ನಿಷೇಧಿಸಲಾಗಿದೆ.
* ಈ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು, ಈ ಕೆಲಸಗಳನ್ನು ಮಾಡಿದರೆ ನಷ್ಟವನ್ನು ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ.
* ಶುಕ್ರವಾರ ಸಕ್ಕರೆಯನ್ನು ಸಾಲ ಪಡೆಯಬೇಡಿ.
ಈ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು
ಶುಕ್ರವಾರದಂದು ಸಂಗೀತ, ಅಲಂಕಾರ, ಸೌಂದರ್ಯ ಮತ್ತು ಕಲೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಶುಭ. ಈ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುವುದು.



Click it and Unblock the Notifications











