Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಕಾಮಿಕ ಏಕಾದಶಿ 2023: ಬಯಸಿದ್ದು ನೆರವೇರಲು ಈ ದಿನ ಏನು ಮಾಡಬೇಕು, ಏನು ಮಾಡಬಾರದು?
ಆಷಾಢ ಮಾಸದ ಕೊನೆಯ ಏಕಾದಶಿ ಕಾಮಿಕ ಏಕಾದಶಿ, ಅನೇಕ ಕಾರಣಗಳಿಂದ ಈ ಏಕಾದಶಿ ವ್ರತ ಮಹತ್ವವನ್ನು ಹೊಂದಿದೆ. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ, ಅದರಂತೆ ಯಾರು ಈ ಏಕಾದಶಿಯನ್ನು ಆಚರಣೆ ಮಾಡುತ್ತಾರೋ ಅವರ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣವಾಗುವುದು ಎಂಬ ನಂಬಿಕೆ ಇದೆ.
ಇದೀಗ ಜುಲೈ 12 ಹಾಗೂ 13ರಂದು ಕಾಮಿಕ ಏಕಾದಶಿ ಆಚರಿಸಲಾಗುವುದು. ಕಾಮಿಕ ಏಕಾದಶಿ ಆಚರಣೆ ಮಾಡುವುದರಿಂದ ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗಲಿದೆ. ಈ ಏಕಾದಶಿ ಆಚರಣೆಯಿಂದ ಪಿತೃದೋಷ ನಿವಾರಣೆಯಾಗುವುದು, ಬ್ರಹ್ಮಹತ್ಯೆಯಂಥ ಮಹಾ ಮಾಪದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು.

ಕಾಮಿಕ ಏಕಾದಶಿ 2023ಪೂಜಾ ಸಮಯ
ಕಾಮಿಕ ಏಕಾದಶಿ ಜುಲೈ 12 ಸಂಜೆ 5:59ಕ್ಕೆ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ
ಪೂಜೆಗೆ ಶುಭ ಮುಹೂರ್ತ ಜುಲೈ 13 ಬೆಳಗ್ಗೆ 5:32ರಿಂದ 07:16ರವರೆಗೆ ಮತ್ತೊಂದು ಶುಭ ಮುಹೂರ್ತ ಬೆಳಗ್ಗೆ 10:43ರಿಂದ ಮಧ್ಯಾಹ್ನ 03:45ರವರೆಗೆ
ಜುಲೈ 13 ಸಂಜೆ 06:24ರವರೆಗೆ ಏಕಾದಶಿ ಉಪವಾಸವನ್ನು ಜುಲೈ 13ರಂದು ಆಚರಿಸಲಾಗುವುದು.
ಪಾರಣ ಸಮಯ: ಜುಲೈ 14 ಬೆಳಗ್ಗೆ 05:32ರಿಂದ 08:18ರವರೆಗೆ
ಈ ಕಾಮಿಕ ಏಕಾದಶಿಯಂದು ಏಕಾದಶಿ ವ್ರತ ಮಾಡುವವರು ಪೂಜಾ ನಿಯಮಗಳನ್ನು ಪಾಲಿಸುವುದರಿಂದ ಜೊತೆ ಹೆಚ್ಚಿನ ಫಲ ಪಡೆಯಲು ಈ ದಿನ ಏನು ಮಾಡಬೇಕು, ಈ ದಿನ ಯಾವ ಕಾರ್ಯ ಮಾಡಲೇಬಾರದು ಎಂದು ನೋಡೋಣ ಬನ್ನಿ:
ಕಾಮಿಕ ಏಕಾದಶಿಯಂದು ಏನು ಮಾಡಬೇಕು?
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಹಳದಿ ಬಣ್ಣದ ವಸ್ತ್ರವಾಗಿದ್ದರೆ ಇನ್ನೂ ಒಳ್ಳೆಯದು.
* ನಂತರ ಸಂಕಲ್ಪ ಮಾಡಿ
* ಈ ದಿನ ಉಪವಾಸವಿದ್ದು ಕಾಮಿಕ ಏಕಾದಶಿ ವ್ರತ ಆಚರಿಸಿದರೆ ಒಳ್ಳೆಯದು.
* ಏಕಾದಶಿ ತಿಥಿ ಜುಲೈ 12ರಿಂದಲೇ ಪ್ರಾರಂಭವಾಗುವುದರಿಂದ ಈ ದಿನದಿಂದಲೇ ಈರುಳ್ಳಿ, ಬೆಳ್ಳುಳ್ಳಿ, ತಾಮಸ ಆಹಾರ ಸೇವಿಸಬಾರದು. ಈ ದಿನ ಅನ್ನ, ಗೋಧಿ, ಧಾನ್ಯಗಳನ್ನು ಸೇವಿಸಬಾರದು.
* ವ್ರತ ರೆಸಿಪಿ ಸೇವಿಸಬಹುದು
* ಈ ದಿನ ಓಂ ನಮೋ ಭಗವತೇ ವಾಸುದೇವಾಯ ಎಂದು ಪಠಿಸುತ್ತಲೇ ಇರಿ.
* ಈ ದಿನ ದಾನ-ಧರ್ಮಗಳನ್ನು ಮಾಡಿದರೆ ಒಳ್ಳೆಯದು.
* ನಿಮ್ಮ ಕೈಲಾದ ಸಹಾಯ ಮಾಡಿ.
ಏನು ಮಾಡಬಾರದು?
* ಯಾವುದೇ ಕೆಟ್ಟ ಕಾರ್ಯ ಮಾಡಬಾರದು
* ಸುಳ್ಳು ಹೇಳಬಾರದು
* ಮದ್ಯ, ಮಾಂಸ ಸೇವಿಸಬಾರದು
* ಸಂಜೆ ಹೊತ್ತಿನಲ್ಲಿ ಮಲಗಬಾರದು
* ಹಿರಿಯರನ್ನು ಅವಮಾನಿಸಬಾರದು
ಈ ದಿನ ಶ್ರೀ ವಿಷ್ಣುವಿನ ಈ ಮಂತ್ರ ಪಠಣೆ ಮಾಡಿ
ಓಂ ಭಗವತೇ ವಾಸುದೇವಾಯ ನಮಃ
ಓಂ ನಮೋ ನಾರಾಯಣಾಯ ನಮಃ
ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್



Click it and Unblock the Notifications