Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಕಾಮಿಕ ಏಕಾದಶಿ 2023: ಬಯಸಿದ್ದು ನೆರವೇರಲು ಈ ದಿನ ಏನು ಮಾಡಬೇಕು, ಏನು ಮಾಡಬಾರದು?
ಆಷಾಢ ಮಾಸದ ಕೊನೆಯ ಏಕಾದಶಿ ಕಾಮಿಕ ಏಕಾದಶಿ, ಅನೇಕ ಕಾರಣಗಳಿಂದ ಈ ಏಕಾದಶಿ ವ್ರತ ಮಹತ್ವವನ್ನು ಹೊಂದಿದೆ. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ, ಅದರಂತೆ ಯಾರು ಈ ಏಕಾದಶಿಯನ್ನು ಆಚರಣೆ ಮಾಡುತ್ತಾರೋ ಅವರ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣವಾಗುವುದು ಎಂಬ ನಂಬಿಕೆ ಇದೆ.
ಇದೀಗ ಜುಲೈ 12 ಹಾಗೂ 13ರಂದು ಕಾಮಿಕ ಏಕಾದಶಿ ಆಚರಿಸಲಾಗುವುದು. ಕಾಮಿಕ ಏಕಾದಶಿ ಆಚರಣೆ ಮಾಡುವುದರಿಂದ ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗಲಿದೆ. ಈ ಏಕಾದಶಿ ಆಚರಣೆಯಿಂದ ಪಿತೃದೋಷ ನಿವಾರಣೆಯಾಗುವುದು, ಬ್ರಹ್ಮಹತ್ಯೆಯಂಥ ಮಹಾ ಮಾಪದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು.

ಕಾಮಿಕ ಏಕಾದಶಿ 2023ಪೂಜಾ ಸಮಯ
ಕಾಮಿಕ ಏಕಾದಶಿ ಜುಲೈ 12 ಸಂಜೆ 5:59ಕ್ಕೆ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ
ಪೂಜೆಗೆ ಶುಭ ಮುಹೂರ್ತ ಜುಲೈ 13 ಬೆಳಗ್ಗೆ 5:32ರಿಂದ 07:16ರವರೆಗೆ ಮತ್ತೊಂದು ಶುಭ ಮುಹೂರ್ತ ಬೆಳಗ್ಗೆ 10:43ರಿಂದ ಮಧ್ಯಾಹ್ನ 03:45ರವರೆಗೆ
ಜುಲೈ 13 ಸಂಜೆ 06:24ರವರೆಗೆ ಏಕಾದಶಿ ಉಪವಾಸವನ್ನು ಜುಲೈ 13ರಂದು ಆಚರಿಸಲಾಗುವುದು.
ಪಾರಣ ಸಮಯ: ಜುಲೈ 14 ಬೆಳಗ್ಗೆ 05:32ರಿಂದ 08:18ರವರೆಗೆ
ಈ ಕಾಮಿಕ ಏಕಾದಶಿಯಂದು ಏಕಾದಶಿ ವ್ರತ ಮಾಡುವವರು ಪೂಜಾ ನಿಯಮಗಳನ್ನು ಪಾಲಿಸುವುದರಿಂದ ಜೊತೆ ಹೆಚ್ಚಿನ ಫಲ ಪಡೆಯಲು ಈ ದಿನ ಏನು ಮಾಡಬೇಕು, ಈ ದಿನ ಯಾವ ಕಾರ್ಯ ಮಾಡಲೇಬಾರದು ಎಂದು ನೋಡೋಣ ಬನ್ನಿ:
ಕಾಮಿಕ ಏಕಾದಶಿಯಂದು ಏನು ಮಾಡಬೇಕು?
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಹಳದಿ ಬಣ್ಣದ ವಸ್ತ್ರವಾಗಿದ್ದರೆ ಇನ್ನೂ ಒಳ್ಳೆಯದು.
* ನಂತರ ಸಂಕಲ್ಪ ಮಾಡಿ
* ಈ ದಿನ ಉಪವಾಸವಿದ್ದು ಕಾಮಿಕ ಏಕಾದಶಿ ವ್ರತ ಆಚರಿಸಿದರೆ ಒಳ್ಳೆಯದು.
* ಏಕಾದಶಿ ತಿಥಿ ಜುಲೈ 12ರಿಂದಲೇ ಪ್ರಾರಂಭವಾಗುವುದರಿಂದ ಈ ದಿನದಿಂದಲೇ ಈರುಳ್ಳಿ, ಬೆಳ್ಳುಳ್ಳಿ, ತಾಮಸ ಆಹಾರ ಸೇವಿಸಬಾರದು. ಈ ದಿನ ಅನ್ನ, ಗೋಧಿ, ಧಾನ್ಯಗಳನ್ನು ಸೇವಿಸಬಾರದು.
* ವ್ರತ ರೆಸಿಪಿ ಸೇವಿಸಬಹುದು
* ಈ ದಿನ ಓಂ ನಮೋ ಭಗವತೇ ವಾಸುದೇವಾಯ ಎಂದು ಪಠಿಸುತ್ತಲೇ ಇರಿ.
* ಈ ದಿನ ದಾನ-ಧರ್ಮಗಳನ್ನು ಮಾಡಿದರೆ ಒಳ್ಳೆಯದು.
* ನಿಮ್ಮ ಕೈಲಾದ ಸಹಾಯ ಮಾಡಿ.
ಏನು ಮಾಡಬಾರದು?
* ಯಾವುದೇ ಕೆಟ್ಟ ಕಾರ್ಯ ಮಾಡಬಾರದು
* ಸುಳ್ಳು ಹೇಳಬಾರದು
* ಮದ್ಯ, ಮಾಂಸ ಸೇವಿಸಬಾರದು
* ಸಂಜೆ ಹೊತ್ತಿನಲ್ಲಿ ಮಲಗಬಾರದು
* ಹಿರಿಯರನ್ನು ಅವಮಾನಿಸಬಾರದು
ಈ ದಿನ ಶ್ರೀ ವಿಷ್ಣುವಿನ ಈ ಮಂತ್ರ ಪಠಣೆ ಮಾಡಿ
ಓಂ ಭಗವತೇ ವಾಸುದೇವಾಯ ನಮಃ
ಓಂ ನಮೋ ನಾರಾಯಣಾಯ ನಮಃ
ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್



Click it and Unblock the Notifications