Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ದೇವಶಯನಿ ಏಕಾದಶಿಯಂದು ನಿಮ್ಮ ಸಮಸ್ಯೆ ನಿವಾರಣೆಗೆ ಈ ಪರಿಹಾರ ಮಾಡಿ
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯನಿ ಅಥವಾ ಹರಿಶಯನಿ ಏಕಾದಶಿ ಎಂದು ಕರೆಯಲಾಗುವುದು. ಈ ವರ್ಷ ದೇವಶಯನಿ ಏಕಾದಶಿಯನ್ನು ಜೂನ್ 29ರಂದು ಆಚರಿಸಲಾಗುವುದು. ಯಾರು ದೇವಶಯನಿ ಏಕಾದಶಯನ್ನು ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ದೇವಶಯನಿ ಏಕಾದಶಿ ಬಳಿಕ ವಿಷ್ಣು ಯೋಗ ನಿದ್ರೆಗೆ ಜಾರುತ್ತಾರೆ.
ದೇವಶಯನಿ ಏಕಾದಶಿಯಂದು ಶ್ರೀ ಹರಿ ವಿಷ್ಣುವನ್ನು ಪೂಜಿಸುವುದರಿಂದ ಒಳಿತಾಗಲಿದೆ. ದೇವಶಯನಿ ಏಕಾದಶಿಯಂದು ಕೆಲವು ಪರಿಹಾರ ಮಾಡಿದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ದಿನ ಯಾರು ಯಾವ ಪರಿಹಾರ ಮಾಡಿದರೆ ಒಳ್ಳೆಯದು ನೋಡೋಣ ಬನ್ನಿ:

ಸಂಪತ್ತು ವೃದ್ದಿಗೆ
ಮನೆಯಲ್ಲಿ ಸಂಪತ್ತು ವೃದ್ಧಿಗೆ ಏಕಾದಶಿಯಂದು ದಕ್ಷಿಣಾವರ್ತಿ ಶಂಖದಿಂದ ವಿಷ್ಣುವಿಗೆ ಜಲಾಭಿಷೇಕ ಮಾಡಿ. ಈ ದಿನ ಶ್ರೀ ವಿಷ್ಣು ಹಾಗೂ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಿ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ.
ವೈವಾಹಿಕ ಜೀವನದಲ್ಲಿ ಸಂತೋಷಕ್ಕಾಗಿ
ವೈವಾಹಿಕ ಜೀವನದಲ್ಲಿರುವ ಸಮಸ್ಯೆ ಪರಿಹಾರವಾಗಲು ಈ ದಿನ ಕೆಲವು ಪರಿಹಾರ ಮಾಡಿದರೆ ಒಳ್ಳೆಯದು. ದೇವಶಯನಿ ಏಕಾದಶಿಯ ದಿನ ಸ್ನಾನ ಇತ್ಯಾದಿಗಳ ನಂತರ ಮಡಿ ಬಟ್ಟೆ ಧರಿಸಿ ತುಳಸಿ ಗಿಡವನ್ನು ಪೂಜಿಸಬೇಕು. ಉತ್ತಮ ದಾಂಪತ್ಯ ಜೀವನಕ್ಕಾಗಿ ತುಳಸಿಯನ್ನು ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ದಾಂಪತ್ಯ ಜೀವನದಲ್ಲಿರುವ ಸಮಸ್ಯೆ ಬಗೆಹರಿದು ಸಂಸಾರದಲ್ಲಿ ಮಾಧುರ್ಯ ಹೆಚ್ಚಾಗುವುದು.
ಆರ್ಥಿಕ ಸಮಸ್ಯೆ ಬಗೆಹರಿಯಲು ಈ ಪರಿಹಾರ ಮಾಡಿ
ದೇವಶಯನಿ ಏಕಾದಶಿಯ ದಿನದಂದು ಪೂಜೆಯ ಸಮಯದಲ್ಲಿ, ಶ್ರೀ ಹರಿ ವಿಷ್ಣುವಿನ ಫೋಟೋದ ಬಳಿ ಒಂದು ರೂಪಾಯಿ ನಾಣ್ಯವನ್ನು ಇರಿಸಿ. ನಂತರ ಪೂಜೆಯ ನಂತರ ಈ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಕಪಾಟಿನಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಶ್ರೀ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರಲಿದೆ, ಇದರಿಂದ ಆರ್ಥಿಕ ಸಂಕಷ್ಟ ದೂರಾಗುವುದು.
ಜೀವನದಲ್ಲಿ ಸಮಸ್ಯೆಗಳಿದ್ದರೆ
ಉದ್ಯೋಗದಲ್ಲಿ ಸಮಸ್ಯೆ, ವ್ಯವಹಾರ ಕೈಗೂಡುತ್ತಿಲ್ಲ, ಮಾಡಿದ ಕಾರ್ಯಗಳು ಅಪೂರ್ಣವಾಗಿದೆ ಈ ರೀತಿ ಇರುವಾಗ ದೇವಶಯನಿ ಏಕಾದಶಿಯ ದಿನದಂದು ಪೂಜೆಯ ಸಮಯದಲ್ಲಿ, ವಿಷ್ಣುವಿಗೆ ಕೇಸರಿ ಹಾಲಿನಿಂದ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಮದುವೆ ವಿಳಂಬವಾಗಿದ್ದರೆ
ಕೆಲವರಿಗೆ ಮದುವೆ ವಿಳಂಬವಾಗಿರುತ್ತದೆ ಅಂಥವರು ಬೇಗನೆ ಕಂಕಣ ಬಲ ಕೂಡಿ ಬರಲು ಶ್ರೀ ವಿಷ್ಣು-ಲಕ್ಷ್ಮಿಯನ್ನು ಆರಾಧನೆ ಮಾಡುವುದು ಒಳ್ಳೆಯದು. ದೇವಶಯನಿ ಏಕಾದಶಿಯ ದಿನ ಸ್ನಾನದ ನಂತರ ವಿಷ್ಣುವಿಗೆ ನಮಸ್ಕರಿಸಿ ಆಸನವನ್ನು ಹಾಕಿ ಕುಳಿತುಕೊಳ್ಳಿ. ನಂತರ ವಿಷ್ಣುವಿನ ಮಂತ್ರ 'ಓಂ ನಮೋ ಭಗವತೇ ನಾರಾಯಣಾಯ'. 11 ಬಾರಿ ಜಪಿಸಿ.



Click it and Unblock the Notifications