ರಾಮ ಮಂದಿರ: ಅಯೋಧ್ಯೆಯಲ್ಲಿ ಇಂದಿನಿಂದ 7 ದಿನ ಈ ಪ್ರಮುಖ ಧಾರ್ಮಿಕ ಕಾರ್ಯಗಳು ನಡೆಯಲಿದೆ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿಯಿದೆ. ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ಇಂದಿನಿಂದ ಅಂದರೆ ಜನವರಿ 15ರಿಂದ ಶುರುವಾಗಿದೆ. ಜನವರಿ 21ರವರೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ 7 ದಿನಗಳು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಹೀಗಿವೆ:

 Ayodhya Ram Mandir Inauguration

ಜನವರಿ 16ರಂದು ಪ್ರಾಯಶ್ಚಿತ್ತ ಮತ್ತು ಕರ್ಮಕುಟಿ ಪೂಜೆ'
ಈ ದಿನದಿಂದ ಮಹಾಮಸ್ತಕಾಭಿಷೇಕದ ಪೂಜಾ ಕಾರ್ಯಗಳು ಶುರುವಾಗಿದೆ. ಈ ದಿನ ಪ್ರಾಯಶ್ಚಿತ್ತ ಕಾರ್ಯಕ್ರಮ ನಡೆಯುವುದು, ಅಲ್ಲದೆ ಸರಯೂ ನದಿಯ ದಡದಲ್ಲಿ ದಶವಿಧ, ವಿಷ್ಣು ಪೂಜೆ ನಡೆಯಲಿದೆ.

ಜನವರಿ 17: ರಾಮನ ಮೂರ್ತಿಯ ಪರಿಸರ ಪ್ರವೇಶ
ರಾಮಲಲ್ಲಾ ಮೂರ್ತಿಯನ್ನು ಹೊತ್ತು ಮೆರವಣಿಗೆ ನಡೆಯಲಿದೆ. ಕಲಶದಲ್ಲಿ ಸರಯೂ ನದಿಯ ನೀರನ್ನು ತುಂಬಿ ಆ ಕಲಶವನ್ನು ಹೊತ್ತ ಭಕ್ತರು ರಾಮಜನ್ಮ ಭೂಮಿಗೆ ತಲುಪಲಿದ್ದಾರೆ.

ಜನವರಿ 18ರಂದು ಗಣೇಶನ ಪೂಜೆ
ಜನವರಿ 18ರಂದು ಶ್ರೀ ಗಣೇಶನಿಗೆ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ವರುಣ ಪೂಜೆ, ವಾಸ್ತು ಪೂಜೆ ಕೂಡ ನಡೆಯಲಿದೆ.

ಜನವರಿ 19
ಈ ದಿನದಂದು ಪವಿತ್ರ ಅಗ್ನಿಯನ್ನು ಬೆಳಗಿಸಲಾಗುವುದು. ನವಗ್ರಹ ಪೂಜೆ ನಡೆಯಲಿದೆ, ಈ ದಿನ ಹವನ ಕಾರ್ಯಗಳು ನಡೆಯಲಿದೆ.

ಜನವರಿ 20ರಂದು ವಾಸ್ತು ಶಾಂತಿ
ಈ ದಿನ ಅಯೋಧ್ಯೆ ರಾಮ ಮಂದಿರವನ್ನು ಸರಾಯು ನದಿ ನೀರಿನಿಂದ ಸ್ವಚ್ಛಗೊಳಿಸಿ, ವಾಸ್ತು ಶಾಂತಿ ಪೂಜೆ ಮಾಡಲಾಗುವುದು, ಈ ದಿನ ಅನ್ನಾಧಿವಾಸ್ ಆಚರಣೆ ನಡೆಯಲಿದೆ.

ಜನವರಿ 21
ರಾಮಲಲ್ಲಾ ವಿಗ್ರಹವನ್ನು ವಿವಿಧ ಪವಿತ್ರ ನದಿಗಳಿಂದ ತಂದ ನೀರಿನಿಂದ ಅಭಿಷೇಕ ಮಾಡಲಾಗುವುದು.

ಜನವರಿ 22
ಜನವರಿ 22ರಂದು ಪ್ರಾಣಪ್ರತಿಷ್ಠಾಪನೆ ನಡೆಯಲಿದೆ.

* ಜನವರಿ 18ಕ್ಕೆ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಇರಿಸಲಾಗುವುದು.

* ಜನವರಿ 22ಕ್ಕೆ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಜನವರಿ 22ರಂದು ಮಧ್ಯಾಹ್ನ 1 ಗಂಟೆಯ ಒಳಗಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಗಳು ಪೂರ್ಣವಾಗಲಿದೆ.

* ಜನವರಿ 23ರಿಂದ ಜನರ ದರ್ಶನಕ್ಕೆ ಈ ದೇವಾಲಯ ಮುಕ್ತವಾಗಲಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಬಂದು ಶ್ರೀರಾಮ ದರ್ಶನ ಪಡೆಯಲಿದ್ದಾರೆ.ಪ್ರಾಣ ಪ್ರತಿಷ್ಟಾಪನೆಯ ಮಹತ್ವ
ಪ್ರಾಣ ಪ್ರತಿಷ್ಠಾಪನೆ ಮಾಡದಿದ್ದರೆ ಅದೊಂದು ಮೂರ್ತಿ ಅದು ದೇವರ ವಿಗ್ರಹವಾಗುವುದು ಪ್ರಾಣ ಪ್ರತಿಷ್ಠಾಪನೆಯ ಬಳಿಕವಷ್ಟೇ. ಪ್ರಾಣ ಪ್ರತಿಷ್ಠೆಯ ಮೂಲಕ, ವಿಗ್ರಹವನ್ನು ಜೀವಶಕ್ತಿಯನ್ನು ತುಂಬುವ ಮೂಲಕ ದೇವತೆಯಾಗಿ ಪರಿವರ್ತಿಸಲಾಗುತ್ತದೆ. ಇದರ ನಂತರ ಆ ಮೂರ್ತಿ ಪೂಜೆಗೆ ಅರ್ಹವಾಗುತ್ತದೆ. ಪ್ರಾಣ ಪ್ರತಿಷ್ಠೆಯ ನಂತರ, ವಿಗ್ರಹ ರೂಪದಲ್ಲಿ ಇರುವ ದೇವರನ್ನು ಪೂಜಾ ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುವುದು, ಮಂತ್ರಗಳನ್ನು ಪಠಿಸಲಾಗುವುದು. ಪ್ರಾಣ ಪ್ರತಿಷ್ಠಾಪನೆಯ ಮೂಲಕ ಆ ಮೂರ್ತಿ ದೈವಿಕ ಶಕ್ತಿಯನ್ನು ಪಡೆಯಲಿದೆ. ದೇವರ ಸ್ವರೂಪವಾಗಿ ನಾವು ಅದನ್ನು ಕಾಣಲಾರಂಭಿಸುತ್ತೇವೆ.

ಪ್ರಾಣ ಪ್ರತಿಷ್ಠಾಪನೆ ಶುಭ ಸಮಯ
ಶ್ರೀರಾಮ ಪ್ರಾಣಪ್ರತಿಷ್ಠಾಪನೆ 84 ಸೆಕೆಂಡ್‌ಗಳಲ್ಲಿ ನಡೆಯಲಿದ್ದು, ಈ 84 ಸೆಕೆಂಡ್‌ಗಳು ತುಂಬಾನೇ ವಿಶೇಷವಾಗಿದೆ. ಪ್ರಾಣ ಪ್ರತಿಷ್ಠಾಪನೆಗೆ ಇರುವ ಸಮಯ 84 ಸೆಕೆಂಡ್ ಅಷ್ಟೇ, ಅಂದರೆ ಒಂದು ನಿಮಿಷ 24 ಸೆಕೆಂಡ್‌ ಅಷ್ಟೇ, ಈ 84 ಸೆಕೆಂಡ್‌ ಅತ್ಯಂತ ಶುಭದಿನ ಎಂದು ಹೇಳಲಾಗುವುದು.

ಶ್ರೀರಾಮನ ಜನನ ಸಮಯ
ನೆ ಹಿಂದೂ ಪೌರಾಣಿಕ ಕತೆಯ ಪ್ರಕಾರ ಶ್ರೀರಾಮನು ಅಭಿಜಿತ್‌ ಮುಹೂರ್ತದಲ್ಲಿ ಜನಿಸಿದ ಎಂದು ನಂಬಲಾಗಿದೆ. ಜನವರಿ 22ರ 12.30ರ ಸಮಯ ಅಭಿಜಿತ್ ಮುಹೂರ್ತವಾಗಿದೆ. ಅಭಿಜಿತ್ ಮುಹೂರ್ತವು ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:33 ರವರೆಗೆ ಇರಲಿದೆ. ಇದು ಕೂಡ ಜನವರಿ 22ರಂದೇ ಪ್ರಾಣ ಪ್ರತಿಷ್ಠಾಪನೆ ಮಾಡಲು ಪ್ರಮುಖ ಕಾರಣವಾಗಿದೆ.

English summary

Ayodhya Ram Mandir: Religious Ritual For Pran Pratistha Cermony Start From January 16

Ayodhya Ram Mandir Inauguration: From 16 Jnauary religious ritual start for pran pratistha cermony, read on...
X
Desktop Bottom Promotion