Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ನಾಗರ ಪಂಚಮಿಯಂದು ಬಂದಿದೆ ತುಂಬಾ ಶುಭ ಯೋಗ, ಈ ಹೊತ್ತಿನಲ್ಲಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು
ನಾಗರ ಪಂಚಮಿಯಿಂದ ಹಬ್ಬಗಳ ಸಡಗರ ಶುರುವಾಗುವುದು, ನಾಗರ ಪಂಚಮಿಯನ್ನ ಶ್ರಾವಣ ಮಾಸದ ಶುಕ್ಲಪಕ್ಷದಂದು ಆಚರಿಸಲಾಗುವುದು. ಈ ದಿನ ನಾಗದೇವನಿಗೆ ಪೂಜೆಯನ್ನು ಮಾಡಿ ನಮಗೇನೂ ತೊಂದರೆ ಮಾಡದಿರಪ್ಪಾ ಎಮದು ಬೇಡಲಾಗುವುದು. ನಾಗನ ಮೂರ್ತಿಗಳಿಗೆ ಪೂಜೆ ಮಾಡುವುದರಿಂದ ಸಂತಾನ ಭಾಗ್ಯ ದೊರೆಯುವುದು.

ಸಂಸಾರದಲ್ಲಿ ಸಂತೋಷ, ನೆಮ್ಮದಿ ಲಭಿಸುವುದು ಎಂದು ಹೇಳಲಾಗುವುದು. ಈ ವರ್ಷ ನಾಗರ ಪಂಚಮಿ ಆಗಸ್ಟ್ 21ಕ್ಕೆ ಬಂದಿದ್ದು ಈ ದಿನ ತುಂಬಾನೇ ಶುಭ ಯೋಗವಿದೆ. ಆದ್ದರಿಂದ ಈ ಶುಭಯೋಗದಲ್ಲಿ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು.
ಜಾತಕದಲ್ಲಿ ರಾಹು-ಕೇತು ದೋಷವಿದ್ದರೆ ಇದರಿಂದ ನಾಗದೋಷ ಉಂಟಾಗುವುದು, ಇದರಿಂದಾಗಿ ಆ ವ್ಯಕ್ತಿ ತುಂಬಾನೇ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ, ವೈವಾಹಿಕ ಜೀವನದಲ್ಲಿ ಹಲವು ಸವಾಲುಗಳು ಎದುರಾಗುವುದು. ಈ ಸಮಸ್ಯೆಗಳ ನಿವಾರಣೆಗೆ ನಾಗರ ಪಂಚಮಿಯಿಂದ ಪರಿಹಾರ ಮಾಡಿದರೆ ಒಳ್ಳೆಯದು.
ನಾಗರ ಪಂಚಮಿ ಶುಭ ದಿನಾಂಕ
ನಾಗರ ಪಂಚಮಿ ತಿಥಿ ಪ್ರಾರಂಭ - ಆಗಸ್ಟ್ 20 ರಾತ್ರಿ 12:21ಕ್ಕೆ
ಪಂಚಮಿ ತಿಥಿ ಮುಕ್ತಾಯ - ಆಗಸ್ಟ್ 22, ಮಂಗಳವಾರ, ಮಧ್ಯಾಹ್ನ 02:00 ರವರೆಗೆ
ಪೂಜೆ ಮುಹೂರ್ತ - 05.33 ರಿಂದ 08.30 ರವರೆಗೆ
ತುಂಬಾ ಶುಭ ಯೋಗದಲ್ಲಿ ಬಂದಿದೆ ನಾಗರಪಂಚಮಿ
ಈ ವರ್ಷ ತುಂಬಾನೇ ಶುಭ ಯೋಗವಾಗಿರುವ ಶಿವ ಯೋಗದಲ್ಲಿ ಬಂದಿದೆ ನಾಗರ ಪಂಚಮಿ. ಇದನ್ನು ತುಂಬಾನೇ ದೈವಿಕವಾದ ಯೋಗ ಎಂದು ಪರಿಗಣಿಸಲಾಗಿದೆ.
* ಈ ಯೋಗದಲ್ಲಿ ಪೂಜೆ ಮಾಡಿಸಿದರೆ ಯಶಸ್ಸು ದೊರೆಯುವುದು
* ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣುತ್ತಾರೆ
* 5ನೇ ಮನೆಯಲ್ಲಿ ಸೂರ್ಯ, 9ನೇ ಮನೆಯಲ್ಲಿ ಗುರು, 10ನೇ ಮನೆಯಲ್ಲಿ ಶನಿ ಇದ್ದಾಗ ಶಿವಯೋಗ ಉಂಟಾಗುವುದು.
ಶಿವಯೋಗದ ಪೂಜೆಯ ಫಲ
* ಶಿವ ಯೋಗದಲ್ಲಿ ಪೂಜೆ ಮಾಡಿದರೆ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತುಂಬಾ ಒಳ್ಳೆಯದು.
* ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಹಕಾರಿ
* ಜೀವನದಲ್ಲಿರುವ ಸವಾಲು ದೂರಾಗುವುದು
ನಾಗರ ಪಂಚಮಿಯಂದು ಶುಭ ಯೋಗದಲ್ಲಿ ರುದ್ರಾಭಿಷೇಕ ಮಾಡಿ
ನಾಗರ ಪಂಚಮಿಯಂದು ಮಂಗಳಕರ ಯೋಗ ಸೃಷ್ಟಿಯಾಗುವುದರಿಂದ ನೀವು ಈ ದಿನ ರುದ್ರಾಭಿಷೇಕ ಮಾಡಿಸಿ.
ರುದ್ರಾಭಿಷೇಕ ಮಾಡುವಾಗ "ಓಂ ಭುಜಂಗೇಶಾಯ ವಿದ್ಮಹೇ, ಸರ್ಪರಾಜಾಯ ಧೀಮಹಿ, ತನ್ನೋ ನಾಗ: ಪ್ರಚೋದಯಾತ್." ಮಂತ್ರವನ್ನು ಪಠಿಸಿ.
ಶಾಸ್ತ್ರಗಳ ಪ್ರಕಾರ, ಕಾಲಸರ್ಪ ದೋಷದ ಪೂಜೆಯಲ್ಲಿ ಶುದ್ಧ ಹಸುವಿನ ತುಪ್ಪ, ಹೂವುಗಳು, ಶ್ರೀಗಂಧ, ಧೂಪ, ವೀಳ್ಯದೆಲೆ, ಹಲಸು, ಧಾತುರ, ವೀಳ್ಯದೆಲೆ, ಅಡಿಕೆ, ಕರ್ಪೂರ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇಷ್ಟಾರ್ಥಗಳ ನೆರವೇರಿಕೆಗಾಗಿ ನೀವು ರುದ್ರಾಭಿಷೇಕಕ್ಕೆ ಕಬ್ಬಿನ ರಸ, ಹಾಲು, ಮೊಸರು, ಜೇನುತುಪ್ಪ ಇವುಗಳನ್ನು ಬಳಸಿ ಅಭಿಷೇಕ ಮಾಡಿ.
ನಾಗ ಪಂಚಮಿ ಪರಿಹಾರ
ನಾಗರ ಪಂಚಮಿಯಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆಯನ್ನು ಅರ್ಪಿಸಿ. ಹಾಗೆಯೇ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಅಡೆತಡೆಗಳು ದೂರಾಗುವುದು, ರಾಹು ಕೇತುವಿನ ಕೆಟ್ಟ ದೋಷದಿಂದ ಮುಕ್ತಿ ಪಡೆಯಬಹುದು.



Click it and Unblock the Notifications