Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆದಿ ಪುರುಷ ಫಿಲ್ಮಂಗೆ ವೀಕ್ಷಿಸಲು ಇಂದು ಸೀಟ್ ಹನುಮಂತನಿಗೆ ರಿಸರ್ವ್ಡ್!, ಇದರ ಹಿಂದಿರುವ ಧಾರ್ಮಿಕ ಮಹತ್ವವೇನು?
ಆದಿ ಪುರುಷ ಸಿನಿಮಾ ಜನವರಿ 16ಕ್ಕೆ ತೆರೆಗೆ ಬರಲು ಸಕಲ ಸಿದ್ಧತೆ ನಡೆಸಿದೆ, ವಿಶೇಷ ಏನಪ್ಪಾ ಎಂದರೆ ಅದು ಪ್ರದರ್ಶನವಾಗುತ್ತಿರುವ ಪ್ರತಿಯೊಂದು ಥಿಯೇಟರಿನಲ್ಲಿ ಹನುಮಂತನಿಗಾಗಿ ಒಂದು ಸೀಟ್ ಕಾಯ್ದಿರಿಸಲಾಗಿದೆ!
ಆದಿಪುರುಷ ಸ್ಕ್ರೀನಿಂಗ್ ವೇಳೆ ಒಂದು ಸೀಟ್ ಹನುಮಂತನಿಗೆ ಇಟ್ಟಿರುವುದಾಗಿ ಸಿನಿತಂಡ ತಿಳಿಸಿದೆ. ಎಲ್ಲಿ ರಾಮನ ಇರುತ್ತಾನೋ ಅಲ್ಲಿ ರಾಮನ ಭಕ್ತ ಹನುಮಂತ ಇದ್ದೇ ಇರುತ್ತಾನೆ. ಆದ್ದರಿಂದ ಶ್ರೀ ರಾಮನ ಕಥಾವಸ್ತು ಒಳಗೊಂಡಿರುವ ಆದಿಪುರುಷ ಸಿನಿಮಾ ಪ್ರದರ್ಶನದ ವೇಳೆ ಶ್ರೀಹನುಮಂತನಿಗೆ ಒಂದು ಸೀಟ್ ಇಡಲಾಗಿದೆ. ಶ್ರೀ ಹನುಮಂತನ ಜೊತೆ ಪ್ರೇಕ್ಷಕರು ಆದಿಪುರುಷ ಸಿನಿಮಾ ನೋಡುವ ಅವಕಾಶ ಒದಗಿ ಬಂದಿದೆ.

ಶ್ರೀರಾಮ ಪರಮ ಭಕ್ತ ಹನುಮಂತನನ್ನು ರಾಮ ಮೊದಲ ಬಾರಿ ಭೇಟಿ ಮಾಡಿದ್ದು ಯಾವಾಗ?
ಸೀತಾಪರಣವಾದಾಗ ಶ್ರೀರಾಮ ಸೀತಾ ಮಾತೆಯನ್ನು ಹುಡುಕುತ್ತಾ ಬರುವಾಗ ಅಲ್ಲಿ ಸುಗ್ರೀವ, ವಾಲಿ ರಾಜ್ಯಕ್ಕಾಗಿ ಜಗಳವಾಡುತ್ತಿದ್ದರು. ಸುಗ್ರೀವ ಅಣ್ಣನಿಗೆ ಹೆದರಿ ಋಷ್ಯಮುಖ ಪರ್ವತದಲ್ಲಿ ಅವಿತು ಕುಳಿತುಕೊಂಡಿದ್ದ, ಅದೇ ಬೆಟ್ಟದಲ್ಲಿ ಹನುಮಂತ ಇದ್ದ. ಅಲ್ಲಿ ರಾಮ ಬಂದಿದ್ದನ್ನು ನೋಡಿದ ಸುಗ್ರೀವ ಅಣ್ಣ ವಾಲಿ ನನ್ನನ್ನು ಕೊಲ್ಲಲು ಕಳುಹಿಸಿರಬಹುದು ಎಂದು ಭಾವಿಸಿ ಅವರ್ಯಾರು ಎಂದು ವಿಚಾರಿಸಲು ಹನುಮಂತನಿಗೆ ಹೇಳುತ್ತಾನೆ. ಆಗ ಹನುಮಂತ ಬ್ರಹ್ಮಚಾರಿಯ ರೂಪದಲ್ಲಿ ಬಂದು ಯಾರೂ ಎಂದು ಕೇಳಿದಾಗ ರಾಮ-ಲಕ್ಷಣರು ತಾವು ಬಂದಿರುವ ಉದ್ದೇಶದ ಬಗ್ಗೆ ಹೇಳುತ್ತಾರೆ. ನಂತರ ಹನುಮಂತ ಸೀತಾಮಾತೆಯನ್ನು ಮರಳಿ ಶ್ರೀರಾಮನ ಬಳಿ ತಲುಪಿಸುವಲ್ಲಿ ಎಷ್ಟು ಪ್ರಮುಖ ಪಾತ್ರವಹಿಸಿದ ಎಂಬುವುದು ರಾಮಾಯಣದ ಕತೆ ಗೊತ್ತಿರುವ ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಹನುಮಂತನ ಶ್ರೀರಾಮನ ಎಷ್ಟು ದೊಡ್ಡ ಭಕ್ತ ಎಂಬುವುದಕ್ಕೆ ಸಾಕ್ಷಿ ಹನುಮಂತ ತನ್ನ ಎದೆ ಬಗೆದಾಗ ಅಲ್ಲಿ ಶ್ರೀರಾಮ-ಲಕ್ಷ್ಮಣ, ಸೀತಾ ಮಾತೆಯ ರೂಪವಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ.
ಶ್ರೀರಾಮನ ಪೂಜೆಯಲ್ಲಿ ಹನುಮಂತನಿಗೆ ಪ್ರಮಯಖ ಸ್ಥಾನ
ಯಾರು ಶ್ರೀರಾಮನ ಪೂಜೆ ಮಾಡುತ್ತಾರೋ ಆ ಪೂಜೆಯ ಸಂಪೂರ್ಣ ಫಲ ದೊರೆಯಬೇಕೆಂದರೆ ಹನುಮಂತನಿಗೂ ಪೂಜೆ ಸಲ್ಲಿಸಬೇಕು, ಆಗ ಮಾತ್ರ ಶ್ರೀರಾಮ ಸಂತುಷ್ಟನಾಗುತ್ತಾನೆ. ಶ್ರೀರಾಮನ ಕೃಪೆ ನಮ್ಮ ಮೇಲಿರುತ್ತದೆ. ಆದ್ದರಿಂದ ಶ್ರೀ ರಾಮನಿಗೆ ಪೂಜೆ ಮಾಡುವಾಗ ಕಡ್ಡಾಯವಾಗಿ ಹನುಮಂತನಿಗೂ ಪೂಜೆ ಸಲ್ಲಿಸಲಾಗುವುದು.
ಶ್ರೀರಾಮನ ಪರಮಭಕ್ತನ ಕೃಪೆಯಿಂದ ಸಕಲ ಕಷ್ಟಗಳು ದೂರಾಗುವುದು
ಜನರು ಕಷ್ಟದಿಂದ ಹೊರಬರಲು ಹನುಮಾನ್ನ ಮೊರೆ ಹೋಗುತ್ತಾರೆ. ಯಾರು ಭಕ್ತಿಯಿಂದ ಹನುಮಾನ್ನ ಆರಾಧಿಸುತ್ತಾರೋ ಅವರೆಲ್ಲಾ ತೊಂದರೆಯನ್ನು ಹನುಮಾನ್ ಹೋಗಲಾಡಿಸುತ್ತಾನೆ ಎಂಬುವುದು ಆಂಜನೇಯನನ್ನು ನಂಬಿದವರ ಅಚಲ ನಂಬಿಕೆ.
ಕಷ್ಟ ನಿವಾರಣೆಗೆ ಶ್ರೀರಾಮನ ಮಂತ್ರಗಳನ್ನು ಪಠಿಸಿ ನಂತರ ಹನುಮಾನ್ ಮಂತ್ರ ಪಠಿಸಿ
ಓಂ ಜಾನಕೀ ವಲ್ಲಭಾಯ ಸ್ವಾಹಾ
ಓಂ ನಮೋ ಭಗವತೇ ರಾಮಚಂದ್ರಾಯ
ಓಂ ರಾಮಾಯ ಧನುಷ್ಪಾಣಯೇ ಸ್ವಾಹಾಃ
ಶ್ರೀರಾಮ ಶರಣಂ ಮಮ
ರಂ ರಾಮಾಯ ನಮಃ
ಓಂ ರಾಮಚಂದ್ರಾಯ ನಮಃ
ಓಂ ರಾಮಭದ್ರಾಯ ನಮಃ
ಶ್ರೀರಾಮ ಜಯ ರಾಮ, ಜಯ - ಜಯ ರಾಮ
ಓಂ ದಶರಥಾಯ ವಿದ್ಮಹೇ , ಸೀತಾ ವಲ್ಲಭಾಯ ಧೀಮಹಿ, ತನ್ನೋ ಶ್ರೀರಾಮಃಪ್ರಚೋದಯಾತ್||
ರಾಮ ರಾಮೇತಿ, ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ||
ಹನುಮಾನ್ನ ಶ್ರೀರಕ್ಷೆಗೆ ಈ ಮಂತ್ರ ಪವರ್ಫುಲ್
ಓಂ ಹನುಮತೇ ನಮಃ: ಇದರಿಂದ ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯ ಆ ಭಗವಂತ ನೀಡುತ್ತಾನೆ.
ಹನುಮಾನ್ ಬೀಜ ಮಂತ್ರ
ಓಂ ಐಂ ಭ್ರೀಂ ಹನುಮತೇ
ಶ್ರೀ ರಾಮ ದೂತಾಯ ನಮಃ
ಹನುಮಮಂತನ ಪರಮಭಕ್ತನನ್ನು ಈ ಮೂಲಕ ಪ್ರಾರ್ಥಿಸುತ್ತೇವೆ ಎಂಬುವುದೇ ಇದರ್ಥ.
ಹನುಮಾನ್ ಗಾಯತ್ರಿ ಮಂತ್ರ
ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।
ತನ್ನೋ ಹನುಮತ್ ಪ್ರಚೋದಯಾತ್॥
ಎಲ್ಲಾ ರೀತಿಯ ಅಪಾಯದಿಂದ ಶ್ರೀಹನುಮಂತ ರಕ್ಷಣೆ ನೀಡುತ್ತಾನೆ ಎಂಬುವುದಾಗಿದೆ.
ಯಶಸ್ವಿಗೆ ಆಂಜನೇಯ ಮಂತ್ರ
ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ



Click it and Unblock the Notifications
