Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
57 ವರ್ಷಗಳ ಹಿಂದೆಯೇ 2024 ರಾಮ ಮಂದಿರದ ಉದ್ಘಾಟನೆ ಬಗ್ಗೆ ಸೂಚನೆ ನೀಡಿತ್ತೇ ನೇಪಾಳದ ಆ ಅಂಚೆ ಚೀಟಿ
ಅಯೋಧ್ಯೆಯಲ್ಲಿ ಜನವರಿ 22ಕ್ಕೆ ಪ್ರಾಣಪ್ರತಿಷ್ಠಾಪನೆ. ಕೋಟ್ಯಾಂತರ ರಾಮ ಭಕ್ತರ ಕನಸು ನನಸಾಗಲಿದೆ, ಜನವರಿ 16ರಿಂದ ಅಮೃತ ಮಹೋತ್ಸವ ಆಚರಣೆ ಶುರುವಾಗಿದೆ. ಆದರೆ 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತದೆ ಎಂಬುವುದನ್ನು 1967ಯೇ ಹೇಳಲಾಗಿತ್ತೇ, ಅದರಲ್ಲೂ ನಮ್ಮ ದೇಶದಲ್ಲಿ ಅಲ್ಲ ನೇಪಾಳದಲ್ಲಿ ಈ ರೀತಿ ಭವಿಷ್ಯ ಹೇಳಲಾಗಿತ್ತೇ? ಎಂಬ ಪ್ರಶ್ನೆ ಮೂಡುವುದು, ಏಕೆಂದರೆ ಅಂಥದ್ದೊಂದು ಅಂಚೆ ಚೀಟಿ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಭಾರತದಲ್ಲಿ ಶ್ರೀರಾಮ ಮಂದಿರದ ಕನಸು ನನಸಾಗುವುದು ಎಂಬ ಸೂಚನೆ ಸಿಕ್ಕಿದ್ದೇ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಕೋರ್ಟ್ನಲ್ಲಿ ನಿರಂತರ ಹೋರಾಟದ ಬಳಿಕ ಅಯೋಧ್ಯೆ ಶ್ರೀರಾಮನ ನೆಲ ಎಂಬ ತೀರ್ಪು ಬಂತು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಶುರುವಾಯಿತು, ಇದೀಗ ಜನವರಿ 22ರಕ್ಕೆ ರಾಮ ಮಂದಿರ ಲೋಕಾರ್ಪಣೆಯಾಗಲಿದೆ, ಶ್ರೀ ರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮ ಕಣ್ತುಂಬಿಕೊಳ್ಳುವ ಸೌಭಾಗ್ಯ ಶ್ರೀರಾಮ ಭಕ್ತರಿಗೆ ದೊರೆತಿದೆ.
57 ವರ್ಷಗಳ ಹಿಂದೆಯೇ 2024ರಲ್ಲಿ ರಾಮ ಮಂದಿರ ಉದ್ಘಾಟನೆಯ ಸೂಚನೆ
1967ರಲ್ಲಿ ನೇಪಾಳದಲ್ಲಿ ಅಂಚೆ ಚೀಟಿಯೊಂದು ಬಿಡುಗಡೆಯಾಗಿದೆ. ಅದರ ಫೋಟೋ ಇದೀಗ ಶ್ರೀರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ವೈರಲ್ ಆಗುತ್ತಿದೆ. ಇದು ನೇಪಾಳದಲ್ಲಿ ಬಿಡುಗಡೆಯಾದ ಅಂಚೆ ಚೀಟಿ. ಆ ಅಂಚೆಚೀಟಿಯ ವಿಶೇಷವೆಂದರೆ ಅದರಲ್ಲಿ ಶ್ರೀರಾಮ ಸೀತೆಯ ಚಿತ್ರವಿದೆ, ಅದರ ಕೆಳಗಡೆ ವಿ. ಎಸ್ ಸಂವತ್ಸರ 2024 ಎಂದು ಬರೆಯಲಾಗಿದೆ. ಈ ಅಂಚೆ ಚೀಟಿಯನ್ನು ಏಪ್ರಿಲ್ 18, 1967 ರಾಮ ನವಮಿಯಂದು ಬಿಡುಗಡೆ ಮಾಡಲಾಗಿದೆ.
ಆ ದಿನಾಂಕ ಗಮನ ಸೆಳೆದಿದೆ
ರಾಮ ನವಮಿಯಂದು ರಾಮ-ಸೀತೆಯ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆಯಾದದ್ದು ವಿಶೇಷವಲ್ಲ, ಆದರೆ ಆ ದಿನಾಂಕ ಗಮನ ಸೆಳೆದಿದೆ. ಅದನ್ನು ನೋಡಿದಾಗ 2024ರಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ ಎಂಬುವುದನ್ನು 57 ವರ್ಷಗಳ ಹಿಂದೆಯೇ ತಿಳಿದಿತ್ತೇ ಎಂಬ ಪ್ರಶ್ನೆ ಮೂಡುವಂತಿದೆ.
ಈ ಅಂಚೆ ಚೀಟಿಯ ವಿಶೇಷತೆಯೇನು?
ನೇಪಾಳ ಹಾಗೂ ಭಾರತದಲ್ಲಿ ಕೆಲವು ಕಡೆ ವಿಕ್ರಮ ಸಂವತ್ಸರ ಕ್ಯಾಲೆಂಡರ್ ಪಾಲಿಸಲಾಗುವುದು. ಈ ವಿಕ್ರಮ ಸಂವತ್ಸರ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್ಗಿಂತ 57 ವರ್ಷ ಮುಂದಿದೆ. ಅದರಲ್ಲಿ ರಾಮನವಮಿ 2024 ಎಂಬುವುದಿದೆ. ಇದನ್ನು ಏಪ್ರಿಲ್ 18, 1967ರಲ್ಲಿ ಬಿಡುಗಡೆಗೊಳಿಸಲಾಗಿದೆ.
ಈ ಅಪರೂಪದ ಅಂಚೆ ಚೀಟಿ ನಿಮಗೆ ಅಮೆಜಾನ್ನಲ್ಲೂ ಸಿಗಲಿದೆ. ಲಖನೌದ ಅಶೋಕ್ ಕುಮಾರ್ ಎಂಬವವರು ತಮ್ಮ ʼದಿ ಲಿಟಲ್ ಮ್ಯೂಸಿಯಂʼನಲ್ಲಿ ಇದನ್ನು ಇರಿಸಿದ್ದಾರೆ. ಈ ಅಂಚೆಚೀಟಿಯನ್ನು ಅಪರೂಪ ಎಂದು ಕರೆಯಲಾಗುತ್ತಿದೆ. ಏಕೆಂದರೆ ಇದರ ಇತಿಹಾಸದಲ್ಲಿ ರಹಸ್ಯ ಅಡಗಿದೆ.1967ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿಯಲ್ಲಿ ಶ್ರೀರಾಮ ಹಾಗೂ ಸೀತೆಯಿದೆ, ಆವಾಗ ಇದೆರ ಬೆಲೆ 15 ಪೈಸೆ ಇತ್ತು.
ಕಾಕತಾಳೀಯ ಎಂಬಂತೆ 2024ರಲ್ಲಿಯೂ ಮಂದಿರ ಉದ್ಘಾಟನೆ
ವಿಕ್ರಮ ಸಂವತ್ಸರದ ಕ್ಯಾಲೆಂಡರ್ನ ಪ್ರಕಾರ ಮುದ್ರಿಸಲಾದ ಆ ಅಂಚೆ ಚೀಟಿಯಂತೆ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ 2024ರಲ್ಲಿಯೇ ರಾಮ ಮಂದಿರ ಉದ್ಗಾಟನೆ ನಡೆಯಲಿದೆ.



Click it and Unblock the Notifications











