Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
57 ವರ್ಷಗಳ ಹಿಂದೆಯೇ 2024 ರಾಮ ಮಂದಿರದ ಉದ್ಘಾಟನೆ ಬಗ್ಗೆ ಸೂಚನೆ ನೀಡಿತ್ತೇ ನೇಪಾಳದ ಆ ಅಂಚೆ ಚೀಟಿ
ಅಯೋಧ್ಯೆಯಲ್ಲಿ ಜನವರಿ 22ಕ್ಕೆ ಪ್ರಾಣಪ್ರತಿಷ್ಠಾಪನೆ. ಕೋಟ್ಯಾಂತರ ರಾಮ ಭಕ್ತರ ಕನಸು ನನಸಾಗಲಿದೆ, ಜನವರಿ 16ರಿಂದ ಅಮೃತ ಮಹೋತ್ಸವ ಆಚರಣೆ ಶುರುವಾಗಿದೆ. ಆದರೆ 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತದೆ ಎಂಬುವುದನ್ನು 1967ಯೇ ಹೇಳಲಾಗಿತ್ತೇ, ಅದರಲ್ಲೂ ನಮ್ಮ ದೇಶದಲ್ಲಿ ಅಲ್ಲ ನೇಪಾಳದಲ್ಲಿ ಈ ರೀತಿ ಭವಿಷ್ಯ ಹೇಳಲಾಗಿತ್ತೇ? ಎಂಬ ಪ್ರಶ್ನೆ ಮೂಡುವುದು, ಏಕೆಂದರೆ ಅಂಥದ್ದೊಂದು ಅಂಚೆ ಚೀಟಿ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಭಾರತದಲ್ಲಿ ಶ್ರೀರಾಮ ಮಂದಿರದ ಕನಸು ನನಸಾಗುವುದು ಎಂಬ ಸೂಚನೆ ಸಿಕ್ಕಿದ್ದೇ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಕೋರ್ಟ್ನಲ್ಲಿ ನಿರಂತರ ಹೋರಾಟದ ಬಳಿಕ ಅಯೋಧ್ಯೆ ಶ್ರೀರಾಮನ ನೆಲ ಎಂಬ ತೀರ್ಪು ಬಂತು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಶುರುವಾಯಿತು, ಇದೀಗ ಜನವರಿ 22ರಕ್ಕೆ ರಾಮ ಮಂದಿರ ಲೋಕಾರ್ಪಣೆಯಾಗಲಿದೆ, ಶ್ರೀ ರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮ ಕಣ್ತುಂಬಿಕೊಳ್ಳುವ ಸೌಭಾಗ್ಯ ಶ್ರೀರಾಮ ಭಕ್ತರಿಗೆ ದೊರೆತಿದೆ.
57 ವರ್ಷಗಳ ಹಿಂದೆಯೇ 2024ರಲ್ಲಿ ರಾಮ ಮಂದಿರ ಉದ್ಘಾಟನೆಯ ಸೂಚನೆ
1967ರಲ್ಲಿ ನೇಪಾಳದಲ್ಲಿ ಅಂಚೆ ಚೀಟಿಯೊಂದು ಬಿಡುಗಡೆಯಾಗಿದೆ. ಅದರ ಫೋಟೋ ಇದೀಗ ಶ್ರೀರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ವೈರಲ್ ಆಗುತ್ತಿದೆ. ಇದು ನೇಪಾಳದಲ್ಲಿ ಬಿಡುಗಡೆಯಾದ ಅಂಚೆ ಚೀಟಿ. ಆ ಅಂಚೆಚೀಟಿಯ ವಿಶೇಷವೆಂದರೆ ಅದರಲ್ಲಿ ಶ್ರೀರಾಮ ಸೀತೆಯ ಚಿತ್ರವಿದೆ, ಅದರ ಕೆಳಗಡೆ ವಿ. ಎಸ್ ಸಂವತ್ಸರ 2024 ಎಂದು ಬರೆಯಲಾಗಿದೆ. ಈ ಅಂಚೆ ಚೀಟಿಯನ್ನು ಏಪ್ರಿಲ್ 18, 1967 ರಾಮ ನವಮಿಯಂದು ಬಿಡುಗಡೆ ಮಾಡಲಾಗಿದೆ.
ಆ ದಿನಾಂಕ ಗಮನ ಸೆಳೆದಿದೆ
ರಾಮ ನವಮಿಯಂದು ರಾಮ-ಸೀತೆಯ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆಯಾದದ್ದು ವಿಶೇಷವಲ್ಲ, ಆದರೆ ಆ ದಿನಾಂಕ ಗಮನ ಸೆಳೆದಿದೆ. ಅದನ್ನು ನೋಡಿದಾಗ 2024ರಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ ಎಂಬುವುದನ್ನು 57 ವರ್ಷಗಳ ಹಿಂದೆಯೇ ತಿಳಿದಿತ್ತೇ ಎಂಬ ಪ್ರಶ್ನೆ ಮೂಡುವಂತಿದೆ.
ಈ ಅಂಚೆ ಚೀಟಿಯ ವಿಶೇಷತೆಯೇನು?
ನೇಪಾಳ ಹಾಗೂ ಭಾರತದಲ್ಲಿ ಕೆಲವು ಕಡೆ ವಿಕ್ರಮ ಸಂವತ್ಸರ ಕ್ಯಾಲೆಂಡರ್ ಪಾಲಿಸಲಾಗುವುದು. ಈ ವಿಕ್ರಮ ಸಂವತ್ಸರ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್ಗಿಂತ 57 ವರ್ಷ ಮುಂದಿದೆ. ಅದರಲ್ಲಿ ರಾಮನವಮಿ 2024 ಎಂಬುವುದಿದೆ. ಇದನ್ನು ಏಪ್ರಿಲ್ 18, 1967ರಲ್ಲಿ ಬಿಡುಗಡೆಗೊಳಿಸಲಾಗಿದೆ.
ಈ ಅಪರೂಪದ ಅಂಚೆ ಚೀಟಿ ನಿಮಗೆ ಅಮೆಜಾನ್ನಲ್ಲೂ ಸಿಗಲಿದೆ. ಲಖನೌದ ಅಶೋಕ್ ಕುಮಾರ್ ಎಂಬವವರು ತಮ್ಮ ʼದಿ ಲಿಟಲ್ ಮ್ಯೂಸಿಯಂʼನಲ್ಲಿ ಇದನ್ನು ಇರಿಸಿದ್ದಾರೆ. ಈ ಅಂಚೆಚೀಟಿಯನ್ನು ಅಪರೂಪ ಎಂದು ಕರೆಯಲಾಗುತ್ತಿದೆ. ಏಕೆಂದರೆ ಇದರ ಇತಿಹಾಸದಲ್ಲಿ ರಹಸ್ಯ ಅಡಗಿದೆ.1967ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿಯಲ್ಲಿ ಶ್ರೀರಾಮ ಹಾಗೂ ಸೀತೆಯಿದೆ, ಆವಾಗ ಇದೆರ ಬೆಲೆ 15 ಪೈಸೆ ಇತ್ತು.
ಕಾಕತಾಳೀಯ ಎಂಬಂತೆ 2024ರಲ್ಲಿಯೂ ಮಂದಿರ ಉದ್ಘಾಟನೆ
ವಿಕ್ರಮ ಸಂವತ್ಸರದ ಕ್ಯಾಲೆಂಡರ್ನ ಪ್ರಕಾರ ಮುದ್ರಿಸಲಾದ ಆ ಅಂಚೆ ಚೀಟಿಯಂತೆ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ 2024ರಲ್ಲಿಯೇ ರಾಮ ಮಂದಿರ ಉದ್ಗಾಟನೆ ನಡೆಯಲಿದೆ.



Click it and Unblock the Notifications
