Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಕೋವಿಡ್ 19 ಬಳಿಕ ಬಂದ ಮಧುಮೇಹ ಶಾಶ್ವತವಲ್ಲ: ಅಧ್ಯಯನ
ಕೋವಿಡ್ 19 ಸೋಂಕಿನಿಂದ ಚೇತರಿಸಿದವರಿಗೆ ಮಧುಮೇಹದ ಆತಂಕ ಉಂಟಾಗಿತ್ತು. ಹೌದು, ಕೋವಿಡ್ 19 ಸೋಂಕಿನಿಂದ ಚೇತರಿಸಿದವರಲ್ಲಿ ಅನೇಕರಿಗೆ ಮಧುಮೇಹ ಸಮಸ್ಯೆ ಕಂಡು ಬಂದಿತ್ತು. ಆದರೆ ಹಾಗೆ ಉಂಟಾಗಿದ್ದರೆ ಭಯ ಪಡಬೇಕಾಗಿಲ್ಲ, ಅದರಿಂದ ಗುಣಮುಖರಾಗುವಿರಿ ಎಂದು ಎಂಜಿಹೆಚ್(Massachusetts General Hospita)ಹೇಳಿರುವುದರಿಂದ ಹೆಚ್ಚಿನವರಿಗೆ ಸಮಧಾನ ಉಂಟಾಗಿದೆ.
ಎಂಜಿಹೆಚ್ ಆಸ್ಪತ್ರೆ ಅಧ್ಯಯನ ನಡೆಸಿ ಈ ವರದಿ ನೀಡಿದೆ. ಆ ವರದಿ ಪ್ರಕಾರ ಕೋವಿಡ್ 19 ಸೋಂಕಿನ ಬಳಿಕ ಕಾಣಿಸಿಕೊಳ್ಳುವ ಮಧುಮೇಹ ಶಾಶ್ವತವಲ್ಲ ಎಂದು ಹೇಳಿದೆ.

ಕೋವಿಡ್-19 ಬಳಿಕ ಮಧುಮೇಹಕ್ಕೆ ಕಾರಣವೇನು?
ಕೋವಿಡ್ 19 ಸೋಂಕು ತಗುಲಿದಾಗ ಹೆಚ್ಚಿನವರು ಅತ್ಯಧಿಕ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿರುತ್ತದೆ. ಈ ರೀತಿ ಬಂದ ಮಧುಮೇಹ ಶಾಶ್ವತವಾಗಿ ಉಳಿಯುವುದಿಲ್ಲ. ಸ್ವಲ್ಪ ಸಮಯದ ಬಳಿಕ ಸರಿಹೋಗುವುದು.

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಲು ಸ್ಟಿರಾಯ್ಡ್ ಕೂಡ ಕಾರಣ
ಕೋವಿಡ್ 19 ವೈರಸ್ ತಗುಲಿದಾಗ ರೋಗಿಗಳು ಬೇಗನೆ ಚೇತರಿಸಿಕೊಳ್ಳುವಂತೆ ಮಾಡಲು ಸ್ಟಿರಾಯ್ಡ್ ನೀಡಲಾಗುತ್ತಿತ್ತು. ಇದು ಕೂಡ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಎಂದು ಕಾರಣ ಎಂಬುವುದನ್ನು ತಜ್ಞರು ಹೇಳಿದ್ದಾರೆ.

ಕೆಲವರಿಗೆ ಮಧುಮೇಹ ಇದೆ ಎಂಬುವುದು ಕೋವಿಡ್ ಚಿಕಿತ್ಸೆ ಸಮಯದಲ್ಲಿ ಗೊತ್ತಾಗಿದ್ದು
ಕೆಲವರಲ್ಲಿ ಕೋವಿಡ್ 19ನ ಬಳಿಕ ಮಧುಮೇಹ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಅದಕ್ಕಿಂತ ಮೊದಲೇ ಇತ್ತು, ಆದರೆ ಅವರು ಪರೀಕ್ಷೆ ಮಾಡಿರಲಿಲ್ಲ, ಕೋವಿಡ್ 19ಗೆ ಚಿಕಿತ್ಸೆ ನೀಡುವಾಗ ಅವರಿಗೆ ಮಧುಮೇಹ ಇರುವುದು ತಿಳಿದುಬಂತು ಎಂದು
ಡಾ. ಮಹೇಶ್ ಡಿ ಎಂ (Consultant, Endocrinology, Aster CMI Hospital) ಹೇಳಿದ್ದಾರೆ.

ಕೋವಿಡ್ 19 ನಂತರ ಬಂದ ಮಧುಮೇಹ ಕಡಿಮೆಯಾಗಬಹುದು
ಕೋವಿಡ್ 19 ನಂತರ ಮಧುಮೇಹ ಬಂದರೆ ಕೆಲವರಿಗೆ ಮೆಡಿಷನ್ ಮೂಲಕ ಇನ್ನು ಕೆಲವರಿಗೆ ಇನ್ಸುಲಿನ್ ಮೂಲಕ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಹೆಚ್ಚಿನವರಿಗೆ ಮಧುಮೇಹ ನಿಯಂತ್ರಣಕ್ಕೆ ಬಂದು ಮುಂದೆ ಚಿಕಿತ್ಸೆ ಅಗ್ಯತವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಕೆಲವರಿಗೆ ಮಧುಮೇಹ ಚಿಕಿತ್ಸೆ ಮುಂದುರೆಸಬೇಕಾಗುತ್ತದೆ. ಅದರ ಕುರಿತು ವೈದ್ಯರು ಪರಿಶೀಲಿಸಿ ಮಾಹಿತಿ ನಿಡುತ್ತಾರೆ.



Click it and Unblock the Notifications