Latest Updates
-
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ
ಕೋವಿಡ್ 19 ಬಳಿಕ ಬಂದ ಮಧುಮೇಹ ಶಾಶ್ವತವಲ್ಲ: ಅಧ್ಯಯನ
ಕೋವಿಡ್ 19 ಸೋಂಕಿನಿಂದ ಚೇತರಿಸಿದವರಿಗೆ ಮಧುಮೇಹದ ಆತಂಕ ಉಂಟಾಗಿತ್ತು. ಹೌದು, ಕೋವಿಡ್ 19 ಸೋಂಕಿನಿಂದ ಚೇತರಿಸಿದವರಲ್ಲಿ ಅನೇಕರಿಗೆ ಮಧುಮೇಹ ಸಮಸ್ಯೆ ಕಂಡು ಬಂದಿತ್ತು. ಆದರೆ ಹಾಗೆ ಉಂಟಾಗಿದ್ದರೆ ಭಯ ಪಡಬೇಕಾಗಿಲ್ಲ, ಅದರಿಂದ ಗುಣಮುಖರಾಗುವಿರಿ ಎಂದು ಎಂಜಿಹೆಚ್(Massachusetts General Hospita)ಹೇಳಿರುವುದರಿಂದ ಹೆಚ್ಚಿನವರಿಗೆ ಸಮಧಾನ ಉಂಟಾಗಿದೆ.
ಎಂಜಿಹೆಚ್ ಆಸ್ಪತ್ರೆ ಅಧ್ಯಯನ ನಡೆಸಿ ಈ ವರದಿ ನೀಡಿದೆ. ಆ ವರದಿ ಪ್ರಕಾರ ಕೋವಿಡ್ 19 ಸೋಂಕಿನ ಬಳಿಕ ಕಾಣಿಸಿಕೊಳ್ಳುವ ಮಧುಮೇಹ ಶಾಶ್ವತವಲ್ಲ ಎಂದು ಹೇಳಿದೆ.

ಕೋವಿಡ್-19 ಬಳಿಕ ಮಧುಮೇಹಕ್ಕೆ ಕಾರಣವೇನು?
ಕೋವಿಡ್ 19 ಸೋಂಕು ತಗುಲಿದಾಗ ಹೆಚ್ಚಿನವರು ಅತ್ಯಧಿಕ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿರುತ್ತದೆ. ಈ ರೀತಿ ಬಂದ ಮಧುಮೇಹ ಶಾಶ್ವತವಾಗಿ ಉಳಿಯುವುದಿಲ್ಲ. ಸ್ವಲ್ಪ ಸಮಯದ ಬಳಿಕ ಸರಿಹೋಗುವುದು.

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಲು ಸ್ಟಿರಾಯ್ಡ್ ಕೂಡ ಕಾರಣ
ಕೋವಿಡ್ 19 ವೈರಸ್ ತಗುಲಿದಾಗ ರೋಗಿಗಳು ಬೇಗನೆ ಚೇತರಿಸಿಕೊಳ್ಳುವಂತೆ ಮಾಡಲು ಸ್ಟಿರಾಯ್ಡ್ ನೀಡಲಾಗುತ್ತಿತ್ತು. ಇದು ಕೂಡ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಎಂದು ಕಾರಣ ಎಂಬುವುದನ್ನು ತಜ್ಞರು ಹೇಳಿದ್ದಾರೆ.

ಕೆಲವರಿಗೆ ಮಧುಮೇಹ ಇದೆ ಎಂಬುವುದು ಕೋವಿಡ್ ಚಿಕಿತ್ಸೆ ಸಮಯದಲ್ಲಿ ಗೊತ್ತಾಗಿದ್ದು
ಕೆಲವರಲ್ಲಿ ಕೋವಿಡ್ 19ನ ಬಳಿಕ ಮಧುಮೇಹ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಅದಕ್ಕಿಂತ ಮೊದಲೇ ಇತ್ತು, ಆದರೆ ಅವರು ಪರೀಕ್ಷೆ ಮಾಡಿರಲಿಲ್ಲ, ಕೋವಿಡ್ 19ಗೆ ಚಿಕಿತ್ಸೆ ನೀಡುವಾಗ ಅವರಿಗೆ ಮಧುಮೇಹ ಇರುವುದು ತಿಳಿದುಬಂತು ಎಂದು
ಡಾ. ಮಹೇಶ್ ಡಿ ಎಂ (Consultant, Endocrinology, Aster CMI Hospital) ಹೇಳಿದ್ದಾರೆ.

ಕೋವಿಡ್ 19 ನಂತರ ಬಂದ ಮಧುಮೇಹ ಕಡಿಮೆಯಾಗಬಹುದು
ಕೋವಿಡ್ 19 ನಂತರ ಮಧುಮೇಹ ಬಂದರೆ ಕೆಲವರಿಗೆ ಮೆಡಿಷನ್ ಮೂಲಕ ಇನ್ನು ಕೆಲವರಿಗೆ ಇನ್ಸುಲಿನ್ ಮೂಲಕ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಹೆಚ್ಚಿನವರಿಗೆ ಮಧುಮೇಹ ನಿಯಂತ್ರಣಕ್ಕೆ ಬಂದು ಮುಂದೆ ಚಿಕಿತ್ಸೆ ಅಗ್ಯತವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಕೆಲವರಿಗೆ ಮಧುಮೇಹ ಚಿಕಿತ್ಸೆ ಮುಂದುರೆಸಬೇಕಾಗುತ್ತದೆ. ಅದರ ಕುರಿತು ವೈದ್ಯರು ಪರಿಶೀಲಿಸಿ ಮಾಹಿತಿ ನಿಡುತ್ತಾರೆ.



Click it and Unblock the Notifications











