Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕೆಮ್ಮು ನಿವಾರಣೆಗೆ ಜೇನುತುಪ್ಪ ಮದ್ದು

ಮಾನವ ದೇಹವನ್ನೇ ಅವರು ತಮ್ಮ ಔಷಧಿಗಳಿಗೆ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿರುವ ವೈದ್ಯರು ಹೇಳುವುದು ತಪ್ಪೆಂದು ಹೇಳುತ್ತಿಲ್ಲ. ಅನೇಕ ಬಾರಿ ಕಮ್ಮಿನ ಅಗಾಧತೆ, ಕೆಮ್ಮುತ್ತಿರುವ ರೀತಿ, ಬಂದಿರುವ ಕಾರಣಗಳನ್ನು ನೋಡಿ ಲೆಕ್ಕಹಾಕಿ ಕೊಡುವ ಔಷಧಿಯಿಂದ ಕಡಿಮೆಯಾಗಲೂಬಹುದು. ಎಲ್ಲಕ್ಕಿಂತ ಹೆಚ್ಚಾಗಿ ವೈದ್ಯರ ಮೇಲೆ ನಂಬಿಕೆಯಿಟ್ಟೇ ಅವರಲ್ಲಿಗೆ ಹೋಗಬೇಕು.
ಇಲ್ಲಿ ವಿಷಯವೇನೆಂದರೆ, ಆಯಾ ಖಾಯಿಲೆಗಳಿಗೆ ಬೇಕಾಗಿರುವ ಔಷಧಿಗಳು ನಮ್ಮ ಬಳಿಯೇ ಇರುವಾಗ, ಅಂದರೆ ಮನೆಯಲ್ಲಿಯೇ ದೊರೆಯುತ್ತಿರುವಾಗ ತಕ್ಕ ರೀತಿಯಲ್ಲಿ ಬಳಸಿಕೊಳ್ಳುವುದು ಜಾಣತನ. ಔಷಧಿಯಿಲ್ಲದೆ ಬದುಕುವುದನ್ನು ಕಲಿಯುವುದನ್ನು ನಾವು ರೂಢಿಸಿಕೊಳ್ಳಬೇಕು. ನಾವು ರೂಢಿಸಿಕೊಂಡ ಹಾಗೆ ನಮ್ಮ ದೇಹವೂ ಪ್ರತಿಸ್ಪಂದಿಸುತ್ತದೆ.
ಪುಟ್ಟ ಮಕ್ಕಳಿಗೆ ಔಷಧಿ ಕುಡಿಸುವಾಗ ಕೈಕಾಲು ಮೂಗು ಗಟ್ಟಿಯಾಗಿ ಹಿಡಿದು ಹಿಂಸಿಸುವ ಬದಲು, ಕೆಮ್ಮು ಬಂದಾಗ ಬೆಚ್ಚಗಿನ ನೀರಲ್ಲಿ ಜೇನುತುಪ್ಪವನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕೆಲಕಾಲ ನಿರಂತರವಾಗಿ ನೀಡಿದರೆ ಮಗುವೂ ಖುಷಿಯಿಂದ ತೆಗೆದುಕೊಳ್ಳುತ್ತದೆ, ಕೆಮ್ಮು ಕೂಡ ಮಂಗಮಾಯವಾಗಿರುತ್ತದೆ. ಮಕ್ಕಳು ಮಾತ್ರವಲ್ಲ ಯಾವುದೇ ವಯಸ್ಸಿನವರು ಕೆಮ್ಮಿಗೆ ಜೇನುತುಪ್ಪವನ್ನು ಬಳಸಬಹುದು. ನೈಸರ್ಗಿಕವಾಗಿ ದೊರೆಯುವ ಜೇನುತುಪ್ಪಕ್ಕೆ ಆಬಗೆಯ ತಾಕತ್ತಿದೆ. ಕೆಮ್ಮು ನಮ್ಮನ್ನು ಜಬಡಿ ಹಾಕುವ ಮೊದಲೇ, ಪ್ರಾರಂಭಿಕ ಹಂತದಲ್ಲಿರುವಾಗ ಜೇನುತುಪ್ಪ ಸೇವಿಸಿದರೆ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.
ಜೇನುತುಪ್ಪ ವಿಪರೀತ ಹೀಟು, ಜಾಸ್ತಿ ತೆಗೆದುಕೊಂಡರೆ ದೇಹದ ಕಾವು ಏರುತ್ತದೆ ಎಂದು ಕೆಲವರು ಜೇನುತುಪ್ಪವನ್ನು ದೂರವೇ ಇಟ್ಟಿರುತ್ತಾರೆ. ಒಂದು ಮಿತವಾದ ಅಳತೆಯಲ್ಲಿ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ದೇಹಕ್ಕೆ ಉಷ್ಣವಾಗುವುದಿಲ್ಲ. ಬದಲಿಗೆ ಆರೋಗ್ಯ ಸುಧಾರಿಸುತ್ತಾ ಸಾಗುತ್ತದೆ. ಜೇನುತುಪ್ಪದಲ್ಲಿ ರಕ್ತಶುದ್ಧಿ ಮಾಡುವ ಗುಣವೂ ಇದೆ. ನಿಯಮಿತವಾಗಿ ಜೇನುತುಪ್ಪುನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.
ಮನೆಹಿತ್ತಲಲ್ಲಿ ಬಿಟ್ಟ ಕೃಷ್ಣತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ. ಈ ಕಾಫ್ ಸಿರಪ್ಪಿನಿಂದ ಕಡಿಮೆಯಾಗುತ್ತಿಲ್ಲ ಎಂದು ಅದು, ಅದರಿಂದ ಕಡಿಮೆಯಾಗುತ್ತಿಲ್ಲ ಎಂದು ಮತ್ತೊಂದು ಕಾಫ್ ಸಿರಪ್ ಸೇವಿಸುವ ಬದಲು ಮನೆಯೌಷಧಿಗೆ ಮೊರೆ ಹೋದರೆ ಹಣವೂ ಉಳಿತಾಯವಾಗುತ್ತದೆ ಮತ್ತು ಮನಸಿಗೂ ನೆಮ್ಮದಿ ಇರುತ್ತದೆ. ಪ್ರಯತ್ನಿಸಿ ನೋಡಿ. ಆದರೆ, ಈ ವಿಧದಲ್ಲಿಯೂ ನಂಬಿಕೆಯಿರಲಿ.
ಎಲ್ಲಕ್ಕಿಂತ ಹೆಚ್ಚಾಗಿ ಕೆಮ್ಮು ಬಂದಾಗ, ತಣ್ಣೀರು ಸೇವಿಸುವುದು, ತಂಪು ಪಾನೀಯ ಸೇವಿಸುವುದು, ಕರಿದ ಪದಾರ್ಥಗಳನ್ನು ಎಗ್ಗಿಲ್ಲದೆ ತಿನ್ನುವುದು, ದೂಳಿಗೆ ಒಡ್ಡಿಕೊಳ್ಳುವುದು, ತಿಳಿವಳಿಕೆ ಬಂದವರಾಗಿದ್ದರೆ ಧೂಮಪಾನ ಮಾಡುವುದು ಕಡಿಮೆ ಮಾಡಬೇಕು ಮತ್ತು ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ಮರೆಯಬಾರದು.
ಸುಮ್ಕೆ ತಮಾಷಿಗೆ
ಒಬ್ಬ ಸಿಕ್ಕಾಪಟ್ಟೆ ಕೆಮ್ಮುವ ರೋಗಿ ಡಾಕ್ಟರ್ ಬಳಿ ಬರುತ್ತಾನೆ. ಡಾಕ್ಟರು ನೀಡಿದ ನಾನಾ ಬಗೆಯ ಕೆಮ್ಮಿನ ಔಷಧಿ ಸೇವಿಸಿದರೂ ಕಡಿಮೆಯಾಗುವುದಿಲ್ಲ. ಕೆಲ ತಿಂಗಳ ನಂತರ ಮತ್ತೆ ವೈದ್ಯರ ಬಳಿ ಬರುತ್ತಾನೆ. ವೈದ್ಯರಿಗೆ ಆಶ್ಚರ್ಯವೆಂಬಂತೆ ಕೆಮ್ಮು ಕಡಿಮೆಯಾಗಿರುತ್ತದೆ.
ವೈದ್ಯ : ಏನಯ್ಯಾ, ನೋಡು ನಾನು ಕೊಟ್ಟ ಔಷಧಿಯ ಕಮಾಲ್. ಕಡಿಮೆಯಾಯ್ತಲ್ಲ ಕೆಮ್ಮು.
ರೋಗಿ : ಕೆಮ್ಮು ಕಡಿಮೆಯಾಗಿದ್ದು ನಿಮ್ಮ ಔಷಧಿಯಿಂದಲ್ಲ ವೈದ್ಯರೆ, ಕೆಮ್ಮಿ ಕೆಮ್ಮಿ ವಿಪರೀತ ಸುಸ್ತಾಗಿ ಕೆಮ್ಮಲು ಸಾಧ್ಯವೇ ಆಗಲಿಲ್ಲ. ಹಾಗಾಗಿ ಕೆಮ್ಮು ಕಡಿಮೆಯಾಯಿತು!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications