Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಶೀತ ಸಮಸ್ಯೆಗೆ ಮನೆಮದ್ದು ಮಾಡಿದ ಪೋಷಕರು: ಪ್ರಾಣ ಕಳೆದುಕೊಂಡ 8 ತಿಂಗಳ ಮಗು!!
ಮಳೆಗಾಲದ ಸಮಯದಲ್ಲಿ ಚಿಕ್ಕ ಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ಸಾಮಾನ್ಯ. ಅದ್ರಲ್ಲೂ ಮಕ್ಕಳು ಬಹುಬೇಗ ಅನಾರೋಗ್ಯಕ್ಕೆ ಒಳಗಾಗುವುದು ನೊಡಬಹುದು. ಆದ್ರೆ ಎಲ್ಲಾ ಸಮಯದಲ್ಲೂ ನಾವು ಶೀತ, ಕೆಮ್ಮು, ಜ್ವರ ಇದ್ದಾಗ ಆಸ್ಪತ್ರೆಗೆ ತೆರಳುವುದು ಇಲ್ಲವೆ ತಕ್ಷಣ ಮೆಡಿಕಲ್ನಿಂದ ಮಾತ್ರೆಗಳ ತಂದು ಸೇವಿಸುವುದಿಲ್ಲ. ಬದಲಿಗೆ ಮನೆ ಮದ್ದಿನ ಮೊರೆ ಹೋಗುವುದು ನೋಡಬಹುದು.
ಶೀತ, ಕೆಮ್ಮಿನಂತಹ ಸಣ್ಣ ಪುಟ್ಟ ಸಮಸ್ಯೆಗಳ ಬಗೆಹರಿಸಲು ನಾವು ಮನೆಯಲ್ಲೇ ಮದ್ದು ಮಾಡುತ್ತೇವೆ. ಅದು ಪರಿಣಾಮಕಾರಿಯೂ ಹೌದು. ಹಾಗೆ ಈ ಮನೆ ಮದ್ದುಗಳು ಕೆಲವೊಮ್ಮೆ ಅಡ್ಡಪರಿಣಾಮ ಉಂಟು ಮಾಡುವುದು ಸಹ ನೋಡಬಹುದು. ಅದ್ರಲ್ಲೂ ಇಲ್ಲೊಂದು ಘಟನೆಯಲ್ಲಿ 8 ತಿಂಗಳ ಮಗುವೊಂದು ಮನೆಮದ್ದಿನ ಪರಿಣಾಮ ಪ್ರಾಣ ಕಳೆದುಕೊಂಡಿದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂತಹದೊಂದು ಘಟನೆ ವರದಿಯಾಗಿದೆ ಉಸಿರಾಟ ಸಮಸ್ಯೆಗೆ ತುತ್ತಾಗಿದ್ದ 8 ತಿಂಗಳ ಮಗುವಿಗೆ ಮನೆಮದ್ದು ನೀಡಿದ ಬಳಿಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಚೆನ್ನೈನ ವಲ್ಲವಬ್ ನಗರದಲ್ಲಿ 8 ತಿಂಗಳ ಮಗುವಿಗೆ ಶೀತ ಹಾಗೂ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ ಮನೆಯಲ್ಲಿದ್ದ ಮೆಂಥಾಲ್ ಮಿಶ್ರತ ಬಾಮ್, ಕರ್ಪೂರದ ನೀರಿನ ಮಿಶ್ರಣ ತಯಾರಿಸಲಾಗಿತ್ತು.
ಇದು ಬಹಳ ಘಾಟು ಮತ್ತು ರಾಸಾಯನಿಕ ಕ್ರಿಯೆಗೆ ಒಳಗಾಗಿ ಮತ್ತಷ್ಟು ಸುವಾಸೆ ತರಿಸುತ್ತದೆ. ಇದನ್ನು ಮಗುವಿನ ಮೂಗಿನ ಬಳಿ ಹಚ್ಚಲಾಗಿತ್ತು. ಈ ಗಾಳಿ ಉಸಿರಾಡಿದರೆ ಕಟ್ಟಿರುವ ಮೂಗು ಸರಿಯಾಗಲಿದೆ, ಹಾಗೆ ಶೀತ ಕಡಿಮೆಯಾಗಲಿದೆ ಎಂದು ಭಾವಿಸಿದ್ದರು, ಆದ್ರೆ ಉಸಿರಾಟ ಸಮಸ್ಯೆ ತೀವ್ರಗೊಂಡಿತ್ತು. ತಕ್ಷಣ ಮಗುವನ್ನು ಹತ್ತಿರದ ಎಗ್ಮೋರ್ ಮಕ್ಕಳ ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೆ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ಹೇಳೋದೇನು?
ಈ ಘಟನೆ ಸಂಬಂಧವಾಗಿ ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ. ಆದ್ರೆ ಆಸ್ಪತ್ರೆಯ ಮಕ್ಕಳ ತಜ್ಞರಾಗಿರುವ ಡಾ. ವಿಜಯ್ ಪ್ರಕಾರ, ಮಕ್ಕಳಿಗೆ ಈ ರೀತಿಯ ಉತ್ಪನ್ನಗಳನ್ನು ರೆಕಮೆಂಡ್ ಮಾಡುವುದಿಲ್ಲವಂತೆ. ಈ ಉತ್ಪನ್ನಗಳು ರೋಗ ಲಕ್ಷಣಗಳಿಗೆ ಪರಿಹಾರ ನೀಡಬಹುದಷ್ಟೇ ಆದರೆ ರೋಗವನ್ನು ಪರಿಹರಿಸುವುದಿಲ್ಲ. ಅವು ಶಿಶುಗಳಿಗೆ ಸೂಕ್ತವಲ್ಲ. ಕರ್ಪೂರ, ವಿಕ್ಸ್ ಸಂಬಂಧಿ ಸಾವುಗಳ ಬಹಳ ಅಪರೂಪ ಎಂದು ಅವರು ಹೇಳಿದ್ದಾರೆ.
ಚಿಕ್ಕ ಮಕ್ಕಳಲ್ಲಿ ವಿಶೇಷವಾಗಿ ಶಿಶುಗಳಲ್ಲಿ, ಹಠಾತ್ ಸಾವುಗಳು ಹೆಚ್ಚಾಗಿ ತೀವ್ರವಾದ ಸೋಂಕುಗಳ ಸಮಯದಲ್ಲಿ ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿರಲಿದೆ. ಮಗುವಿನಲ್ಲಿ ಉಸಿರಾಟ ಸಂಬಂಧಿ ಸಮಸ್ಯೆ ಇದ್ದಿರಬಹುದು. ಈ ಸಮಯದಲ್ಲಿ ಮನೆಮದ್ದು ನೀಡುವುದು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಹಾಗೆ ಮೂರು ವರ್ಷದೊಳಗಿನ ಮಕ್ಕಳಿಗೆ ಈ ರೀತಿ ಯಾವುದೇ ಮನೆಮದ್ದುಗಳ ಶಿಫಾರಸು ಮಾಡುವುದಿಲ್ಲ. ಕೆಲವು ತೀವ್ರ ವಾಸನೆ ಮಕ್ಕಳಲ್ಲಿನ ಕಿರಿದಾದ ವಾಯುಮಾರ್ಗಗಳ ಕೆರಳಿಸಬಹುದು. ಇದು ಉಸಿರಾಟ ಸಮಸ್ಯೆ ಹೆಚ್ಚಾಗಲು ಕಾರಣವಾಗಬಹುದು ಎಂದು ಡಾ ವಿಜಯ್ ಹೇಳಿದ್ದಾರೆ.
ಮನೆ ಮದ್ದು ಬದಲಿಗೆ ಬೇರೇನು ಮಾಡಬೇಕು?
ಮಕ್ಕಳಲ್ಲಿ ಈ ರೀತಿಯ ಅನಾರೋಗ್ಯ ಸಮಸ್ಯೆಗಳು ಎದುರಾದಾಗ ಮನೆಮದ್ದು ನೀಡುವುದನ್ನು ತಪ್ಪಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಹಾಗೆ ಓವರ್ ದಿ ಕೌಂಟರ್ ಔಷಧಿ ಕೂಡ ಬಳಸಬೇಡಿ ಎನ್ನುತ್ತಾರೆ. ಶಿಶುಗಳು ಹಾಗೆ ಮಕ್ಕಳಲ್ಲಿ ಈ ರೀತಿ ಸಮಸ್ಯೆಗಳಿದ್ದರೆ ನೇರವಾಗಿ ವೈದ್ಯರ ಬಳಿ ಕರೆದುಕೊಂಡು ಬರಬೇಕು ಎಂದು ಸಲಹೆ ನೀಡಲಾಗುತ್ತದೆ. ವೈದ್ಯರ ಶಿಫಾರಸಿನ ಮೇರೆಗೆ ಮನೆಯಲ್ಲಿ ಯಾವ ರೀತಿ ಮದ್ದುಗಳ ಬಳಸಬೇಕು ಎಂದು ಅರಿತುಕೊಳ್ಳಿ. ಶಿಶುಗಳ ದೇಹ ಮನೆಮದ್ದುಗಳ ಪರಿಣಾಮಗಳ ಎದುರಿಸುವಷ್ಟು ಶಕ್ತಿ ಪಡೆದಿರುವುದಿಲ್ಲ ಎಂದು ಡಾ. ವಿಜಯ್ ಹೇಳಿದ್ದಾರೆ.



Click it and Unblock the Notifications











