Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ತ್ವಚೆ ಹೀಗೆ ಬದಲಾದರೆ ನಿರ್ಲಕ್ಷ್ಯಬೇಡ, ಅದು ಮಧುಮೇಹದ ಲಕ್ಷಣವಾಗಿದೆ
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ನಮ್ಮ ದೇಹದಲ್ಲಿ ಹಲವು ಬದಲಾಣೆಗಳಾಗುತ್ತೆ, ಆದರೆ ಅದನ್ನು ಹೆಚ್ಚಿನವರು ಗಮನಿಸುವುದಿಲ್ಲ. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಅದು ತ್ವಚೆಯಲ್ಲೇ ಗೊತ್ತಾಗುತ್ತೆ.

ದೇಹದ ಸಕ್ಕರೆಯಂಶ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಾವುವು ಎಂದು ನೋಡೋಣ:

ದೇಹದ ಕೆಲವು ಭಾಗ ಕಪ್ಪಾಗುವುದು
ದೇಹದಲ್ಲಿ ಇನ್ಸುಲಿನ್ ಹೆಚ್ಚಾದರೆ ಕುತ್ತಿಗೆಯ ಹಿಂಭಾಗ, ಕಂಕುಳ , ಗುಪ್ತ ಭಾಗದಲ್ಲಿ ತುಂಬಾನೇ ಕಪ್ಪಾಗುತ್ತೆ. ಇದು ಮಧುಮೇಹದ ಆರಂಭಿಕ ಲಕ್ಷಣವಾಗಿದ್ದು ಇದನ್ನು ವೈದ್ಯಕೀಯ ಭಾಷೆಯಲ್ಲಿ acanthosis nigricans ಎಂದು ಕರೆಯಲಾಗುವುದು.

ಚರ್ಮ ದಪ್ಪಾಗುವುದು
ಕಾಲು ಹಾಗೂ ಕೈ ಬೆರಳಿನ ಹತ್ತಿರದ ತ್ವಚೆ/ ಚರ್ಮ ಮಂದವಾಗುವುದು, ಮೊದಲಿಗೆ ನಿಮ್ಮ ಕೈ ಹಿಂದುಗಡೆ ನಂತರ ಮಣಿಗಂಟು, ಮೊಣಕೈ ಭಾಗಗಳಲ್ಲಿ ಕಂಡು ಬರುವುದು ಕೆಲವರಿಗೆ ಇದು ಎದೆ, ಭುಜ, ಮುಖಕ್ಕೆ ಕೂಡ ಹರಡುವುದು.

ನರಹುಲಿ ಸ್ಕಿನ್ ಟ್ಯಾಗ್
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ತ್ವಚೆ ಬಣ್ಣದ್ದೇ ಚಿಕ್ಕ ತ್ವಚೆ ನರಗಳು ಏಳುತ್ತವೆ, ಇವುಗಳು ನಿಮ್ಮ ತ್ವಚೆಯ ಬಣ್ಣದಲ್ಲೇ ಇರುತ್ತದೆ, ಇವುಗಳು ಕ್ಯಾನ್ಸರ್ ಕಾರಕವಲ್ಲ.

ಗಾಯ ಒಣಗಲು ನಿಧಾನವಾಗುವುದು
ಒಂದು ಚಿಕ್ಕ ಗಾಯವಾದರೂ ಒಣಗಲು ತುಂಬಾ ದಿನಗಳು ತೆಗೆದುಕೊಳ್ಳುತ್ತಿವೆಯೇ?ಹಾಗಾದರೆ ನಿರ್ಲಕ್ಷ್ಯ ಮಾಡಬೇಡಿ, ಶುಗರ್ ಟೆಸ್ಟ್ ಮಾಡಿಸಿ.

ಬೆಡ್ಸೋರ್
ತ್ವಚೆಯ ಮೇಲೆ ಒತ್ತಡ ಬಿದ್ದಾಗ ಹಿಮ್ಮಡಿ, ಹಿಂಭಾಗ, ಬೆನ್ನು, ಮೊಣಕಾಲು ಭಾಗಗಳಲ್ಲಿಕಂಡು ಬರುತ್ತದೆ. ಈ ರೀತಿ ಕಣ್ಣಿಗೆ ಬಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.

ಡಯಾಬಿಟಿಕ್ ಡರ್ಮಾಪತಿ
ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಕಾಲಿನ ಪಾದದ ಕೆಳಭಾಗದಲ್ಲಿ ಕೆಂಪು ಅಥವಾ ಕಂದು ಬಣ್ಣ ಉಂಟಾಗುವುದು, ಈ ರೀತಿಯಾದಾಗ ಇದಕ್ಕೆ ಯಾವುದೇ ಪ್ರತ್ಯೇಕ ಚಿಕಿತ್ಸೆಯಿಲ್ಲ.
ಇದರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದರೂ ಕೂಡಲೇ ವೈದ್ಯರಿಗೆ ತೋರಿಸಿ, ಇದರಿಂದ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು.



Click it and Unblock the Notifications