Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ತ್ವಚೆ ಹೀಗೆ ಬದಲಾದರೆ ನಿರ್ಲಕ್ಷ್ಯಬೇಡ, ಅದು ಮಧುಮೇಹದ ಲಕ್ಷಣವಾಗಿದೆ
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ನಮ್ಮ ದೇಹದಲ್ಲಿ ಹಲವು ಬದಲಾಣೆಗಳಾಗುತ್ತೆ, ಆದರೆ ಅದನ್ನು ಹೆಚ್ಚಿನವರು ಗಮನಿಸುವುದಿಲ್ಲ. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಅದು ತ್ವಚೆಯಲ್ಲೇ ಗೊತ್ತಾಗುತ್ತೆ.

ದೇಹದ ಸಕ್ಕರೆಯಂಶ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಾವುವು ಎಂದು ನೋಡೋಣ:

ದೇಹದ ಕೆಲವು ಭಾಗ ಕಪ್ಪಾಗುವುದು
ದೇಹದಲ್ಲಿ ಇನ್ಸುಲಿನ್ ಹೆಚ್ಚಾದರೆ ಕುತ್ತಿಗೆಯ ಹಿಂಭಾಗ, ಕಂಕುಳ , ಗುಪ್ತ ಭಾಗದಲ್ಲಿ ತುಂಬಾನೇ ಕಪ್ಪಾಗುತ್ತೆ. ಇದು ಮಧುಮೇಹದ ಆರಂಭಿಕ ಲಕ್ಷಣವಾಗಿದ್ದು ಇದನ್ನು ವೈದ್ಯಕೀಯ ಭಾಷೆಯಲ್ಲಿ acanthosis nigricans ಎಂದು ಕರೆಯಲಾಗುವುದು.

ಚರ್ಮ ದಪ್ಪಾಗುವುದು
ಕಾಲು ಹಾಗೂ ಕೈ ಬೆರಳಿನ ಹತ್ತಿರದ ತ್ವಚೆ/ ಚರ್ಮ ಮಂದವಾಗುವುದು, ಮೊದಲಿಗೆ ನಿಮ್ಮ ಕೈ ಹಿಂದುಗಡೆ ನಂತರ ಮಣಿಗಂಟು, ಮೊಣಕೈ ಭಾಗಗಳಲ್ಲಿ ಕಂಡು ಬರುವುದು ಕೆಲವರಿಗೆ ಇದು ಎದೆ, ಭುಜ, ಮುಖಕ್ಕೆ ಕೂಡ ಹರಡುವುದು.

ನರಹುಲಿ ಸ್ಕಿನ್ ಟ್ಯಾಗ್
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ತ್ವಚೆ ಬಣ್ಣದ್ದೇ ಚಿಕ್ಕ ತ್ವಚೆ ನರಗಳು ಏಳುತ್ತವೆ, ಇವುಗಳು ನಿಮ್ಮ ತ್ವಚೆಯ ಬಣ್ಣದಲ್ಲೇ ಇರುತ್ತದೆ, ಇವುಗಳು ಕ್ಯಾನ್ಸರ್ ಕಾರಕವಲ್ಲ.

ಗಾಯ ಒಣಗಲು ನಿಧಾನವಾಗುವುದು
ಒಂದು ಚಿಕ್ಕ ಗಾಯವಾದರೂ ಒಣಗಲು ತುಂಬಾ ದಿನಗಳು ತೆಗೆದುಕೊಳ್ಳುತ್ತಿವೆಯೇ?ಹಾಗಾದರೆ ನಿರ್ಲಕ್ಷ್ಯ ಮಾಡಬೇಡಿ, ಶುಗರ್ ಟೆಸ್ಟ್ ಮಾಡಿಸಿ.

ಬೆಡ್ಸೋರ್
ತ್ವಚೆಯ ಮೇಲೆ ಒತ್ತಡ ಬಿದ್ದಾಗ ಹಿಮ್ಮಡಿ, ಹಿಂಭಾಗ, ಬೆನ್ನು, ಮೊಣಕಾಲು ಭಾಗಗಳಲ್ಲಿಕಂಡು ಬರುತ್ತದೆ. ಈ ರೀತಿ ಕಣ್ಣಿಗೆ ಬಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.

ಡಯಾಬಿಟಿಕ್ ಡರ್ಮಾಪತಿ
ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಕಾಲಿನ ಪಾದದ ಕೆಳಭಾಗದಲ್ಲಿ ಕೆಂಪು ಅಥವಾ ಕಂದು ಬಣ್ಣ ಉಂಟಾಗುವುದು, ಈ ರೀತಿಯಾದಾಗ ಇದಕ್ಕೆ ಯಾವುದೇ ಪ್ರತ್ಯೇಕ ಚಿಕಿತ್ಸೆಯಿಲ್ಲ.
ಇದರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದರೂ ಕೂಡಲೇ ವೈದ್ಯರಿಗೆ ತೋರಿಸಿ, ಇದರಿಂದ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು.



Click it and Unblock the Notifications