Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತ್ವಚೆ ಹೀಗೆ ಬದಲಾದರೆ ನಿರ್ಲಕ್ಷ್ಯಬೇಡ, ಅದು ಮಧುಮೇಹದ ಲಕ್ಷಣವಾಗಿದೆ
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ನಮ್ಮ ದೇಹದಲ್ಲಿ ಹಲವು ಬದಲಾಣೆಗಳಾಗುತ್ತೆ, ಆದರೆ ಅದನ್ನು ಹೆಚ್ಚಿನವರು ಗಮನಿಸುವುದಿಲ್ಲ. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಅದು ತ್ವಚೆಯಲ್ಲೇ ಗೊತ್ತಾಗುತ್ತೆ.

ದೇಹದ ಸಕ್ಕರೆಯಂಶ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಾವುವು ಎಂದು ನೋಡೋಣ:

ದೇಹದ ಕೆಲವು ಭಾಗ ಕಪ್ಪಾಗುವುದು
ದೇಹದಲ್ಲಿ ಇನ್ಸುಲಿನ್ ಹೆಚ್ಚಾದರೆ ಕುತ್ತಿಗೆಯ ಹಿಂಭಾಗ, ಕಂಕುಳ , ಗುಪ್ತ ಭಾಗದಲ್ಲಿ ತುಂಬಾನೇ ಕಪ್ಪಾಗುತ್ತೆ. ಇದು ಮಧುಮೇಹದ ಆರಂಭಿಕ ಲಕ್ಷಣವಾಗಿದ್ದು ಇದನ್ನು ವೈದ್ಯಕೀಯ ಭಾಷೆಯಲ್ಲಿ acanthosis nigricans ಎಂದು ಕರೆಯಲಾಗುವುದು.

ಚರ್ಮ ದಪ್ಪಾಗುವುದು
ಕಾಲು ಹಾಗೂ ಕೈ ಬೆರಳಿನ ಹತ್ತಿರದ ತ್ವಚೆ/ ಚರ್ಮ ಮಂದವಾಗುವುದು, ಮೊದಲಿಗೆ ನಿಮ್ಮ ಕೈ ಹಿಂದುಗಡೆ ನಂತರ ಮಣಿಗಂಟು, ಮೊಣಕೈ ಭಾಗಗಳಲ್ಲಿ ಕಂಡು ಬರುವುದು ಕೆಲವರಿಗೆ ಇದು ಎದೆ, ಭುಜ, ಮುಖಕ್ಕೆ ಕೂಡ ಹರಡುವುದು.

ನರಹುಲಿ ಸ್ಕಿನ್ ಟ್ಯಾಗ್
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ತ್ವಚೆ ಬಣ್ಣದ್ದೇ ಚಿಕ್ಕ ತ್ವಚೆ ನರಗಳು ಏಳುತ್ತವೆ, ಇವುಗಳು ನಿಮ್ಮ ತ್ವಚೆಯ ಬಣ್ಣದಲ್ಲೇ ಇರುತ್ತದೆ, ಇವುಗಳು ಕ್ಯಾನ್ಸರ್ ಕಾರಕವಲ್ಲ.

ಗಾಯ ಒಣಗಲು ನಿಧಾನವಾಗುವುದು
ಒಂದು ಚಿಕ್ಕ ಗಾಯವಾದರೂ ಒಣಗಲು ತುಂಬಾ ದಿನಗಳು ತೆಗೆದುಕೊಳ್ಳುತ್ತಿವೆಯೇ?ಹಾಗಾದರೆ ನಿರ್ಲಕ್ಷ್ಯ ಮಾಡಬೇಡಿ, ಶುಗರ್ ಟೆಸ್ಟ್ ಮಾಡಿಸಿ.

ಬೆಡ್ಸೋರ್
ತ್ವಚೆಯ ಮೇಲೆ ಒತ್ತಡ ಬಿದ್ದಾಗ ಹಿಮ್ಮಡಿ, ಹಿಂಭಾಗ, ಬೆನ್ನು, ಮೊಣಕಾಲು ಭಾಗಗಳಲ್ಲಿಕಂಡು ಬರುತ್ತದೆ. ಈ ರೀತಿ ಕಣ್ಣಿಗೆ ಬಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.

ಡಯಾಬಿಟಿಕ್ ಡರ್ಮಾಪತಿ
ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಕಾಲಿನ ಪಾದದ ಕೆಳಭಾಗದಲ್ಲಿ ಕೆಂಪು ಅಥವಾ ಕಂದು ಬಣ್ಣ ಉಂಟಾಗುವುದು, ಈ ರೀತಿಯಾದಾಗ ಇದಕ್ಕೆ ಯಾವುದೇ ಪ್ರತ್ಯೇಕ ಚಿಕಿತ್ಸೆಯಿಲ್ಲ.
ಇದರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದರೂ ಕೂಡಲೇ ವೈದ್ಯರಿಗೆ ತೋರಿಸಿ, ಇದರಿಂದ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು.



Click it and Unblock the Notifications
