Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
<font color="blue">ಭಾನುವಾರ ನೀಲಿಬಣ್ಣಕ್ಕೆ ತಿರುಗಲಿದೆ ತಾಜ್ ಮಹಲ್</font>

ಹೌದು. ವಿಶ್ವ ಮಧುಮೇಹ ದಿನ (ದಿ. 14.11-2011, ಸೋಮವಾರ)ದ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಪರಂಪರೆಯ ತಾಣ ತಾಜ್ ಮಹಲನ್ನು ನೀಲಿ ಬಣ್ಣದ ಲೈಟ್ ಗಳಿಂದ ಸಿಂಗರಿಸಿ ಇಡೀ ವಿಶ್ವಕ್ಕೇ ಸಂದೇಶ ರವಾನಿಸಲಾಗುವುದು.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಮಧುಮೇಹ ವಿರೋಧಿ ಕಾರ್ಯಕರ್ತರು ಭಾರತೀಯ ಪುರಾತತ್ವ ಇಲಾಖೆಗೆ ತಾಜ್ ಮಹಲನ್ನು ವಿಶ್ವ ಮಧುಮೇಹದ ಸಂಕೇತವಾಗಿರುವ ನೀಲಿ ಬಣ್ಣದಿಂದ ಸಿಂಗರಿಸುವುದಾಗಿ ಮನವೊಲಿಸಿದೆ.
ಈ ಪಟ್ಟಿಯಲ್ಲಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ ಕೂಡ ಸೇರಿಕೊಂಡಿದ್ದು, ಇದೇ ಮೊದಲ ಬಾರಿಗೆ ಈ ಮೂರು ವಿಶ್ವ ಪರಂಪರೆಯ ತಾಣಗಳನ್ನು ಸಿಂಗರಿಸಲು ಎಎಸ್ ಐ ಅನುಮತಿ ನೀಡಿ.
ಭಾರತದಲ್ಲಿ ಸುಮಾರು 51 ಮಿಲಿಯನ್ ಜನರನ್ನು ಕಾಡುತ್ತಿರುವ ಈ ಮಧುಮೇಹ ಖಾಯಿಲೆ ವಿರುದ್ದ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಮತ್ತು ಬೆಂಬಲ ನೀಡುವುದು ತುಂಬಾ ಅವಶ್ಯಕ ಎಂದು ಎಎಸ್ ಐ ಹಿರಿಯ ಉತ್ಖನನ ತಜ್ಞ ಇಂದೂದರ್ ದ್ವಿವೇದಿ ತಿಳಿಸಿದ್ದಾರೆ.
ತಾಜ್ ಮಹಲ್ ನೊಂದಿಗೆ ಇಡೀ ಪ್ರಪಂಚದಲ್ಲಿ 900ಕ್ಕೂ ಹೆಚ್ಚು ಸ್ಮಾರಕ ಮತ್ತು ಕಟ್ಟಡಗಳು ವಿಶ್ವ ಮಧುಮೇಹದ ದಿನ ನೀಲಿ ಬೆಳಕಿನಿಂದ ಕಂಗೊಳಿಸಲಿದೆ. ಅಷ್ಟೇ ಅಲ್ಲ, ಇದೇ ಮೊದಲಬಾರಿಗೆ ಅಮೆರಿಕ ತನ್ನ ಸದಸ್ಯ ದೇಶಗಳಿಗೆ ಮಧುಮೇಹದ ಚಿಕಿತ್ಸೆ, ನಿರ್ಮೂಲನೆ ಮತ್ತು ಜಾಗೃತಿ ಕುರಿತು ಯೋಜನೆ ರೂಪಿಸಲು ತಿಳಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









