Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಕೇಂದ್ರ ಬಜೆಟ್: ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣಕ್ಕೆ ಒತ್ತು ನೀಡುವುದ್ದೇಕೆ?
2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಕಳೆದ ವರ್ಷದಂತೆಯೇ ಈ ಸಾಲಿನಲ್ಲಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೇಪರ್ಲೆಸ್ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್ ಮಂಡನೆ ಮಾಡುವಾಗ ನಿರ್ಮಲಾ ಸೀತಾರಾಮನ್ ಕ್ರಿಸ್ಪ್ ಆರೇಂಜ್ ಮತ್ತು ಮರೂನ್ ಸಿಲ್ಕ್ ಪೋಚಂಪಲ್ಲಿ ಕೈ ಮಗ್ಗದ ಸೀರೆ ಧರಿಸಿದ್ದರು. ಅದರಲ್ಲೂ ಪಲ್ಲು ಇಕಾತ್ ಮಾದರಿ ಹೊಂದಿದ್ದು ಗೋಲ್ಡನ್ ಬಾರ್ಡರ್ ಹೊಂದಿದೆ. ಸೀರೆಗೆ ಮ್ಯಾಚ್ ಹೊಂದುವ ಮರೂನ್ ಬ್ಲೌಸ್ ಧರಿಸಿದ್ದರು.

ಕಳೆದ ಸಾಲಿನಂತೆ ಈ ಬಾರಿಯೂ ಬಜೆಟ್ ಡಾಕ್ಯೂಮೆಂಟ್ ಎಲ್ಲವೂ ಟ್ಯಾಬ್ಲೆಟ್ನಲ್ಲಿತ್ತು, ಆ ಟ್ಯಾಬ್ಲೆಟ್ ಅನ್ನು ಕೆಂಪು ಬಣ್ಣದ ಕವರ್ನಲ್ಲಿ ಇಡಲಾಗಿತ್ತು.
ಕಳೆದ ವರ್ಷವೂ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಬಾರ್ಡರ್ನಲ್ಲಿ ಇಕಾತ್ ವರ್ಕ್ ಇರುವ ಬ್ರೈಟ್ ಕೆಂಪು ಬಣ್ಣದ ಸೀರೆ ಉಟ್ಟಿದ್ದರು.
ಕೆಂಪು ಬಣ್ಣ ಅದೃಷ್ಟದ ಬಣ್ಣವೇ?
ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಅದೃಷ್ಟದ ಬಣ್ಣವಾಗಿರುತ್ತದೆ. ನಿರ್ಮಮಾ ಸೀತಾರಾಮನ್ ಅವರಿಗೆ ಕೆಂಪು ಅದೃಷ್ಟದ ಬಣ್ಣವೆಂದು ಕಾಣುತ್ತದೆ. ಅವರು ಬಜೆಟ್ ಮಂಡಿಸಿದಾಗೆಲ್ಲಾ ಕೆಂಪು ಹೈಲೈಟ್ ಆಗಿರುವುದನ್ನು ಗಮನಿಸಬಹುದು. ಅಷ್ಟು ಮಾತ್ರವಲ್ಲ ಕೆಲವೊಂದು ಮಹತ್ವದ ದಿನಗಳಲ್ಲಿ ಅವರು ಕೆಂಪು ಬಣ್ಣ ಇರುವ ಸೀರೆ ಧರಿಸಿರುತ್ತಾರೆ.
ಕೆಂಪು ಬಣ್ಣ ಶಕ್ತಿ ಹಾಗೂ ಆತ್ಮವಿಶ್ವಾಸದ ಪ್ರತೀಕ ಕೂಡ ಆಗಿದೆ.
2022ನ ಸಾಲಿನಲ್ಲಿ ಮಂಡಿಸಲಗಿರುವ ಬಜೆಟ್ ಉತ್ತಮವಾಗಿದೆ ಎಂದು ಕೆಲವರು ವಿಶ್ಲೇಷಿಸಿದರೆ, ಉದ್ಯೋಗ ನಿರ್ಮಾಣಕ್ಕೆ ಹೆಚ್ಚಿನ ಒತ್ತಾಯ ನೀಡಬೇಕಾಗಿತ್ತು ಎಂಬ ಮಾತೂ ಕಡೆ ಕೇಳಿ ಬರುತ್ತಿದೆ, ಈ ಬಜೆಟ್ ಅನ್ನು ಪ್ರಧಾನಿ ಮೋದಿ ಜನಸ್ನೇಹಿ, ಪ್ರಗತಿಪರ ಬಜೆಟ್ ಎಂದಿದ್ದಾರೆ.



Click it and Unblock the Notifications
