Just In
- 13 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇಂದ್ರ ಬಜೆಟ್: ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣಕ್ಕೆ ಒತ್ತು ನೀಡುವುದ್ದೇಕೆ?
2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಕಳೆದ ವರ್ಷದಂತೆಯೇ ಈ ಸಾಲಿನಲ್ಲಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೇಪರ್ಲೆಸ್ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್ ಮಂಡನೆ ಮಾಡುವಾಗ ನಿರ್ಮಲಾ ಸೀತಾರಾಮನ್ ಕ್ರಿಸ್ಪ್ ಆರೇಂಜ್ ಮತ್ತು ಮರೂನ್ ಸಿಲ್ಕ್ ಪೋಚಂಪಲ್ಲಿ ಕೈ ಮಗ್ಗದ ಸೀರೆ ಧರಿಸಿದ್ದರು. ಅದರಲ್ಲೂ ಪಲ್ಲು ಇಕಾತ್ ಮಾದರಿ ಹೊಂದಿದ್ದು ಗೋಲ್ಡನ್ ಬಾರ್ಡರ್ ಹೊಂದಿದೆ. ಸೀರೆಗೆ ಮ್ಯಾಚ್ ಹೊಂದುವ ಮರೂನ್ ಬ್ಲೌಸ್ ಧರಿಸಿದ್ದರು.
ಕಳೆದ ಸಾಲಿನಂತೆ ಈ ಬಾರಿಯೂ ಬಜೆಟ್ ಡಾಕ್ಯೂಮೆಂಟ್ ಎಲ್ಲವೂ ಟ್ಯಾಬ್ಲೆಟ್ನಲ್ಲಿತ್ತು, ಆ ಟ್ಯಾಬ್ಲೆಟ್ ಅನ್ನು ಕೆಂಪು ಬಣ್ಣದ ಕವರ್ನಲ್ಲಿ ಇಡಲಾಗಿತ್ತು.
ಕಳೆದ ವರ್ಷವೂ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಬಾರ್ಡರ್ನಲ್ಲಿ ಇಕಾತ್ ವರ್ಕ್ ಇರುವ ಬ್ರೈಟ್ ಕೆಂಪು ಬಣ್ಣದ ಸೀರೆ ಉಟ್ಟಿದ್ದರು.
ಕೆಂಪು ಬಣ್ಣ ಅದೃಷ್ಟದ ಬಣ್ಣವೇ?
ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಅದೃಷ್ಟದ ಬಣ್ಣವಾಗಿರುತ್ತದೆ. ನಿರ್ಮಮಾ ಸೀತಾರಾಮನ್ ಅವರಿಗೆ ಕೆಂಪು ಅದೃಷ್ಟದ ಬಣ್ಣವೆಂದು ಕಾಣುತ್ತದೆ. ಅವರು ಬಜೆಟ್ ಮಂಡಿಸಿದಾಗೆಲ್ಲಾ ಕೆಂಪು ಹೈಲೈಟ್ ಆಗಿರುವುದನ್ನು ಗಮನಿಸಬಹುದು. ಅಷ್ಟು ಮಾತ್ರವಲ್ಲ ಕೆಲವೊಂದು ಮಹತ್ವದ ದಿನಗಳಲ್ಲಿ ಅವರು ಕೆಂಪು ಬಣ್ಣ ಇರುವ ಸೀರೆ ಧರಿಸಿರುತ್ತಾರೆ.
ಕೆಂಪು ಬಣ್ಣ ಶಕ್ತಿ ಹಾಗೂ ಆತ್ಮವಿಶ್ವಾಸದ ಪ್ರತೀಕ ಕೂಡ ಆಗಿದೆ.
2022ನ ಸಾಲಿನಲ್ಲಿ ಮಂಡಿಸಲಗಿರುವ ಬಜೆಟ್ ಉತ್ತಮವಾಗಿದೆ ಎಂದು ಕೆಲವರು ವಿಶ್ಲೇಷಿಸಿದರೆ, ಉದ್ಯೋಗ ನಿರ್ಮಾಣಕ್ಕೆ ಹೆಚ್ಚಿನ ಒತ್ತಾಯ ನೀಡಬೇಕಾಗಿತ್ತು ಎಂಬ ಮಾತೂ ಕಡೆ ಕೇಳಿ ಬರುತ್ತಿದೆ, ಈ ಬಜೆಟ್ ಅನ್ನು ಪ್ರಧಾನಿ ಮೋದಿ ಜನಸ್ನೇಹಿ, ಪ್ರಗತಿಪರ ಬಜೆಟ್ ಎಂದಿದ್ದಾರೆ.