Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಸೌಂದರ್ಯ ವೃದ್ಧಿ- ಈಗ ಬೆಳ್ಳುಳ್ಳಿಯಿಂದಲೂ ಸಾಧ್ಯ!
ಬೆಳ್ಳುಳ್ಳಿ ಎಂದರೆ ಒಗ್ಗರಣೆಗೆ ಮಾತ್ರ ಸೀಮಿತವಾದ ಸಾಂಬಾರ ಪದಾರ್ಥವೆಂದು ತಿಳಿದುಕೊಂಡಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಏಕೆಂದರೆ ಬೆಳ್ಳುಳ್ಳಿ ಅಜೀರ್ಣ, ಹೊಟ್ಟೆಯ ಹುಣ್ಣು, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳಿಗೆ ಹೇಗೆ ಉಪಯುಕ್ತವಾದ ಔಷಧಿಯೋ ಅಂತೆಯೇ ತ್ವಚೆಗೂ ಒಂದು ಉತ್ತಮವಾದ ಔಷಧಿಯಾಗಿದೆ. ದುಬಾರಿ ಪ್ರಸಾಧನಗಳು ನೀಡುವ ಪರಿಣಾಮಕ್ಕಿಂತಲೂ ಉತ್ತಮವಾದ ಪರಿಣಾಮವನ್ನು ಅಡುಗೆಮನೆಯಲ್ಲಿ ಸದಾ ಇರುವ ಈ ಪುಟ್ಟ ಬೆಳ್ಳುಳ್ಳಿಯಿಂದ ಪಡೆಯಬಹುದು. ಸುಳಿವು ನೀಡದೇ ಕಾಡುವ ರೋಗಕ್ಕೆ ರಾಮಬಾಣ-ಬೆಳ್ಳುಳ್ಳಿ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿ ಹೆಚ್ಚಿಸಲು ನೆರವಾಗುವ ಜೊತೆಗೇ ಮುಖದ ಮೊಡವೆಗಳನ್ನು ನಿವಾರಿಸಲೂ ನೆರವಾಗುತ್ತವೆ. ಆಹಾರದ ಮೂಲಕ ಸೇವಿಸಿದಾಗ ಹೊಟ್ಟೆಯಲ್ಲಿರುವ ವಿಷಕಾರಿ ಕಲ್ಮಶಗಳನ್ನು ಹೊರಹಾಕಲೂ ನೆರವಾಗುತ್ತದೆ. ಅದರಲ್ಲೂ ಖಾಲಿಹೊಟ್ಟೆಯಲ್ಲಿ ಕೆಲವು ಕಾಳು ಬೆಳ್ಳುಳ್ಳಿಗಳನ್ನು ತಿನ್ನುವುದು ಅತ್ಯುತ್ತಮ. ಕೆಳಗಿನ ಸ್ಲೈಡ್ ಶೋ ನಲ್ಲಿ ಬೆಳ್ಳುಳ್ಳಿ ತ್ವಚೆಗೆ ಹೇಗೆ ಉಪಯುಕ್ತವೆಂಬ ಮಾಹಿತಿಯನ್ನು ನೀಡಲಾಗಿದೆ, ಮುಂದೆ ಓದಿ..

ತಲೆಗೂದಲುದುರುವುದನ್ನು ತಡೆಯಲು
ತಲೆಗೂದಲುದುರುವುದನ್ನು ತಡೆಯಲು ಬೆಳ್ಳುಳ್ಳಿ ಸಮರ್ಥವಾಗಿದೆ. ಇದಕ್ಕಾಗಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಸಿಪ್ಪೆ ಸುಲಿದು ನಯವಾಗಿ ಅರೆದು ಲೇಪನ ತಯಾರಿಸಿ. ಇದನ್ನು ನೇರವಾಗಿ ತಲೆಗೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ. ಇನ್ನೂ ಉತ್ತಮವೆಂದರೆ ಸಮಪ್ರಮಾಣದಲ್ಲಿ ಕೊಂಚವೇ ಬಿಸಿ ಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹೆಚ್ಚಿ.

ಮೊಡವೆಗಳನ್ನು ಕಡಿಮೆಗೊಳಿಸಲು
ಬೆಳ್ಳುಳ್ಳಿಯ ಬ್ಯಾಕ್ಟೀರಿಯಾ ನಿವಾರಕ ಗುಣ ಮೊಡವೆಗಳನ್ನು ತಡೆಗಟ್ಟಲು ಮತ್ತು ಇರುವ ಮೊಡವೆಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೆಳ್ಳುಳ್ಳಿ ಅರೆದ ಲೇಪನವನ್ನು ನೇರವಾಗಿ ಮೊಡವೆಯ ಮೇಲೆ ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆದುಕೊಂಡರಾಯಿತು. ಕೊಂಚ ಉರಿಯುವ ಕಾರಣ ತಳುವಾಗಿ ಮೊದಲು ಹಚ್ಚಿ ಉರಿ ಕಡಿಮೆಯಾದ ಬಳಿಕ ಸ್ವಲ್ಪ ದಪ್ಪನಾಗಿ ಹಚ್ಚಬೇಕು.

ಪಾದಗಳ ಹುಳಕಡ್ಡಿ (Athlete's Foot)
ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ಕಾಡುವ ಈ ತೊಂದರೆ ಒಣಗದ ಬೆವರಿನಲ್ಲಿರುವ ಶಿಲೀಂಧ್ರಗಳ ಮೂಲಕ ಬರುತ್ತದೆ. ಇದಕ್ಕಾಗಿ ಪ್ರತಿ ಬಾರಿ ದೈಹಿಕ ಚಟುವಟಿಕೆಯ ಬಳಿಕ ಎರಡೂ ಪಾದಗಳು ಮುಳುಗುವಷ್ಟು ಉಗುರುಬೆಚ್ಚನೆಯ ನೀರಿನಲ್ಲಿ ಕೆಲವು ಬೆಳ್ಳುಳ್ಳಿಗಳನ್ನು ಜಜ್ಜಿ ಹಾಕಿ ಸುಮಾರು ಹದಿನೈದು ನಿಮಿಷ ಮುಳುಗಿಸಿಡಬೇಕು. ಇದು ಪಾದಗಳ ಹುಳಕಡ್ಡಿಯನ್ನು ಸಮರ್ಥವಾಗಿ ನಿವಾರಿಸುತ್ತದೆ.

ಚರ್ಮದ ಉರಿಗೆ
ಬೆಳ್ಳುಳ್ಳಿಯ ಉರಿಯೂತ ನಿವಾರಕ ಗುಣ ಚರ್ಮದ ಉರಿಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಕೆಲವೊಮ್ಮೆ ಕೀಟಗಳು ಕಡಿದಾಗ ಅಥವಾ ಯಾವುದಾದರೂ ವಸ್ತುವಿಗೆ ಅಲರ್ಜಿಯುಂಟಾಗಿ ತುರಿಕೆಯುಂಟಾಗಿ ಚರ್ಮ ಕೆಂಪಾದಾಗ ಪ್ರಥಮ ಚಿಕಿತ್ಸೆಯಾಗಿ ಬೆಳ್ಳುಳ್ಳಿಯನ್ನು ಅರೆದು ಲೇಪನವನ್ನು ಮುಲಾಮಿನಂತೆ ಹಚ್ಚುವ ಮೂಲಕ ಉರಿಯನ್ನು ಕಡಿಮೆಮಾಡಬಹುದು.

ತಲೆಹೊಟ್ಟು ನಿವಾರಣೆಗೆ
ಉಗುರುಬೆಚ್ಚನೆಯ ಕೊಬ್ಬರಿ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಅರೆದ ಲೇಪನವನ್ನು ಸಮಪ್ರಮಾಣದಲ್ಲಿ ಬೆರೆಸಿ ತಲೆಗೂದಲ ಬುಡಕ್ಕೆ ಹಚ್ಚುವ ಮೂಲಕ ತಲೆಹೊಟ್ಟನ್ನೂ ಸಮರ್ಥವಾಗಿ ನಿವಾರಿಸಬಹುದು.

ಚರ್ಮದ ನೆರಿಗೆ ನಿವಾರಿಸಲು
ಸಮಪ್ರಮಾಣದಲ್ಲಿ ತಣ್ಣನೆಯ ವಿಧಾನದಿಂದ ತೆಗೆದ ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಅರೆದ ಲೇಪನವನ್ನು ಬೆರೆಸಿ ಹಚ್ಚುವುದರಿಂದ ನೆರಿಗೆಗಳನ್ನು ನಿವಾರಿಸಬಹುದು ಹಾಗೂ ವೃದ್ದಾಪ್ಯವನ್ನು ಸಾಕಷ್ಟು ಮುಂದೂಡಬಹುದು.

ಚಳಿಯಿಂದಾಗುವ ಗುಳ್ಳೆಗಳ ನಿವಾರಣೆಗೆ
ಕೆಲವೊಮ್ಮೆ ಚಳಿಯಿಂದ ತುಟಿಯ ಅಂಚುಗಳಲ್ಲಿ ಮತ್ತು ಬಾಯಿಯ ಸುತ್ತ ಚಿಕ್ಕ ಚಿಕ್ಕ ನೀರು ತುಂಬಿದ ಗುಳ್ಳೆಗಳಾಗುತ್ತವೆ. ಹರ್ಪಿಸ್ ಸಿಂಪ್ಲೆಕ್ಸ್ (herpes simplex virus) ಎಂಬ ವೈರಸ್ಸಿನ ಕಾರಣದಿಂದಾಗಿ ಬರುವ ಈ ತೊಂದರೆಗೆ ಬೆಳ್ಳುಳ್ಳಿ ಸಮರ್ಥವಾದ ಔಷಧಿಯಾಗಿದೆ. ಬೆಳ್ಳುಳ್ಳಿ ಅರೆದ ಲೇಪನವನ್ನು ಈ ಗುಳ್ಳಿಗಳ ಮೇಲೆ (ಒಡೆಯಬಾರದು) ದಪ್ಪನಾಗಿ ರಾತ್ರಿ ಹಚ್ಚಿ ಮಲಗಿ ಬೆಳಿಗ್ಗೆದ್ದಾಗ ಗುಳ್ಳೆಗಳು ಮತ್ತು ಅದರ ಉರಿ ಮಾಯವಾಗಿರುತ್ತದೆ.



Click it and Unblock the Notifications











