Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ತ್ವಚೆಯ ಸೌಂದರ್ಯ ವೃದ್ಧಿಗೆ- ನಿಸರ್ಗದ ಎಳನೀರು!
ಬಾಯಾರಿಕೆ ತಣಿಸಲು ನಿಸರ್ಗದಲ್ಲಿ ಲಭ್ಯವಿರುವ ಅತ್ಯುತ್ತಮ ಪೇಯವೆಂದರೆ ಎಳನೀರು. ಇದು ಆರೋಗ್ಯಕ್ಕೆ ಹಲವು ವಿಧದಲ್ಲಿ ಆರೋಗ್ಯಕರವಾಗಿದೆ. ಆದರೆ ಈ ನೀರು ನಿಮ್ಮ ಸೌಂದರ್ಯವನ್ನೂ ವೃದ್ಧಿಸಲು ಬಳಸಬಹುದೆಂದು ನಿಮಗೆ ಈ ಮೊದಲೇ ತಿಳಿದಿತ್ತೇ? ಹೌದು, ಎಳನೀರಿಗೆ ಅದ್ಭುತವಾದ ಸೌಂದರ್ಯವೃದ್ಧಿ ಗುಣಗಳಿವೆ. ಇದನ್ನು ನಿಮ್ಮ ನಿತ್ಯದ ಸೌಂದರ್ಯಪ್ರಸಾಧನವಾಗಿಯೂ ಬಳಸಬಹುದು. ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ
ಎಳನೀರಿನಲ್ಲಿ ಪ್ರಮುಖವಾಗಿ ಚರ್ಮಕ್ಕೆ ಆರ್ದ್ರತೆ ನೀಡುವ ಗುಣವಿರುವುದರಿಂದ ಚರ್ಮಕ್ಕೆ ಉತ್ತಮ ಪೋಷಣೆ ದೊರಕುತ್ತದೆ ಹಾಗೂ ಚರ್ಮ ನೈಸರ್ಗಿಕವಾದ ಬಣ್ಣವನ್ನು ಪಡೆಯಲು ನೆರವಾಗುತ್ತದೆ. ಅಲ್ಲದೇ ಚರ್ಮದ ರಂಧ್ರಗಳನ್ನು ತೆರೆದು ಅದರೊಳಗೆ ಸಂಗ್ರಹವಾಗಿದ್ದ ಧೂಳು ಮತ್ತಿತರ ಕಣಗಳನ್ನು ಹೊರಹಾಕಲೂ ನೆರವಾಗುತ್ತದೆ.
ಇದರ ಇತರ ಆರೋಗ್ಯಕರ ಗುಣಗಳನ್ನು ಕಂಡ ಬಳಿಕ ನಿತ್ಯವೂ ಎಳನೀರನ್ನು ಸೌಂದರ್ಯಕ್ಕಾಗಿ ಬಳಸಲು ಖಂಡಿತಾ ಮನಸ್ಸು ಮಾಡುತ್ತೀರಿ. ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಎಳನೀರಿನಿಂದ ಮುಖ ತೊಳೆಯಿರಿ!
ಹೌದು ಪ್ರತಿದಿನ ಬೆಳಿಗೆ ನೀರಿನಿಂದ ಮುಖ ತೊಳೆದ ಬಳಿಕ ಕೊಂಚ ಎಳನೀರನ್ನು ಕೈಗೆ ತೆಗೆದುಕೊಂಡು ಮುಖಕ್ಕೆ ನೇರವಾಗಿ ಚಿಮುಸಿಕೊಳ್ಳಿ. ಈ ನೀರು ಹಾಗೇ ಆರಲು ಬಿಡಿ. ಇದು ದಿನವಿಡೀ ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿಸಿ ತಾಜಾ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.

ಕೂದಲಿಗೆ ಮಸಾಜ್ ಮಾಡಿ
ಕೂದಲು ಗಂಟುಗಂಟಾಗಿದ್ದರೆ ಎಳನೀರನ್ನು ಬೆರಳುಗಳಲ್ಲಿ ಅದ್ದಿ ಕೂದಲ ಬುಡದಲ್ಲಿ ಮಸಾಜ್ ಮಾಡಿ ತುದಿಯವರೆಗೆ ಹಚ್ಚುತ್ತಾ ಬನ್ನಿ, ಇದು ಕೂದಲಿಗೆ ಆರ್ದ್ರತೆ ನೀಡುವ ಜೊತೆಗೆ ಕೂದಲು ಸಿಕ್ಕು ಸಿಕ್ಕಾಗಿದ್ದನ್ನು ಸುಲಭವಾಗಿ ಬಿಡಿಸಿಕೊಳ್ಳಲು ನೆರವಾಗುತ್ತದೆ.

ಅರಿಶಿನ, ಚಂದನ ಸೇರಿಸಿ ಮುಖಲೇಪ ತಯಾರಿಸಿ
ಸಮಪ್ರಮಾಣದಲ್ಲಿ ಅರಿಶಿನ ಮತ್ತು ಚಂದನದ ಪುಡಿಗಳನ್ನು ಕೊಂಚ ಎಳನೀರಿನಲ್ಲಿ ಹಾಕಿ ಮುಖಲೇಪ ತಯಾರಿಸಿ ನಿತ್ಯವೂ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ ಚರ್ಮದ ರಂದ್ರಗಳು ದೊಡ್ಡದಾಗಿ ಎಲ್ಲಾ ಕಲ್ಮಶಗಳು ಹೊರಹೋಗಲು ನೆರವಾಗುತ್ತದೆ. ಸೋಪು ಉಪಯೋಗಿಸಬೇಡಿ. ನಿಯಮಿತ ಬಳಕೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಬಿಸಿಲಿನ ಝಳವನ್ನು ತಪ್ಪಿಸಿ
ಬಿಸಿಲಿನ ಝಳಕ್ಕೆ ಚರ್ಮದ ಬಣ್ಣ ಗಾಢವಾಗುವುದನ್ನು ತಪ್ಪಿಸಲು ಎಳನೀರು ಮತ್ತು ಮುಲ್ತಾನಿ ಮಿಟ್ಟಿ ಯ ಮಿಶ್ರಣವನ್ನು ತೆಳುವಾಗಿ ಮುಖ ಮತ್ತು ಕೈಗಳ ಮೇಲೆ ಹೆಚ್ಚಿ.

ಮೊಡವೆಗಳನ್ನು ನಿವಾರಿಸಿ
ಒಂದು ವೇಳೆ ಮುಖದಲ್ಲಿ ಮೊಡವೆಗಳಿದ್ದರೆ ರಾತ್ರಿ ಮಲಗುವ ಮುನ್ನ ಹತ್ತಿಯುಂಡೆಯನ್ನು ಎಳನೀರಿನಲ್ಲಿ ಅದ್ದಿ ಮೊಡವೆಗಳ ಮೇಲೆ ಆವರಿಸುವಂತೆ ಪಟ್ಟಿ ಮಾಡಿ ಮಲಗಿ. ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮ ಬಿಳಿದಾಗಿಸಿ
ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಚರ್ಮ ಗಾಢವಾಗಿದ್ದು ಮೊದಲಿನ ಬಣ್ಣವನ್ನು ಪಡೆಯಲು ಉತ್ಸುಕರಾಗಿದ್ದರೆ ಹಾಲು, ಸೌತೆಕಾಯಿ ರಸ ಮತ್ತು ಎಳನೀರುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಆಗಾಗ ಹಚ್ಚಿಕೊಳ್ಳುತ್ತಾ ಬನ್ನಿ. ಇದರಿಂದ ನಿಧಾನವಾಗಿ ನಿಮ್ಮ ಚರ್ಮ ತನ್ನ ಮೂಲ ಬಣ್ಣವನ್ನು ಪಡೆಯಲು ಸಾಧ್ಯವಾಗುತ್ತದೆ.



Click it and Unblock the Notifications











