Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಪುರುಷರಿಗಾಗಿ ಈ ಸ್ಕಿನ್ ಕೇರ್ ಟಿಪ್ಸ್
ಫೇಶಿಯಲ್, ಮಸಾಜ್ ಎಲ್ಲಾ ಮಹಿಳೆಯರಿಗೆ ಮಾತ್ರವಲ್ಲ, ತಮ್ಮ ತ್ವಚೆ ಕಾಂತಿ ಹೆಚ್ಚಿಸಲು ಪುರುಷರೂ ಮಾಡುವುದು ಒಳ್ಳೆಯದು. ಬ್ಯೂಟಿ ಸ್ಪಾ, ಪಾರ್ಲರ್ ಗೆ ಹೋಗಲು ಇಷ್ಟಪಡದಿದ್ದರೆ ಸ್ವಲ್ಪ ಪುರುಸೊತ್ತು ಮಾಡಿಕೊಂಡು ನೀವೇ ಫೇಶಿಯಲ್, ಫೇಸ್ ಮಾಸ್ಕ್ ಮಾಡಿ.
ಈ ರೀತಿ ಮಾಡಲು ಹಿಂಜರಿಕೆ ಬೇಡ, ಆಕರ್ಷಕವಾದ ಮುಖ ನಿಮಗೆ ಆತ್ಮವಿಶ್ವಾಸ ತುಂಬುವುದು. ಅದರಲ್ಲಿ ಈ ಕೆಳಗಿನ ಟಿಪ್ಸ್ ಬಳಸಿ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಮೊಡವೆ ಇದ್ದವರು ಈ ರೀತಿ ಮಾಡಿ
ಪುರುಷರ ಮುಖದಲ್ಲಿ ಮೊಡವೆ ಇದ್ದರೆ ತುಂಬಾ ತೊಂದರೆಯಾಗುತ್ತದೆ. ಶೇವ್ ಮಾಡಲೂ ಕಷ್ಟವಾಗಬಹುದು. ಈ ಮೊಡವೆ ಹೋಗಲಾಡಿಸಲು ಮುಖಕ್ಕೆ ಪುದೀನಾ ರಸ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಮೊಡವೆ ಸಮಸ್ಯೆಯಿಂದ ಮುಕ್ತರಾಗಬಹುದು.
ಮುಖದಲ್ಲಿ ಮಾಯಿಶ್ಚರೈಸರ್ ಕಾಪಾಡಲು
ಬಿಸಿಲಿನಲ್ಲಿ ಓಡಾಡುವಾಗ ಪುರುಷರು ಕೊಡೆ ಹಿಡಿದುಕೊಳ್ಳುವುದಿಲ್ಲ. ಸನ್ ಸ್ಕ್ರೀನ್ ಬಳಸುವವರು ಕಡಿಮೆ. ಆದ್ದರಿಂದ ಮನೆಗೆ ಬಂದಾಗ ಸ್ವಲ್ಪ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಮುಖವನ್ನು ಒರೆಸಿ. ಇದರಿಂದ ಮುಖ ಡ್ರೈಯಾಗುವುದಿಲ್ಲ.
ಬನಾನ ಪ್ಯಾಕ್
ವಾರಕ್ಕೊಮ್ಮೆ ಬಾಳೆ ಹಣ್ಣನ್ನು ಚೆನ್ನಾಗಿ ಹಿಸುಕಿ ಮುಖಕ್ಕೆ ಹಚ್ಚಿ, ಮೇಲ್ಮುಖವಾಗಿ ಮಸಾಜ್ ಮಾಡಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ನಿರ್ಜೀವ ತ್ವಚೆ ಹೋಗಿ ಮುಖದ ಹೊಳಪು ಹೆಚ್ಚುವುದು.
ಪಪ್ಪಾಯಿ
ಪಪ್ಪಾಯಿ ಫೇಸ್ ಪ್ಯಾಕ್ ಕೂಡ ತ್ವಚೆಗೆ ಒಳ್ಳೆಯದು. ಇದು ಮೊಡವೆಯ ಕಲೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.
ಸೌತೆಕಾಯಿ
ಕಣ್ಣಿನ ಸುತ್ತ ಕಪ್ಪು ಕಲೆ ಬಿದ್ದಿದ್ದರೆ ಸೌತೆಕಾಯಿ ಪೇಸ್ಟ್ ಹಚ್ಚಿದರೆ ಆ ಕಲೆ ಮಾಯವಾಗುವುದು. ನಿದ್ದೆ ಇಲ್ಲದಿರುವುದು, ಮಾನಸಿಕ ಒತ್ತಡ ಇವುಗಳಿಂದ ಕಣ್ಣಿನ ಸುತ್ತ ಕಪ್ಪು ಕಲೆ ಬೀಳುವುದು.
ಮುಲ್ತಾನಿ ಮಿಟಿ
ಮುಲ್ತಾನಿ ಮಿಟಿಯನ್ನು ವಾರಕ್ಕೊಮ್ಮೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ನಿಮ್ಮ ಮುಖದ ಆಕರ್ಷಣೆ ಹೆಚ್ಚುವುದು.
ನಾನು ಈ ರೀತಿಯೆಲ್ಲಾ ಮಾಡಿದರೆ ನೋಡಿದವರು ತಮಾಷೆ ಮಾಡಬಹುದು ಎನ್ನುವ ಅಂಜಿಕೆ ಬಿಡಿ, ನಿಮ್ಮ ತ್ವಚೆ ಆರೈಕೆಯತ್ತ ಗಮನ ಕೊಡಿ.



Click it and Unblock the Notifications