Latest Updates
-
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ! -
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ? -
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್: ಭಾರಿ ಮಳೆ ಮತ್ತು ಭೂಕುಸಿತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ಮಳೆಗಾಲದಲ್ಲಿ ಕಚೇರಿಗೆ ಹೋಗುವವರು ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ
ದಾಳಿಂಬೆಯಲ್ಲಿದೆ 3 ಸೌಂದರ್ಯವರ್ಧಕ ಗುಣಗಳು
ದಾಳಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ಸೌಂದರ್ಯ ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ತ್ವಚೆ ಕಪ್ಪಿರಲಿ, ಬಿಳುಪಿರಲಿ ಕಲೆರಹಿತವಾಗಿ, ಹೊಳಪಿನಿಂದ ಕೂಡಿದ್ದರೆ ನೋಡಲು ಆರ್ಷಕವಾಗಿ ಕಾಣುವಿರಿ. ದಾಳಿಂಬೆಯಲ್ಲಿ ತ್ವಚೆ ಪೋಷಣೆಗೆ ಅಗತ್ಯವಾದ ವಿಟಮಿನ್ ಸಿ ಮತ್ತು ಬಿ5, ಪೊಟಾಷ್ಯಿಯಂ ಈ ಎಲ್ಲಾ ಅಂಶಗಳಿದ್ದು ಇದನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಬಳಸಬಹುದು. ಅದರ ಜೊತೆಗೆ ನಿಮ್ಮ ಚೆಲುವನ್ನು ಹೆಚ್ಚಿಸಿಕೊಳ್ಳುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.
ಮೊಡವೆ ಬರುವುದನ್ನು ತಡೆಗಟ್ಟುತ್ತದೆ: ಯೌವನ ಪ್ರಾಯದಲ್ಲಿ ಹೆಚ್ಚಿನವರಲ್ಲಿ ಮೊಡವೆ ಸಮಸ್ಯೆ ಕಂಡು ಬರುತ್ತದೆ. ಇದನ್ನು ಬರದಂತೆ ತಡೆಯಲು ಪ್ರತಿದಿನ ಬೆಳಗ್ಗೆ ದಾಳಿಂಬೆ ಅದರ ಜ್ಯೂಸ್ ಅನ್ನು ಸೇವಿಸುತ್ತಾ ಬಂದರೆ ಒಳ್ಳೆಯದು.ಅದಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ದೂಳು ಅಥವಾ ರಾಸಾಯನಿಕಗಳು ತ್ವಚೆಯ ಮೇಲೆ ಕೆಟ್ಟ ಪ್ರಭಾವ ಬೀರುವುದನ್ನು ತಡೆಯುತ್ತದೆ.

ಮೊಡವೆ ಇರುವವರು ಇದರ ರಸವನ್ನು ಮುಖದ ಮೇಲೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು ಹಾಗೂ ಅದರಿಂದ ಉಂಟಾದ ಕಲೆಯೂ ಕಡಿಮೆಯಾಗುತ್ತದೆ.
ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ: ದಾಳಿಂಬೆಯಲ್ಲಿ ಕೊಲೆಜಿನ್ ಅಂಶ ಇರುವುದರಿಂದ ತ್ವಚೆಗೆ ಉಂಟಾಗುವ ಹಾನಿಯನ್ನು ಸರಿಪಡಿಸಿ ನೆರಿಗೆ ಬೀಳುವುದನ್ನು ತಡೆಯುತ್ತದೆ. ಅಲ್ಲದೆ ತ್ವಚೆಯನ್ನು ತುಂಬಾ ಮೃದುವಾಗಿಸುತ್ತದೆ.
ಗಾಯವನ್ನು ಒಣಗಿಸುತ್ತದೆ: ದಾಳಿಂಬೆಯ ಬೀಜವನ್ನು ಗಾಯವನ್ನು ಒಣಗಿಸುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನೆಯಿಂದ ದೃಢ ಪಟ್ಟಿದೆ. ಇದರ ಬೀಜದ ಎಣ್ಣೆಯನ್ನು ಗಾಯಾವಾದ ಭಾಗಕ್ಕೆ ಹಚ್ಚುತ್ತಾ ಬಂದರೆ ಕಲೆ ಮಾಯವಾಗುವುದು.



Click it and Unblock the Notifications