Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸ್ಲೀವ್ ಲೆಸ್ ಬಟ್ಟೆ ತೊಡಲು ಹಿಂಜರಿಕೆ ಏಕೆ?

ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಬಹುದಾದ ಕೆಲವು ಸಲಹೆ ಪಾಲಿಸಿದರೆ ಖಂಡಿತ ಈ ಸಮಸ್ಯೆ ದೂರಾಗಿ ಹಾಯಾಗಿ ಇಷ್ಟ ಬಂದ ಬಟ್ಟೆಗಳನ್ನು ತೊಡಬಹುದು.
ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಿಕೊಳ್ಳುವ ವಿಧಾನ ಹೀಗೆ:
1. ತುಂಬಾ ಗಡುಸಾದ ಬಟ್ಟೆಯಿಂದ ಒರೆಸಿಕೊಳ್ಳುವುದು, ಕಳಪೆ ಗುಣಮಟ್ಟದ ಡಿಯೋಡ್ರೆಂಟ್, ಚರ್ಮದ ನಿರ್ಜೀವ ಕಣ, ವ್ಯಾಕ್ಸಿಂಗ್ ವಿಧಾನ ಇವೆಲ್ಲವೂ ಕಂಕುಳು ಕಪ್ಪು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವಾಗಬಹುದು. ಅದಕ್ಕೆ ನಿಂಬೆಹಣ್ಣು ಉತ್ತಮ ಪರಿಹಾರ. ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯದಂತೆ ಹಚ್ಚಿಕೊಂಡರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
2. ಕಸ್ತೂರಿ ಅರಿಶಿನ ಮತ್ತು ವಿಟಮಿನ್ ಇ ಇರುವ ಎಣ್ಣೆ ಅಥವಾ ಕ್ರೀಂ ನಿಂದ ಮಸಾಜ್ ಮಾಡಿದರೆ ಕಂಕುಳಲ್ಲಿ ನಿರಂತರ ವ್ಯಾಕ್ಸಿಂಗ್ ನಿಂದ ಉಂಟಾಗಿರುವ ಸುಕ್ಕು ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ. ಅರಿಶಿನ ನೈಸರ್ಗಿಕ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.
3. ಸೌತೆಕಾಯಿ ರಸ ಮತ್ತು ಟೊಮೊಟೊ ಹೋಳಿನಿಂದ ಮಸಾಜ್ ಮಾಡಿಕೊಂಡು 8 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದರಿಂದ ಚರ್ಮ ಮೃದುಗೊಂಡು ಬೆಳ್ಳಗಾಗುವಂತೆ ಮಾಡುತ್ತದೆ.
4. ಸ್ನಾನಕ್ಕೆ ಮುಂಚೆ ಅರಿಶಿನ, ಕಡಲೆಹಿಟ್ಟು, ನಿಂಬೆರಸ ಮತ್ತು ಹಾಲನ್ನು ಬೆರೆಸಿ ಹಚ್ಚಿಕೊಂಡರೆ ನಿರ್ಜೀವ ಕಣಗಳನ್ನು ತೊಲಗಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.
5. ಗಂಧದ ಪುಡಿ ಈ ಸಮಸ್ಯೆಗೆ ಸೂಕ್ತ ಮದ್ದು. ಸುಗಂಧವನ್ನೂ ನೀಡುವುದರೊಂದಿಗೆ ನೈಸರ್ಗಿಕ ಬ್ಲೀಚ್ ಕೂಡ ಮಾಡುತ್ತದೆ. ತಾಜಾ ಹಾಲಿನೊಂದಿಗೆ ಗಂಧದ ಪುಡಿ ಬೆರೆಸಿ ಹಚ್ಚಿಕೊಂಡರೆ ಕಪ್ಪು ಕಲೆಯಿಂದ ಕ್ರಮೇಣ ಮುಕ್ತಿ ಹೊಂದಬಹುದು.
6.ಮೊಸರಿನೊಂದಿಗೆ ನಿಂಬೆರಸ ಮತ್ತು ಅರಿಶಿನ ಬೆರೆಸಿ ಹಚ್ಚಿಕೊಂಡರೆ ಚರ್ಮದ ಅನೇಕ ವ್ಯಾಧಿಗಳಿಂದ ಹೊರಬರುವುದು ಸಾಧ್ಯವಿದೆ.
ಈ ಸಲಹೆಗಳ ಹೊರತಾಗಿ ದೇಹದ ಬೊಜ್ಜನ್ನು ಇಳಿಸಿಕೊಳ್ಳಲು ಪ್ರಯತ್ನ ಪಡಿ. ಅತಿಯಾದ ಬೊಜ್ಜಿನಿಂದ ಕೂಡ ಚರ್ಮ ಉಜ್ಜಿಕೊಂಡು ಕಪ್ಪಗಾಗುವ ಸಾಧ್ಯತೆ ಇದೆ. ಇದಕ್ಕೆ ಕೀಟಾಣು ವಿರುದ್ಧ ಹೋರಾಡುವ ಸೂಕ್ತ ಕ್ರೀಂ ಅನ್ನು ಬಳಕೆ ಮಾಡಿ.



Click it and Unblock the Notifications