Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಸ್ಲೀವ್ ಲೆಸ್ ಬಟ್ಟೆ ತೊಡಲು ಹಿಂಜರಿಕೆ ಏಕೆ?

ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಬಹುದಾದ ಕೆಲವು ಸಲಹೆ ಪಾಲಿಸಿದರೆ ಖಂಡಿತ ಈ ಸಮಸ್ಯೆ ದೂರಾಗಿ ಹಾಯಾಗಿ ಇಷ್ಟ ಬಂದ ಬಟ್ಟೆಗಳನ್ನು ತೊಡಬಹುದು.
ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಿಕೊಳ್ಳುವ ವಿಧಾನ ಹೀಗೆ:
1. ತುಂಬಾ ಗಡುಸಾದ ಬಟ್ಟೆಯಿಂದ ಒರೆಸಿಕೊಳ್ಳುವುದು, ಕಳಪೆ ಗುಣಮಟ್ಟದ ಡಿಯೋಡ್ರೆಂಟ್, ಚರ್ಮದ ನಿರ್ಜೀವ ಕಣ, ವ್ಯಾಕ್ಸಿಂಗ್ ವಿಧಾನ ಇವೆಲ್ಲವೂ ಕಂಕುಳು ಕಪ್ಪು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವಾಗಬಹುದು. ಅದಕ್ಕೆ ನಿಂಬೆಹಣ್ಣು ಉತ್ತಮ ಪರಿಹಾರ. ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯದಂತೆ ಹಚ್ಚಿಕೊಂಡರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
2. ಕಸ್ತೂರಿ ಅರಿಶಿನ ಮತ್ತು ವಿಟಮಿನ್ ಇ ಇರುವ ಎಣ್ಣೆ ಅಥವಾ ಕ್ರೀಂ ನಿಂದ ಮಸಾಜ್ ಮಾಡಿದರೆ ಕಂಕುಳಲ್ಲಿ ನಿರಂತರ ವ್ಯಾಕ್ಸಿಂಗ್ ನಿಂದ ಉಂಟಾಗಿರುವ ಸುಕ್ಕು ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ. ಅರಿಶಿನ ನೈಸರ್ಗಿಕ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.
3. ಸೌತೆಕಾಯಿ ರಸ ಮತ್ತು ಟೊಮೊಟೊ ಹೋಳಿನಿಂದ ಮಸಾಜ್ ಮಾಡಿಕೊಂಡು 8 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದರಿಂದ ಚರ್ಮ ಮೃದುಗೊಂಡು ಬೆಳ್ಳಗಾಗುವಂತೆ ಮಾಡುತ್ತದೆ.
4. ಸ್ನಾನಕ್ಕೆ ಮುಂಚೆ ಅರಿಶಿನ, ಕಡಲೆಹಿಟ್ಟು, ನಿಂಬೆರಸ ಮತ್ತು ಹಾಲನ್ನು ಬೆರೆಸಿ ಹಚ್ಚಿಕೊಂಡರೆ ನಿರ್ಜೀವ ಕಣಗಳನ್ನು ತೊಲಗಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.
5. ಗಂಧದ ಪುಡಿ ಈ ಸಮಸ್ಯೆಗೆ ಸೂಕ್ತ ಮದ್ದು. ಸುಗಂಧವನ್ನೂ ನೀಡುವುದರೊಂದಿಗೆ ನೈಸರ್ಗಿಕ ಬ್ಲೀಚ್ ಕೂಡ ಮಾಡುತ್ತದೆ. ತಾಜಾ ಹಾಲಿನೊಂದಿಗೆ ಗಂಧದ ಪುಡಿ ಬೆರೆಸಿ ಹಚ್ಚಿಕೊಂಡರೆ ಕಪ್ಪು ಕಲೆಯಿಂದ ಕ್ರಮೇಣ ಮುಕ್ತಿ ಹೊಂದಬಹುದು.
6.ಮೊಸರಿನೊಂದಿಗೆ ನಿಂಬೆರಸ ಮತ್ತು ಅರಿಶಿನ ಬೆರೆಸಿ ಹಚ್ಚಿಕೊಂಡರೆ ಚರ್ಮದ ಅನೇಕ ವ್ಯಾಧಿಗಳಿಂದ ಹೊರಬರುವುದು ಸಾಧ್ಯವಿದೆ.
ಈ ಸಲಹೆಗಳ ಹೊರತಾಗಿ ದೇಹದ ಬೊಜ್ಜನ್ನು ಇಳಿಸಿಕೊಳ್ಳಲು ಪ್ರಯತ್ನ ಪಡಿ. ಅತಿಯಾದ ಬೊಜ್ಜಿನಿಂದ ಕೂಡ ಚರ್ಮ ಉಜ್ಜಿಕೊಂಡು ಕಪ್ಪಗಾಗುವ ಸಾಧ್ಯತೆ ಇದೆ. ಇದಕ್ಕೆ ಕೀಟಾಣು ವಿರುದ್ಧ ಹೋರಾಡುವ ಸೂಕ್ತ ಕ್ರೀಂ ಅನ್ನು ಬಳಕೆ ಮಾಡಿ.



Click it and Unblock the Notifications