Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಸ್ಲೀವ್ ಲೆಸ್ ಬಟ್ಟೆ ತೊಡಲು ಹಿಂಜರಿಕೆ ಏಕೆ?

ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಬಹುದಾದ ಕೆಲವು ಸಲಹೆ ಪಾಲಿಸಿದರೆ ಖಂಡಿತ ಈ ಸಮಸ್ಯೆ ದೂರಾಗಿ ಹಾಯಾಗಿ ಇಷ್ಟ ಬಂದ ಬಟ್ಟೆಗಳನ್ನು ತೊಡಬಹುದು.
ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಿಕೊಳ್ಳುವ ವಿಧಾನ ಹೀಗೆ:
1. ತುಂಬಾ ಗಡುಸಾದ ಬಟ್ಟೆಯಿಂದ ಒರೆಸಿಕೊಳ್ಳುವುದು, ಕಳಪೆ ಗುಣಮಟ್ಟದ ಡಿಯೋಡ್ರೆಂಟ್, ಚರ್ಮದ ನಿರ್ಜೀವ ಕಣ, ವ್ಯಾಕ್ಸಿಂಗ್ ವಿಧಾನ ಇವೆಲ್ಲವೂ ಕಂಕುಳು ಕಪ್ಪು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವಾಗಬಹುದು. ಅದಕ್ಕೆ ನಿಂಬೆಹಣ್ಣು ಉತ್ತಮ ಪರಿಹಾರ. ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯದಂತೆ ಹಚ್ಚಿಕೊಂಡರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
2. ಕಸ್ತೂರಿ ಅರಿಶಿನ ಮತ್ತು ವಿಟಮಿನ್ ಇ ಇರುವ ಎಣ್ಣೆ ಅಥವಾ ಕ್ರೀಂ ನಿಂದ ಮಸಾಜ್ ಮಾಡಿದರೆ ಕಂಕುಳಲ್ಲಿ ನಿರಂತರ ವ್ಯಾಕ್ಸಿಂಗ್ ನಿಂದ ಉಂಟಾಗಿರುವ ಸುಕ್ಕು ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ. ಅರಿಶಿನ ನೈಸರ್ಗಿಕ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.
3. ಸೌತೆಕಾಯಿ ರಸ ಮತ್ತು ಟೊಮೊಟೊ ಹೋಳಿನಿಂದ ಮಸಾಜ್ ಮಾಡಿಕೊಂಡು 8 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದರಿಂದ ಚರ್ಮ ಮೃದುಗೊಂಡು ಬೆಳ್ಳಗಾಗುವಂತೆ ಮಾಡುತ್ತದೆ.
4. ಸ್ನಾನಕ್ಕೆ ಮುಂಚೆ ಅರಿಶಿನ, ಕಡಲೆಹಿಟ್ಟು, ನಿಂಬೆರಸ ಮತ್ತು ಹಾಲನ್ನು ಬೆರೆಸಿ ಹಚ್ಚಿಕೊಂಡರೆ ನಿರ್ಜೀವ ಕಣಗಳನ್ನು ತೊಲಗಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.
5. ಗಂಧದ ಪುಡಿ ಈ ಸಮಸ್ಯೆಗೆ ಸೂಕ್ತ ಮದ್ದು. ಸುಗಂಧವನ್ನೂ ನೀಡುವುದರೊಂದಿಗೆ ನೈಸರ್ಗಿಕ ಬ್ಲೀಚ್ ಕೂಡ ಮಾಡುತ್ತದೆ. ತಾಜಾ ಹಾಲಿನೊಂದಿಗೆ ಗಂಧದ ಪುಡಿ ಬೆರೆಸಿ ಹಚ್ಚಿಕೊಂಡರೆ ಕಪ್ಪು ಕಲೆಯಿಂದ ಕ್ರಮೇಣ ಮುಕ್ತಿ ಹೊಂದಬಹುದು.
6.ಮೊಸರಿನೊಂದಿಗೆ ನಿಂಬೆರಸ ಮತ್ತು ಅರಿಶಿನ ಬೆರೆಸಿ ಹಚ್ಚಿಕೊಂಡರೆ ಚರ್ಮದ ಅನೇಕ ವ್ಯಾಧಿಗಳಿಂದ ಹೊರಬರುವುದು ಸಾಧ್ಯವಿದೆ.
ಈ ಸಲಹೆಗಳ ಹೊರತಾಗಿ ದೇಹದ ಬೊಜ್ಜನ್ನು ಇಳಿಸಿಕೊಳ್ಳಲು ಪ್ರಯತ್ನ ಪಡಿ. ಅತಿಯಾದ ಬೊಜ್ಜಿನಿಂದ ಕೂಡ ಚರ್ಮ ಉಜ್ಜಿಕೊಂಡು ಕಪ್ಪಗಾಗುವ ಸಾಧ್ಯತೆ ಇದೆ. ಇದಕ್ಕೆ ಕೀಟಾಣು ವಿರುದ್ಧ ಹೋರಾಡುವ ಸೂಕ್ತ ಕ್ರೀಂ ಅನ್ನು ಬಳಕೆ ಮಾಡಿ.



Click it and Unblock the Notifications