Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಕರ್ಪೂರದಲ್ಲಿದೆ ತ್ವಚೆ ಹಾಗೂ ಕೂದಲಿನ ಸಮಸ್ಯೆಗೆ ಪರಿಹಾರ
ಕರ್ಪೂರದಲ್ಲಿ ಅನೇಕ ಔಷಧೀಯ ಗುಣಗಳಿವೆ. ಆದ್ದರಿಂದಲೇ ಇದನ್ನು ತ್ವಚೆ ಹಾಗೂ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಆರ್ಯುವೇದದಲ್ಲಿ ಅನೇಕ ಬ್ಯೂಟಿ ಟ್ರೀಟ್ ಮೆಂಟ್ ಗಳಿವೆ ಕರ್ಪೂರವನ್ನು ಬಳಸುತ್ತಾರೆ.
ಕರ್ಪೂರ ಮೊಡವೆ ಹೋಗಲಾಡಿಸುವಲ್ಲಂತೂ ತುಂಬಾ ಪರಿಣಾಮಕಾರಿ. ಕರ್ಪೂರ ಬಳಸಿ ತ್ವಚೆ, ಕೂದಲಿನ ಆರೈಕೆಯನ್ನು ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

ತ್ವಚೆಯಲ್ಲಿ ತುರಿಕೆ ಕಂಡು ಬಂದರೆ
ತ್ವಚೆಯಲ್ಲಿ ವಿಪರೀತ ತುರಿಕೆ ಕಂಡು ಬಂದರೆ ಅದನ್ನು ಕರ್ಪೂರ ಬಳಸಿ ಕಡಿಮೆಮಾಡಬಹುದು. ಕರ್ಪೂರದ ಪೇಸ್ಟ್ ಅನ್ನು ತುರಿಕೆ ಇರುವ ಕಡೆ ಹಚ್ಚಿದರೆ ತಕ್ಷಣ ಕಡಿಮೆಯಾಗುವುದು.

ಗಾಯವನ್ನು ಒಣಗಿಸಲು
ಕೆಲವರಿಗೆ ಗಾಯವಾದರೆ ಬೇಗನೆ ಒಣಗುವುದಿಲ್ಲ, ಅಂತವರು ಕರ್ಪೂರವನ್ನು ನೀರಿನಲ್ಲಿ ಕರಗಿಸಿ ಗಾಯವನ್ನು ಸ್ವಚ್ಛ ಮಾಡುತ್ತಾ ಬಂದರೆ ಗಾಯ ಗುಣವಾಗುವುದು. ಆಗಷ್ಟೇ ಆದ ಗಾಯಕ್ಕೆ ಕರ್ಪೂರ ಹಾಕಬೇಡಿ. ತುಂಬಾ ದಿನವಾದರೂ ಒಣಗಿದ್ದ ಗಾಯವನ್ನು ಒಣಗಿಸಲು ಮಾತ್ರ ಕರ್ಪೂರ ಬಳಸಿ.

ಮೊಡವೆ
ಕರ್ಪೂರದ ಎಣ್ಣೆಯನ್ನು ಮೊಡವೆ ಇರುವ ಕಡೆ ಹಚ್ಚಿದರೆ ಮೊಡವೆ ಒಣಗುವುದು, ಹಾಗೂ ಮೊಡವೆ ಏಳುವುದನ್ನೂ ತಡೆಗಟ್ಟುತ್ತದೆ.

ತ್ವಚೆಯಲ್ಲಿ ಗುಳ್ಳೆಗಳು ಕಂಡುಬಂದರೆ
ಕೆಲವೊಮ್ಮೆ ತ್ವಚೆಯಲ್ಲಿ ತುರಿಕೆಯ ಜೊತೆ ಚಿಕ್ಕ-ಚಿಕ್ಕ ಗುಳ್ಳೆಗಳು ಕಂಡುಬರುತ್ತದೆ, ಆ ಸಮಸ್ಯೆಯನ್ನು ಹೋಗಲಾಡಿಸಲು ಕರ್ಪೂರವನ್ನು ಮೈಗೆ ಲೇಪಿಸಿದರೆ ಸಾಕು.

ಪಾದಗಳು ಬಿರುಕು ಬಿಟ್ಟಿದ್ದರೆ
ಬಿರುಕು ಪಾದಗಳು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಆ ಸಮಸ್ಯೆ ಕಡಿಮೆಯಾಗಿರುವುದಿಲ್ಲ. ಅಂತವರು ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ.
ಪ್ರತೀದಿನ ಕರ್ಪೂರ ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಪಾದಗಳನ್ನು ನೆನೆಸಿ, ನಂತರ ಸ್ಕ್ರಬ್ ಮಾಡಿ. ಈ ರೀತಿ ಮಾಡುವುದರಿಂದ ಪಾದಗಳಲ್ಲಿ ಬಿರುಕು ಕಡಿಮೆಯಾಗುವುದು.

ಕೂದಲಿನ ಆರೋಗ್ಯಕ್ಕೆ
ಕರ್ಪೂರ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕರ್ಪೂರದ ಎಣ್ಣೆ ಕೂದಲನ್ನು ಮಂದವಾಗಿಸುತ್ತದೆ, ಕೂದಲಿನ ಬುಡವನ್ನು ಬಲವಾಗಿಸುತ್ತದೆ. ಕರ್ಪೂರವನ್ನು ಮೊಸರು ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಕೂದಲಿನ ಹೊಳಪು ಹೆಚ್ಚುವುದು.

ಕೂದಲು ಉದುರುವುದನ್ನು ಕಮ್ಮಿ ಮಾಡುತ್ತದೆ
ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ತಲೆಯನ್ನು ಕರ್ಪೂರ ಮತ್ತು ಎಣ್ಣೆ ಮಿಕ್ಸ್ ಮಾಡಿ ಮಸಾಜ್ ಮಾಡಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು.



Click it and Unblock the Notifications