Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಕರ್ಪೂರದಲ್ಲಿದೆ ತ್ವಚೆ ಹಾಗೂ ಕೂದಲಿನ ಸಮಸ್ಯೆಗೆ ಪರಿಹಾರ
ಕರ್ಪೂರದಲ್ಲಿ ಅನೇಕ ಔಷಧೀಯ ಗುಣಗಳಿವೆ. ಆದ್ದರಿಂದಲೇ ಇದನ್ನು ತ್ವಚೆ ಹಾಗೂ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಆರ್ಯುವೇದದಲ್ಲಿ ಅನೇಕ ಬ್ಯೂಟಿ ಟ್ರೀಟ್ ಮೆಂಟ್ ಗಳಿವೆ ಕರ್ಪೂರವನ್ನು ಬಳಸುತ್ತಾರೆ.
ಕರ್ಪೂರ ಮೊಡವೆ ಹೋಗಲಾಡಿಸುವಲ್ಲಂತೂ ತುಂಬಾ ಪರಿಣಾಮಕಾರಿ. ಕರ್ಪೂರ ಬಳಸಿ ತ್ವಚೆ, ಕೂದಲಿನ ಆರೈಕೆಯನ್ನು ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

ತ್ವಚೆಯಲ್ಲಿ ತುರಿಕೆ ಕಂಡು ಬಂದರೆ
ತ್ವಚೆಯಲ್ಲಿ ವಿಪರೀತ ತುರಿಕೆ ಕಂಡು ಬಂದರೆ ಅದನ್ನು ಕರ್ಪೂರ ಬಳಸಿ ಕಡಿಮೆಮಾಡಬಹುದು. ಕರ್ಪೂರದ ಪೇಸ್ಟ್ ಅನ್ನು ತುರಿಕೆ ಇರುವ ಕಡೆ ಹಚ್ಚಿದರೆ ತಕ್ಷಣ ಕಡಿಮೆಯಾಗುವುದು.

ಗಾಯವನ್ನು ಒಣಗಿಸಲು
ಕೆಲವರಿಗೆ ಗಾಯವಾದರೆ ಬೇಗನೆ ಒಣಗುವುದಿಲ್ಲ, ಅಂತವರು ಕರ್ಪೂರವನ್ನು ನೀರಿನಲ್ಲಿ ಕರಗಿಸಿ ಗಾಯವನ್ನು ಸ್ವಚ್ಛ ಮಾಡುತ್ತಾ ಬಂದರೆ ಗಾಯ ಗುಣವಾಗುವುದು. ಆಗಷ್ಟೇ ಆದ ಗಾಯಕ್ಕೆ ಕರ್ಪೂರ ಹಾಕಬೇಡಿ. ತುಂಬಾ ದಿನವಾದರೂ ಒಣಗಿದ್ದ ಗಾಯವನ್ನು ಒಣಗಿಸಲು ಮಾತ್ರ ಕರ್ಪೂರ ಬಳಸಿ.

ಮೊಡವೆ
ಕರ್ಪೂರದ ಎಣ್ಣೆಯನ್ನು ಮೊಡವೆ ಇರುವ ಕಡೆ ಹಚ್ಚಿದರೆ ಮೊಡವೆ ಒಣಗುವುದು, ಹಾಗೂ ಮೊಡವೆ ಏಳುವುದನ್ನೂ ತಡೆಗಟ್ಟುತ್ತದೆ.

ತ್ವಚೆಯಲ್ಲಿ ಗುಳ್ಳೆಗಳು ಕಂಡುಬಂದರೆ
ಕೆಲವೊಮ್ಮೆ ತ್ವಚೆಯಲ್ಲಿ ತುರಿಕೆಯ ಜೊತೆ ಚಿಕ್ಕ-ಚಿಕ್ಕ ಗುಳ್ಳೆಗಳು ಕಂಡುಬರುತ್ತದೆ, ಆ ಸಮಸ್ಯೆಯನ್ನು ಹೋಗಲಾಡಿಸಲು ಕರ್ಪೂರವನ್ನು ಮೈಗೆ ಲೇಪಿಸಿದರೆ ಸಾಕು.

ಪಾದಗಳು ಬಿರುಕು ಬಿಟ್ಟಿದ್ದರೆ
ಬಿರುಕು ಪಾದಗಳು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಆ ಸಮಸ್ಯೆ ಕಡಿಮೆಯಾಗಿರುವುದಿಲ್ಲ. ಅಂತವರು ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ.
ಪ್ರತೀದಿನ ಕರ್ಪೂರ ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಪಾದಗಳನ್ನು ನೆನೆಸಿ, ನಂತರ ಸ್ಕ್ರಬ್ ಮಾಡಿ. ಈ ರೀತಿ ಮಾಡುವುದರಿಂದ ಪಾದಗಳಲ್ಲಿ ಬಿರುಕು ಕಡಿಮೆಯಾಗುವುದು.

ಕೂದಲಿನ ಆರೋಗ್ಯಕ್ಕೆ
ಕರ್ಪೂರ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕರ್ಪೂರದ ಎಣ್ಣೆ ಕೂದಲನ್ನು ಮಂದವಾಗಿಸುತ್ತದೆ, ಕೂದಲಿನ ಬುಡವನ್ನು ಬಲವಾಗಿಸುತ್ತದೆ. ಕರ್ಪೂರವನ್ನು ಮೊಸರು ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಕೂದಲಿನ ಹೊಳಪು ಹೆಚ್ಚುವುದು.

ಕೂದಲು ಉದುರುವುದನ್ನು ಕಮ್ಮಿ ಮಾಡುತ್ತದೆ
ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ತಲೆಯನ್ನು ಕರ್ಪೂರ ಮತ್ತು ಎಣ್ಣೆ ಮಿಕ್ಸ್ ಮಾಡಿ ಮಸಾಜ್ ಮಾಡಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು.



Click it and Unblock the Notifications