Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಅಕ್ಟೋಬರ್ 7 ನವಮಿ ಶ್ರಾದ್ಧ: ಈ ದಿನ ಯಾರಿಗೆ ಪಿತೃತರ್ಪಣ ಮಾಡಬೇಕು?
ನವಮಿ ಶ್ರಾದ್ಧವನ್ನು ಅಕ್ಟೋಬರ್ 7ರಂದು ಆಚರಿಸಲಾಗುವುದು. ಈ ನವಮಿ ಶ್ರಾದ್ಧದ ವಿಶೇಷವೆಂದರೆ ಇದನ್ನು ಮಾತೃ ನವಮಿ ಎಂದು ಕರೆಯಲಾಗುವುದು. ಈ ದಿನ ಹಿರಿಯರಿಗೆ ಅಜ್ಜ-ಅಜ್ಜಿ-ತಾಯಿ-ತಂದೆ ಹೀಗೆ ಹಿರಿಯರಿಗೆ ತರ್ಪಣ ನೀಡಲಾಗುವುದು.
ಮಾತೃ ನವಮಿ
ಈ ನವಮಿ ಶ್ರಾದ್ಧದ ವಿಶೇಷತೆಯೆಂದರೆ ನವಮಿ ತಿಥಿಯಂದು ಪೂರ್ಜರಿಗೆ ಶ್ರಾದ್ಧ ಕಾರ್ಯ ಮಾಡಲಾಗುವುದು. ಪತಿ ಮರಣವೊಂದಿದ ಪತ್ನಿಗೆ ಶ್ರಾದ್ಧವನ್ನು ಮಾಡಬಹುದು. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಇವರುಗಳಿಗೆ ಶ್ರಾದ್ಧ ಕಾರ್ಯ ಮಾಡಲು ಈ ದಿನ ಉತ್ತಮವಾಗಿದೆ. ಈ ದಿನ ಶ್ರಾದ್ಧ ಮಾಡುವುದರಿಂದ ಅಲೆದಾಡುತ್ತಿರುವ ಆತ್ಮಕ್ಕೆ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡುವುದರಿಂದ ಹಿರಿಯರಿಗೆ ಮೋಕ್ಷ ಸಿಗುತ್ತದೆ, ಇದರಿಂದ ಸಂತುಷ್ಟರಾಗುವ ಅವರು ಕುಟುಂಬವನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ.

ನವಮಿ ಶ್ರಾದ್ಧ ಸಮಯ ಬೆಳಗ್ಗೆ ಕುತುಪ್ ಮುಹೂರ್ತ 11:45ರಿಂದ 12:33ರವರೆಗೆ
ರೋಹಿಣಿ ಮುಹೂರ್ತ ಮಧ್ಯಾಹ್ನ 12:33ರಿಂದ 01:20
ಅಪರಾಹ್ನ ಕಾಲ: ಮಧ್ಯಾಹ್ನ01:20ರಿಂದ 03:43ರವರೆಗೆ
ಶ್ರಾದ್ಧಕಾರ್ಯಕ್ಕೆ ಮಹತ್ವದ ದಿನಗಳು
ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14ರವರೆಗೆ ಪಿತೃಪಕ್ಷ. ಈ ಎಲ್ಲಾ ದಿನಗಳಲ್ಲಿ ಪಿತೃತರ್ಪಣ ನೀಡಲಾಗುವುದು. ಭರಣಿ ಪಿತೃಪಕ್ಷ, ನವಮಿ ಪಿತೃ, ಸರ್ವಪಿತೃ ಅಮವಾಸ್ಯೆ ಪ್ರಮುಖ ದಿನವಾಗಿದೆ.
ಸರ್ವಪಿತೃ ಅಮವಾಸ್ಯೆ ಯಾವಾಗ ಬರುತ್ತದೆ?
ಸರ್ವಪಿತೃ ಅಮವಾಸ್ಯೆಯನ್ನು ಅಕ್ಟೋಬರ್ 14ರಂದು ಆಚರಿಸಲಾಗುವುದು. ಈ ದಿನ ಎಲ್ಲಾ ಪೂರ್ಬಜರಿಗೆ ಪಿತೃ ತರ್ಪಣ ನೀಡಲಾಗುವುದು. ಈ ದಿನ ಪಿತೃ ತರ್ಪಣ ಮಾಡುವುದರಿಂದ ನಮಗೆ ತಿಳಿಯದೇ ಇರುವ ಪೂರ್ವಜರು ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಅವರಿಗೆ ಮೋಕ್ಷ ಸಿಗುವುದು, ಇದರಿಂದ ಪಿತೃ ದೋಷ ನಿವಾರಣೆಯಾಗುವುದು.
ಸರ್ವಪಿತೃ ಪಕ್ಷದಂದೇ ಸೂರ್ಯಗ್ರಹಣವೂ ಬಂದಿದೆ.
ನವಮಿ ಶ್ರಾದ್ಧ- 07 ಅಕ್ಟೋಬರ್ 2023,
ಶನಿವಾರ ದಶಮಿ ಶ್ರಾದ್ಧ- 08 ಅಕ್ಟೋಬರ್ 2023,
ಭಾನುವಾರ ಏಕಾದಶಿ ಶ್ರಾದ್ಧ- 09 ಅಕ್ಟೋಬರ್ 2023,
ಸೋಮವಾರ ದ್ವಾದಶಿ ಶ್ರಾದ್ಧ- 11 ಅಕ್ಟೋಬರ್ 2023,
ಬುಧವಾರ ತ್ರಯೋದಶಿ ಶ್ರಾದ್ಧ- 12 ಅಕ್ಟೋಬರ್ 2023,
ಗುರುವಾರ ಚತುರ್ದಶಿ ಶ್ರಾದ್ಧ- 13 ಅಕ್ಟೋಬರ್ 2023,
ಶುಕ್ರವಾರ ಸರ್ವ ಪಿತೃ ಅಮವಾಸ್ಯೆ- 14 ಅಕ್ಟೋಬರ್ 2023, ಶನಿವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
