Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಅಕ್ಟೋಬರ್ 7 ನವಮಿ ಶ್ರಾದ್ಧ: ಈ ದಿನ ಯಾರಿಗೆ ಪಿತೃತರ್ಪಣ ಮಾಡಬೇಕು?
ನವಮಿ ಶ್ರಾದ್ಧವನ್ನು ಅಕ್ಟೋಬರ್ 7ರಂದು ಆಚರಿಸಲಾಗುವುದು. ಈ ನವಮಿ ಶ್ರಾದ್ಧದ ವಿಶೇಷವೆಂದರೆ ಇದನ್ನು ಮಾತೃ ನವಮಿ ಎಂದು ಕರೆಯಲಾಗುವುದು. ಈ ದಿನ ಹಿರಿಯರಿಗೆ ಅಜ್ಜ-ಅಜ್ಜಿ-ತಾಯಿ-ತಂದೆ ಹೀಗೆ ಹಿರಿಯರಿಗೆ ತರ್ಪಣ ನೀಡಲಾಗುವುದು.
ಮಾತೃ ನವಮಿ
ಈ ನವಮಿ ಶ್ರಾದ್ಧದ ವಿಶೇಷತೆಯೆಂದರೆ ನವಮಿ ತಿಥಿಯಂದು ಪೂರ್ಜರಿಗೆ ಶ್ರಾದ್ಧ ಕಾರ್ಯ ಮಾಡಲಾಗುವುದು. ಪತಿ ಮರಣವೊಂದಿದ ಪತ್ನಿಗೆ ಶ್ರಾದ್ಧವನ್ನು ಮಾಡಬಹುದು. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಇವರುಗಳಿಗೆ ಶ್ರಾದ್ಧ ಕಾರ್ಯ ಮಾಡಲು ಈ ದಿನ ಉತ್ತಮವಾಗಿದೆ. ಈ ದಿನ ಶ್ರಾದ್ಧ ಮಾಡುವುದರಿಂದ ಅಲೆದಾಡುತ್ತಿರುವ ಆತ್ಮಕ್ಕೆ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡುವುದರಿಂದ ಹಿರಿಯರಿಗೆ ಮೋಕ್ಷ ಸಿಗುತ್ತದೆ, ಇದರಿಂದ ಸಂತುಷ್ಟರಾಗುವ ಅವರು ಕುಟುಂಬವನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ.

ನವಮಿ ಶ್ರಾದ್ಧ ಸಮಯ ಬೆಳಗ್ಗೆ ಕುತುಪ್ ಮುಹೂರ್ತ 11:45ರಿಂದ 12:33ರವರೆಗೆ
ರೋಹಿಣಿ ಮುಹೂರ್ತ ಮಧ್ಯಾಹ್ನ 12:33ರಿಂದ 01:20
ಅಪರಾಹ್ನ ಕಾಲ: ಮಧ್ಯಾಹ್ನ01:20ರಿಂದ 03:43ರವರೆಗೆ
ಶ್ರಾದ್ಧಕಾರ್ಯಕ್ಕೆ ಮಹತ್ವದ ದಿನಗಳು
ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14ರವರೆಗೆ ಪಿತೃಪಕ್ಷ. ಈ ಎಲ್ಲಾ ದಿನಗಳಲ್ಲಿ ಪಿತೃತರ್ಪಣ ನೀಡಲಾಗುವುದು. ಭರಣಿ ಪಿತೃಪಕ್ಷ, ನವಮಿ ಪಿತೃ, ಸರ್ವಪಿತೃ ಅಮವಾಸ್ಯೆ ಪ್ರಮುಖ ದಿನವಾಗಿದೆ.
ಸರ್ವಪಿತೃ ಅಮವಾಸ್ಯೆ ಯಾವಾಗ ಬರುತ್ತದೆ?
ಸರ್ವಪಿತೃ ಅಮವಾಸ್ಯೆಯನ್ನು ಅಕ್ಟೋಬರ್ 14ರಂದು ಆಚರಿಸಲಾಗುವುದು. ಈ ದಿನ ಎಲ್ಲಾ ಪೂರ್ಬಜರಿಗೆ ಪಿತೃ ತರ್ಪಣ ನೀಡಲಾಗುವುದು. ಈ ದಿನ ಪಿತೃ ತರ್ಪಣ ಮಾಡುವುದರಿಂದ ನಮಗೆ ತಿಳಿಯದೇ ಇರುವ ಪೂರ್ವಜರು ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಅವರಿಗೆ ಮೋಕ್ಷ ಸಿಗುವುದು, ಇದರಿಂದ ಪಿತೃ ದೋಷ ನಿವಾರಣೆಯಾಗುವುದು.
ಸರ್ವಪಿತೃ ಪಕ್ಷದಂದೇ ಸೂರ್ಯಗ್ರಹಣವೂ ಬಂದಿದೆ.
ನವಮಿ ಶ್ರಾದ್ಧ- 07 ಅಕ್ಟೋಬರ್ 2023,
ಶನಿವಾರ ದಶಮಿ ಶ್ರಾದ್ಧ- 08 ಅಕ್ಟೋಬರ್ 2023,
ಭಾನುವಾರ ಏಕಾದಶಿ ಶ್ರಾದ್ಧ- 09 ಅಕ್ಟೋಬರ್ 2023,
ಸೋಮವಾರ ದ್ವಾದಶಿ ಶ್ರಾದ್ಧ- 11 ಅಕ್ಟೋಬರ್ 2023,
ಬುಧವಾರ ತ್ರಯೋದಶಿ ಶ್ರಾದ್ಧ- 12 ಅಕ್ಟೋಬರ್ 2023,
ಗುರುವಾರ ಚತುರ್ದಶಿ ಶ್ರಾದ್ಧ- 13 ಅಕ್ಟೋಬರ್ 2023,
ಶುಕ್ರವಾರ ಸರ್ವ ಪಿತೃ ಅಮವಾಸ್ಯೆ- 14 ಅಕ್ಟೋಬರ್ 2023, ಶನಿವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications