Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ದಸರಾ ಕುರಿತ 7 ಆಸಕ್ತಿಕರ ಸಂಗತಿಗಳು: ದಸರಾವನ್ನು ದೇಶದ ಹೊರಗಡೆಯೂ ಆಚರಿಸುತ್ತಾರೆ
10 ದಿನಗಳ ದಸರಾ ಆಚರಣೆಯನ್ನು ಜಗತ್ತಿನಲ್ಲಿಯೇ ಅತೀ ಹೆಚ್ಚು ಅದ್ದೂರಿಯಿಂದ ಆಚರಿಸಲ್ಪಡುವುದು ಮೈಸೂರಿನಲ್ಲಿ. ಮೈಸೂರು ಹೊರತುಪಡಿಸಿ ಕೊಡಗು ಮತ್ತಿತರ ಕಡೆಗಳಲ್ಲಿ ದಸರಾ ಹಬ್ಬವನ್ನು ಆಚರಿಸುತ್ತಾರೆ. ಮಡಿಕೇರಿ, ಗೋಣಿಕೊಪ್ಪ ಈ ಕಡೆಗಳಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಆದರೆ ದಸರಾವನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಆಚರಿಸುತ್ತಾರೆ ಎಂಬುವುದು ಗೊತ್ತೇ?

ಮೈಸೂರು ದಸರಾ: ಮೈಸೂರು ದಸರಾವನ್ನು 17ನೇ ಶತಮಾನದಿಂದ ಆಚರಿಸಲಾಗುತ್ತಿದೆ. ಜಂಬೂ ಸವಾರಿ ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತುಕೊಂಡು ಬರುವ ಆನೆಯನ್ನು ನೋಡಲೆಂದೇ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ.
ಕುಲ್ಲು ದಸರಾ: ಹಿಮಾಚಲ ಪ್ರದೇಶದಲ್ಲಿ ಒಂದು ವಾರಗಳ ಕಾಲ ಕುಲ್ಲು ದಸರಾ ಎಂದು ಆಚರಿಸಲಾಗುವುದು. ದಸರಾ ದಿನದಂದು ಪ್ರಾರಂಭವಾಗಿ ಏಳು ದಿನಗಳವರೆಗೆ ನಡೆಯಲಿದೆ. ಈ ಸಮಯದಲ್ಲಿ ರಾಮನನ್ನು ಪೂಜಿಸಲಾಗುವುದು, ರಾಮನ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು.
ವಿದೇಶದಲ್ಲಿ ದಸರಾ ಆಚರಣೆ
ನೇಪಾಳ, ಬಾಂಗ್ಲದೇಶದಲ್ಲಿ ದಸರಾ ಆಚರಣೆ ಮಾಡಲಾಗುವುದು. ಮಲೇಷ್ಯಾದಲ್ಲಿ ಕೂಡ ದಸರಾ ಹಬ್ಬವನ್ನು ಆಚರಿಸಲಾಗುವುದು.
ಬೌದ್ಧರಿಗೆ ವಿಶೇಷವಾದ ದಿನ
ಬೌದ್ಧರು ಈ ಸಂದರ್ಭದಲ್ಲಿ ಬೌದ್ಧ ಧರ್ಮದ ಪ್ರಚಾರವನ್ನು ಮಾಡುತ್ತಾರೆ.
ಮಳೆಗಾಲ ಮುಕ್ತಾಯದ ಸಂಕೇತ
ದಸರಾ ಬಳಿಕ ಮಳೆಗಾಲ ಮುಗುದು ಚಳಿಗಾಲ ಶುರುವಾಗುವುದು. ಈ ಅವಧಿಯಲ್ಲಿ ಬೆಳೆಕೊಯ್ಲು ಮಾಡಲಾಗುವುದು.
ಮೈಸೂರು ದಸರಾದ ವಿಶೇಷತೆ
ರಾಜ ವಡೆಯರ್ ಮೈಸೂರು ರಾಜ್ಯವನ್ನು 1610ರಲ್ಲಿ ಸ್ಥಾಪಿಸಿದರು. ಚಿನ್ನದ ಅಂಬಾರಿಯಲ್ಲಿ ರಾಜ ಕುಳಿತು ಮೆರವಳಿಗೆಯನ್ನು ಮಾಡುತ್ತಿದ್ದರು. 1971ರವರೆಗೆ ಈ ಪದ್ಧತಿ ಇತ್ತು, ಅದಾದ ಬಳಿಕ ಚಮುಂಡೇಶ್ವರಿ ದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯ ಮುನ್ನ ಮೈಸೂರು ರಾಜ ಮನೆತನದವರು ಪೂಜಾ ವಿಧಿಗಳನ್ನು ಪೂರೈಸುತ್ತಾರೆ. ಇಡೀ ಮೈಸೂರು ನವವಧುವಿನಂತೆ ಸಿಂಗರಿಸಿರುತ್ತದೆ, ಮೈಸೂರು ಅರಮನೆ ನೋಡಲು ಎರಡು ಕಣ್ಣು ಸಾಲದು ಅಷ್ಟೊಂದು ಸುಂದರವಾಗಿರುತ್ತದೆ.
* ಬಲರಾಮ, ಅರ್ಜುನ ಬಳಿಕ ಅಭಿಮನ್ಯು ಅಂಬಾರಿಯನ್ನು ಹೊರಲಿದ್ದಾರೆ. ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತುಕೊಂಡು ಸಾಗಲಿದೆ. ಅಭಿಮನ್ಯು ಜೊತೆಗೆ ವಿಜಯ, ವರಲಕ್ಷ್ಮಿ, ಅರ್ಜುನ, ಭೀಮಾ, ಮಹೇಂದ್ರ, ಧನಂಜಯ, ಗೋಪಿ, ಪಾರ್ಥಸಾರಥಿ ಮೆರವಣಿಗೆಯಲ್ಲಿ ಸಾಗಲಿವೆ.
ಈ ತಿಂಗಳಿನಲ್ಲಿ ಆನೆಗಳಿಗೆ ಹಾಗೂ ಮಾವುತರಿಗೆ ರಾಜ ಆತಿಥ್ಯ ಸಿಗಲಿದೆ. ಅಲ್ಲದೆ ದಸರಾ ಶುರುವಾಗುವ ಒಂದು ತಿಂಗಳು ಮೊದಲು ಬರುವ ಆನೆಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು. 750 ಕೆಜಿ ಮರದ ಪಲ್ಲಕ್ಕಿಯನ್ನು ಅಭಿಮನ್ಯು ಬೆನ್ನಿಗೆ ಕಟ್ಟಿ ತರಬೇತಿ ನೀಡಲಾಗುವುದು. ಶುಭ ಸಮಯದಲ್ಲಿ ಮೆರವಣಿಗೆ ಪ್ರಾರಂಭವಾಗುವುದು, 5 ಗಂಟೆಗಳ ಮೆರವಣಿಗೆ ಬಳಿಕ ಬನ್ನಿಮಂಡಪಕ್ಕೆ ಬರಲಾಗುವುದು. ಇಲ್ಲಿಗೆ ಬಂದಾಗ ಆ ವರ್ಷದ ದಸರಾ ಆಚರಣೆಗೆ ತೆರೆ ಬೀಳುತ್ತದೆ.



Click it and Unblock the Notifications