Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ದಸರಾ ಕುರಿತ 7 ಆಸಕ್ತಿಕರ ಸಂಗತಿಗಳು: ದಸರಾವನ್ನು ದೇಶದ ಹೊರಗಡೆಯೂ ಆಚರಿಸುತ್ತಾರೆ
10 ದಿನಗಳ ದಸರಾ ಆಚರಣೆಯನ್ನು ಜಗತ್ತಿನಲ್ಲಿಯೇ ಅತೀ ಹೆಚ್ಚು ಅದ್ದೂರಿಯಿಂದ ಆಚರಿಸಲ್ಪಡುವುದು ಮೈಸೂರಿನಲ್ಲಿ. ಮೈಸೂರು ಹೊರತುಪಡಿಸಿ ಕೊಡಗು ಮತ್ತಿತರ ಕಡೆಗಳಲ್ಲಿ ದಸರಾ ಹಬ್ಬವನ್ನು ಆಚರಿಸುತ್ತಾರೆ. ಮಡಿಕೇರಿ, ಗೋಣಿಕೊಪ್ಪ ಈ ಕಡೆಗಳಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಆದರೆ ದಸರಾವನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಆಚರಿಸುತ್ತಾರೆ ಎಂಬುವುದು ಗೊತ್ತೇ?

ಮೈಸೂರು ದಸರಾ: ಮೈಸೂರು ದಸರಾವನ್ನು 17ನೇ ಶತಮಾನದಿಂದ ಆಚರಿಸಲಾಗುತ್ತಿದೆ. ಜಂಬೂ ಸವಾರಿ ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತುಕೊಂಡು ಬರುವ ಆನೆಯನ್ನು ನೋಡಲೆಂದೇ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ.
ಕುಲ್ಲು ದಸರಾ: ಹಿಮಾಚಲ ಪ್ರದೇಶದಲ್ಲಿ ಒಂದು ವಾರಗಳ ಕಾಲ ಕುಲ್ಲು ದಸರಾ ಎಂದು ಆಚರಿಸಲಾಗುವುದು. ದಸರಾ ದಿನದಂದು ಪ್ರಾರಂಭವಾಗಿ ಏಳು ದಿನಗಳವರೆಗೆ ನಡೆಯಲಿದೆ. ಈ ಸಮಯದಲ್ಲಿ ರಾಮನನ್ನು ಪೂಜಿಸಲಾಗುವುದು, ರಾಮನ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು.
ವಿದೇಶದಲ್ಲಿ ದಸರಾ ಆಚರಣೆ
ನೇಪಾಳ, ಬಾಂಗ್ಲದೇಶದಲ್ಲಿ ದಸರಾ ಆಚರಣೆ ಮಾಡಲಾಗುವುದು. ಮಲೇಷ್ಯಾದಲ್ಲಿ ಕೂಡ ದಸರಾ ಹಬ್ಬವನ್ನು ಆಚರಿಸಲಾಗುವುದು.
ಬೌದ್ಧರಿಗೆ ವಿಶೇಷವಾದ ದಿನ
ಬೌದ್ಧರು ಈ ಸಂದರ್ಭದಲ್ಲಿ ಬೌದ್ಧ ಧರ್ಮದ ಪ್ರಚಾರವನ್ನು ಮಾಡುತ್ತಾರೆ.
ಮಳೆಗಾಲ ಮುಕ್ತಾಯದ ಸಂಕೇತ
ದಸರಾ ಬಳಿಕ ಮಳೆಗಾಲ ಮುಗುದು ಚಳಿಗಾಲ ಶುರುವಾಗುವುದು. ಈ ಅವಧಿಯಲ್ಲಿ ಬೆಳೆಕೊಯ್ಲು ಮಾಡಲಾಗುವುದು.
ಮೈಸೂರು ದಸರಾದ ವಿಶೇಷತೆ
ರಾಜ ವಡೆಯರ್ ಮೈಸೂರು ರಾಜ್ಯವನ್ನು 1610ರಲ್ಲಿ ಸ್ಥಾಪಿಸಿದರು. ಚಿನ್ನದ ಅಂಬಾರಿಯಲ್ಲಿ ರಾಜ ಕುಳಿತು ಮೆರವಳಿಗೆಯನ್ನು ಮಾಡುತ್ತಿದ್ದರು. 1971ರವರೆಗೆ ಈ ಪದ್ಧತಿ ಇತ್ತು, ಅದಾದ ಬಳಿಕ ಚಮುಂಡೇಶ್ವರಿ ದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯ ಮುನ್ನ ಮೈಸೂರು ರಾಜ ಮನೆತನದವರು ಪೂಜಾ ವಿಧಿಗಳನ್ನು ಪೂರೈಸುತ್ತಾರೆ. ಇಡೀ ಮೈಸೂರು ನವವಧುವಿನಂತೆ ಸಿಂಗರಿಸಿರುತ್ತದೆ, ಮೈಸೂರು ಅರಮನೆ ನೋಡಲು ಎರಡು ಕಣ್ಣು ಸಾಲದು ಅಷ್ಟೊಂದು ಸುಂದರವಾಗಿರುತ್ತದೆ.
* ಬಲರಾಮ, ಅರ್ಜುನ ಬಳಿಕ ಅಭಿಮನ್ಯು ಅಂಬಾರಿಯನ್ನು ಹೊರಲಿದ್ದಾರೆ. ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತುಕೊಂಡು ಸಾಗಲಿದೆ. ಅಭಿಮನ್ಯು ಜೊತೆಗೆ ವಿಜಯ, ವರಲಕ್ಷ್ಮಿ, ಅರ್ಜುನ, ಭೀಮಾ, ಮಹೇಂದ್ರ, ಧನಂಜಯ, ಗೋಪಿ, ಪಾರ್ಥಸಾರಥಿ ಮೆರವಣಿಗೆಯಲ್ಲಿ ಸಾಗಲಿವೆ.
ಈ ತಿಂಗಳಿನಲ್ಲಿ ಆನೆಗಳಿಗೆ ಹಾಗೂ ಮಾವುತರಿಗೆ ರಾಜ ಆತಿಥ್ಯ ಸಿಗಲಿದೆ. ಅಲ್ಲದೆ ದಸರಾ ಶುರುವಾಗುವ ಒಂದು ತಿಂಗಳು ಮೊದಲು ಬರುವ ಆನೆಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು. 750 ಕೆಜಿ ಮರದ ಪಲ್ಲಕ್ಕಿಯನ್ನು ಅಭಿಮನ್ಯು ಬೆನ್ನಿಗೆ ಕಟ್ಟಿ ತರಬೇತಿ ನೀಡಲಾಗುವುದು. ಶುಭ ಸಮಯದಲ್ಲಿ ಮೆರವಣಿಗೆ ಪ್ರಾರಂಭವಾಗುವುದು, 5 ಗಂಟೆಗಳ ಮೆರವಣಿಗೆ ಬಳಿಕ ಬನ್ನಿಮಂಡಪಕ್ಕೆ ಬರಲಾಗುವುದು. ಇಲ್ಲಿಗೆ ಬಂದಾಗ ಆ ವರ್ಷದ ದಸರಾ ಆಚರಣೆಗೆ ತೆರೆ ಬೀಳುತ್ತದೆ.



Click it and Unblock the Notifications