Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Chandra Grahan 2025: ನಿಮ್ಮ ರಾಶಿಗನುಗುಣವಾಗಿ ಈ ಮಂತ್ರ ಪಠಿಸಿ! ಕಷ್ಟಗಳು ದೂರ, ಯಾರಿಗೆ ಅಶುಭ?
ಧಾರ್ಮಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನದಿಂದ ಗ್ರಹಣ ಕಾಲಕ್ಕೆ ಅದರದೇ ಆದ ಮಹತ್ವವಿದೆ. ವಿಜ್ಞಾನವು ಇದನ್ನು ಖಗೋಳೀಯ ಘಟನೆ ಎಂದು ಪರಿಗಣಿಸಿದರೆ, ಜ್ಯೋತಿಷ್ಯವು ಶುಭ ಮತ್ತು ಅಶುಭ ಪರಿಣಾಮಗಳ ಕುರಿತು ವಿವರಿಸುತ್ತದೆ. ಚಂದ್ರಗ್ರಹಣದ (Chandra Grahan 2025) ಸಮಯದಲ್ಲಿ ವಿಶೇಷ ಶಕ್ತಿ ಪ್ರಕೃತಿಯಲ್ಲಿ ಹರಿಯುತ್ತದೆ. ಇದು ಎಲ್ಲ ರಾಶಿಗಳ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಸಮಯವು ಆತ್ಮಾವಲೋಕನ, ಸಾಧನೆ, ಮಂತ್ರ ಜಪ ಹಾಗೂ ಧ್ಯಾನಕ್ಕೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಜಪಿಸಿದ ಮಂತ್ರಗಳು ಕಷ್ಟಗಳನ್ನು ದೂರ ಮಾಡುತ್ತವೆ. ಗ್ರಹಣ ಕಾಲದಲ್ಲಿ ಮಾಡುವ ಮಂತ್ರ ಜಪವು (Chandra Grahan 2025 mantras) ಸಾಮಾನ್ಯ ದಿನಗಳಿಗಿಂತ ಹೆಚ್ಚು ಫಲಕಾರಿಯಾಗಿರುತ್ತದೆ.
ಭಾರತೀಯ ಕಾಲಮಾನದ ಪ್ರಕಾರ, ಚಂದ್ರಗ್ರಹಣವು ಇಂದು (ಸೆಪ್ಟೆಂಬರ್ 7) ರಾತ್ರಿ 9.57ಕ್ಕೆ ಪ್ರಾರಂಭವಾಗಿ ನಾಳೆ (ಸೆಪ್ಟೆಂಬರ್ 8) ಬೆಳಗ್ಗೆ 1.27ಕ್ಕೆ ಕೊನೆಗೊಳ್ಳಲಿದೆ. ರಾತ್ರಿ 11 ರಿಂದ 12.23ರವರೆಗೆ ಗ್ರಹಣವು ಅತ್ಯಂತ ಆಕರ್ಷಕವಾಗಿರುತ್ತದೆ. ಈ ಸಮಯದಲ್ಲಿ ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿರುತ್ತಾನೆ. ಕೆಂಪು ಬಣ್ಣದಲ್ಲಿ ಪ್ರಕಾಶಿಸುತ್ತಾನೆ. ಇದನ್ನು 'ಬ್ಲಡ್ ಮೂನ್' (Blood Moon) ಎಂದೂ ಕರೆಯಲಾಗುತ್ತದೆ.

ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮಂತ್ರ ಜಪ ಮಾಡುವುದರಿಂದ ಈ ನಕಾರಾತ್ಮಕತೆ ದೂರವಾಗುತ್ತದೆ. ಈ ಸಮಯದಲ್ಲಿ ಜಪಿಸಿದ ಮಂತ್ರಗಳು ಮಾನಸಿಕ ಶಾಂತಿ, ಆತ್ಮಬಲ ಮತ್ತು ದೇವರ ಆಶೀರ್ವಾದವನ್ನು ನೀಡುತ್ತವೆ. ಜ್ಯೋತಿಷ್ಯದ ಪ್ರಕಾರ, ಗ್ರಹಣ ಕಾಲದಲ್ಲಿ ಮಾಡುವ ಮಂತ್ರ ಜಪದಿಂದ ಜೀವನದ ಸಂಕಷ್ಟಗಳು, ರೋಗಗಳು ಮತ್ತು ಕಷ್ಟಗಳು ದೂರವಾಗುತ್ತವೆ. ಗ್ರಹಣ ಸಮಯವನ್ನು ಆಧ್ಯಾತ್ಮಿಕ ಸಾಧನೆ ಮತ್ತು ಆತ್ಮಶುದ್ಧಿಗೆ ಅತ್ಯಂತ ಪರಿಣಾಮಕಾರಿ.
ಚಂದ್ರ-ದೋಷ ನಿವಾರಕ ಮಂತ್ರ
ಸೆಪ್ಟೆಂಬರ್ 7ರಂದು ಪಿತ್ರಪಕ್ಷದ ಮೊದಲ ದಿನವೇ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಕೆಲವು ವಿಶೇಷ ಮಂತ್ರಗಳನ್ನು ಜಪಿಸುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ ಮತ್ತು ಅಶುಭ ಪರಿಣಾಮಗಳಿಂದ ರಕ್ಷಣೆ ದೊರೆಯುತ್ತದೆ. 'ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಮಸೇ ನಮಃ' ಅಥವಾ 'ಓಂ ಸೋಮಾಯ ನಮಃ' ಚಂದ್ರ-ದೋಷ ನಿವಾರಕ ಮಂತ್ರಗಳನ್ನು ಜಪಿಸಬಹುದು. ಇದರ ಜೊತೆಗೆ, 'ಓಂ ನಮಃ ಶಿವಾಯ' ಮತ್ತು 'ಓಂ ಚಂದ್ರಮಸೇ ನಮಃ' ಮಂತ್ರಗಳನ್ನು ಜಪಿಸುವುದರಿಂದ ಶುಭ ಫಲಗಳು ದೊರೆಯುತ್ತವೆ.
ಈ ವಿಶೇಷ ಮಂತ್ರಗಳು ಹೆಚ್ಚು ಫಲಪ್ರದ
• ಮಹಾಮೃತ್ಯುಂಜಯ ಮಂತ್ರ: ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್. ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್॥
ಈ ಮಂತ್ರವು ಅಕಾಲಿಕ ಮರಣ, ರೋಗ ಮತ್ತು ಭಯವನ್ನು ದೂರ ಮಾಡುತ್ತದೆ. ಇದನ್ನು ಕನಿಷ್ಠ 108 ಬಾರಿ ಜಪಿಸಬೇಕು.
• ಗಾಯತ್ರಿ ಮಂತ್ರ: ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್॥
ಈ ಮಂತ್ರವು ಆತ್ಮಶುದ್ಧಿ ಮತ್ತು ತೇಜಸ್ಸನ್ನು ನೀಡುತ್ತದೆ. ಗ್ರಹಣ ಕಾಲದಲ್ಲಿ ಗಾಯತ್ರಿ ಮಂತ್ರ ಜಪದಿಂದ ಮನಸ್ಸು ಮತ್ತು ಬುದ್ಧಿ ಶುದ್ಧವಾಗುತ್ತವೆ.
ಯಾವ ರಾಶಿಯವರು ಯಾವ ಮಂತ್ರ ಜಪಿಸಬೇಕು
• ಮೇಷ ರಾಶಿ: ಓಂ ಹಂ ಹನುಮತೇ ನಮಃ
• ವೃಷಭ ರಾಶಿ: ಓಂ ನಮೋ ಭಗವತೇ ವಾಸುದೇವಾಯ
• ಮಿಥುನ ರಾಶಿ: ಓಂ ಅನಂತಾಯ ನಮಃ
• ಕರ್ಕ ರಾಶಿ: ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
• ಸಿಂಹ ರಾಶಿ: ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ
• ಕನ್ಯಾ ರಾಶಿ: ಓಂ ಗಂ ಗಣಪತಯೇ ನಮಃ
• ತುಲಾ ರಾಶಿ: ಓಂ ಕ್ಲೀಂ ಕೃಷ್ಣಾಯ ನಮಃ
• ವೃಶ್ಚಿಕ ರಾಶಿ: ಓಂ ನಮಃ ಶಿವಾಯ
• ಧನು ರಾಶಿ: ಓಂ ಧನ್ವಂತರಾಯೈ ನಮಃ
• ಮಕರ ರಾಶಿ: ಓಂ ಕಾಲ ಭೈರವಾಯ ನಮಃ
• ಕುಂಭ ರಾಶಿ: ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್
• ಮೀನ ರಾಶಿ: ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಮಸೇ ನಮಃ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












