Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಹಿಳೆಯರು ಮಕ್ಕಳಿಗಾಗಿ ವಿಚ್ಛೇದನಕ್ಕೆ ಹಿಂದೇಟು ಹಾಕುತ್ತಾರಂತೆ!
ಜೀವನದ ಪ್ರಮುಖ ಘಟ್ಟವಾಗಿರುವ ವೈವಾಹಿಕ ಜೀವನವು ಸರಿಯಾಗಿದ್ದರೆ ಅದು ದೇವರು ಕೊಟ್ಟ ವರವೆನ್ನಬಹುದು. ಒಂದು ವೇಳೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಿ ವಿಚ್ಛೇದನ ನೀಡುವಂತಹ ಪರಿಸ್ಥಿತಿ ಬಂದರೆ ಆಗ ಇದರ ಪರಿಣಾಮ ಮಹಿಳೆಯರ ಮೇಲೆ ಹೆಚ್ಚಾಗುತ್ತದೆ. ಯಾಕೆಂದರೆ ಅದಾಗಲೇ ಮಗುವಾಗಿದ್ದರೆ ಮಗುವಿನ ಜವಾಬ್ದಾರಿಯನ್ನು ಕೂಡ ತೆಗೆದುಕೊಳ್ಳಬೇಕು.
ವಿಚ್ಛೇದನ ನೀಡುವಾಗ ತಾಯಿ ಆರೈಕೆಗೆ ಮಗುವನ್ನು ನೀಡುವ ಕಾರಣದಿಂದ ಪುರುಷರಿಗೆ ಯಾವುದೇ ಜವಾಬ್ದಾರಿ ಇರುವುದಿಲ್ಲ. ಆದರೆ ಮಹಿಳೆಯರು ಮಗುವನ್ನು ಸಾಕಲು ಕಷ್ಟಪಡಬೇಕಾಗುತ್ತದೆ. ಜೀವನಾಂಶ ಸಿಕ್ಕಿದರೂ ಸಮಾಜದಲ್ಲಿ ಮಗುವನ್ನು ದೊಡ್ಡವರನ್ನಾಗಿ ಮಾಡಿ ಬೆಳೆಸುವುದು ಒಂದು ಸವಾಲಿನ ಕೆಲಸ. ಅದರಲ್ಲೂ ಮಹಿಳೆಯರಿಗೆ ವೃತ್ತಿ ಹಾಗೂ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದು ಅತೀ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ.
ಇದೇ ಕಾರಣದಿಂದಾಗಿ ಹೆಚ್ಚಿನ ಮಹಿಳೆಯರು ಏನೇ ಸಮಸ್ಯೆ ಬಂದರೂ ವಿಚ್ಛೇದನ ನೀಡಲು ಹಿಂಜರಿಯುತ್ತಾರೆ. ಎಷ್ಟೇ ಕಷ್ಟವಾದರೂ ತನ್ನ ಪತಿಯೊಂದಿಗೆ ಮುಂದುವರಿಯುತ್ತಾರೆ. ಯಾಕೆಂದರೆ ಮಗುವಿನ ಭವಿಷ್ಯದ ಬಗ್ಗೆ ಅವರಿಗೆ ಭೀತಿಯಿರುತ್ತದೆ,. ಆದರೆ ಅಧ್ಯಯನಗಳ ಪ್ರಕಾರ ಮಹಿಳೆಯರು ಮಗುವನ್ನು ಯಶಸ್ವಿಯಾಗಿ ಬೆಳೆಸಬಲ್ಲರು ಎಂದು ಹೇಳಿವೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ....

ಅಧ್ಯಯನಗಳು ಏನು ಹೇಳುತ್ತವೆ?
ಕೇವಲ ತಾಯಿ ಬೆಳೆಸುತ್ತಿರುವಂತಹ ಮಕ್ಕಳ ಭಾವನಾತ್ಮಕ ಆರೋಗ್ಯ ಮತ್ತು ಒತ್ತಡದ ಮಟ್ಟವನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಇದರ ವರದಿಯನ್ನು ಇತರ ಮಕ್ಕಳೊಂದಿಗೆ ತಾಳೆ ಮಾಡಿ ನೋಡಿದಾಗ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ.

ಒಂಟಿ ತಾಯಂದಿರು ಹೇಗೆ?
ಮಗುವನ್ನು ಬೆಳೆಸುವಂತಹ ಒಂಟಿ ತಾಯಂದಿರುವ ಕುಟುಂಬದವರು ಹಾಗೂ ಸ್ನೇಹಿತರ ಬೆಂಬಲವನ್ನು ಪಡೆದುಕೊಳ್ಳುವರು. ಈ ನೆರವಿನಿಂದಾಗಿ ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಬೆಳೆದು ಸಾಮಾಜಿಕ ಸಂಬಂಧವು ಆರೋಗ್ಯಕರವಾಗಿರುವುದು.

ಕಿರುಚಾಡುವ ಪೋಷಕರು
ಯಾವಾಗಲೂ ಕಿರುಚಾಡುವಂತಹ ಪೋಷಕರ ಮಕ್ಕಳು ತುಂಬಾ ಸಮಸ್ಯೆಗೆ ಸಿಲುಕುತ್ತಾರೆ ಎಂದು ಹೇಳಿರುವ ಅಧ್ಯಯನಗಳು, ಒಂಟಿ ತಾಯಂದಿರ ಮಕ್ಕಳಿಗಿಂತ ಕಿರುಚಾಡುವ ಪೋಷಕರ ಮಕ್ಕಳು ಹೆಚ್ಚು ತೊಂದರೆಗೊಳಗಾಗುತ್ತಾರೆ.

ಮಾನವೀಯ ಸಂಬಂಧಗಳು
ಪೋಷಕರ ನಡುವೆ ಬಿರುಕು ಬಿಟ್ಟಿರುವ ಸಂಬಂಧ ಮತ್ತು ಪೋಷಕರು ಮತ್ತು ಮಕ್ಕಳ ನಡುವೆ ಸಂಬಂಧ ಸರಿಯಗಿರದಿದ್ದರೆ ಅದರಿಂದ ಮಕ್ಕಳ ಭಾವನಾತ್ಮಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದು.

ಮಗುವನ್ನು ಬೆಳೆಸುವುದು
ತಂದೆಯಿಲ್ಲದೆ ಮಗುವನ್ನು ಬೆಳೆಸುವುದು ಯಾವಾಗಲೂ ಆರೋಗ್ಯಕರ ನಿರ್ಧಾರವಲ್ಲ. ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿದರೆ ಪ್ರತೀದಿನ ತಂದೆ-ತಾಯಿ ಜಗಳವಾಡುವ ವಾತಾವರಣದಲ್ಲಿ ಬೆಳೆಯುವ ಬದಲು ಬೇರೆ ಕಡೆ ಬೆಳೆಯುವುದು ಸೂಕ್ತ. ತಂದೆ-ತಾಯಿ ಯಾವಾಗಲೂ ಜಗಳವಾಡುತ್ತಾ ಇದ್ದರೆ ಅದರಿಂದ ಮಕ್ಕಳಲ್ಲಿ ಭೀತಿ, ಒತ್ತಡ, ಅಸುರಕ್ಷಿತ ಮನೋಭಾವ ಮತ್ತು ಖಿನ್ನತೆ ಉಂಟಾಗುವುದು.

ಅಧ್ಯಯನ ವರದಿ
ಅಧ್ಯಯನದ ವೇಳೆ ಸುಮಾರು 70 ಮಂದಿ ಒಂಟಿ ತಾಯಂದಿರು ಮತ್ತು ಅವರ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ವರದಿಯನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಿ ನೋಡಲಾಯಿತು. ಇದರಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರಲಿಲ್ಲ. ಒಂಟಿ ತಾಯಿ ಕೂಡ ಮಗುವನ್ನು ಸರಿಯಾಗಿ ಬೆಳೆಸಬಲ್ಲಲು ಎಂದು ಅಧ್ಯಯನಗಳು ಹೇಳಿವೆ.



Click it and Unblock the Notifications