Just In
- 4 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 5 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 8 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 10 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Movies Amruthadhaare ; ತವರು ಮನೆಗಾಗಿ ಮಿಡಿದ ಭೂಮಿಕಾ ; ಒಡವೆಗಳನ್ನು ಅಡವಿಡುತ್ತಾಳಾ..?
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಿಳೆಯರು ಮಕ್ಕಳಿಗಾಗಿ ವಿಚ್ಛೇದನಕ್ಕೆ ಹಿಂದೇಟು ಹಾಕುತ್ತಾರಂತೆ!
ಜೀವನದ ಪ್ರಮುಖ ಘಟ್ಟವಾಗಿರುವ ವೈವಾಹಿಕ ಜೀವನವು ಸರಿಯಾಗಿದ್ದರೆ ಅದು ದೇವರು ಕೊಟ್ಟ ವರವೆನ್ನಬಹುದು. ಒಂದು ವೇಳೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಿ ವಿಚ್ಛೇದನ ನೀಡುವಂತಹ ಪರಿಸ್ಥಿತಿ ಬಂದರೆ ಆಗ ಇದರ ಪರಿಣಾಮ ಮಹಿಳೆಯರ ಮೇಲೆ ಹೆಚ್ಚಾಗುತ್ತದೆ. ಯಾಕೆಂದರೆ ಅದಾಗಲೇ ಮಗುವಾಗಿದ್ದರೆ ಮಗುವಿನ ಜವಾಬ್ದಾರಿಯನ್ನು ಕೂಡ ತೆಗೆದುಕೊಳ್ಳಬೇಕು.
ವಿಚ್ಛೇದನ ನೀಡುವಾಗ ತಾಯಿ ಆರೈಕೆಗೆ ಮಗುವನ್ನು ನೀಡುವ ಕಾರಣದಿಂದ ಪುರುಷರಿಗೆ ಯಾವುದೇ ಜವಾಬ್ದಾರಿ ಇರುವುದಿಲ್ಲ. ಆದರೆ ಮಹಿಳೆಯರು ಮಗುವನ್ನು ಸಾಕಲು ಕಷ್ಟಪಡಬೇಕಾಗುತ್ತದೆ. ಜೀವನಾಂಶ ಸಿಕ್ಕಿದರೂ ಸಮಾಜದಲ್ಲಿ ಮಗುವನ್ನು ದೊಡ್ಡವರನ್ನಾಗಿ ಮಾಡಿ ಬೆಳೆಸುವುದು ಒಂದು ಸವಾಲಿನ ಕೆಲಸ. ಅದರಲ್ಲೂ ಮಹಿಳೆಯರಿಗೆ ವೃತ್ತಿ ಹಾಗೂ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದು ಅತೀ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ.
ವಿಚ್ಛೇದನದ ವಿಷಯ ಬಂದಾಗ ದಂಪತಿಗಳು ಅದೇಕೆ ಹಿಂಜರಿಯುತ್ತಾರೆ?
ಇದೇ ಕಾರಣದಿಂದಾಗಿ ಹೆಚ್ಚಿನ ಮಹಿಳೆಯರು ಏನೇ ಸಮಸ್ಯೆ ಬಂದರೂ ವಿಚ್ಛೇದನ ನೀಡಲು ಹಿಂಜರಿಯುತ್ತಾರೆ. ಎಷ್ಟೇ ಕಷ್ಟವಾದರೂ ತನ್ನ ಪತಿಯೊಂದಿಗೆ ಮುಂದುವರಿಯುತ್ತಾರೆ. ಯಾಕೆಂದರೆ ಮಗುವಿನ ಭವಿಷ್ಯದ ಬಗ್ಗೆ ಅವರಿಗೆ ಭೀತಿಯಿರುತ್ತದೆ,. ಆದರೆ ಅಧ್ಯಯನಗಳ ಪ್ರಕಾರ ಮಹಿಳೆಯರು ಮಗುವನ್ನು ಯಶಸ್ವಿಯಾಗಿ ಬೆಳೆಸಬಲ್ಲರು ಎಂದು ಹೇಳಿವೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ....
ಅಧ್ಯಯನಗಳು ಏನು ಹೇಳುತ್ತವೆ?
ಕೇವಲ ತಾಯಿ ಬೆಳೆಸುತ್ತಿರುವಂತಹ ಮಕ್ಕಳ ಭಾವನಾತ್ಮಕ ಆರೋಗ್ಯ ಮತ್ತು ಒತ್ತಡದ ಮಟ್ಟವನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಇದರ ವರದಿಯನ್ನು ಇತರ ಮಕ್ಕಳೊಂದಿಗೆ ತಾಳೆ ಮಾಡಿ ನೋಡಿದಾಗ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ.
ಒಂಟಿ ತಾಯಂದಿರು ಹೇಗೆ?
ಮಗುವನ್ನು ಬೆಳೆಸುವಂತಹ ಒಂಟಿ ತಾಯಂದಿರುವ ಕುಟುಂಬದವರು ಹಾಗೂ ಸ್ನೇಹಿತರ ಬೆಂಬಲವನ್ನು ಪಡೆದುಕೊಳ್ಳುವರು. ಈ ನೆರವಿನಿಂದಾಗಿ ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಬೆಳೆದು ಸಾಮಾಜಿಕ ಸಂಬಂಧವು ಆರೋಗ್ಯಕರವಾಗಿರುವುದು.
ಕಿರುಚಾಡುವ ಪೋಷಕರು
ಯಾವಾಗಲೂ ಕಿರುಚಾಡುವಂತಹ ಪೋಷಕರ ಮಕ್ಕಳು ತುಂಬಾ ಸಮಸ್ಯೆಗೆ ಸಿಲುಕುತ್ತಾರೆ ಎಂದು ಹೇಳಿರುವ ಅಧ್ಯಯನಗಳು, ಒಂಟಿ ತಾಯಂದಿರ ಮಕ್ಕಳಿಗಿಂತ ಕಿರುಚಾಡುವ ಪೋಷಕರ ಮಕ್ಕಳು ಹೆಚ್ಚು ತೊಂದರೆಗೊಳಗಾಗುತ್ತಾರೆ.
ಮಾನವೀಯ ಸಂಬಂಧಗಳು
ಪೋಷಕರ ನಡುವೆ ಬಿರುಕು ಬಿಟ್ಟಿರುವ ಸಂಬಂಧ ಮತ್ತು ಪೋಷಕರು ಮತ್ತು ಮಕ್ಕಳ ನಡುವೆ ಸಂಬಂಧ ಸರಿಯಗಿರದಿದ್ದರೆ ಅದರಿಂದ ಮಕ್ಕಳ ಭಾವನಾತ್ಮಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದು.
ಮಗುವನ್ನು ಬೆಳೆಸುವುದು
ತಂದೆಯಿಲ್ಲದೆ ಮಗುವನ್ನು ಬೆಳೆಸುವುದು ಯಾವಾಗಲೂ ಆರೋಗ್ಯಕರ ನಿರ್ಧಾರವಲ್ಲ. ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿದರೆ ಪ್ರತೀದಿನ ತಂದೆ-ತಾಯಿ ಜಗಳವಾಡುವ ವಾತಾವರಣದಲ್ಲಿ ಬೆಳೆಯುವ ಬದಲು ಬೇರೆ ಕಡೆ ಬೆಳೆಯುವುದು ಸೂಕ್ತ. ತಂದೆ-ತಾಯಿ ಯಾವಾಗಲೂ ಜಗಳವಾಡುತ್ತಾ ಇದ್ದರೆ ಅದರಿಂದ ಮಕ್ಕಳಲ್ಲಿ ಭೀತಿ, ಒತ್ತಡ, ಅಸುರಕ್ಷಿತ ಮನೋಭಾವ ಮತ್ತು ಖಿನ್ನತೆ ಉಂಟಾಗುವುದು.
ಅಧ್ಯಯನ ವರದಿ
ಅಧ್ಯಯನದ ವೇಳೆ ಸುಮಾರು 70 ಮಂದಿ ಒಂಟಿ ತಾಯಂದಿರು ಮತ್ತು ಅವರ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ವರದಿಯನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಿ ನೋಡಲಾಯಿತು. ಇದರಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರಲಿಲ್ಲ. ಒಂಟಿ ತಾಯಿ ಕೂಡ ಮಗುವನ್ನು ಸರಿಯಾಗಿ ಬೆಳೆಸಬಲ್ಲಲು ಎಂದು ಅಧ್ಯಯನಗಳು ಹೇಳಿವೆ.