Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ತಾಯ್ತನ ಎಂಬ ಸುಂದರ ಪ್ರಪಂಚದಲ್ಲಿರುವ ಕಟು ವಾಸ್ತವಗಳಿವು
ಏಪ್ರಿಲ್ 12ನ್ನು ವಿಶ್ವ ತಾಯ್ತನದ ದಿನವನ್ನಾಗಿ ಆಚರಿಸಲಾಗುವುದು... ತಾಯ್ತನದ ಬಗ್ಗೆ ತುಂಬಾನೇ ಸುಂದರವಾಗಿ ವರ್ಣನೆ ಮಾಡಲಾಗುವುದು. ತಾಯಿಯಾಗಿ ಅವಳ ಕರ್ತವ್ಯಗಳ ಬಗ್ಗೆ ಹೇಳಲಾಗುವುದು, ಮಗುವಿನ ಲಾಲನೆ-ಪಾಲನೆ ಬಗ್ಗೆ ನೂರಾರು ಕಲ್ಪನೆಗಳು ಮೂಡುವಂತೆ ಕತೆಗಳನ್ನು ಹೇಳಲಾಗುವುದು.

ತಾಯ್ತನ ಎಂಬುವುದು ಎಷ್ಟು ಸುಂದರವೋ ಅಷ್ಟೇ ಸವಾಲುಗಳಿಂದಲೂ ಕೂಡಿರುತ್ತದೆ ಎಂದರೆ ಅದನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಅದರಲ್ಲೂ ವರ್ಕಿಂಗ್ ವುಮನ್ ಆಗಿದ್ದರೆ ಅವಳ ಮುಂದೆ ಸವಾಲುಗಳ ಪಟ್ಟಿಯೇ ಇರುತ್ತದೆ, ಅವುಗಳೆನ್ನೆಲ್ಲಾ ಎದುರಿಸಿ ತಾನೊಬ್ಬ ಒಳ್ಳೆಯ ತಾಯಿಯಾಗಬೇಕಾಗುತ್ತದೆ. ಈ ಸಮಯದಲ್ಲಿ ಅವಳಿಗೆ ಗಂಡ-ಕುಟುಂಬದವರ ಸಹಾಯ ಸಿಕ್ಕರೆ ಆ ಮಹಿಳೆ ನಿಜಕ್ಕೂ ಅದೃಷ್ಟವಂತಳು, ಇಲ್ಲದಿದ್ದರೆ ಅವಳ ಜೀವನ ಆ ದೇವರಿಗೇ ಪ್ರೀತಿ....
ಪ್ರತಿಯೊಬ್ಬ ಹೆಣ್ಣು ತಾನು ತಾಯಿಯಾದ ಮೇಲೆ ಎದುರಿಸುವ ಸವಾಲುಗಳೆಂದರೆ ..
ನಿದ್ದೆ ಎಂಬುವುದು ಮಾರುದ್ಧ ಓಡಿಹೋಗುವುದು
ಒಂದು ಕಾಲದಲ್ಲಿ ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಿದ್ದೆ ಎಂದು ಯೋಚಿಸುವಷ್ಟು ದೂರ ನಿದ್ದೆ ಓಡಿ ಹೋಗಿರುತ್ತದೆ. ಅದರಲ್ಲೂ ಮಗುವಾಗ ಮೊದಲ 2-3 ವರ್ಷ ಅವಳಿಗೆ ಸಾಕಷ್ಟು ನಿದ್ದೆ ಎಂಬುವುದು ಸಿಗುವುದೇ ಇಲ್ಲ. ಮಗು ಆಗಾಗ ಎದ್ದೇಳುವಾಗ ಎದ್ದು ಹಾಲುಣಿಸಬೇಕು. ಹಗಲಿನಲ್ಲಿ ಮಗು ನಿದ್ರಿಸುವಾಗ ಸ್ವಲ್ಪ ನಿದ್ರಿಸೋಣ ಎಂದರೆ ಆವಾಗ ಒಂದಿಷ್ಟು ಕೆಲಸಗಳನ್ನು ಮಾಡಿ ಮುಗಿಸಬೇಕಾಗುತ್ತದೆ, ಏಕೆಂದರೆ ಗು ಎದ್ದ ಮೇಲೆ ಆ ಕೆಲಸ ಮಾಡಲು ಬಿಡಲ್ಲ, ಹೀಗಾಗಿ ನಿದ್ದೆ ಎಂಬುವುದು ಮರೆತೇ ಹೋಗುವಂತಾಗುವುದು ನಿಜ. ಮನೆಯವರ ಸಹಾಯವಿದ್ದರೆ ಸ್ವಲ್ಪ ವಿಶ್ರಾಂತಿ ಸಿಗುವುದು, ಇಲ್ಲಾಂದ್ರೆ ಮಕ್ಕಳು ಸ್ವಲ್ಪ ದೊಡ್ಡವರಾಗುವವರಿಗೆ ಸುಖ ನಿದ್ದೆ ಎಂಬುವುದು ಕನಸ್ಸಿನ ಮಾತು.
ವರ್ಕಿಂಗ್ ಮದರ್ಗೆ ಭಾವನಾತ್ಮಕ ಬೆಂಬಲ ಅಗ್ಯತವಿರುತ್ತದೆ
ಒಂದುನಕಡೆ ಕರಿಯರ್ ಮತ್ತೊಂದೆಡೆ ಕರುಳಿನ ಬಳ್ಳಿ ಇವೆರಡರ ನಡುವಿನ ತೊಳಲಾಟ ಇದೆಯೆಲ್ಲಾ ಇದು ಹೊರಗಡೆ ದುಡಿಯಲು ಹೋಗುವ ಹೆಣ್ಮಕ್ಕಳಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ನನ್ನ ಮಗುವನ್ನು ನೋಡಿಕೊಳ್ಳಲು ಅತ್ತೆ-ಮಾವ, ಅಪ್ಪ-ಅಮ್ಮ ಅಂತ ಯಾರಾದರೂ ಇದ್ದರೆ ಒಕೆ, ಇಲ್ಲದಿದ್ದರೆ ಮಗುವನ್ನು ಬೇರೆಯವರ ಕೈಯಲ್ಲಿ ಅಥವಾ ಡೇ ಕೇರ್ಗಳಲ್ಲಿ ಬಿಟ್ಟುವಾಗ ಮನಸ್ಸು ನೋವಿನಿಂದ ಹಿಂಡುತ್ತದೆ. ಕೆಲಸ ಬಿಡುವಂತಿಲ್ಲ, ಏಕೆಂದರೆ ಮಗುವಿನ ಭವಿಷ್ಯದ ದೃಷ್ಟಿಯಿಂದ ಕೆಲಸ ಮಾಡಬೇಕು, ಆದರೆ ನನ್ನ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂಬ ನೋವು ಅವಳ ಮನಸ್ಸಿಗೆ ತುಂಬಾನೇ ನೋವುಂಟು ಮಾಡುತ್ತದೆ. ಈ ಸಮಯದಲ್ಲಿ ಗಂಡ ಹಾಗೂ ಮನೆಯವರ ಬೆಂಬಲ ಅವಳಿಗೆ ತುಂಬಾನೇ ಅವಶ್ಯಕತೆ ಇರುತ್ತದೆ.
ಜವಾಬ್ದಾರಿ
ಮಗುವಿನ ಜವಾಬ್ದಾರಿ ಎಂಬುವುದು ತಾಯಿಯದ್ದು ಮಾತ್ರವಲ್ಲ, ತಂದೆಯದ್ದು ಕೂಡ ಆಗಿರುತ್ತದೆ. ದುಡಿದು ತಂದು ಹಾಕುವುದಷ್ಟೇ ನನ್ನ ಕೆಲಸ ಎಂಬ ಮನಸ್ಥಿತಿಯ ಪುರುಷ ಬಾಳ ಸಂಗಾತಿಯಾಗಿದ್ದರೆ ಮಗುವಾದ ಬಳಿಕ ಸಂಸಾರದಲ್ಲಿ ಸಮಸ್ಯೆ ಹೆಚ್ಚಾಗುವುದು. ತಾಯಿ ಮಾತ್ರ ಮಗುವಿನ ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳಬೇಕೆಂದರೆ ಅವಳಿಗೂ ಸಾಕಾಗಿ ಹೋಗುವುದು. ಒಂದು ಸ್ವಲ್ಪ ಹೊತ್ತು ಮಗುವಿನ ಜೊತೆ ಆಟ ಆಡುವುದು, ಮಗುವಿಗೆ ತಿನಿಸುವುದು, ನಿದ್ರೆ ಮಾಡಿಸುವುದು, ಮಗುವಿನ ಡಯಾಪರ್ ಚೇಂಜ್ ಮಾಡುವುದು ಈ ರೀತಿ ಗಂಡ ಹೆಂಡತಿಗೆ ನೆರವಾದರೆ ಅವಳಿಗೂ ವಿಶ್ರಾಂತಿಗೆ ಸ್ವಲ್ಪ ಸಮಯ ಸಿಗುವುದು. ಈ ರೀತಿಯ ಬೆಂಬಲ ನೀಡುವ ಮೂಲಕ ಅವಳು ಖಿನ್ನತೆಗೆ ಜಾರದಂತೆ ತಡೆಗಟ್ಟಬಹುದು.
ಹೆರಿಗೆಯ ಬಳಿಕ ಖಿನ್ನತೆ ತಡೆಗಟ್ಟುವುದು ಹೇಗೆ?
ಹೆರಿಗೆಯ ಬಳಿಕ ಖಿನ್ನತೆ ತಡೆಗಟ್ಟಲು ಗಂಡ ಹಾಗೂ ಮನೆಯವರ ಸಹಾಯ ಅವಳಿಗೆ ಅವಶ್ಯಕವಾಗಿರುತ್ತದೆ. ಕೆಲವರು ಸಹಾಯ ಮಾಡಿ ಅಂತ ಕೇಳುತ್ತಾರೆ, ಇನ್ನು ಕೆಲವರು ನನಗೆ ಕಷ್ಟವಾಗುತ್ತಿದೆ ಎಂದು ಹೇಳಲ್ಲ, ಮನಸ್ಸಿನಲ್ಲಿಯೇ ಕೊರಗುತ್ತಾರೆ, ಇದರಿಂದಾಗಿ ಖಿನ್ನತೆಗೆ ಜಾರುವ ಅಪಾಯ ಅಧಿಕ. ಕುಟುಂಬದಲ್ಲಿ ಮಗು ಬರುತ್ತದೆ ಎಂದರೆ ಎಲ್ಲರೂ ಸಂತೋಷ ಪಡುತ್ತಾರೆ, ಆದರೆ ಮಗುವಿನ ಜವಾಬ್ದಾರಿ ಅಂತ ಬಂದಾಗ ಅದು ತಾಯಿಯ ಜವಾಬ್ದಾರಿ ಮಾತ್ರ ಎಂದು ಭಾವಿಸದೆ ಗಂಡ-ಕುಟುಂಬದವರು ಅವಳ ಸಹಾಯಕ್ಕೆ ಬಂದರೆ ಅವಳು ತಾಯ್ತನ ಆ ಸುಂದರ ಅನುಭವಗಳನ್ನು ಖುಷಿಯಿಂದ ಅನುಣವಿಸುವಂತಾಗುವುದು. ಅಲ್ಲದೆ ನಿಮ್ಮ ಕುಟುಂಬದಲ್ಲಿ ಅನ್ಯೂನ್ಯತೆ ಮತ್ತಷ್ಟು ಹೆಚ್ಚಾಗುವುದು.
ತಾಯಿಯನ್ನು ದೂರುವುದು
ಮಕ್ಕಳು ಏನಾದರೂ ತಪ್ಪು ಮಾಡಿದರೆ ತಾಯಿ ಬೆಳೆಸಿದ್ದು ಸರಿಯಿಲ್ಲ ಎಂಬ ಅಪವಾದ ತಾಯಿ ಮೇಲೆ ಬೀಳುತ್ತದೆ. ಕೆಲವೊಂದು ಮನೆಗಳಲ್ಲಿ ಮಕ್ಕಳ ಎಲ್ಲಾ ವರ್ತನೆಗೂ ತಾಯಿಯತ್ತ ಬೊಟ್ಟು ಮಾಡುತ್ತಾರೆ, ಅದು ಸರಿಯಲ್ಲ. ಮಕ್ಕಳನ್ನು ಬೆಳೆಸುವಲ್ಲಿ ತಾಯಿ ಪಾತ್ರ ಎಷ್ಟು ಮುಖ್ಯವೋ ತಂದೆಯ ಪಾತ್ರವೋ ಅಷ್ಟೇ ಮುಖ್ಯವಾಗಿರುತ್ತದೆ. ಇನ್ನು ಮಕ್ಕಳು ಸ್ವಲ್ಪ ದೊಡ್ಡವರಾದಾಗ ತಾಯಿಗೆ ತಿರುಗಿ ಹೇಳುವ ಬುದ್ಧಿ ಕಲಿಯುತ್ತಾರೆ. ಮನೆಯಲ್ಲಿ ಈ ಬಗೆಯ ವಾತಾವರಣವಿದ್ದರೆ ಅದನ್ನು ಮೊದಲು ಬದಲಾಯಿಸಿ. ತಾಯಿಗೆ ಗೌರವ ಕೊಡಲು ಕಲಿಯುವ ಮಗು ಮಾತ್ರ ಇತತರಿಗೆ ಗೌರವ ಕೊಡುತ್ತೆ.
ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.



Click it and Unblock the Notifications












