Latest Updates
-
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ಭಾದ್ರಪದ ಮಾಸದಲ್ಲಿ ಶುಭಕಾರ್ಯ ಮಾಡಬಾರದು ಏಕೆ?
ಹಿಂದೂ ಮಾಸದ 6ನೇ ತಿಂಗಳು ಭಾದ್ರಪದ ಮಾಸ. ಭಾದ್ರಪದ ಮಾಸವೆಂದರೆ ಪಟ್ ಅಂತ ನೆನೆಪಿಗೆ ಬರುವುದು ಗಣೇಶ ಚತುರ್ಥಿ. ಗಣೇಶ ಚತುರ್ಥಿಯನ್ನು ದೇಶದಾದ್ಯಂತ ಸಡಗರ-ಸಂಭ್ರಮದಿಂದ ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಧಾರ್ಮಿಕ ನಂಬಿಕೆ ಪ್ರಕಾರ ಈ ತಿಂಗಳಿನಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳು ಉಪವಾಸ ಹಾಗೂ ಪೂಜೆಗೆ ತುಂಬಾನೇ ಶುಭ ತಿಂಗಳಲಾಗಿದೆ. ಕರ್ನಾಟಕದಲ್ಲಿ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಶುರುವಾಗುವುದು, ಅಕ್ಟೋಬರ್ 14ಕ್ಕೆ ಮುಕ್ತಾಯವಾಗಲಿದೆ.

ಭಾದ್ರಪದ ಮಾಸದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳಿನಲ್ಲಿ ಯಾವ ಕಾರ್ಯವನ್ನು ಮಾಡಬಾರದು, ಯಾವ ಕಾರ್ಯವನ್ನು ಮಾಡಬೇಕು ಎಂದು ನೋಡೋಣ ಬನ್ನಿ:
* ಯಾವುದೇ ಶುಭ ಕಾರ್ಯ ಮಾಡಬಾರದು: ಭಾದ್ರಪದ ಮಾಸ ಪೂಜಾ ಕಾರ್ಯಗಳಿಗೆ ಒಳ್ಳೆಯದು, ಆದರೆ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಏಕೆಂದರೆ ಭಾದ್ರಪದ ಮಾಸವನ್ನು ಶೂನ್ಯ ಮಾಸವೆಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಮದುವೆ, ನಿಶ್ಚಿತಾರ್ಥ, ಮಗುವಿನ ನಾಮಕರಣ, ಮಕ್ಕಳ ತಲೆ ಕೂದಲು ತೆಗೆಯುವುದು, ಗೃಹ ಪ್ರವೇಶ, ಹೊಸದಾಗಿ ಉದ್ಯಮ ಪ್ರಾರಂಭಿಸುವುದು ಈ ರೀತಿ ಯಾವುದೇ ಶುಭ ಕಾರ್ಯ ಮಾಡಬಾರದು.
* ಈ ಬಗೆಯ ಆಹಾರಗಳನ್ನು ಸೇವಿಸಬಾರದು
ಭಾದ್ರಪದ ಮಾಸದಲ್ಲಿ ಬೆಲ್ಲ, ಎಳ್ಳು, ಮೊಸರು, ತೆಂಗಿನೆಣ್ಣೆ, ಎಳ್ಳೆಣ್ಣೆ ಇವುಗಳನ್ನು ಬಳಸಬಾರದು. ಈ ಆಹಾರವನ್ನು ಭಾದ್ರಪದ ಮಾಸದಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು.
* ಧಾನ್ಯ ಪಡೆದ ಆಹಾರ ಸೇವಿಸಬೇಡಿ
ಈ ತಿಂಗಳಿನಲ್ಲಿ ಧಾನ್ಯ ಪಡೆದ ಆಹಾರ ಸೇವಿಸಬಾರದು ಎಂದು ಹೇಳಲಾಗುವುದು. ಏಕೆಂದರೆ ಈ ಸಮಯದಲ್ಲಿ ಧಾನ ಪಡೆದ ಅಕ್ಕಿಯಿಂದ ಆಹಾರ ಮಾಡಿ ಬಳಸಿದರೆ ಲಕ್ಷ್ಮಿ ಕೃಪೆ ಕಡಿಮೆಯಾಗುವುದು ಎಂದು ಹೇಳಲಾಗುವುದು. ಆದ್ದರಿಂದ ಈ ತಿಂಗಳಿನಲ್ಲಿ ದಾನ ಪಡೆದ ಆಹಾರ ವಸ್ತುಗಳನ್ನು ಬಳಸಬೇಡಿ.
ಭಾದ್ರಪದ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಲು ತುಂಬಾನೇ ಶುಭವಾಗಿದೆ
* ಸೇವಾ ಕಾರ್ಯಗಳಿಗೆ ಈ ತಿಂಗಳು ತುಂಬಾನೇ ಒಳ್ಳೆಯದು: ಈ ತಿಂಗಳು ಬಡವರಿಗೆ ದಾನ ಮಾಡಿ, ಸಮಾಜ ಸೇವಾ ಕಾರ್ಯಗಳಿಗೆ ಈ ತಿಂಗಳು ಶುಭವಾಗಿದೆ. ಸೇವಾ ಕಾರ್ಯ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗಲಿದೆ.
* ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿ: ಧಾರ್ಮಿಕ ಕಾರ್ಯಗಳಿಗೆ ಈ ಅವಧಿ ತುಂಬಾನೇ ಶುಭವಾಗಿದೆ,
* ಶ್ರೀ ಗಣೇಶನಿಗೆ ಲಡ್ಡು, ಮೋದಕಗಳನ್ನು ಅರ್ಪಿಸಿ ಆರಾಧಿಸಿ.
* ದನಗಳಿಗೆ ಹಸಿರು ಮೇವು ದಾನ ಮಾಡಿ
* ಭಾದ್ರಪದ ತಿಂಗಳಿನಲ್ಲಿ ಮೊಸರು ತಿನ್ನಬಾರದು ಆದರೆ ಹಾಲು ಹಾಗೂ ತುಪ್ಪವನ್ನು ಸೇವಿಸಬಹುದು.
* ನೈಸರ್ಗಿಕಕ್ಕೆ ಹತ್ತಿರವಾಗಿ. ನೀವು ಆಹಾರವನ್ನು ಕುರ್ಚಿ, ಟೇಬಲ್ನಲ್ಲಿ ತಿನ್ನುವ ಬದಲಿಗೆ ನೆಲದ ಮೇಲೆ ಕೂತು ತಿನ್ನಿ.



Click it and Unblock the Notifications