Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಭಾದ್ರಪದ ಮಾಸದಲ್ಲಿ ಶುಭಕಾರ್ಯ ಮಾಡಬಾರದು ಏಕೆ?
ಹಿಂದೂ ಮಾಸದ 6ನೇ ತಿಂಗಳು ಭಾದ್ರಪದ ಮಾಸ. ಭಾದ್ರಪದ ಮಾಸವೆಂದರೆ ಪಟ್ ಅಂತ ನೆನೆಪಿಗೆ ಬರುವುದು ಗಣೇಶ ಚತುರ್ಥಿ. ಗಣೇಶ ಚತುರ್ಥಿಯನ್ನು ದೇಶದಾದ್ಯಂತ ಸಡಗರ-ಸಂಭ್ರಮದಿಂದ ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಧಾರ್ಮಿಕ ನಂಬಿಕೆ ಪ್ರಕಾರ ಈ ತಿಂಗಳಿನಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳು ಉಪವಾಸ ಹಾಗೂ ಪೂಜೆಗೆ ತುಂಬಾನೇ ಶುಭ ತಿಂಗಳಲಾಗಿದೆ. ಕರ್ನಾಟಕದಲ್ಲಿ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಶುರುವಾಗುವುದು, ಅಕ್ಟೋಬರ್ 14ಕ್ಕೆ ಮುಕ್ತಾಯವಾಗಲಿದೆ.

ಭಾದ್ರಪದ ಮಾಸದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳಿನಲ್ಲಿ ಯಾವ ಕಾರ್ಯವನ್ನು ಮಾಡಬಾರದು, ಯಾವ ಕಾರ್ಯವನ್ನು ಮಾಡಬೇಕು ಎಂದು ನೋಡೋಣ ಬನ್ನಿ:
* ಯಾವುದೇ ಶುಭ ಕಾರ್ಯ ಮಾಡಬಾರದು: ಭಾದ್ರಪದ ಮಾಸ ಪೂಜಾ ಕಾರ್ಯಗಳಿಗೆ ಒಳ್ಳೆಯದು, ಆದರೆ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಏಕೆಂದರೆ ಭಾದ್ರಪದ ಮಾಸವನ್ನು ಶೂನ್ಯ ಮಾಸವೆಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಮದುವೆ, ನಿಶ್ಚಿತಾರ್ಥ, ಮಗುವಿನ ನಾಮಕರಣ, ಮಕ್ಕಳ ತಲೆ ಕೂದಲು ತೆಗೆಯುವುದು, ಗೃಹ ಪ್ರವೇಶ, ಹೊಸದಾಗಿ ಉದ್ಯಮ ಪ್ರಾರಂಭಿಸುವುದು ಈ ರೀತಿ ಯಾವುದೇ ಶುಭ ಕಾರ್ಯ ಮಾಡಬಾರದು.
* ಈ ಬಗೆಯ ಆಹಾರಗಳನ್ನು ಸೇವಿಸಬಾರದು
ಭಾದ್ರಪದ ಮಾಸದಲ್ಲಿ ಬೆಲ್ಲ, ಎಳ್ಳು, ಮೊಸರು, ತೆಂಗಿನೆಣ್ಣೆ, ಎಳ್ಳೆಣ್ಣೆ ಇವುಗಳನ್ನು ಬಳಸಬಾರದು. ಈ ಆಹಾರವನ್ನು ಭಾದ್ರಪದ ಮಾಸದಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು.
* ಧಾನ್ಯ ಪಡೆದ ಆಹಾರ ಸೇವಿಸಬೇಡಿ
ಈ ತಿಂಗಳಿನಲ್ಲಿ ಧಾನ್ಯ ಪಡೆದ ಆಹಾರ ಸೇವಿಸಬಾರದು ಎಂದು ಹೇಳಲಾಗುವುದು. ಏಕೆಂದರೆ ಈ ಸಮಯದಲ್ಲಿ ಧಾನ ಪಡೆದ ಅಕ್ಕಿಯಿಂದ ಆಹಾರ ಮಾಡಿ ಬಳಸಿದರೆ ಲಕ್ಷ್ಮಿ ಕೃಪೆ ಕಡಿಮೆಯಾಗುವುದು ಎಂದು ಹೇಳಲಾಗುವುದು. ಆದ್ದರಿಂದ ಈ ತಿಂಗಳಿನಲ್ಲಿ ದಾನ ಪಡೆದ ಆಹಾರ ವಸ್ತುಗಳನ್ನು ಬಳಸಬೇಡಿ.
ಭಾದ್ರಪದ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಲು ತುಂಬಾನೇ ಶುಭವಾಗಿದೆ
* ಸೇವಾ ಕಾರ್ಯಗಳಿಗೆ ಈ ತಿಂಗಳು ತುಂಬಾನೇ ಒಳ್ಳೆಯದು: ಈ ತಿಂಗಳು ಬಡವರಿಗೆ ದಾನ ಮಾಡಿ, ಸಮಾಜ ಸೇವಾ ಕಾರ್ಯಗಳಿಗೆ ಈ ತಿಂಗಳು ಶುಭವಾಗಿದೆ. ಸೇವಾ ಕಾರ್ಯ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗಲಿದೆ.
* ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿ: ಧಾರ್ಮಿಕ ಕಾರ್ಯಗಳಿಗೆ ಈ ಅವಧಿ ತುಂಬಾನೇ ಶುಭವಾಗಿದೆ,
* ಶ್ರೀ ಗಣೇಶನಿಗೆ ಲಡ್ಡು, ಮೋದಕಗಳನ್ನು ಅರ್ಪಿಸಿ ಆರಾಧಿಸಿ.
* ದನಗಳಿಗೆ ಹಸಿರು ಮೇವು ದಾನ ಮಾಡಿ
* ಭಾದ್ರಪದ ತಿಂಗಳಿನಲ್ಲಿ ಮೊಸರು ತಿನ್ನಬಾರದು ಆದರೆ ಹಾಲು ಹಾಗೂ ತುಪ್ಪವನ್ನು ಸೇವಿಸಬಹುದು.
* ನೈಸರ್ಗಿಕಕ್ಕೆ ಹತ್ತಿರವಾಗಿ. ನೀವು ಆಹಾರವನ್ನು ಕುರ್ಚಿ, ಟೇಬಲ್ನಲ್ಲಿ ತಿನ್ನುವ ಬದಲಿಗೆ ನೆಲದ ಮೇಲೆ ಕೂತು ತಿನ್ನಿ.



Click it and Unblock the Notifications











