Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಭಾದ್ರಪದ ಮಾಸದಲ್ಲಿ ಶುಭಕಾರ್ಯ ಮಾಡಬಾರದು ಏಕೆ?
ಹಿಂದೂ ಮಾಸದ 6ನೇ ತಿಂಗಳು ಭಾದ್ರಪದ ಮಾಸ. ಭಾದ್ರಪದ ಮಾಸವೆಂದರೆ ಪಟ್ ಅಂತ ನೆನೆಪಿಗೆ ಬರುವುದು ಗಣೇಶ ಚತುರ್ಥಿ. ಗಣೇಶ ಚತುರ್ಥಿಯನ್ನು ದೇಶದಾದ್ಯಂತ ಸಡಗರ-ಸಂಭ್ರಮದಿಂದ ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಧಾರ್ಮಿಕ ನಂಬಿಕೆ ಪ್ರಕಾರ ಈ ತಿಂಗಳಿನಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳು ಉಪವಾಸ ಹಾಗೂ ಪೂಜೆಗೆ ತುಂಬಾನೇ ಶುಭ ತಿಂಗಳಲಾಗಿದೆ. ಕರ್ನಾಟಕದಲ್ಲಿ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಶುರುವಾಗುವುದು, ಅಕ್ಟೋಬರ್ 14ಕ್ಕೆ ಮುಕ್ತಾಯವಾಗಲಿದೆ.

ಭಾದ್ರಪದ ಮಾಸದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳಿನಲ್ಲಿ ಯಾವ ಕಾರ್ಯವನ್ನು ಮಾಡಬಾರದು, ಯಾವ ಕಾರ್ಯವನ್ನು ಮಾಡಬೇಕು ಎಂದು ನೋಡೋಣ ಬನ್ನಿ:
* ಯಾವುದೇ ಶುಭ ಕಾರ್ಯ ಮಾಡಬಾರದು: ಭಾದ್ರಪದ ಮಾಸ ಪೂಜಾ ಕಾರ್ಯಗಳಿಗೆ ಒಳ್ಳೆಯದು, ಆದರೆ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಏಕೆಂದರೆ ಭಾದ್ರಪದ ಮಾಸವನ್ನು ಶೂನ್ಯ ಮಾಸವೆಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಮದುವೆ, ನಿಶ್ಚಿತಾರ್ಥ, ಮಗುವಿನ ನಾಮಕರಣ, ಮಕ್ಕಳ ತಲೆ ಕೂದಲು ತೆಗೆಯುವುದು, ಗೃಹ ಪ್ರವೇಶ, ಹೊಸದಾಗಿ ಉದ್ಯಮ ಪ್ರಾರಂಭಿಸುವುದು ಈ ರೀತಿ ಯಾವುದೇ ಶುಭ ಕಾರ್ಯ ಮಾಡಬಾರದು.
* ಈ ಬಗೆಯ ಆಹಾರಗಳನ್ನು ಸೇವಿಸಬಾರದು
ಭಾದ್ರಪದ ಮಾಸದಲ್ಲಿ ಬೆಲ್ಲ, ಎಳ್ಳು, ಮೊಸರು, ತೆಂಗಿನೆಣ್ಣೆ, ಎಳ್ಳೆಣ್ಣೆ ಇವುಗಳನ್ನು ಬಳಸಬಾರದು. ಈ ಆಹಾರವನ್ನು ಭಾದ್ರಪದ ಮಾಸದಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು.
* ಧಾನ್ಯ ಪಡೆದ ಆಹಾರ ಸೇವಿಸಬೇಡಿ
ಈ ತಿಂಗಳಿನಲ್ಲಿ ಧಾನ್ಯ ಪಡೆದ ಆಹಾರ ಸೇವಿಸಬಾರದು ಎಂದು ಹೇಳಲಾಗುವುದು. ಏಕೆಂದರೆ ಈ ಸಮಯದಲ್ಲಿ ಧಾನ ಪಡೆದ ಅಕ್ಕಿಯಿಂದ ಆಹಾರ ಮಾಡಿ ಬಳಸಿದರೆ ಲಕ್ಷ್ಮಿ ಕೃಪೆ ಕಡಿಮೆಯಾಗುವುದು ಎಂದು ಹೇಳಲಾಗುವುದು. ಆದ್ದರಿಂದ ಈ ತಿಂಗಳಿನಲ್ಲಿ ದಾನ ಪಡೆದ ಆಹಾರ ವಸ್ತುಗಳನ್ನು ಬಳಸಬೇಡಿ.
ಭಾದ್ರಪದ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಲು ತುಂಬಾನೇ ಶುಭವಾಗಿದೆ
* ಸೇವಾ ಕಾರ್ಯಗಳಿಗೆ ಈ ತಿಂಗಳು ತುಂಬಾನೇ ಒಳ್ಳೆಯದು: ಈ ತಿಂಗಳು ಬಡವರಿಗೆ ದಾನ ಮಾಡಿ, ಸಮಾಜ ಸೇವಾ ಕಾರ್ಯಗಳಿಗೆ ಈ ತಿಂಗಳು ಶುಭವಾಗಿದೆ. ಸೇವಾ ಕಾರ್ಯ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗಲಿದೆ.
* ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿ: ಧಾರ್ಮಿಕ ಕಾರ್ಯಗಳಿಗೆ ಈ ಅವಧಿ ತುಂಬಾನೇ ಶುಭವಾಗಿದೆ,
* ಶ್ರೀ ಗಣೇಶನಿಗೆ ಲಡ್ಡು, ಮೋದಕಗಳನ್ನು ಅರ್ಪಿಸಿ ಆರಾಧಿಸಿ.
* ದನಗಳಿಗೆ ಹಸಿರು ಮೇವು ದಾನ ಮಾಡಿ
* ಭಾದ್ರಪದ ತಿಂಗಳಿನಲ್ಲಿ ಮೊಸರು ತಿನ್ನಬಾರದು ಆದರೆ ಹಾಲು ಹಾಗೂ ತುಪ್ಪವನ್ನು ಸೇವಿಸಬಹುದು.
* ನೈಸರ್ಗಿಕಕ್ಕೆ ಹತ್ತಿರವಾಗಿ. ನೀವು ಆಹಾರವನ್ನು ಕುರ್ಚಿ, ಟೇಬಲ್ನಲ್ಲಿ ತಿನ್ನುವ ಬದಲಿಗೆ ನೆಲದ ಮೇಲೆ ಕೂತು ತಿನ್ನಿ.



Click it and Unblock the Notifications
