Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ವರಮಹಾಲಕ್ಷ್ಮಿ ಪೂಜಾ ವಿಧಾನ ಹೇಗೆ? ಸೀರೆ ಡೆಕೋರ್ ಮಾಡೋದು ಹೇಗೆ?
ಈ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತಿದೆ. ಹಿಂದೂ ನಂಬಿಕೆಯಲ್ಲಿ ಪ್ರತೀ ಹಬ್ಬವೂ ಒಂದು ನಿರ್ಧಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಲಾಗುತ್ತದ. ಶ್ರಾವಣ ಮಾಸದಲ್ಲಿ ಮೊದಲ ಹುಣ್ಣಿಮೆಗಿಂತ ಹಿಂದಿನ ದಿನ ಶುಕ್ರವಾರ ಬಂದರೆ ಅಂದು ವರಮಹಾಲಕ್ಷ್ಮಿ ಹಬ್ಬವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ನಲ್ಲಿ ಈ ಹಬ್ಬ ಬರುವುದು ನೋಡಬಹುದು.
ಸಂಪತ್ತಿನ ಅಧಿದೇವತೆಯಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅವರಲ್ಲಿ ಹಣಕಾಸು ಸಮಸ್ಯೆಗಳು ಬರುವುದಿಲ್ಲ. ಹಾಗೆ ಯಾವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೋ ಅವರಲ್ಲಿ ಎಂದಿಗೂ ಹಣಕಾಸು ಕುರಿತಾದ ಸಮಸ್ಯೆಗಳು ಬರುವುದಿಲ್ಲ ಎಂದು ನಂಬಲಾಗುತ್ತದೆ. ಹಾಗೆ ಈ ದಿನ ಲಕ್ಷ್ಮಿಯನ್ನು ಪೂಜಿಸುವುದರಿಂದ ನಿಮ್ಮಲ್ಲಿ ಹಣಕಾಸು ಸಮಸ್ಯೆಗಳು ದೂರಾಗಲಿದೆ ಹಾಗೆ ನಿಮಗೆ ಸಂಪತ್ತು ಒಲಿಯಲಿದೆ ಎಂಬ ನಂಬಿಕೆಗಳು ಕೂಡ ಇದೆ.

ಇನ್ನು ಸುಮಂಗಲಿತರು ಲಕ್ಷ್ಮಿ ಪೂಜೆಯಲ್ಲಿ ತೊಡಗುತ್ತಾರೆ. ಈ ದಿನ ಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರದ ಮೂಲಕ ಪೂಜೆ ಮಾಡುವುದು. ಆಕೆಯ ಆಶೀರ್ವಾದ ಪಡೆಯುವುದು ನೋಡಬಹುದು. ಸಮುದ್ರ ಮಂಥನದ ಸಂದರ್ಭದಲ್ಲಿ ಜನಿಸಿದ್ದ ವರಮಹಾಲಕ್ಷ್ಮಿಯು ದೇವತೆಗಳ ಅನುಗ್ರಹಿಸಿ ಭಗವಾನ್ ವಿಷ್ಣುವನ್ನು ವರಿಸುತ್ತಾಳೆ. ಹಾಗೆ ಆಕೆ ಬೇಡಿದನ್ನು ನೀಡುವ, ಸಂಪತ್ತು, ಆಸ್ತಿ, ಹಣ ನೀಡುವ ದೇವತೆ ಎಂದು ಪರಿಗಣಿಸಲಾಗಿದೆ.
ಹಾಗಾದ್ರೆ ಮನೆಯಲ್ಲಿಯೇ ನಾವು ಈ ವರಮಾಕ್ಷ್ಮಿ ಪೂಜೆ ಮಾಡುವುದು ಹೇಗೆ?
ಹಬ್ಬದ ದಿನದಿಂದು ಮಹಿಳೆಯರು ಬೇಗನೆ ಎದ್ದು ಸ್ನಾನ ಮುಗಿಸಿ, ಉಪವಾಸ ವ್ರತ ಆರಂಭಿಸಬೇಕು. ಮೊದಲು ಕಲಶದಲ್ಲಿ ನೀರು ತುಂಬಿ ಅದನ್ನು ಅಕ್ಕಿಯನ್ನು ತುಬಿಸಿರುವ ತಟ್ಟಯಲ್ಲಿ ಇಡಬೇಕು. ಹಾಗೆ ಮಾವಿನ ಎಲೆ ಅಥವಾ ವೀಳ್ಯದೆಲೆಯನ್ನು ಕಲಶ ಸುತ್ತ ಜೋಡಿಸಬೇಕು. ಹಾಗೆ ಕಲಶದೊಂದಿಗೆ ಇಡುವಂತಹ ತೆಂಗಿನಕಾಯಿ, ಹಣ್ಣುಗಳು, ಅಡಕೆ, ಹೂವುಗಳು, ಹಸಿ ಬಣ್ಣದ ಬಟ್ಟೆ, ಬಳೆ, ಅರಶಿನ, ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳ ಇಟ್ಟುಕೊಳ್ಳಿ.
ಲಕಷ್ಮಿ ದೇವಿಯ ಮೂರ್ತಿಗೆ ಅಲಂಕಾರ ಮಾಡುವುದು, ಆಭರಣ ಹಾಕುವುದು, ಹೂವು ಹೀಗೆ ಎಲ್ಲಾ ಹಂತವನ್ನು ಸರಿಯಾಗಿ ಮಾಡಬೇಕು. ಹಾಗೆ ಕೈಗೆ ಅರಶಿಣ ದಾರದ ಕಂಕಣ ಕಟ್ಟಿಕೊಳ್ಳಬೇಕು. ಕಲಶಕ್ಕೆ ನೆರಿಗೆ ಬರುವಂತೆ ಸೀರೆ ಉಡಿಸಿಕೊಳ್ಳುವುದು. ಮಾಂಗಲ್ಯ ಸೇರಿದಂತೆ ಆಭರಣಗಳು ಬಳೆಗಳಿಂದ ಸುಂದರವಾಗಿ ಅಲಂಕರಿಸಿಕೊಳ್ಳುವುದು.
ಕಲಶದ ಬಳಿ ದೀಪ ಹಚ್ಚಿ, ಅಕ್ಷತೆಯನ್ನು ದೇವಿಗೆ ಹಾಕಿ. ಹಣ್ಣು, ಹೂವು, ಸಿಹಿತಿಂಡಿಗಳನ್ನು ದೇವಿಗೆ ನೈವೇದ್ಯವಾಗಿಟ್ಟು ಆರತಿ ಬೆಳಗುವುದು. ಹಾಗೆ ಪ್ರಸಾದ ಹಂಚುವುದು. ಬಳಿಕ ಮಾರನೆ ದಿನ ಈ ಕಲಶವನ್ನು ತೆಗೆಯುವುದು ಬಹಳ ಸೂಕ್ತ.
ಹಾಗೆ ಲಕ್ಷ್ಮಿ ದೇವಿಗೆ ಕಡಲೆ ಬೇಳೆಯ ಪಾಯಸ ಇಲ್ಲವೆ ಯಾವುದಾದರು ಬಗೆಯ ಹೋಳಿಗೆಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಹಾಗೆ ಪೂಜೆ ಸಮಯದಲ್ಲಿ ಓಂ ಹೀಂ ಶ್ರೀ ಲಕ್ಷ್ಮೀಭ್ಯೋ ನಮಃ ಈ ಮಂತ್ರವನ್ನು 21 ಬಾರಿ ಪಠಿಸುವ ಮೂಲಕ ದೇವಿಗೆ ಪೂಜೆ ಸಲ್ಲಿಸಿ. ಪೂಜೆ ಸಂಪೂರ್ಣಗೊಂಡ ಬಳಿಕ ಮನೆಗೆ ಮುತೈದೆಯರನ್ನು ಕರೆದು ಅವರಿಗೆ ಅರಶಿಣ ಕುಂಕುಮ ನೀಡುವುದು ಹಬ್ಬದ ಮತ್ತೊಂದು ಸಂಪ್ರದಾಯವಾಗಿದೆ.
ಕಲಶದೊಂದಿಗೆ ಸೀರೆ ಉಡಿಸಲು ಬೇಕಾಗುವ ಸಾಮಗ್ರಿಗಳು
ಸೀರೆ
ಬ್ಲೌಸ್ ಪೀಸ್
ಬಿಂದಿಗೆ (ಕಂಚಿನದ್ದಾದರೆ ಒಳ್ಳೆಯದು)
ಚಿಕ್ಕ ಬಿಂದಿಗೆ
ಸೆಫ್ಟಿಪಿನ್
ಅಕ್ಕಿ
ನೀರು
ಆಭರಣಗಳು (ಅಗತ್ಯವಿದ್ದರೆ)
ರೆಡಿ ಮೇಡ್ ಪಾದ ಮತ್ತು ಕೈ(ಅಗತ್ಯವಿದ್ದರೆ)
ತೆಂಗಿನ ಕಾಯಿಯಲ್ಲಿ ಬರೆದ ದೇವಿಯ ಮುಖ
ಹೂವು, ಮಾಲೆ
ಶರ್ಟ್ ಹ್ಯಾಂಗರ್
ಬಾಲ್ ಪಿನ್ಸ್
ದಾರ
ಫ್ಲೆಕ್ಸಿ ವೈಯರ್
ನ್ಯೂಸ್ ಪೇಪರ್
ಕತ್ತರಿ
ಸೆಲ್ಲೋ ಟೇಪ್



Click it and Unblock the Notifications











