Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಶನಿವಾರದಂದು ಬಂದಿದೆ ಷಟಿಲಾ ಏಕಾದಶಿ: ಈ 2 ಕಾರ್ಯ ಮಾಡಿದರೆ ಸಂಪತ್ತು ವೃದ್ಧಿಸುವುದು
ವರ್ಷದಲ್ಲಿ ಒಟ್ಟು 24 ಏಕಾದಶಿ, ತಿಂಗಳಿಗೆ 2 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಇವತ್ತು ಅಂದರೆ ಜನವರಿ 25ಕ್ಕೆ ಶಟಿಲಾ ಏಕಾದಶಿಯನ್ನು ಆಚರಿಸಲಾಗುವುದು. ಈ ದಿನ ಏಕಾದಶಿ ವ್ರತವನ್ನು ಮಾಡುವವರು ಬೆಳಗ್ಗೆ ಎದ್ದು ಸ್ನಾನ ಮಾಡಿ ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಿರುತ್ತಾರೆ. ಆದರೆ ಈ ದಿನ ಶನಿವಾರದಂದು ಈ ಷಟಿಲಾ ಏಕಾದಶಿ ಬಂದಿರುವುದರಿಂದ ಈ ಎರಡು ಕಾರ್ಯ ಮಾಡಿದರೆ ಈ ಏಕಾದಶಿಯಿಂದ ಮತ್ತಷ್ಟು ಪ್ರಯೋಜನ ಪಡೆಯುತ್ತೀರಿ....

ಎಳ್ಳು ಪರಿಹಾರ
ಹೌದು ಈ ದಿನ ನೀವು ಕಪ್ಪು ಎಳ್ಳನ್ನು ಕಳಸದಲ್ಲಿ ಹಾಕಿಟ್ಟು ಪೂಜಿಸಿ, ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಸ್ವಲ್ಪ ಎಳ್ಳು ಹಾಕಿ, ಇನ್ನು ಸ್ವಂತ ವ್ಯವಹಾರ ಮಾಡುತ್ತಿದ್ದರೆ ಆಫೀಸ್ನಲ್ಲಿಯೂ ಎಳ್ಳನ್ನು ಹಾಕಿ, ಹೀಗೆ ಮಾಡುವುದರಿಂದ ಶ್ರೀ ವಿಷ್ಣು ಹಾಗೂ ಶನಿಯ ಕೃಪೆ ನಿಮ್ಮ ಮೇಲಿರುತ್ತದೆ, ಇದರಿಂದ ಕಷ್ಟಗಳು ಕಡಿಮೆಯಾಗುವುದು.
ದಾನ ಮಾಡಿ
ಈ ದಿನ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ ಹಾಗಾಗಿ ಈ ದಿನ ನಿಮ್ಮ ಕೈಲ್ಲಾದಂತೆ ದಾನ ಧರ್ಮಗಳನ್ನು ಮಾಡಿ, ಹೀಗೆ ದಾನ ಮಾಡುವಾಗ ಆ ವಸ್ತುಗಳ ಜೊತೆಗೆ ಸ್ವಲ್ಪ ಕಪ್ಪು ಎಳ್ಳು ಕೂಡ ದಾನ ಮಾಡಿ, ಹೀಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ದೂರಾಗುವುದು.
ಈ ದಿನ ಅನ್ನದಾನಕ್ಕೆ ತುಂಬಾನೇ ಮಹತ್ವವಿದೆ
ಇದರ ಮಹತ್ವ ಹೇಳುವ ಪೌರಾಣಿಕ ಕತೆ ಕೂಡ ಇದೆ
ಒಬ್ಬಾಕೆ ಮಹಾವಿಷ್ಣುವಿನ ದೊಡ್ಡ ಭಕ್ತೆಯಾಗಿದ್ದಳು. ಪ್ರತಿ ಏಕಾದಶಿಯನ್ನು ಬಹಳ ಕಠಿಣವಾಗಿ ಆಚರಿಸುತ್ತಿದ್ದಳು, ಉಪವಾಸ ಮಾಡುತ್ತಿದ್ದಳು, ಮಂತ್ರಗಳನ್ನು ಪಠಿಸುತ್ತಿದ್ದಳು, ತನಗೆ ಮೋಕ್ಷ ಬೇಕೆಂದು ಸದಾ ಶ್ರೀವಿಷ್ಣುವಿನ ಜಪ ಮಾಡುತ್ತಲೇ ಇರುತ್ತಾಳೆ. ನಾನು ಶ್ರೀ ವಿಷ್ಣುವಿನ ಭಕ್ತೆಯಾಗಿರುವುದರಿಂದ ಖಂಡಿತನನಗೆ ಮೋಕ್ಷ ಸಿಗುತ್ತದೆ ಎಂದು ನಂಬಿರುತ್ತಾಳೆ. ಆಕೆ ಇಹಲೋಕ ತ್ಯಜಿಸಿದ ಬಳಿಕ ವೈಕುಂಠಕ್ಕೆ ಹೋಗುತ್ತಾಳೆ, ಆದರೆ ಅಲ್ಲಿ ಅವಳಿಗೆ ಖಾಲಿ ಗುಡಿಸಲು ನೀಡಲಾಗುತ್ತೆ.
ವೈಕುಂಠ ಎಂದರೆ ಸ್ವರ್ಗದ ಬಾಗಿಲು ನಮಗಾಗಿ ತೆರೆದಿರುತ್ತದೆ ಆದರೆ ಇಲ್ಲಿ ನನಗೆ ಗುಡಿಸಲು ನೀಡಲಾಗಿದೆ ಎಂದು ದುಃಖ ಪಡುತ್ತಾಳೆ. ಆಕೆ ಶ್ರೀ ವಿಷ್ಣುವಿನ ಬಳಿ ನಿನ್ನ ಸದಾ ಜಪ ಮಾಡುತ್ತಿದ್ದೆ, ಎಲ್ಲಾ ಏಕಾದಶಿಯಂದು ಉಪವಾಸ ಇರುತ್ತಿದ್ದೆ, ಆದರೆ ನನಗ್ಯಾಕೆ ಹೀಗೆ ಎಂದಾಗ ನಿನ್ನ ಪೂಜೆಯ ಫಲದಿಂದ ನೀನು ವೈಕುಂಠಕ್ಕೆ ಬಂದಿದ್ದೀಯ, ಆದರೆ ನೀನು ಅನ್ನ ದಾನ ಮಾಡಿಲ್ಲ, ಒಮ್ಮೆ ನಾನೇ ನಿನ್ನ ಬಳಿ ಆಹಾರ ಕೇಳಲು ಬಂದಾಗ ನೀನು ನಮಗೆ ಅನ್ನದ ಬದಲಿಗೆ ಮಣ್ಣು ನೀಡಿದೆ ಎಂದು ಹೇಳಿದಾಗ ಆಕೆ ಕಣ್ಣೀರು ಹಾಕಿ ನನಗೆ ನನ್ನ ತಪ್ಪನ್ನು ಸರಿಪಡಿಸುವ ಮಾರ್ಗ ಕೇಳುತ್ತಾಳೆ. ಆಗ ಶ್ರೀ ವಿಷ್ಣುವು ದೇವ ಕನ್ಯೆಯರು ಬರುತ್ತಾರೆ ಅವರು ಹೇಳಿ ಶಟಿಲಾ ಏಕಾದಶಿಯ ಕತೆಕೇಳು ಅಂತಾರೆ, ಅದರಂತೆ ಆಕೆಯ ಗುಡಿಸಲಿಗೆ ದೇವ ಕನ್ಯೆಯರು ಬರುತ್ತಾರೆ. ಅವರು ದಾನ ಮಹತ್ವ, ಷಟಿಲಾ ಏಕಾದಶಿಯ ವ್ರತ ನಿಯಮ ಹೇಳುತ್ತಾರೆ, ಆಕೆ ಅದನ್ನೆಲ್ಲಾ ಭಕ್ತಿಯಿಂದ ಕೇಳುತ್ತದೆ, ಅವರು ಹೇಳಿದ ಕತೆಯಲ್ಲಿ ಅವರು ಅನ್ನ ದಾನದ ಮಹತ್ವ ಬಗ್ಗೆ ಹೇಳುತ್ತಾರೆ. ನಂತರ ನೋಡಿದರೆ ಗುಡಿಸಲು ಮಾಯವಾಗಿರುತ್ತದೆ, ಆಕೆಗೆ ಸ್ವರ್ಗದ ಬಾಗಿಲು ತೆರೆಯುತ್ತದೆ.



Click it and Unblock the Notifications