Just In
- 1 hr ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 2 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- 3 hrs ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 4 hrs ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
Don't Miss
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ರಾಶಿಯವರು ಎಂದಿಗೂ ವಿಶ್ವಾಸಕ್ಕೆ ಅರ್ಹರಲ್ಲ!
ವಿಶ್ವಾಸ ಎನ್ನುವುದು ಬಹಳ ದೊಡ್ಡ ಪದ. ಇದರ ಗಳಿಕೆಗೆ ತ್ಯಾಗ, ಪ್ರೀತಿಯೆಂಬ ಆರೈಕೆ ಅತ್ಯಗತ್ಯ. ಆದರೆ ಈ ಅವಿಶ್ವಾಸಿಗಳು ಹಲವು ಬಾರಿ ಸ್ವಾರ್ಥ ಗುಣಗಳಿಂದ ಅಥವಾ ತಮ್ಮದೇ ಸ್ವಹಿತಸಾಧನೆಯಿಂದಾಗಿ ಇತರರ ನೆರವಿಗೆ ಎಂದಿಗೂ ಧಾವಿಸುವುದಿಲ್ಲ. ಮೇಲ್ನೋಟಕ್ಕೆ ಸಹಾಯ ಮಾಡುವ ಹಂಬಲ ಇರುವುದಾಗಿ ತೋರುತ್ತಾರೆಯೇ ವಿನಃ, ಇವರ ಪರಿಸ್ಥಿತಿಯಾಗಲಿ, ಮನಸ್ಥಿತಿಯಾಗಲೀ ಸಹಾಯ ಮಾಡುವ ಯಾವ ಸೂಚನೆಯನ್ನು ಹೊಂದಿರುವುದಿಲ್ಲ.
ಇನ್ನು ಇಂಥ ಅವಿಶ್ವಾಸಿಗಳನ್ನು ನಂಬಿ ಯಾವುದಾದರೂ ಕೆಲಸಗಳಿಗೆ ಕೈಹಾಕಿದರಂತೂ ಮುಗಿದೇ ಹೋಯಿತು. ತುರ್ತಾಗಿ ಸಹಾಯ ಕೇಳಿದಾಗಲೂ ನೆರವಿಗೆ ಬರದೇ ಇರುವುದು ಅವಿಶ್ವಾಸಿಗಳ ಲಕ್ಷಣ. ಇಂತಹ ಗುಣಗಳು ನಮಗೂ ಹಲವು ಬಾರಿ ಕಿರಿಕಿರಿ ಎನಿಸಿರುತ್ತದೆ. ನಿಮಗೂ ಇಂಥದ್ದೇ ಕಿರಿಕಿರಿ ಉಂಟಾಗಿದೆಯೇ?, ಇವರನ್ನು ಪತ್ತೆ ಮಾಡುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆಯೇ?.
ರಾಶಿಗಳನ್ನು ಆಧರಿಸಿ ಸಹ ಅವಿಶ್ವಾಸ ಗುಣಗಳನ್ನು ಹೊಂದಿದ್ದಾರೆ ಎಂದು ಪತ್ತೆ ಮಾಡಬಹುದು. ರಾಶಿಭವಿಷ್ಯದ ಪ್ರಕಾರ ಕೆಳಗಿನ ಕೆಲವು ರಾಶಿಯವರು ವಿಶ್ವಾಸಕ್ಕೆ ಅರ್ಹರೇ ಅಲ್ಲ, ಎಂದಿಗೂ ಇವರನ್ನು ನಿಮ್ಮ ವಿಶ್ವಾಸಾರ್ಹರ ಪಟ್ಟಿಯಲ್ಲಿ ಇಡಲೇಬೇಡಿ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಮಿಥುನ ರಾಶಿ
ಅವಿಶ್ವಾಸಿಗಳು ಎಂಬ ಪಟ್ಟಿಯಲ್ಲಿ ಮಿಥುನ ರಾಶಿ ಮೊದಲನೇ ಸಾಲಿನಲ್ಲಿ ನಿಲ್ಲುತ್ತದೆ. ಇವರು ನಿಮ್ಮ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರಬಹುದು, ನಿಮ್ಮ ಎಲ್ಲಾ ಪೋಸ್ಟ್ ಗಳಿಗೆ ಲೈಕ್, ಕಮೆಂಟ್ ಗಳನ್ನೂ ಕೊಡಬಹುದು, ಆದರೆ ಮಿಥುನ ರಾಶಿಯವರು ನಿಮಗಾಗಿ ಇಷ್ಟನ್ನು ಮಾತ್ರ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಅವರಿಂದ ಹೆಚ್ಚಿನ ಸಹಾಯ ನಿರೀಕ್ಷಿಸಲಾಗದು. ಇವರು ತಾವು ಹೆಚ್ಚು ಕಾರ್ಯನಿರತರಾಗಿದ್ದೇವೆಂದು ಆದ್ದರಿಂದ ಸಂಪರ್ಕಿಸಲು ಸಾಧ್ಯವಿಲ್ಲವೆಂದು ಹೇಳಿಕೊಳ್ಳುತ್ತಾರೆ. ನಿಮ್ಮೊಂದಿಗೆ ಸಣ್ಣ ಚಿಟ್ ಚಾಟ್ ಮಾಡಲು ಸಹ ಇವರು ಆಸಕ್ತಿ ಹೊಂದಿರುವುದಿಲ್ಲ. ಇನ್ನು ವಿಶೇಷವೆಂದರೆ ಇವರು ನಿಮಗಾಗಿ ಸಮಯ ಮೀಸಲಿಟ್ಟು ಆನ್ಲೈನ್ ಚಾಟ್ ಮಾಡುವುದಿಲ್ಲ, ಮತ್ತೊಂದು ಕೆಲಸದ ನಡುವೆ ಸುಮ್ಮನೆ ಸಂದೇಶಗಳ ವಿನಿಮಯ ಮಾಡುತ್ತಿರುತ್ತಾರೆ ಅಷ್ಟೇ.
ಧನು ರಾಶಿ
ಬಿಲ್ಲಿನ ಸಂಕೇತವುಳ್ಳ ಧನು ರಾಶಿಯವರು ಹೊರಗೆ ಹೋಗಲು ಇಷ್ಟಪಡುವಷ್ಟು ನಾಲ್ಕು ಗೋಡೆಗಳ ನಡುವೆ ಮನೆಯಲ್ಲಿ ಇರಲು ಇಚ್ಚಿಸುವುದಿಲ್ಲ. ಆದ್ದರಿಂದಲೇ ಅವರು ನಿಮ್ಮನ್ನು ಭೇಟಿ ಮಾಡಲು ಅವರಿಗೆ ಸಮಯವೇ ಸಿಗುವುದಿಲ್ಲ. ಆದರೆ, ಇದರರ್ಥ ನೀವು ಅವರಿಗೆ ಏನೂ ಅಲ್ಲ ಏಂದೇನಲ್ಲ. ನೀವು ಅವರ ಪ್ರೀತಿಯ, ಆಪ್ತ ಸ್ನೇಹಿತರಿರಬಹುದು ಆದರೂ, ಅವರು ತಮ್ಮದೇ ಅದ ರೀತಿಯಲ್ಲಿ, ತಮಗೆ ಇಷ್ಟಬಂದತೆ ತಮ್ಮ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಆದರೆ ಒಬ್ಬ ವಿಶ್ವಾಸಾರ್ಹ ಗೆಳೆಯ ಎಂದರೆ ಈ ಗುಣವಿದ್ದರೆ ಅವರನ್ನು ವಿಶ್ವಾಸದ ತೆಕ್ಕೆಗೆ ತೆಗೆದುಕೊಳ್ಳು ಸಾಧ್ಯವೆ?.
ಮಕರ
ಮಕರ ರಾಶಿಯವರು ಎಂದಿನಂತೆ ಯಾವಾಗಲೂ ಬ್ಯುಸಿ ಇರುತ್ತಾರೆ ಇದರಲ್ಲಿ ಸಂದೇಹ ಬೇಡ. ಇವರು ಎಷ್ಟು ಬ್ಯುಸಿ, ಕಾರ್ಯನಿರತರು ಎಂದರೆ ಇವರನ್ನು ಭೇಟಿ ಮಾಡಲು ನೀವು ಸಾಕಷ್ಟು ಪಡಬೇಕಾಗುತ್ತದೆ, ಇಷ್ಟಾದರೂ ಸಿಗುತ್ತಾರೆ ಎಂಬ ನಂಬಿಕೆ ಇರುವುದಿಲ್ಲ. ಆದರೆ ವಿಶೇಷವೆಂದರೆ ಮಕರ ರಾಶಿಯವರು ನೀವು ಸಹ ಇವರನ್ನು ಭೇಟಿ ಮಾಡಬೇಕೆಂದು ಬಯಸುವುದಿಲ್ಲ. ಪ್ರತಿ ಬಾರಿ ಕರೆ ಅಥವಾ ಆನ್ ಲೈನ್ ಚಾಟ್ ನಲ್ಲಿ ಸಿಕ್ಕಾಗ ನಿಮ್ಮನ್ನು ಭೇಟಿಯಾಗಬೇಕೆಂದು ಇಚ್ಚೆ ವ್ಯಕ್ತಪಡಿಸುತ್ತಾರೆ ಹಾಗೂ ಬಯಸುತ್ತಾರೆಯೇ ವಿನಃ ಭೇಟಿಯಾಗುವುದಿಲ್ಲ. ಇವರನ್ನು ನಂಬಿ ಎಂದಿಗೂ ಪ್ರಮುಖ ಕೆಲಸಕ್ಕೆ ಕೈಹಾಕಬೇಡಿ.
ಕುಂಭ ರಾಶಿ
ಕುಂಭ ರಾಶಿಯವರ ವಿಷಯಕ್ಕೆ ಬಂದರೆ ಇವರ ಮರೆಗುಳಿತನವೇ ಇವರ ದೊಡ್ಡ ಶತ್ರು-ಮಿತ್ರ. ನೀವು ಇವರಿಗೆ ಕಳುಹಿಸಿರುವ ಪ್ರಮುಖ ಸಂದೇಶಗಳನ್ನು ಓದದೇ ಇರಬಹುದು ಅಥವಾ ಒಮ್ಮೆ ಓದಿದರೂ ಮತ್ತೆ ಅದಕ್ಕೆ ಪ್ರತ್ಯುತ್ತರ ನೀಡದಿರಬಹುದು ಅದ್ದರಿಂದಲೇ ಇವರ ಬೇಟಿ ಬಹಳ ದೂರದ ಮಾತು. ನಿಮ್ಮ ಸಂದೇಶದಲ್ಲಿರುವ ಪ್ರಮುಖ ವಿಷಯಗಳನ್ನು ಅವರು ಓದಿದರೆ ತಾನೇ ತಿಳಿಯಲು ಸಾಧ್ಯ. ಅತ್ಯಂತ ಆಸಕ್ತಿದಾಯಕ ಮತ್ತೊಂದು ಭಾಗವೆಂದರೆ ಅವರು ನಿಮಗೆ ಉತ್ತರಿಸಿದ್ದಾರೆ ಎಂಬುದನ್ನೆ ಹಲವು ಭಾರಿ ಮರೆತಿರುತ್ತಾರೆ!.