For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ (21-09-2019)

|

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

rashi bhavishya

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್

ನಿಮ್ಮ ಸಣ್ಣ ಸ್ವಭಾವವು ನಿಮಗೆ ಮುಜುಗರವನ್ನು ಉಂಟುಮಾಡುವುದು. ಅನೇಕ ಸಮಸ್ಯೆಗಳನ್ನು ಸಹಿಸಿಕೊಳ್ಳಬೇಕಾಗುವುದು. ವಾದ ಮಾಡುವುದನ್ನು ತಪ್ಪಿಸಿ. ಅದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡ ಬಹುದು. ನಿಮ್ಮ ಉದ್ಯೋಗದ ಕ್ಷೇತ್ರದಲ್ಲಿ ಸಾಕಷ್ಟು ಸಹನೆ ಹಾಗೂ ಶಾಂತಿಯ ವರ್ತನೆ ತೋರುವುದು ಸೂಕ್ತ. ನಿಮ್ಮ ಅಸಭ್ಯ ವರ್ತನೆಯನ್ನು ಸಹಿಸುವುದಿಲ್ಲ. ಕಾರ್ಪೋರೇಟ್ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಒಂದು ಸವಾಲಿನ ದಿನವಾಗಬಹುದು. ಕುಟುಂಬದಲ್ಲೂ ಅಸಮಧಾನ ನೆಲೆಸುವುದು. ಕೆಲಸದ ವಿಷಯದಲ್ಲೂ ಅಹಿತಕರವಾಗಿರುತ್ತದೆ. ನೀವು ನಿರಾಸೆಗೆ ಒಳಗಾಗಬಹುದು. ನಿಮ್ಮ ಪ್ರೀತಿಯು ಸಣ್ಣ ಸಂಗತಿಗೆ ಕೋಪಕ್ಕೆ ಒಳಗಾಗುವುದು. ಹಣಕಾಸಿನ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ. ಅತಿಯಾದ ಖರ್ಚಿನ ಅಭ್ಯಾಸವು ನಿಮ್ಮ ಬಜೆಟ್ಗೆ ತೊಂದರೆಯನ್ನು ಉಂಟುಮಾಡುವುದು. ನಿದ್ರಾಹೀನತೆ ಹಾಗೂ ಆತಂಕದಿಂದ ಬಳಲುತ್ತಿದ್ದವರು ಜಾಗರೂಕರಾಗಿರಬೇಕು.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 21

ಅದೃಷ್ಟದ ಸಮಯ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ

ವೃಷಭ ರಾಶಿ: 20 ಏಪ್ರಿಲ್ -20 ಮೇ

ಮುಂಜಾನೆಯ ಶುಭ ಸುದ್ದಿ ನಿಮಗೆ ಆಶ್ಚರ್ಯವನ್ನುಂಟುಮಾಡುವುದು. ಅದರಿಂದ ನೀವು ಒಮ್ಮೆ ತಾಜಾ ಭಾವನೆಯನ್ನು ಪಡೆದುಕೊಳ್ಳುವಿರಿ. ಹಣಕಾಸಿನ ವಿಷಯದಲ್ಲಿ ನೀವು ಹತ್ತಿರದ ಸಂಬಂಧಿಗೆ ಸಹಾಯ ಮಾಡುವ ಸಾಧ್ಯತೆಗಳಿವೆ. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಒತ್ತಡ ಮತ್ತು ಸ್ಪರ್ಧಾತ್ಮಕ ದಿನವನ್ನು ಎದುರಿಸುವರು. ಉದ್ಯಮಿಗಳು ಹೊಸ ಯೋಜನೆಯನ್ನು ಕೈಗೊಳ್ಳಲು ಮುಂದಾಗುವರು. ಹಣಕಾಸಿನ ವಿಷಯದಲ್ಲಿ ನೀವು ಲಾಭವನ್ನು ಅನುಭವಿಸುವಿರಿ. ಕುಟುಂಬದ ವಿಷಯದಲ್ಲಿ ಪರಸ್ಪರ ಸಹಕಾರಿ ವರ್ತನೆ ಅತ್ಯಂತ ಪ್ರಮುಖವಾದದ್ದು. ಹಿಂದಿನ ಸಾಲಗಳನ್ನು ತೀರಿಸಲು ನಿಮಗೆ ಸಹಾಯವಾಗುವುದು. ದಿನ ಪೂರ್ತಿ ಉತ್ತಮ ಮಾನಸಿಕ ಸ್ಥಿತಿಯನ್ನು ಪಡೆದುಕೊಳ್ಳಲು ಯೋಗ ಮಾಡಿ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 44

ಅದೃಷ್ಟದ ಸಮಯ: ಮಧ್ಯಾಹ್ನ 2:00ರಿಂದ ಸಂಜೆ 5:00ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್

ಮಿಥುನ ರಾಶಿ: 21 ಮೇ -20 ಜೂನ್

ನಿಮ್ಮ ಕಠಿಣ ಪರಿಶ್ರಮದಿಂದಾಗಿ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಈ ಹಿಂದೆ ಇದ್ದ ಹಣಕಾಸಿನ ಸಮಸ್ಯೆಗಳು ಸಹ ಪರಿಹಾರವಾಗುತ್ತವೆ. ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ಹಿರಿಯರ ಸಲಹೆ ಹಾಗೂ ಆಶೀರ್ವಾದ ಪಡೆಯುವುದು ಸೂಕ್ತ. ಕಾನೂನು ಹೋರಾಟ ನಡೆಸುತ್ತಿದ್ದವರಿಗೆ ಅಂತಿಮವಾಗಿ ಪರಿಹಾರ ಕಂಡುಕೊಳ್ಳುವರು. ಸದೃಢ ಆರೋಗ್ಯಕ್ಕಾಗಿ ನೀವು ನಿತ್ಯವೂ ವಯಾಯಾಮಗಳ ಮೊರೆ ಹೋಗಬೇಕು. ಇಂದು ನಿಮಗೆ ಕೆಲಸದಲ್ಲಿ ಬಿಡುವಿಲ್ಲದ ದಿನವಾಗಿರುತ್ತದೆ. ಆದಷ್ಟು ಶಾಂತ ಮತ್ತು ತಾಳ್ಮೆಯ ವರ್ತನೆ ತೋರುವುದು ಸೂಕ್ತ. ಸಂಗಾತಿಯೂ ಅಸಮಧಾನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ನೀವು ಅಗತ್ಯಕ್ಕೆ ಅನುಗುನವಾಗಿ ಕೆಲಸವನ್ನು ನಿರ್ವಹಿಸುವುದು ಸೂಕ್ತ. ದಿನದ ಅಂತ್ಯದ ವೇಳೆಗೆ ನೀವು ದಣಿವಿನಿಂದ ಕುಸಿಯುವಿರಿ.

ಅದೃಷ್ಟದ ಬಣ್ಣ: ಕಪ್ಪು ಹಸಿರು

ಅದೃಷ್ಟದ ಸಂಖ್ಯೆ: 29

ಅದೃಷ್ಟದ ಸಮಯ: ಸಂಜೆ 7:00 ರಿಂದ ರಾತ್ರಿ 10:30ರ ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ

ಕರ್ಕ ರಾಶಿ: 21 ಜೂನ್ 22 ಜುಲೈ

ಇಂದು ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ನಿಮ್ಮಲ್ಲಿ ಕೆಲವರು ಉತ್ತಮ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಸಂಗಾತಿಯಿಂದ ಉತ್ತಮ ಬೆಂಬಲ ಹಾಗೂ ಸಹಕಾರ ದೊರೆಯುವುದು. ನವವಿವಾಹಿತ ದಂಪತಿಗಳು ವಿಷಯವನ್ನು ಭಿನ್ನವಾಗಿ ಕಾಣಬಹುದು. ಆದರೆ ಸಮಯದೊಂದಿಗೆ ಹೊಂದಿಕೊಳ್ಳುತ್ತಾರೆ. ನಿಮ್ಮ ಬುದ್ಧಿವಂತ ಮನೋಭಾವವು ಜನರನ್ನು ಮೆಚ್ಚಿಸುವುದು. ಕೆಲಸದ ವಿಷಯದಲ್ಲಿ ವಿವಾದವನ್ನು ಎದುರಿಸಬೇಕಾಗುವುದು. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಕೈಗೊಳ್ಳಬೇಕು. ಹಿರಿಯರ ಆರೋಗ್ಯ ಸುಧಾರಣೆ ಕಾಣುವುದು. ನಿಮ್ಮ ಆರೋಗ್ಯದ ದೃಷ್ಟಿಯಿಂದ ಇದು ಸಾಮಾನ್ಯವಾದ ದಿನ.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 1

ಅದೃಷ್ಟದ ಸಮಯ: ಮುಂಜಾನೆ 5;00 ರಿಂದ ಸಂಜೆ 4:00ರ ವರೆಗೆ

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಸಿಂಹ ರಾಶಿ: 23 ಜುಲೈ-22 ಆಗಸ್ಟ್

ಇಂದು ನಿಮ್ಮ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರುವುದರ ಮೂಲಕ ಕ್ರಿಯಾಶೀಲರಾಗಿರುತ್ತೀರಿ. ನಿಮ್ಮ ಸಕಾರಾತ್ಮಕ ನಡವಳಿಕೆಯು ಇತರಿಂದ ಮೆಚ್ಚುಗೆ ಪಡೆಯುವುದು. ನಿಮ್ಮ ಹಿಂದಿನ ಹೂಡಿಕೆಯು ಉತ್ತಮ ಫಲಿತಾಂಶಗಳನ್ನು ನೀಡುವುದು. ಇದರ ಫಲವಾಗಿ ಆರ್ಥಿಕ ಸ್ಥಿತಿಯ ಲಾಭದಾಯಕವಾಗಿರುತ್ತದೆ. ಸಾರ್ವಜನಿಕ ಸಮುದಾಯದಲ್ಲಿ ಅಥವಾ ಇತರ ವ್ಯಕ್ತಿಗಳ ಮುಂದೆ ಮಾತನಾಡುವ ಮೊದಲು ಸೂಕ್ತ ಚಿಂತನೆ ಹಾಗೂ ಯೋಚನೆಯನ್ನು ಮಾಡಿ ಮಾತನಾಡಿ. ಸಂಘರ್ಷ ಮತ್ತು ತೊಡಕುಗಳನ್ನು ತಪ್ಪಿಸಲು ನಿಮ್ಮ ಅಧಿಕಾರಿಗಳಿಂದ ಸಲಹೆ ಪಡೆಯಿರಿ. ಕುಟುಂಬದ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ಉತ್ತಮ ಸ್ನೇಹಿತರೊಂದಿಗೆ ಸಮಯ ಕಳೆಯುವುದು ನಿಮಗೆ ಸಂತೋಷ ಮತ್ತು ನೆಮ್ಮದಿ ತರುವುದು. ಹೊಸ ವಾಹನ ಖರೀದಿಗೆ ನೀವು ಮುಂದಾಗಬಹುದು.

ಅದೃಷ್ಟದ ಬಣ್ಣ: ಕ್ರೀಮ್

ಅದೃಷ್ಟದ ಸಂಖ್ಯೆ: 4

ಅದೃಷ್ಟದ ಸಮಯ: ಬೆಳಿಗ್ಗೆ 4:30 ರಿಂದ ಮಧ್ಯಾಹ್ನ 12:30ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

ತಾಳ್ಮೆಯನ್ನು ಹೊಂದದೆ ಇದ್ದರೆ ಇಂದು ನಿಮಗೆ ಸಂಬಂಧವನ್ನು ನಿಭಾಯಿಸಲು ಕಷ್ಟವಾಗುವುದು. ವಿಷಯಗಳು ಕಲ್ಪನೆಗೂ ಮೀರಿದ ಸ್ಥಿತಿಯನ್ನು ಹೊಂದಿರುವುದರಿಂದ ನೀವು ದೃಢ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ನಿಮ್ಮ ಕುಟುಂಬವನ್ನು ಸಂತೋಷವಾಗಿಡಲು ಸಣ್ಣ ಪ್ರವಾಸ ಕೈಗೊಳ್ಳಬೇಕು. ಹಿರಿಯರು ತೀರ್ಥ ಯಾತ್ರೆ ಮಾಡುವುದರ ಮೂಲಕ ಧಾರ್ಮಿಕ ಭಾವನೆಯನ್ನು ಪಡೆದುಕೊಳ್ಳುವರು. ಸರ್ಕಾರಿ ನೌಕರರಿಗೆ ವರ್ಗಾವಣೆ ಆಗುವ ಸಾಧ್ಯತೆಗಳಿವೆ. ಸಂಗಾತಿಯು ಮನೆಗಾಗಿ ದುಬಾರಿ ವಸ್ತು ಖರೀದಿಸಲು ಮುಂದಾಗಬಹುದು. ನೀವು ಹೊಂದಿರುವ ಸಂಗತಿಗಳ ಬಗ್ಗೆ ತೃಪ್ತಿಯನ್ನು ಹೊಂದಿರಿ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 7

ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 8:00ರ ವರೆಗೆ

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ನಿಮ್ಮಲ್ಲಿ ಕೆಲವರು ಕುಟುಂಬದ ವಿಷಯದಲ್ಲಿ ಅಹಿತಕರ ಭಾವನೆ ಹೊಂದುತ್ತಾರೆ. ನಿಮ್ಮ ನಿರೀಕ್ಷೆಯಂತೆ ವಿಷಯಗಳು ತದ್ವಿರುದ್ಧವಾಗಿ ಹೋಗುತ್ತವೆ. ಸಂಗಾತಿಯ ಬೆಂಬಲದೊಂದಿಗೆ ನೀವು ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು. ವೈಯಕ್ತಿಕ ಚಿಂತನೆಗಳಿಗೆ ಹೊರಗಿನವನು ಮಧ್ಯಪ್ರವೇಶಿಸಲು ಪ್ರಯತ್ನಿಸಬಹುದು. ಅದನ್ನು ಯಾರೂ ಸ್ವೀಕರಿಸುವುದಿಲ್ಲ. ಹಣಕಾಸಿನ ಮುಂಭಾಗದಲ್ಲಿ ಒಂದು ಬಿಗಿಯಾದ ದಿನ. ಖರ್ಚನ್ನು ಹಿಡಿತದಲ್ಲಿ ಇಡಲು ಪ್ರಯತ್ನಿಸಿ. ಸುತ್ತಮುತ್ತಲಿನ ಜನರಿಂದ ವಿಷಯಗಳನ್ನು ನಿರೀಕ್ಷಿಸದಿರುವುದು ಸೂಕ್ತ. ಕೆಲಸದ ವಿಷಯದಲ್ಲಿ ಸಂಗತಿಗಳು ಸವಾಲಾಗಿರುತ್ತವೆ. ನಿಮ್ಮ ಮೇಲಾಧಿಕಾರಿಗಳು ಸಣ್ಣ ವಿಷಯಗಳ ಬಗ್ಗೆ ಸಿಟ್ಟಾಗುತ್ತಾರೆ. ನೀವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಯೋಚಿಸಿ. ಕೆಲಸದ ಬದಲಾವಣೆ ನಿಮ್ಮ ಮನಸ್ಸಿನಲ್ಲಿದೆ. ಪ್ರವಾಸದಲ್ಲಿ ಸ್ನೇಹಿತರೊಂದಿಗೆ ಹೋಗಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಬಹುದು. ಆರೋಗ್ಯದಲ್ಲಿನ ಸುಧಾರಣೆಯು ನಿಮಗೆ ನಿರಾಳತೆಯನ್ನು ನೀಡುತ್ತದೆ. ಜನರಿಗೆ ಮಾರ್ಗದರ್ಶನ ನೀಡಲು ಮುಂದಾಗುವಿರಿ.

ಅದೃಷ್ಟ ಬಣ್ಣ: ಆಕಾಶ ನೀಲಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ ಸಂಜೆ 4:30 ರವರೆಗೆ

ವೃಶ್ಚಿಕ ರಾಶಿ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ ರಾಶಿ: 23 ಅಕ್ಟೋಬರ್ - 21 ನವೆಂಬರ್

ವ್ಯವಹಾರದ ದೃಷ್ಟಿಯಿಂದ ಲಾಭದಾಯಕ ದಿನವಾಗಿರುತ್ತದೆ. ಮತ್ತು ಈ ಸಂಗತಿಯ ಬಗ್ಗೆ ಸಾಕಷ್ಟು ಸಂತೋಷವನ್ನು ಅನುಭವಿಸುವಿರಿ. ಹಣಕಾಸಿನ ವಿಷಯದಲ್ಲಿ ಸುಧಾರಣೆ ಕಾಣುವುದು ಮತ್ತು ಸಾಲಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತವೆ. ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಯೋಚಿಸುವುದು ಸಮೃದ್ಧವಾಗಿರುತ್ತದೆ. ವಿಷಯಗಳನ್ನು ಸರಳವಾಗಿ ಇರಿಸಿ ಏಕೆಂದರೆ ಇದು ನಿಮಗೆ ಹೆಚ್ಚು ವಿಶ್ರಾಂತಿ ನೀಡುವುದು. ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಇದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಯೋಚಿಸುವುದು ಮುಖ್ಯ. ಮಕ್ಕಳು ಶೈಕ್ಷಣಿಕ ವಿಷಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವರು. ಸಾಮಾಜಿಕ ಸಂಗತಿಗಳು ನಿಮಗೆ ಒತ್ತಡವನ್ನುಂಟು ಮಾಡುತ್ತದೆ. ನೀವು ಆಪ್ತರೊಂದಿಗೆ ಸಮಯ ಕಳೆದು ಆನಂದಿಸುವಿರಿ. ಕೆಲಸದ ಮುಂಭಾಗದಲ್ಲಿ ವಿಷಯಗಳು ಸಾಮಾನ್ಯವಾಗುತ್ತವೆ. ಅನಗತ್ಯ ಕಾರಣಕ್ಕಾಗಿ ಸಂಘರ್ಷಕ್ಕೆ ಒಳಗಾಗುವುದನ್ನು ತಪ್ಪಿಸಿ. ನಿಮ್ಮ ಅಸಮತೋಲಿತ ಆರೋಗ್ಯದಿಂದಾಗಿ ನೀವು ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸಬಹುದು.

ಅದೃಷ್ಟ ಬಣ್ಣ: ಸಾಸಿವೆ ಬಣ್ಣ

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ 11:25 ರ ವರೆಗೆ

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಇಂದು ನಿಮಗೆ ಪ್ರಯಾಣ ಕೈಗೊಳ್ಳಲು ಸೂಕ್ತ ದಿನ. ಪರಿಸ್ಥಿತಿಯು ಪ್ರತಿಕೂಲವಾದ ಕಾರಣ ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಿ. ಹಣಕಾಸಿನ ಮುಂಭಾಗದಲ್ಲಿ ವಿಷಯಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಅನುಭವಿ ವ್ಯಕ್ತಿಯ ಸಲಹೆಯನ್ನು ಪಡೆಯುವುದು ಮುಖ್ಯ. ಭವಿಷ್ಯಕ್ಕೆ ಇದು ಉಪಯುಕ್ತವಾಗಿರುತ್ತದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳು ನಿಮ್ಮ ವೃತ್ತಿಪರ ಜೀವನವನ್ನು ಹಾಳುಮಾಡಲು ಬಿಡಬೇಡಿ. ಸಂಧಿವಾತದಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ಇದು ಕೆಲಸದಲ್ಲಿ ನಿಯಮಿತ ದಿನವಾಗಿರುತ್ತದೆ ಮತ್ತು ನೀವು ಸಾಧಿಸಬೇಕಾದ ಪ್ರಮುಖ ಗುರಿಯ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸಬೇಕು. ಆಭರಣ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವವರು ದೊಡ್ಡ ಲಾಭವನ್ನು ಗಳಿಸುತ್ತಾರೆ. ನೀವು ಇಂದು ಅಪರಿಚಿತ ವ್ಯಕ್ತಿಗೆ ಸಹಾಯ ಮಾಡುತ್ತೀರಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 6:00ರ ವರೆಗೆ

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ವರ್ತಮಾನದ ದಿನ ಹಾಗೂ ಭವಿಷ್ಯದ ಬಗ್ಗೆ ಸೂಕ್ತ ಚಿಂತನೆ ಕೈಗೊಳ್ಳುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬಹುದು. ನೀವು ಸದಾ ಬುದ್ಧಿವಂತಿಕೆಯಿಂದ ಮತ್ತು ತಾಳ್ಮೆಯಿಂದ ವರ್ತಿಸಬೇಕು. ನಿಮ್ಮ ಸಂಗಾತಿಯೊಂದಿಗೆ ವಿಷಯಗಳನ್ನು ಚರ್ಚಿಸಲು ಸಾಕಷ್ಟು ಆರಾಮದಾಯಕ ಭಾವನೆಯನ್ನು ಹೊಂದಿರುತ್ತೀರಿ. ಕುಟುಂಬ ಮುಂಭಾಗದಲ್ಲಿ ಸುಗಮ ದಿನ. ನಿಮ್ಮ ದಿನವನ್ನು ಶಾಂತಿಯುತವಾಗಿ ಕೊನೆಗೊಳಿಸುತ್ತದೆ. ಉದ್ಯಮಿಗಳಿಗೆ ಭಾರಿ ಲಾಭವಾಗಲಿದೆ. ನಿಮ್ಮ ಒಡಹುಟ್ಟಿದವರ ಮನಃಸ್ಥಿತಿ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಆದರೆ ನೀವು ವಿಷಯಗಳನ್ನು ನಿರ್ಲಕ್ಷಿಸಲು ಕಲಿಯಬೇಕಾಗುತ್ತದೆ. ಕಾರ್ಪೊರೇಟ್ ಮುಂಭಾಗದಲ್ಲಿ ಭಾರಿ ದಿನವು ನಿಮ್ಮನ್ನು ಸುತ್ತುವರಿಯುವುದು. ಸಾರ್ವಜನಿಕ ವಲಯದಲ್ಲಿರುವವರು ವರ್ಗಾವಣೆಯನ್ನು ನಿರೀಕ್ಷಿಸಬಹುದು. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ.

ಅದೃಷ್ಟ ಬಣ್ಣ: ರಕ್ತ ಕೆಂಪು

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಬೆಳಿಗ್ಗೆ 7:00 ರಿಂದ 11:15ರ ವರೆಗೆ

ಕುಂಭ ರಾಶಿ: 20 ಜನವರಿ - 18 ಫೆಬ್ರವರಿ

ಕುಂಭ ರಾಶಿ: 20 ಜನವರಿ - 18 ಫೆಬ್ರವರಿ

ಕೆಲವು ವಿಷಯಗಳಿಗೆ ಇಂದು ನಿಮ್ಮ ಪೋಷಕರು ಸೂಕ್ತ ಮಾರ್ಗದರ್ಶನ ನೀಡುವರು. ಪ್ರಮುಖ ಸಮಸ್ಯೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತಾರೆ. ಕೆಲವು ಸಕಾರಾತ್ಮಕ ವಿಷಯಗಳು ಕೆಲಸದ ಮುಂಭಾಗದಲ್ಲಿ ನಿಮ್ಮ ಹಾದಿಗೆ ಬರುತ್ತವೆ. ಇದರಿಂದಾಗಿ ನೀವು ಎಲ್ಲರ ಆಕರ್ಷಣೆಗೆ ಕಾರಣರಾಗುವಿರಿ. ನಿಮ್ಮ ಮುಖ್ಯಸ್ಥರು ನಿಮ್ಮನ್ನು ಅಭಿನಂದಿಸುತ್ತಾರೆ ಮತ್ತು ಶೀಘ್ರದಲ್ಲೇ ನಿಮ್ಮನ್ನು ಪ್ರಚಾರ ಮಾಡುವ ಬಗ್ಗೆ ಯೋಚಿಸುತ್ತಾರೆ. ಕಾರ್ಪೊರೇಟ್ ವಲಯದಲ್ಲಿರುವವರು ಪ್ರಯಾಣದಲ್ಲಿ ನಿರತರಾಗುತ್ತಾರೆ. ವಿದ್ಯಾರ್ಥಿಗಳು ಒತ್ತಡದಿಂದ ಹೊರಬರುವರು. ಬಹಳ ಸಮಯದ ನಂತರ ಸ್ವಲ್ಪ ಶಾಂತಿ ಪಡೆಯುತ್ತಾರೆ. ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಯಾವುದೇ ಕಾರಣಕ್ಕೂ ಕಠಿಣ ಮತ್ತು ಅಲ್ಪ ಮನೋಭಾವದಿಂದ ದೂರವಿರಿ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಒತ್ತಡ ಮತ್ತು ಸಂಘರ್ಷದ ವಿಷಯಗಳನ್ನು ತಪ್ಪಿಸಬೇಕು. ನಿಮ್ಮ ಸಂಗಾತಿಯು ಬೆಂಬಲ ಮತ್ತು ತಿಳುವಳಿಕೆಯನ್ನು ಹೊಂದಿರುತ್ತಾರೆ. ಅದು ನಿಮಗೆ ವಿಶೇಷವೆನಿಸುತ್ತದೆ. ಒಟ್ಟಾರೆ ವಿಷಯಗಳು ಸಾಮಾನ್ಯವಾಗಿರುತ್ತವೆ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಬೆಳಿಗ್ಗೆ 7: 00 ರಿಂದ 11:00 ರ ವರೆಗೆ

ಮೀನ ರಾಶಿ: 19 ಫೆಬ್ರವರಿ - 20 ಮಾರ್ಚ್

ಮೀನ ರಾಶಿ: 19 ಫೆಬ್ರವರಿ - 20 ಮಾರ್ಚ್

ನಿಮ್ಮವರೊಂದಿಗೆ ಸೂಕ್ತ ಸಮಯವನ್ನು ಕಳೆಯುವುದರ ಮೂಲಕ ಕುಟುಂಬದ ಮಹತ್ವವನ್ನು ಅರಿಯುವಿರಿ. ಇಂದು ಈ ವಿಷಯವು ನಿಮಗೆ ಅತ್ಯಂತ ಸಂತೋಷವನ್ನು ತಂದುಕೊಡುವುದು. ನಿಮ್ಮ ಒಡಹುಟ್ಟಿದವರೊಂದಿಗೆ ಇದ್ದ ತಪ್ಪು ತಿಳುವಳಿಕೆಯು ಇಂದು ದೂರವಾಗುವುದು. ಅದು ಎಲ್ಲರಿಗೂ ವಿಶೇಷವಾಗಿರುತ್ತವೆ. ಹಣಕಾಸಿನ ಮುಂಭಾಗದಲ್ಲಿ ವಿಷಯಗಳು ಸುಗಮವಾಗಿರುತ್ತದೆ. ನೀವು ಹಳೆಯ ಸಾಲಗಳಿಂದ ಮುಕ್ತರಾಗುತ್ತೀರಿ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು . ಅದು ನಿಮಗೆ ಅತ್ಯಂತ ಸಮಾಧಾನದ ಸಂಗತಿಯಾಗುವುದು. ಒಳ್ಳೆಯ ಸುದ್ದಿ ನಿಮ್ಮ ಹಾದಿಗೆ ಬರಬಹುದು. ಉದ್ಯಮಿಗಳು ಇಂದು ಕಷ್ಟಪಡುವರು. ಅದರ ಫಲವಾಗಿ ಸಂಜೆಯ ವೇಳೆಗೆ ಅಧಿಕ ಲಾಭವನ್ನು ಪಡೆದುಕೊಳ್ಳುವರು. ಅತಿಯಾದ ಚಿಂತನೆ ನಡೆಸುವ ಅಗತ್ಯವಿಲ್ಲ. ಅದೃಷ್ಟವು ನಿಮ್ಮ ಪರವಾಗಿರುವುದರಿಂದ ನೀವು ಕೈಗೊಂಡ ಕಾರ್ಯದಲ್ಲಿ ಶುಭ ಮತ್ತು ಯಶಸ್ಸು ದೊರೆಯುವುದು. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಅದು ನಿಮ್ಮ ಭವಿಷ್ಯದಲ್ಲಿ ಸಾಕಷ್ಟು ಅನುಕೂಲತೆಯನ್ನು ತಂದುಕೊಡುವುದು. ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಅಥವಾ ಸೂಕ್ತ ವ್ಯಾಯಾಮದಿಂದ ದಿನದ ಆರಂಭ ಮಾಡಿದರೆ ಉತ್ತಮ ಆರೋಗ್ಯ ನಿಮ್ಮದಾಗಿರುತ್ತದೆ.. ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 14

ಅದೃಷ್ಟ ಸಮಯ: ಮಧ್ಯಾಹ್ನ 2:30 ರಿಂದ 5:30ರ ವರೆಗೆ

English summary

Daily Horoscope 21 Sep 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words "wpa" and scopos meaning "time" and "observer".
X
Desktop Bottom Promotion