Just In
- 13 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
1-10-2018: ಸೋಮವಾರದ ದಿನ ಭವಿಷ್ಯ
ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ ಕಷ್ಟ, ಅಡೆತಡೆ ಅಥವಾ ಮೂರ್ಖರ ಚುಚ್ಚು ಮಾತುಗಳಿಗೆ ಕಿವಿಕೊಡುವುದು ಅಥವಾ ಅತಿಯಾದ ಚಿಂತೆಗೆ ಒಳಗಾಗಿ ಬೇಸರಗೊಳ್ಳುವ ಗೋಜಿಗೆ ಹೋಗಬಾರದು.
ಸತ್ಯದ ದಾರಿಯಲ್ಲಿ, ಸಮತೋಲನದ ಮನಃಸ್ಥಿತಿಯಲ್ಲಿ ಮುಂದೆ ಸಾಗಬೇಕು. ಆಗ ನಮ್ಮ ಜೀವನ ಸುಖ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅಲ್ಲದೆ ಇತರ ವ್ಯಕ್ತಿಗಳಿಗೂ ನಾವು ಮಾದರಿ ಯಾಗುತ್ತೇವೆ. ಇನ್ನು ವೃತ್ತಿ ಜೀವನಕ್ಕೆ ಎಂದಿನಂತೆ ಹಿಂತಿರುಗುವ ಈ ಸೋಮವಾರ ನಿಮ್ಮ ಬದುಕಲ್ಲಿ ಯಾವೆಲ್ಲಾ ಬದಲಾವಣೆ ತರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಬೋಲ್ಡ್ ಸ್ಕೈನ ದಿನ ಭವಿಷ್ಯವನ್ನು ಪರಿಶೀಲಿಸಬೇಕು. ನಿಮ್ಮ ಭವಿಷ್ಯ ಹಾಗೂ ಪರಿಹಾರ ಕ್ರಮಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ....
ಮೇಷ (1 ಅಕ್ಟೋಬರ್, 2018)
ಧನಾದಾಯ ಉತ್ತಮ.ಸಂಗಾತಿಯ ಆದಾಯ ಹೆಚ್ಚಾಗುತ್ತದೆ.ಉದ್ಯೋಗ ದೊರೆಯುವ ಎಲ್ಲಾ ಸಾಧ್ಯತೆಗಳಿವೆ.ಹಳೆಯ ಯೋಜನೆಗಳನ್ನು ಈಗ ಮುಂದುವರಿಸಬಹುದು.ಸಂತಾನ ಅಪೇಕ್ಷಿಸುತ್ತಿರುವವರಿಗೆ ಶುಭ ಸಂದೇಶ. ಮಕ್ಕಳಿಗೆ ನೀವು ಧನಸಹಾಯ ಮಾಡುವುದು ಅನಿವಾರ್ಯ.
ವೃಷಭ
ಬಹಳ ಸಂತೋಷವಾಗಿರುವಿರಿ.ವೈಯಕ್ತಿಕ ಅಲಂಕಾರದಲ್ಲಿ ನಿಗಾವಹಿಸಿರಿ.ತಾಯಿಯಿಂದ ನಿಮಗೆ ಧನಸಹಾಯ. ಆಸ್ತಿಯ ಮೇಲೆ ಬಂಧುಗಳ ಕಾಕದೃಷ್ಟಿ ಬೀಳುತ್ತದೆ. ಪಿತ್ರಾಜಿತ ಆಸ್ತಿಗಳು ಒದಗಿ ಬರುತ್ತವೆ. ಭೂಮಿ ಮೇಲೆ ಹೂಡಿದ ಹಣ ಸಾಕಷ್ಟು ಬೆಳೆಯುತ್ತದೆ.ವೃತ್ತಿಯಲ್ಲಿ ಒತ್ತಡ.
Most Read: ವಾಸ್ತು ಟಿಪ್ಸ್: ಮನೆಯಲ್ಲಿ ಮೀನಿನ ಅಕ್ವೇರಿಯಮ್ಸ್ ಹೀಗಿದ್ದರೆ-ಮನೆಯಲ್ಲಿ ಶಾಂತಿ ನೆಲೆಸುತ್ತದೆ
ಮಿಥುನ
ನಿಮ್ಮ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ಹರಿದು ಬರುತ್ತದೆ.ಸರ್ಕಾರಿ ಮೂಲದ ಆಸ್ತಿ ಖರೀದಿ ಮಾಡಲು ಇದು ಸಕಾಲ. ಹೆಣ್ಣುಮಕ್ಕಳ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ಭೂ ಹೆಡುವಳಿದಾರರಿಗೆ ದಾಖಲೆಗಳನ್ನು ಪಡೆಯಲು ಸಕಾಲ. ನಿಮ್ಮ ಮಾತಿನಿಂದ ನಿಮಗೆ ಶತ್ರುಗಳು ಜಾಸ್ತಿಯಾಗುವ ಸಾಧ್ಯತೆ.
ಕಟಕ
ಅತಿಯಾದ ಆತ್ಮಾಭಿಮಾನವಿರುತ್ತದೆ.ಒಡಹುಟ್ಟಿದವರು ಧನಸಹಾಯಕ್ಕಾಗಿ ಬರುತ್ತಾರೆ. ಕೊಟ್ಟ ಹಣ ವಾಪಸ್ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ . ಮೂಳೆ ನೋವು ಬಾಧಿಸಬಹುದು.ಹೊಸ ವ್ಯವಹಾರ ಆರಂಭಿಸುವ ಮುಂಚೆ ಅದರ ಬಗ್ಗೆ ತಿಳಿಯಿರಿ.ಉದ್ದಿಮೆ ನಡೆಸುವವರಿಗೆ ಉತ್ತಮ ಅವಕಾಶ ಲಭಿಸಲಿದೆ.
ಸಿಂಹ
ಧನಾದಾಯ ಪರವಾಗಿಲ್ಲ. ಹೊಸ ವ್ಯಾಪಾರದಲ್ಲಿ ಸೂಕ್ತ ಸ್ಥಾನಮಾನ ದೊರೆಯುತ್ತದೆ. ವಾಹನದ ಮಾಲೀಕರಿಗೆ ಅದರ ದುರಸ್ತಿಗಾಗಿ ಸಾಕಷ್ಟು ಖರ್ಚಾಗುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಇರುವವರಿಗೆ ಬಡ್ತಿ ಸಿಗುವ ಸಾಧ್ಯತೆ.ಆಡಳಿತಾತ್ಮಕ ಹುದ್ದೆಯಲ್ಲಿ ಇರುವವರಿಗೆ ವರ್ಗಾವಣೆ ಸಾಧ್ಯತೆ.
ಕನ್ಯಾ
ಧನಾದಾಯ ಸರಾಗವಾಗಿ ಹರಿದು ಬರುತ್ತದೆ. ನಿಮ್ಮ ಮಾತಿನಿಂದ ವ್ಯಕ್ತಿಗತ ಗೌರವಕ್ಕೆ ಧಕ್ಕೆ ಮಾಡಿಕೊಳ್ಳುವಿರಿ. ಆಸ್ತಿ ಬಗ್ಗೆ ತಗಾದೆಗಳು ತಲೆದೋರುತ್ತದೆ.ಮಕ್ಕಳು ಆಟಪಾಠಗಳಲ್ಲಿ ಒಳ್ಳೆಯ ಹೆಸರು ಗಳಿಸುವರು. ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡುವ ಅವಕಾಶವಿದೆ.ಹೊಟ್ಟೆ ಅಥವಾ ಶ್ವಾಸಕೋಶದಲ್ಲಿ ತೊಂದರೆ.
ತುಲಾ
ಧನಾದಾಯ ಹೆಚ್ಚಳ. ನಿಮ್ಮ ಇಚ್ಚೆಯ ಆಭರಣ ಖರೀದಿಸಲು ಅನುಕೂಲವಾದ ವಾತಾವರಣವಿದೆ. ಸಂಗಾತಿಯ ಸಂತೋಷಕ್ಕಾಗಿ ಒಡವೆ,ವಸ್ತ್ರ ಖರೀದಿ. ಕೆಲವು ಮನೋಕಾಮನೆಗಳು ಈಡೇರುತ್ತವೆ. ಪರರ ಮೇಲೆ ತಪ್ಪು ಹೊರಿಸಲು ಹೋಗಿ ಸಿಕ್ಕು ಬೀಳುವ ಸಾಧ್ಯತೆ.ನೀರಿನಿಂದ ಆರೋಗ್ಯ ವ್ಯತ್ಯಾಸ ಸಾಧ್ಯತೆ.
Most Read:ಅಕ್ಟೋಬರ್ 2018ರ ತಿಂಗಳ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ
ವೃಶ್ಚಿಕ
ತೆರಿಗೆ ತಜ್ಞರಿಗೆ ಬೇಡಿಕೆಗಳು ಹೆಚ್ಚುತ್ತವೆ.ಅವರ ಆದಾಯವು ವೃಧ್ಧಿಸುತ್ತದೆ. ನಿಮ್ಮಿಂದ ಧನಸಹಾಯ ಪಡೆದವರೇ ಹಿಂದಿನಿಂದ ನಿಮ್ಮನ್ನು ತೆಗಳುವರು. ಧನಾದಾಯ ಸಾಮಾನ್ಯ. ಕೃಷಿಕರಿಗೆ ಆದಾಯ ಹೆಚ್ಚಾಗುತ್ತದೆ. ಕೃಷಿ ಭೂಮಿ ವಿಸ್ತರಿಸಬಹುದು.ತಾಯಿಯಿಂದ ನಿಮ್ಮ ಕೆಲಸಗಳಿಗೆ ಪೂರ್ತಿ ಸಹಕಾರ ದೊರೆಯುತ್ತದೆ.
ಧನಸ್ಸು
ಉದ್ಯೋಗದಲ್ಲಿ ಬಡ್ತಿ ಅಥವಾ ವೇತನ ಜಾಸ್ತಿಯಾಗುವ ಸಾಧ್ಯತೆ.ನೀವು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಲಾಭವಿರುತ್ತದೆ. ಕುಟುಂಬದವರು ನಿಮ್ಮ ವ್ಯವಹಾರಗಳಿಗೆ ಸೂಕ್ತ ಸಹಕಾರ ನೀಡುವರು. ನಿರೀಕ್ಷಿತ ಮೂಲಗಳಿಂದ ಧನಾದಾಯ ಹೆಚ್ಚಾಗುತ್ತದೆ. ಪ್ರೇಮಿಗಳಲ್ಲಿ ಮುನಿಸು ಕಾಣಿಸಬಹುದು.
ಮಕರ
ರಾಜಕೀಯ ವ್ಯಕ್ತಿಗಳಿಗೆ ಅವರು ಆಶಿಸಿದ್ದ ಸ್ಥಾನಮಾನ ದೊರೆಯುತ್ತದೆ.ವಕೀಲರಿಗೆ ನ್ಯಾಯಾಧೀಶರಾಗುವ ಸಾಧ್ಯತೆ.ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುವ ಸಾಧ್ಯತೆ ಇದೆ.ಮಕ್ಕಳಿಂದ ನಿಮಗೆ ಗೌರವ ಸಿಗುತ್ತದೆ.ಆಹಾರ ಪದಾರ್ಥ ತಯಾರಿಸಿ ಮಾರುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.
ಕುಂಭ
ನೀವು ಹಮ್ಮಿಕೊಂಡ ಕಾರ್ಯಸಾಧನೆಗಾಗಿ ಸಾಕಷ್ಟು ಓಡಾಟ. ವಸ್ತ್ರಗಳನ್ನು ನೇಯುವವರಿಗೆ ಬೇಡಿಕೆ ಬರುತ್ತದೆ.ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಬರುತ್ತದೆ. ಜವಳಿ ಉದ್ದಿಮೆ ವಿಸ್ತರಿಸಲು ಸಕಾಲ. ಕಬ್ಬಿಣ ಮತ್ತು ಉಕ್ಕು ತಯಾರಿಸುವವರಿಗೆ ಬೇಡಿಕೆ ಹೆಚ್ಚಿ ವ್ಯಾಪಾರ ವಿಸ್ತರಣೆಯಾಗುತ್ತದೆ.
ಮೀನ
ಅಮೂಲ್ಯ ವಸ್ತುಗಳು ಮತ್ತು ಒಡವೆಗಳನ್ನು ಜೋಪಾನ ಮಾಡಿಕೊಳ್ಳುವುದು ಉತ್ತಮ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಆಭರಣಗಳ ಕುಸುರಿ ಕೆಲಸ ಮಾಡುವವರಿಗೆ ಉತ್ತಮ ಬೇಡಿಕೆ ಬರುತ್ತದೆ. ಭೂ ವ್ಯಾಪಾರ ಮಾಡಿಸುವ ಮಧ್ಯವರ್ತಿಗಳಿಗೆ ಒಳ್ಳೆಯ ಕಮಿಷನ್ ದೊರೆಯುತ್ತದೆ. ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9845743807 call/ whatsapp.