Just In
- 2 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 9 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 10 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 11 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- Finance ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
- News Ganesamoorthy Death: ಟಿಕೆಟ್ ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಹಾಲಿ ಸಂಸದ ಸಾವು
- Sports IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Automobiles ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- Movies "ನೀನು ನನಗೆ ದೇವರು ಕೊಟ್ಟ ಮಗಳು" ಎಂದು ನಟಿ ಕೃತಿಕಾ ರವೀಂದ್ರ; ಇನ್ಸ್ಟಾಗ್ರಾಂ ಪೋಸ್ಟ್ ವೈರಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಐದು ರಾಶಿಯವರು, ಚಿಂತೆ ಮಾಡಿಯೇ ಖಿನ್ನತೆಗೆ ಒಳಗಾಗುತ್ತಾರೆ!
ಮನುಷ್ಯ ಅದೆಷ್ಟೇ ಶ್ರೀಮಂತನಾಗಿರಲಿ ಅಥವಾ ಅಧಿಕ ಬುದ್ಧಿಯನ್ನು ಹೊಂದಿರುವ ಶಕ್ತಿಶಾಲಿ ವ್ಯಕ್ತಿಯಾಗಿರಲಿ ಮನಸ್ಸು ಎನ್ನುವುದು ಮಾತ್ರ ಬಹಳ ಸೂಕ್ಷ್ಮತೆಯನ್ನು ಹೊಂದಿರುತ್ತದೆ. ಸಣ್ಣಪುಟ್ಟ ಸಂತೋಷಕ್ಕೂ ಮನಸ್ಸು ಹಿಗ್ಗುತ್ತದೆ. ಹಾಗೆಯೇ ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಥವಾ ಬೇಸರಗಳಿಗೆ ಮನಸ್ಸು ಬಹು ಬೇಗ ಕುಗ್ಗುತ್ತದೆ. ಖಿನ್ನತೆಗೆ ಒಳಗಾಗುತ್ತದೆ. ಹಾಗಾಗಿ ಮನುಷ್ಯನ ಪ್ರಮುಖ ಆಸ್ತಿಯೆಂದರೆ ಮಾನಸಿಕ ಆರೋಗ್ಯ. ಈ ಆರೋಗ್ಯ ಹದಗೆಟ್ಟಿದೆ ಎಂದಾಗ ವ್ಯಕ್ತಿ ತನ್ನ ವ್ಯಕ್ತಿತ್ವಕ್ಕಿರುವ ಬೆಲೆಯನ್ನು ಕಳೆದುಕೊಳ್ಳುತ್ತಾನೆ.
ವ್ಯಕ್ತಿಯು ನಿರಂತರವಾಗಿ ದುಃಖಿತನಾದಾಗ ಅಥವಾ ಚಿಕ್ಕ ಸಮಸ್ಯೆಗಳಿಗೂ ದುಃಖಿಸುವ ವ್ಯಕ್ತಿ ಬಹುಬೇಗ ಖಿನ್ನತೆಗೆ ಒಳಗಾಗುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ವ್ಯಕ್ತಿಗಳು ಬಹುಬೇಗ ಖಿನ್ನತೆಗೆ ಒಳಗಾಗುತ್ತಾರೆ ಎಂದು ಹೇಳಲಾಗುತ್ತದೆ. 12 ರಾಶಿ ಚಕ್ರಗಳಲ್ಲಿ ಯಾವೆಲ್ಲಾ ರಾಶಿಚಕ್ರದವರ ಮೇಲೆ ಖಿನ್ನತೆಯ ಪರಿಣಾಮ ಅಧಿಕ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....
ಮಕರ: 23 ಡಿಸೆಂಬರ್ -20 ಜನವರ
ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಉತ್ಸಾಹ ಭರಿತರಾಗಿರುತ್ತಾರೆ. ಇವರು ಯಶಸ್ಸಿಗಾಗಿ ಹಂಬಲಿಸುತ್ತಾರೆ. ಇವರ ಉತ್ಸಾಹವು ತಮ್ಮದೇ ಆದ ಕೆಲಸದ ಮಿತಿಯನ್ನು ಪರಿಶೀಲಿಸುವ ಸವಾಲನ್ನುಂಟುಮಾಡುತ್ತದೆ. ತಮ್ಮ ಗುರಿಯನ್ನು ಸಾಧಿಸಲು ವಿಫಲರಾದಾಗ ಕೆಲಸದಲ್ಲಿ ತಮ್ಮನ್ನು ತಾವು ಇನ್ನಷ್ಟು ಆಕ್ರಮಿಸಿಕೊಳ್ಳುತ್ತಾರೆ. ಸಣ್ಣ ಸಮಸ್ಯೆಗಳನ್ನು ಬಹುದೊಡ್ಡ ವಿಷಯಾವಗಿ ಪರಿಗಣಿಸುತ್ತಾರೆ. ಜೊತೆಗೆ ಅನೇಕ ವಿಚಾರಗಳಿಗೆ ತಪ್ಪು ಗ್ರಹಿಕೆಯನ್ನು ಹೊಂದುತ್ತಾರೆ. ಇವುಗಳ ಪರಿಣಾಮವಾಗಿಯೇ ಬಹುಬೇಗ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು.
ವೃಷಭ: ಏಪ್ರಿಲ್ 20-ಮೇ20
ಇವರು ವೈಯಕ್ತಿಕವಾಗಿ ಕನಸು ಮತ್ತು ಭ್ರಮೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಇವರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದು. ಇದರ ಪರಿಣಾಮದಿಂದ ಬಹುಬೇಗ ಖಿನ್ನತೆಗೆ ಒಳಗಾಗುತ್ತಾರೆ. ಇವರು ಸಣ್ಣ ಕೆಲಸವನ್ನು ಸಹ ದೊಡ್ಡ ಸಮಸ್ಯೆಯನ್ನಾಗಿ ಪರಿಗಣಿಸುತ್ತಾರೆ. ಮಕರ ರಾಶಿಯವರಂತೆ ಇವರಿಗೂ ಕೆಲಸದ ಮಧ್ಯದಲ್ಲಿ ಒಂದಿಷ್ಟು ವಿರಾಮ ಅಥವಾ ವಿಶ್ರಾಂತಿಯ ಅಗತ್ಯವಿರುತ್ತದೆ.
ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಈ ರಾಶಿಯವರು ತಮ್ಮ ಜೀವನದ ಪ್ರತಿಯೊಂದು ಅಂಶವನ್ನು ಒಂದೇ ಪ್ರಮಾಣದಲ್ಲಿ ಇಡಲು ಬಯಸುತ್ತಾರೆ. ಇವರು ಯಾರನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಹೋದರೆ ಹೋಗಲಿ ಎಂದು ಬಿಟ್ಟುಬಿಡುತ್ತಾರೆ. ಆದರೆ ನಂತರ ದುಃಖದ ಮಟ್ಟವು ಹೆಚ್ಚುವುದು. ಇವರು ನಷ್ಟವನ್ನು ಸರಿ ಪ್ರಮಾಣದಲ್ಲಿ ನಿಭಾಯಿಸಲಾರರು. ಅವರ ದುಃಖದ ಮಟ್ಟವು ಇವರಲ್ಲಿ ಶೂನ್ಯ ಭಾವವನ್ನು ತುಂಬಿಸುತ್ತದೆ. ಇವುಗಳ ಪರಿಣಾಮವಾಗಿ ಖಿನ್ನತೆ ಉಂಟಾಗುವುದು.
ಮೀನ: 20 ಫೆಬ್ರವರಿ -20 ಮಾರ್ಚ್
ಈ ರಾಶಿಯವರು ಹೆಚ್ಚಿನ ಸಮಯದಲ್ಲಿ ವಿಷಾದದ ಭಾವದಲ್ಲಿಯೇ ಇರುತ್ತಾರೆ. ಅವರ ದುಃಖಕ್ಕೆ ಪ್ರಮುಖವಾದ ಕಾರಣ ಬೇಕಾಗಿರುವುದಿಲ್ಲ. ಬಹಳ ಸೂಕ್ಷ್ಮ ಮತ್ತು ಕರುಣೆಯ ಭಾವನೆಯನ್ನು ಹೊಂದಿರುತ್ತಾರೆ. ಇವರ ಕೆಲವು ಮಾತುಗಳು ಇತರರ ಮೇಲೆ ದಾಳಿಮಾಡುವುದು. ಇವರಿಗೆ ಇವರ ಜೀವನದ ಸಮಸ್ಯೆಗಳನ್ನು ಎದುರಿಸಲು ಶೋಚನೀಯ ಎಂದು ಭಾವಿಸುತ್ತಾರೆ. ಇವರ ಈ ಎಲ್ಲಾ ಗುಣಗಳು ಬಹುಬೇಗ ಖಿನ್ನತೆಯನ್ನು ಸೃಷ್ಟಿಸಲು ಸಹಾಯ ಮಾಡುವುದು.
ಕರ್ಕ
ಈ ರಾಶಿಚಕ್ರದವರು ಸದಾ ನಕಾರಾತ್ಮಕ ಮತ್ತು ಸಕಾರಾತ್ಮಕ ರೀತಿಯಲ್ಲಿ ಯೋಚಿಸುತ್ತಾರೆ. ಇವರಲ್ಲಿ ಇರುವ ನಾಚಿಕೆ, ಅಂತರ್ಮುಖಿ ಸ್ವಭಾವ, ಆಸಕ್ತಿಯ ಸ್ವಭಾವದಿಂದ ಖಿನ್ನತೆಗೆ ದುಮುಖುತ್ತಾರೆ. ಇದರಿಂದ ಮೇಲೇಳಲು ಧೀರ್ಘವಾದ ಸಮಯ ಬೇಕಾಗುವುದು. ಇವರ ಭಾವನೆಗಳಿಗೆ ಯಾವುದೇ ಮಿತಿ ಇರುವುದಿಲ್ಲ ಎಂದು ತಿಳಿಯಬಹುದು.