Just In
- 20 min ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 13 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 14 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 14 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
Don't Miss
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
22-12-2017 ಶುಕ್ರವಾರದ ದಿನ ಭವಿಷ್ಯ
ನಮ್ಮ ದೇಹದಲ್ಲಿ ಚೈತನ್ಯ, ವಯಸ್ಸು ಹಾಗೂ ಶಕ್ತಿ ಇರುವಾಗಲೇ ಶ್ರಮಪಟ್ಟು ದುಡಿಯಬೇಕು. ನಾವು ದುಡಿಯುವ ಪರಿಯಲ್ಲಿ ಒಂದು ಸೂಕ್ತ ಕ್ರಮವಿರಬೇಕು. ಆ ಕ್ರಮಕ್ಕೆ ನಿಗದಿತವಾದ ನಿಯಮವಿರಬೇಕು. ನಿಯಮವು ಸರಾಗವಾಗಿ ಸಾಗಬೇಕಾದರೆ ಅದ್ಭುತವಾದ ಗುರಿಯನ್ನು ಹೊಂದಿರಬೇಕು. ಗುರಿ ಸಾಧನೆಗೆ ಉತ್ತಮ ದಕ್ಷತೆ ಹಾಗೂ ವಿವೇಚನೆಯು ಇರಬೇಕು.
ಆಗಲೇ ನಾವು ಅಂದುಕೊಂಡಿದ್ದು ಸಾಧಿಸಲು ಸಾಧ್ಯ. ಉತ್ತಮ ಪರಿಶ್ರಮವಿದ್ದರೆ ಆ ದೇವರು ಸಹ ಒಳ್ಳೆಯದನ್ನು ನಮಗೆ ಕರುಣಿಸುತ್ತಾನೆ. ಶುಕ್ರವಾರವಾದ ಇಂದು ನಮ್ಮ ಬದುಕಲ್ಲಿ ಲಕ್ಷ್ಮಿ ದೇವಿ ಹೇಗೆ ಪ್ರವೇಶ ಪಡೆಯುತ್ತಾಳೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಕೊಂಡಿದ್ದರೆ ಈ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ.....
ಮೇಷ: 21 ಮಾರ್ಚ್ -20 ಏಪ್ರಿಲ್
ಆರೋಗ್ಯದ ಸುಧಾರಣೆ ಕಾಣುವಿರಿ. ಮಾಡುತ್ತಿರುವ ಉದ್ಯೋಗದಲ್ಲೂ ಪ್ರಗತಿ ಉಂಟಾಗುವುದು. ಸಮಾಧಾನದ ಬದುಕು ಇಂದು ನಿಮಗೆ ಲಭಿಸುವುದು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲಕರವಾದ ದಿನ. ಸಣ್ಣ ಪುಟ್ಟ ಉದ್ಯೋಗದಲ್ಲಿರುವವರಿಗೂ ಉತ್ತಮ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.
ವೃಷಭ: 21 ಏಪ್ರಿಲ್ -21 ಮೇ
ಸಮಾಧಾನ ಪಡೆದುಕೊಳ್ಳುವಲ್ಲಿ ವಿಫಲರಾಗುವಿರಿ. ವಿಪರೀತ ಆಯಾಸ ನಿಮ್ಮನ್ನು ಹೈರಾಣಗೊಳಿಸುವುದು. ನಿರ್ದಿಷ್ಟ ಗುರಿ ತಲುಪಲು ಅಸಾಧ್ಯವಾಗುವುದು. ಮಾಡುತ್ತಿರುವ ಕೆಲಸದಲ್ಲಿ ಅಡೆತಡೆಗಳು ಉಂಟಾಗುವುದು. ಇದರಿಂದ ಸಾಕಷ್ಟು ನೋವನ್ನು ಅನುಭವಿಸುವಿರಿ. ವಿದ್ಯಾರ್ಥಿಗಳು ಶಾರದೆಯ ಆರಾಧನೆ ಮಾಡಿ. ಪತ್ರಕರ್ತರಿಗೆ ಅಪಮಾನದ ವಾತಾವರಣ ಉಂಟಾಗುವುದು. ಸಮಸ್ಯೆಗಳ ನಿವಾಋಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ಲಕ್ಷ್ಮಿಯ ಆರಾಧನೆ ಮಾಡಿ.
ಮಿಥುನ:22 ಮೇ -21 ಜೂನ್
ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಸ್ತ್ರೀಯರಿಂದಲೂ ಸಹಕಾರ ದೊರೆಯುವುದು. ಅನೇಕದಿನಗಳಿಂದ ಅಂದುಕೊಂಡ ಕಾರ್ಯವು ಸುಗಮವಾಗಿ ನೆರವೇರುವುದು. ಖನಿಜೋತ್ಪನ್ನಗಳಲ್ಲಿ ಲಾಭವನ್ನು ಪಡೆಯುವಿರಿ. ಇನ್ನಷ್ಟು ಪ್ರಗತಿಯ ಜೀವನಕ್ಕಾಗಿ ದೇವಿಯ ಆರಾಧನೆ ಮಾಡಿ.
ಕರ್ಕ: 22 ಜೂನ್ -22 ಜುಲೈ
ನಿಮ್ಮನ್ನು ಕಾಡುತ್ತಿದ್ದ ಮಾನಸಿಕ ಕಿರಿಕಿರಿ ದೂರವಾಗುವುದು. ಸುಂದರ ಕನಸುಗಳು ನನಸಾಗುವುದು. ವ್ಯಾಪಾರೋದ್ಯಮಗಳು ಲಾಭವನ್ನು ಕಾಣುವುದು. ಹೋಟೇಲ್ ಉದ್ಯಮ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೂ ಉತ್ತಮ ಲಾಭ ಪಡೆದುಕೊಳ್ಳುವರು. ಕಲಾವಿದರಿಗೆ ಅವಕಾಶ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.
ಸಿಂಹ: 23 ಜುಲೈ -21 ಆಗಸ್ಟ್
ಸಾಲಗಾರರ ಬಾಧೆ ಉಂಟಾಗುವುದು. ಮಾಣಸಿಕ ಕಿರಿಕಿರಿಯನ್ನು ಅನುಭವಿಸುವುವಿರಿ. ಆರೋಗ್ಯದಲ್ಲಿ ವಿಪರೀತ ಆಯಾಸ ಉಂಟಾಗುವುದು. ಬ್ಯಾಂಕ್ ನೌಕರರಿಗೆ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಕಾರ್ಯರೂಪಕ್ಕೆ ಬರದು. ಸಮಸ್ಯೆಗಳ ನಿವಾರಣೆ ಹಾಗೂ ಯಶನ್ನು ಹೊಂದಲು ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.
ಕನ್ಯಾ: 22 ಆಗಸ್ಟ್ -23 ಸೆಪ್ಟೆಂಬರ್
ಮಾನಸಿಕ ಕಿರಿಕಿರಿಯನ್ನು ಅನುಭವಿಸುವ ಲಕ್ಷಣ ಗೋಚರವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆತಂಕ ಹಾಗೂ ಅಡೆತಡೆಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿ ಒದಗಿ ಬರುವುದು. ವ್ಯಾಪಾರ ವಹಿವಾಟಿನಲ್ಲೂ ಏರು ಪೇರು ಉಂಟಾಗುವ ಲಕ್ಷಣಗಳಿವೆ. ರಾಹುಕಾಲದ ಪ್ರಯಾಣವನ್ನು ಆರಂಭಿಸದಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.
ತುಲಾ: 24 ಸೆಪ್ಟೆಂಬರ್ -23 ಅಕ್ಟೋಬರ್
ಮನೆಯಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು. ನಿಮ್ಮ ಎಲ್ಲಾ ಕನಸುಗಳು ನನಸಾಗುವುದು. ಸ್ಥಿರಾಸ್ತಿಯಿಂದ ಲಾಭ ಪಡೆಯುವಿರಿ. ಮಾಡುತ್ತಿರುವ ಉದ್ಯಮದಲ್ಲಿ ಪ್ರಗತಿಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧಿಯ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.
ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಮಾನಸಿಕ ಕಿರಿಕಿರಿ, ಸ್ತ್ರೀಯರ ಆರೋಗ್ಯದಲ್ಲಿ ಏರು ಪೇರು ಉಂಟಾಗುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಬಂಧುಮಿತ್ರರಿಂದ ಕಿರಿಕಿರಿ. ವಿದ್ಯಾರ್ಥಿಗಳಿಗೆ ಹಿನ್ನೆಡೆ ಉಂಟಾಗುವುದು. ಜೀವನದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಸಂತೋಷದಾಯಕ ಬದುಕಿಗಾಗಿ ಶಿವನ ಆರಾಧನೆ ಮಾಡಿ.
ಧನು: 23 ನವೆಂಬರ್ -22 ಡಿಸೆಂಬರ್
ವಿಪರೀತವಾದ ದೇಹದ ಆಯಾಸ ಹಾಗೂ ಮಾನಸಿಕ ಕಿರಿಕಿರಿ ನಿಮ್ಮನ್ನು ಕಾಡುವುದು. ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಅಸಮಧಾನವನ್ನು ಅನುಭವಿಸುವ ಸಾಧ್ಯತೆಗಳಿವೆ. ಜೀವನದ ಎಲ್ಲಾ ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಹಾಗೂ ಆಂಜನೇಯನ ಉಪಾಸನೆ ಮಾಡಿ.
ಮಕರ: 23 ಡಿಸೆಂಬರ್ -20 ಜನವರಿ
ಬಂಧುಮಿತ್ರರ ಸಹಕಾರ ದೊರೆಯುವುದು. ಸಮಾಧಾನಕರವಾದ ಜೀವನವನ್ನು ಅನುಭವಿಸುವಿರಿ. ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುವುದು. ಪತ್ರಕರ್ತರಿಗೆ ತಂದೆಯ ಆಶೀರ್ವಾದ ಮತ್ತು ಸಹಾಯ ಲಭಿಸುವುದು. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಹಾಗೂ ವೈದ್ಯರಿಗೆ ಸನ್ಮಾನಗಳು ನಡೆಯುವ ಸಾಧ್ಯತೆಗಳಿವೆ. ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಸಾಧಿಸುವರು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕಾಗಿ ಶಿವ ಮತ್ತು ಪಾರ್ವತಿಯ ಆರಾಧನೆ ಮಾಡಿ.
ಕುಂಬ: 21 ಜನವರಿ -19 ಫೆಬ್ರುವರಿ
ಮನೆಯಲ್ಲಿ ನೆಮ್ಮದಿಯ ವಾತಾವರಣ. ಸಮಾಧಾನದ ಬದುಕು ಲಭಿಸುವುದು. ಸ್ಥಿರಾಸ್ತಿಯಿಂದ ಲಾಭ ಲಭಿಸುವುದು. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಚಾಲಕರಿಗೆ ಉತ್ತಮ ಚಿಂತನೆ ಹಾಗೂ ಕ್ರಿಯಾತ್ಮಕ ಕೆಲಸಗಳಿಂದ ಉತ್ತಮ ಲಾಭ ಲಭಿಸುವುದು. ಆಮದು ಮತ್ತು ರಫ್ತು ವ್ಯಾಪಾರದಲ್ಲಿ ವಿಪರೀತವಾದ ಧನಾಕರ್ಷಣೆಯನ್ನು ಪಡೆಯಬಹುದು. ಇನ್ನಷ್ಟು ಲಾಭ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಸ್ಮರಣೆ ಮಾಡಿ.
ಮೀನ: 20 ಫೆಬ್ರವರಿ -20 ಮಾರ್ಚ್
ಮಾಡಬೇಕೆಂದುಕೊಂಡ ಕಾರ್ಯದಲ್ಲಿ ಯಶಸ್ಸು ಕಾಣುವಿರಿ. ಮನೆಯಲ್ಲಿ ನೆಮ್ಮದಿ. ಮನಸ್ಸಿಗೆ ಶಾಂತಿ ಲಭಿಸುವುದು. ಮೂರನೇ ವ್ಯಕ್ತಿಯ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗದಿರಿ. ಸಾಲ ನೀಡುವುದು ಅಥವಾ ಪಡೆಯುವ ಪರಿಗೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ದೇವಿಯ ಆರಾಧನೆ ಮಾಡಿ.