Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಆಕೆ ಗಂಡನನ್ನು ಕಳೆದು ಕೊಂಡಿದ್ದಳು! ಆದರೆ ಕೊನೆಗೂ ನಡೆಯಿತು ಪವಾಡ!!
ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿ ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಬಾಲ್ಯ, ಯೌವನ ಮತ್ತು ಮುಪ್ಪು ಎನ್ನುವುದು ಮನುಷ್ಯನ ಜೀವನದ ಕೆಲವೊಂದು ಘಟ್ಟಗಳು. ಅದರಲ್ಲೂ ಮದುವೆಯಾದ ಬಳಿಕ ಜೀವನ ಸುಖಮಯವಾಗಿರಬೇಕೆಂದು ಬಯಸುತ್ತಾರೆ. ಆದರೆ ವಿಧಿಯಾಟದಿಂದ ಕೆಲವೊಂದು ಅಡೆತಡೆಗಳು ಬರುತ್ತದೆ.
ಅದರಲ್ಲೂ ಜೋಡಿ ಎತ್ತಿನಂತಿರುವ ಸಂಸಾರದಲ್ಲಿ ಯಾರಾದರೊಬ್ಬರು ಸಾವನ್ನಪ್ಪಿದರೆ ಜೀವನವೇ ಅಲ್ಲೋಲಕಲ್ಲೊಲವಾಗುವುದು. ಇಲ್ಲೊಬ್ಬರ ಮಹಿಳೆಯ ಜೀವನವು ಇದೇ ರೀತಿಯಾಗಿದೆ. ಕೇವಲ ಮೂರೇ ತಿಂಗಳಲ್ಲಿ ಮಹಿಳೆಯ ಪತಿಯು ಸಾವನ್ನಪ್ಪಿದ್ದಾನೆ. ಇದರಿಂದ ಆಕೆಯ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಆದರೆ ಒಂದು ಒಳ್ಳೆಯ ಸುದ್ದಿಯೆಂದರೆ ಆಕೆಯ ಗಂಡನ ವೀರ್ಯವನ್ನು ವೈದ್ಯರು ಉಳಿಸಿಕೊಂಡಿರುವುದರಿಂದ ಈಗ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಪತಿ ಸಾವನ್ನಪ್ಪಿದ ಮೂರು ವರ್ಷದ ಬಳಿಕ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಕಥೆಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ....

ಕರ್ತವ್ಯದಲ್ಲಿದ್ದಾಗ ಪೊಲೀಸ್ಗೆ ಗುಂಡು ಹಾರಿಸಲಾಯಿತು....
ಆಕೆಯ ಹೆಸರು ಪೆಯಿ ಸ್ಯಾನಿ ಕ್ಸೈ ಚೆನ್. ಪತಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ. ಕರ್ತವ್ಯ ನಿರ್ವಹಿಸುತ್ತಾ ಇದ್ದಾಗಲೇ ಆತನಿಗೆ ಗುಂಡು ತಾಗಿ ಕೊನೆಯುಸಿರೆಳೆದ. ಅಂತಿಮ ಸಂಸ್ಕಾರ ಮಾಡುವ ಮೊದಲು ಆತನ ವೀರ್ಯವನ್ನು ಕಾಯ್ದಿರಸಬಹುದು ಎಂದು ವೈದ್ಯರು ತಿಳಿಸಿದರು. ಇದರಿಂದ ಆಕೆ ಭವಿಷ್ಯದಲ್ಲಿ ಮಗುವನ್ನು ಪಡೆಯಬಹುದು.

ಪ್ರೇಮಕಥೆ ಅರ್ಧಕ್ಕೆ
ಪ್ರತಿಯೊಂದು ದಂಪತಿಯಂತೆ ಇವರು ಕೂಡ ತಮ್ಮ ಜೀವನದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ವಿಧಿಲೀಲೆ ಮಾತ್ರ ಬೇರೆಯೇ ಆಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಆತ ಗುಂಡು ತಗುಲಿ ಸಾವನ್ನಪ್ಪಿದ.

ಅಕೆ ಒಪ್ಪಿದಳು
ಪತಿಯ ಆಕಾಂಕ್ಷೆಗಳನ್ನು ಪೂರ್ತಿಗೊಳಿಸಬೇಕೆಂದು ಆಕೆ ಬಯಸಿದ್ದಳು. ಇದಕ್ಕಾಗಿ ಆಕೆ ಪತಿಯ ವೀರ್ಯವನ್ನು ಕಾಯ್ದಿಡುವಂತೆ ವೈದ್ಯರಿಗೆ ಸೂಚಿಸಿದಳು. ಮೂರು ವರ್ಷ ಬಳಿಕ ಆಕೆ ಗರ್ಭಿಣಿಯಾಗಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಆಕೆಯ ಅತ್ತೆಯ ಪ್ರತಿಕ್ರಿಯೆ
ಆಕೆಯ ಅತ್ತೆಯು ತನ್ನ ಮಗನ ಮಗುವನ್ನು ಕೈಯಲ್ಲಿ ಹಿಡಿದುಕೊಂಡಾಗ ಆಕೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆಕೆ ತನ್ನ ಮೊಮ್ಮಗಳಂತೆ ಕಾಣಿಸುತ್ತಾ ಇದ್ದಾಳೆ. ಆದರೆ ಆಕೆಯ ಕಣ್ಣು, ಹಣೆ ತನ್ನ ಮಗನಂತೆ ಇದೆ ಎಂದು ಹೇಳಿದ್ದಾಳೆ. ಮುಖದ ಮೇಲ್ಭಾಗವು ತನ್ನ ಮಗನಂತೆ ಇದೆ. ಕೆಳಭಾಗ ತಾಯಿಯಂತೆ ಇದೆ. ತಲೆ ನನ್ನ ಮಗನಂತೆಯೇ ಇದೆ. ಆಕೆಯಲ್ಲಿ ನನ್ನ ಮಗನನ್ನು ಕಾಣುತ್ತಿದ್ದೇನೆ ಎನ್ನುತ್ತಾಳೆ ಆಕೆ. ಇಂತಹ ಕಥೆಗಳು ನಿಜವಾಗಿ ಪ್ರೀತಿಯ ಅರ್ಥವನ್ನು ತೋರಿಸುತ್ತದೆ. ಪ್ರೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಅದು ಎಷ್ಟು ಮೌಲ್ಯವಾಗಿರುವುದು ಎಂದು ಇದರಿಂದ ತಿಳಿದುಬರುವುದು.



Click it and Unblock the Notifications