Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಆಕೆ ಗಂಡನನ್ನು ಕಳೆದು ಕೊಂಡಿದ್ದಳು! ಆದರೆ ಕೊನೆಗೂ ನಡೆಯಿತು ಪವಾಡ!!
ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿ ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಬಾಲ್ಯ, ಯೌವನ ಮತ್ತು ಮುಪ್ಪು ಎನ್ನುವುದು ಮನುಷ್ಯನ ಜೀವನದ ಕೆಲವೊಂದು ಘಟ್ಟಗಳು. ಅದರಲ್ಲೂ ಮದುವೆಯಾದ ಬಳಿಕ ಜೀವನ ಸುಖಮಯವಾಗಿರಬೇಕೆಂದು ಬಯಸುತ್ತಾರೆ. ಆದರೆ ವಿಧಿಯಾಟದಿಂದ ಕೆಲವೊಂದು ಅಡೆತಡೆಗಳು ಬರುತ್ತದೆ.
ಅದರಲ್ಲೂ ಜೋಡಿ ಎತ್ತಿನಂತಿರುವ ಸಂಸಾರದಲ್ಲಿ ಯಾರಾದರೊಬ್ಬರು ಸಾವನ್ನಪ್ಪಿದರೆ ಜೀವನವೇ ಅಲ್ಲೋಲಕಲ್ಲೊಲವಾಗುವುದು. ಇಲ್ಲೊಬ್ಬರ ಮಹಿಳೆಯ ಜೀವನವು ಇದೇ ರೀತಿಯಾಗಿದೆ. ಕೇವಲ ಮೂರೇ ತಿಂಗಳಲ್ಲಿ ಮಹಿಳೆಯ ಪತಿಯು ಸಾವನ್ನಪ್ಪಿದ್ದಾನೆ. ಇದರಿಂದ ಆಕೆಯ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಆದರೆ ಒಂದು ಒಳ್ಳೆಯ ಸುದ್ದಿಯೆಂದರೆ ಆಕೆಯ ಗಂಡನ ವೀರ್ಯವನ್ನು ವೈದ್ಯರು ಉಳಿಸಿಕೊಂಡಿರುವುದರಿಂದ ಈಗ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಪತಿ ಸಾವನ್ನಪ್ಪಿದ ಮೂರು ವರ್ಷದ ಬಳಿಕ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಕಥೆಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ....

ಕರ್ತವ್ಯದಲ್ಲಿದ್ದಾಗ ಪೊಲೀಸ್ಗೆ ಗುಂಡು ಹಾರಿಸಲಾಯಿತು....
ಆಕೆಯ ಹೆಸರು ಪೆಯಿ ಸ್ಯಾನಿ ಕ್ಸೈ ಚೆನ್. ಪತಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ. ಕರ್ತವ್ಯ ನಿರ್ವಹಿಸುತ್ತಾ ಇದ್ದಾಗಲೇ ಆತನಿಗೆ ಗುಂಡು ತಾಗಿ ಕೊನೆಯುಸಿರೆಳೆದ. ಅಂತಿಮ ಸಂಸ್ಕಾರ ಮಾಡುವ ಮೊದಲು ಆತನ ವೀರ್ಯವನ್ನು ಕಾಯ್ದಿರಸಬಹುದು ಎಂದು ವೈದ್ಯರು ತಿಳಿಸಿದರು. ಇದರಿಂದ ಆಕೆ ಭವಿಷ್ಯದಲ್ಲಿ ಮಗುವನ್ನು ಪಡೆಯಬಹುದು.

ಪ್ರೇಮಕಥೆ ಅರ್ಧಕ್ಕೆ
ಪ್ರತಿಯೊಂದು ದಂಪತಿಯಂತೆ ಇವರು ಕೂಡ ತಮ್ಮ ಜೀವನದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ವಿಧಿಲೀಲೆ ಮಾತ್ರ ಬೇರೆಯೇ ಆಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಆತ ಗುಂಡು ತಗುಲಿ ಸಾವನ್ನಪ್ಪಿದ.

ಅಕೆ ಒಪ್ಪಿದಳು
ಪತಿಯ ಆಕಾಂಕ್ಷೆಗಳನ್ನು ಪೂರ್ತಿಗೊಳಿಸಬೇಕೆಂದು ಆಕೆ ಬಯಸಿದ್ದಳು. ಇದಕ್ಕಾಗಿ ಆಕೆ ಪತಿಯ ವೀರ್ಯವನ್ನು ಕಾಯ್ದಿಡುವಂತೆ ವೈದ್ಯರಿಗೆ ಸೂಚಿಸಿದಳು. ಮೂರು ವರ್ಷ ಬಳಿಕ ಆಕೆ ಗರ್ಭಿಣಿಯಾಗಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಆಕೆಯ ಅತ್ತೆಯ ಪ್ರತಿಕ್ರಿಯೆ
ಆಕೆಯ ಅತ್ತೆಯು ತನ್ನ ಮಗನ ಮಗುವನ್ನು ಕೈಯಲ್ಲಿ ಹಿಡಿದುಕೊಂಡಾಗ ಆಕೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆಕೆ ತನ್ನ ಮೊಮ್ಮಗಳಂತೆ ಕಾಣಿಸುತ್ತಾ ಇದ್ದಾಳೆ. ಆದರೆ ಆಕೆಯ ಕಣ್ಣು, ಹಣೆ ತನ್ನ ಮಗನಂತೆ ಇದೆ ಎಂದು ಹೇಳಿದ್ದಾಳೆ. ಮುಖದ ಮೇಲ್ಭಾಗವು ತನ್ನ ಮಗನಂತೆ ಇದೆ. ಕೆಳಭಾಗ ತಾಯಿಯಂತೆ ಇದೆ. ತಲೆ ನನ್ನ ಮಗನಂತೆಯೇ ಇದೆ. ಆಕೆಯಲ್ಲಿ ನನ್ನ ಮಗನನ್ನು ಕಾಣುತ್ತಿದ್ದೇನೆ ಎನ್ನುತ್ತಾಳೆ ಆಕೆ. ಇಂತಹ ಕಥೆಗಳು ನಿಜವಾಗಿ ಪ್ರೀತಿಯ ಅರ್ಥವನ್ನು ತೋರಿಸುತ್ತದೆ. ಪ್ರೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಅದು ಎಷ್ಟು ಮೌಲ್ಯವಾಗಿರುವುದು ಎಂದು ಇದರಿಂದ ತಿಳಿದುಬರುವುದು.



Click it and Unblock the Notifications