Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ಆಕೆ ಗಂಡನನ್ನು ಕಳೆದು ಕೊಂಡಿದ್ದಳು! ಆದರೆ ಕೊನೆಗೂ ನಡೆಯಿತು ಪವಾಡ!!
ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿ ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಬಾಲ್ಯ, ಯೌವನ ಮತ್ತು ಮುಪ್ಪು ಎನ್ನುವುದು ಮನುಷ್ಯನ ಜೀವನದ ಕೆಲವೊಂದು ಘಟ್ಟಗಳು. ಅದರಲ್ಲೂ ಮದುವೆಯಾದ ಬಳಿಕ ಜೀವನ ಸುಖಮಯವಾಗಿರಬೇಕೆಂದು ಬಯಸುತ್ತಾರೆ. ಆದರೆ ವಿಧಿಯಾಟದಿಂದ ಕೆಲವೊಂದು ಅಡೆತಡೆಗಳು ಬರುತ್ತದೆ.
ಅದರಲ್ಲೂ ಜೋಡಿ ಎತ್ತಿನಂತಿರುವ ಸಂಸಾರದಲ್ಲಿ ಯಾರಾದರೊಬ್ಬರು ಸಾವನ್ನಪ್ಪಿದರೆ ಜೀವನವೇ ಅಲ್ಲೋಲಕಲ್ಲೊಲವಾಗುವುದು. ಇಲ್ಲೊಬ್ಬರ ಮಹಿಳೆಯ ಜೀವನವು ಇದೇ ರೀತಿಯಾಗಿದೆ. ಕೇವಲ ಮೂರೇ ತಿಂಗಳಲ್ಲಿ ಮಹಿಳೆಯ ಪತಿಯು ಸಾವನ್ನಪ್ಪಿದ್ದಾನೆ. ಇದರಿಂದ ಆಕೆಯ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ಆದರೆ ಒಂದು ಒಳ್ಳೆಯ ಸುದ್ದಿಯೆಂದರೆ ಆಕೆಯ ಗಂಡನ ವೀರ್ಯವನ್ನು ವೈದ್ಯರು ಉಳಿಸಿಕೊಂಡಿರುವುದರಿಂದ ಈಗ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಪತಿ ಸಾವನ್ನಪ್ಪಿದ ಮೂರು ವರ್ಷದ ಬಳಿಕ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಕಥೆಯನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ....

ಕರ್ತವ್ಯದಲ್ಲಿದ್ದಾಗ ಪೊಲೀಸ್ಗೆ ಗುಂಡು ಹಾರಿಸಲಾಯಿತು....
ಆಕೆಯ ಹೆಸರು ಪೆಯಿ ಸ್ಯಾನಿ ಕ್ಸೈ ಚೆನ್. ಪತಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ. ಕರ್ತವ್ಯ ನಿರ್ವಹಿಸುತ್ತಾ ಇದ್ದಾಗಲೇ ಆತನಿಗೆ ಗುಂಡು ತಾಗಿ ಕೊನೆಯುಸಿರೆಳೆದ. ಅಂತಿಮ ಸಂಸ್ಕಾರ ಮಾಡುವ ಮೊದಲು ಆತನ ವೀರ್ಯವನ್ನು ಕಾಯ್ದಿರಸಬಹುದು ಎಂದು ವೈದ್ಯರು ತಿಳಿಸಿದರು. ಇದರಿಂದ ಆಕೆ ಭವಿಷ್ಯದಲ್ಲಿ ಮಗುವನ್ನು ಪಡೆಯಬಹುದು.

ಪ್ರೇಮಕಥೆ ಅರ್ಧಕ್ಕೆ
ಪ್ರತಿಯೊಂದು ದಂಪತಿಯಂತೆ ಇವರು ಕೂಡ ತಮ್ಮ ಜೀವನದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ವಿಧಿಲೀಲೆ ಮಾತ್ರ ಬೇರೆಯೇ ಆಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಆತ ಗುಂಡು ತಗುಲಿ ಸಾವನ್ನಪ್ಪಿದ.

ಅಕೆ ಒಪ್ಪಿದಳು
ಪತಿಯ ಆಕಾಂಕ್ಷೆಗಳನ್ನು ಪೂರ್ತಿಗೊಳಿಸಬೇಕೆಂದು ಆಕೆ ಬಯಸಿದ್ದಳು. ಇದಕ್ಕಾಗಿ ಆಕೆ ಪತಿಯ ವೀರ್ಯವನ್ನು ಕಾಯ್ದಿಡುವಂತೆ ವೈದ್ಯರಿಗೆ ಸೂಚಿಸಿದಳು. ಮೂರು ವರ್ಷ ಬಳಿಕ ಆಕೆ ಗರ್ಭಿಣಿಯಾಗಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಆಕೆಯ ಅತ್ತೆಯ ಪ್ರತಿಕ್ರಿಯೆ
ಆಕೆಯ ಅತ್ತೆಯು ತನ್ನ ಮಗನ ಮಗುವನ್ನು ಕೈಯಲ್ಲಿ ಹಿಡಿದುಕೊಂಡಾಗ ಆಕೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆಕೆ ತನ್ನ ಮೊಮ್ಮಗಳಂತೆ ಕಾಣಿಸುತ್ತಾ ಇದ್ದಾಳೆ. ಆದರೆ ಆಕೆಯ ಕಣ್ಣು, ಹಣೆ ತನ್ನ ಮಗನಂತೆ ಇದೆ ಎಂದು ಹೇಳಿದ್ದಾಳೆ. ಮುಖದ ಮೇಲ್ಭಾಗವು ತನ್ನ ಮಗನಂತೆ ಇದೆ. ಕೆಳಭಾಗ ತಾಯಿಯಂತೆ ಇದೆ. ತಲೆ ನನ್ನ ಮಗನಂತೆಯೇ ಇದೆ. ಆಕೆಯಲ್ಲಿ ನನ್ನ ಮಗನನ್ನು ಕಾಣುತ್ತಿದ್ದೇನೆ ಎನ್ನುತ್ತಾಳೆ ಆಕೆ. ಇಂತಹ ಕಥೆಗಳು ನಿಜವಾಗಿ ಪ್ರೀತಿಯ ಅರ್ಥವನ್ನು ತೋರಿಸುತ್ತದೆ. ಪ್ರೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಅದು ಎಷ್ಟು ಮೌಲ್ಯವಾಗಿರುವುದು ಎಂದು ಇದರಿಂದ ತಿಳಿದುಬರುವುದು.



Click it and Unblock the Notifications