Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ತೀರ್ಪಿನ ಬಳಿಕ ನ್ಯಾಯಾಧೀಶರು ಪೆನ್ನಿನ ನಿಬ್ಬನ್ನು ಮುರಿಯುವುದೇಕೆ?
ನ್ಯಾಯಾಧೀಶರು ಮರಣ ದಂಡನೆ ವಿಧಿಸಿದ ಬಳಿಕ ಈ ಆಜ್ಞೆಗೆ ತಮ್ಮ ಸಹಿ ಹಾಕಿದ ಬಳಿಕ ಆ ಪೆನ್ನು ಮತ್ತೊಮ್ಮೆ ಬರೆಯಲಾರದಂತೆ ಒತ್ತಡದಿಂದ ಒತ್ತಿ ನಿಬ್ಬನ್ನು ಮುರಿಯುವುದೇಕೆ ಗೊತ್ತೇ? ಮುಂದೆ ಓದಿ....
ಚಲನಚಿತ್ರಗಳಲ್ಲಿ ಅಥವಾ ನ್ಯಾಯಾಲಯದ ನಿಜವಾದ ವ್ಯಾಜ್ಯೆಯ ತೀರ್ಪು ನೀಡುವ ಸಮಯದಲ್ಲಿ ನ್ಯಾಯಾಧೀಶರು ಮರಣ ದಂಡನೆ ವಿಧಿಸಿದ ಬಳಿಕ ಈ ಆಜ್ಞೆಗೆ ತಮ್ಮ ಸಹಿ ಹಾಕಿದ ಬಳಿಕ ಆ ಪೆನ್ನು ಮತ್ತೊಮ್ಮೆ ಬರೆಯಲಾರದಂತೆ ಒತ್ತಡದಿಂದ ಒತ್ತಿ ನಿಬ್ಬನ್ನು ಮುರಿಯುವುದೇಕೆ ಗೊತ್ತೇ? ಸದ್ಯ ಇಂತಹ ಅಸಹ್ಯ ಕಾನೂನುಗಳು ನಮ್ಮ ದೇಶದಲ್ಲಿಲ್ಲ ಬಚಾವ್!
ಚಲನಚಿತ್ರಗಳಲ್ಲಂತೂ ನಿಬ್ಬು ಮುರಿಯುವುದನ್ನು ವ್ಯಕ್ತಿಯ ಸಾವಿಗೆ ಸರಿಸಮನಾಗಿ ತೋರಿಸಲಾಗುತ್ತದೆ. ಅಂದರೆ ನಿಬ್ಬು (ಬರೆಯುವ ಮುಳ್ಳು) ಮುರಿದರೆ ಮರಣದಂಡನೆ ಹಿಂದಿರುಗಿ ಪಡೆಯುವುದಿಲ್ಲ, ಅಥವಾ ತಮ್ಮ ತೀರ್ಮಾನಕ್ಕೆ ತಾವು ಬದ್ಧ ಎಂದು ನ್ಯಾಯಾಧೀಶರು ಪ್ರಕಟಿಸುತ್ತಿದ್ದಾರೆಯೇ? ಒಟ್ಟಾರೆ ಏನಿದರ ರಹಸ್ಯ? ತಿಳಿದುಕೊಳ್ಳೋಣ ಬನ್ನಿ.....

ಇದೊಂದು ಸಾಂಕೇತಿಕ ಕ್ರಿಯೆಯಾಗಿದೆ
ನ್ಯಾಯಾಂಗದಲ್ಲಿ ಎಲ್ಲರೂ ಒಪ್ಪಿಕೊಂಡಿರುವಂತೆ ಇದೊಂದು ಸಾಂಕೇತಿಕ ಕ್ರಿಯೆಯಾಗಿದೆ. ಅಂದರೆ ಮರಣದಂಡನೆಗೆ ಗುರಿಯಾಗುವಂತಹ ಅಪರಾಧವನ್ನು ಆರೋಪಿ ಮಾಡಿದ್ದುದ್ದು ಸಾಬೀತಾಗಿದ್ದು ಇಂತಹ ಕೃತ್ಯವನ್ನು ಬೇರೆ ಯಾರೂ ನಡೆಸಬಾರದು ಎಂದು ಸಾಂಕೇತಿಕವಾಗಿ ಸೂಚಿಸುವ ಕ್ರಿಯೆಯಾಗಿದೆ. ಅಲ್ಲದೇ ಈ ಪೆನ್ನನ್ನು ಮತ್ತೆ ಬಳಸಲು ಸಾಧ್ಯವಾಗಬಾರದು, ಅಂದರೆ ಈ ಕೃತ್ಯ ಮತ್ತೊಮ್ಮೆ ನಡೆಯಬಾರದು ಎಂಬುದೇ ಈ ಸಂಕೇತವಾಗಿದೆ.

ಈ ಪೆನ್ನು "ಕಳಂಕಿತ"
ಮರಣದಂಡನೆಯ ತೀರ್ಪು ನೀಡುವ ಕಾಗದಪತ್ರಗಳಿಗೆ ಸಹಿ ಹಾಕುವ ಈ ಪೆನ್ನು ಒಂದು ಜೀವವನ್ನು ಕೊನೆಗೊಳಿಸುವ ಅತಿ ಸೂಕ್ಷ್ಮ ಮತ್ತು ಅನಿವಾರ್ಯವಾದ ಕಾನೂನಿನ ಪಾಲನೆಯ ಪ್ರತ್ಯಕ್ಷ ಪಾಲುದಾರನಾಗಿದ್ದು ಓರ್ವ ವ್ಯಕ್ತಿಯ ಜೀವವನ್ನು ಕಳೆಯುವ 'ಕಳಂಕ' ಹೊತ್ತಿರುತ್ತದೆ.
ಅಂತೆಯೇ ಈ ಪೆನ್ನಿಗೆ 'ಕಳಂಕಿತ' ಅಥವಾ "Tainted" ಎಂದು ಕರೆಯುತ್ತಾರೆ. ಇನ್ನೊಂದು ಅರ್ಥದಲ್ಲಿ ಕಳಂಕಿತ ವ್ಯಕ್ತಿಗೆ ಕಳಂಕಿತ ಪೆನ್ನಿನಿಂದ ಶಿಕ್ಷೆ ನೀಡಿ ಈ ಕಳಂಕಗಳನ್ನು ನಿವಾರಿಸುವ ಮೂಲಕ ನ್ಯಾಯಾಧೀಶರು ತಮ್ಮ ಪಾಲಿನ ತೀರ್ಪನ್ನು ಒದಗಿಸುವ ಸಂಕೇತವೂ ಆಗಿದೆ.

ಈ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ
ಮರಣದಂಡನೆಯಂತಹ ತೀರ್ಪನ್ನು ನೀಡಲು ನ್ಯಾಯಾಧೀಶರು ಎಲ್ಲಾ ಸಾಕ್ಷ್ಹಿಗಳನ್ನು, ವಿವರಗಳನ್ನು, ಆಧಾರಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ ನ್ಯಾಯಾಂಗದ ಕಾಯ್ದೆಗಳನ್ನು ಸೂಕ್ತವಾಗಿ ಒರೆಹಚ್ಚಿ ಅಂತಿಮವಾಗಿ ತಮ್ಮ ತೀರ್ಮಾನವನ್ನು ಮಂಡಿಸಿರುತ್ತಾರೆ. ಈ ತೀರ್ಮಾನವನ್ನು ನೀಡಿದ ಬಳಿಕ ಬೇರೆ ಯಾರೂ ಇದನ್ನು ಬದಲಿಸದಂತೆ, ಸ್ವತಃ ತೀರ್ಪು ನೀಡಿದ ನ್ಯಾಯಾಧೀಶರೇ ಬದಲಿಸದಂತೆ ತೀರ್ಪಿಗೆ ಸಹಿ ಹಾಕಿದ ಪೆನ್ನಿನ ನಿಬ್ಬನ್ನು ಮುರಿಯಲಾಗುತ್ತದೆ.

ಈ ಕೃತ್ಯ ಮತ್ತೊಮ್ಮೆ ಯಾರೂ ಮಾಡದಿರುವಂತೆ ನೀಡುವ ಸೂಚನೆ
ಮರಣದಂಡನೆಯಂತಹ ಶಿಕ್ಷೆ ಪಡೆದಿರಬೇಕಾದರೆ ಆರೋಪಿ ನಡೆಸಿದ ಕೃತ್ಯ ಅಕ್ಷಮ್ಯವಾಗಿದ್ದು ಇದನ್ನು ಇನ್ನಾರೂ ಮತ್ತೊಮ್ಮೆ ನಡೆಸದಂತೆ ಸೂಚಿಸಲು ನಿಬ್ಬನ್ನು ಮುರಿಯಲಾಗುತ್ತದೆ. ಅಂದರೆ ಈ ಕೃತ್ಯ ಮುಂದೆಂದೂ ಯಾರಿಂದಲೂ ನಡೆಯಬಾರದು ಎಂಬುದೇ ನ್ಯಾಯಾಧೀಶರ ಆಶಯವಾಗಿದೆ.

ಒಂದು ಹಳೆಯ ನಾಣ್ಣುಡಿಯಂತೆ
ಇಸ್ರೇಲ್ ದೇಶದ ನಾಣ್ಣುಡಿಯ ಪ್ರಕಾರ ‘A court that puts a man to death once in seventy years' ಅಂದರೆ ಎಪ್ಪತ್ತು ವರ್ಷಗಳಿಗೊಮ್ಮೆಯಾದರೂ ನ್ಯಾಯಾಲಯ ವ್ಯಕ್ತಿಯೋರ್ವನನ್ನು ಮರಣಕ್ಕೆ ದೂಡುತ್ತದೆ. ಮರಣದಂಡನೆ ವಿಧಿಸುವುದು ನ್ಯಾಯಾಲಯಕ್ಕೂ ಇಷ್ಟವಿಲ್ಲದ, ಆದರೆ ಕಾನೂನಿಗೆ ತಲೆಬಾಗಬೇಕಾದಾಗಅನಿವಾರ್ಯತೆಯ ದುಃಖಕರ ವಿಷಯವಾಗಿದ್ದು ಪೆನ್ನಿನ ನಿಬ್ಬನ್ನು ಮುರಿಯುವ ಮೂಲಕ ಈ ದುಃಖವನ್ನು ತೋರ್ಪಡಿಸುವ ಕ್ರಮವೂ ಆಗಿದೆ.



Click it and Unblock the Notifications