Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಏನೋ ಹೊಸ ಪ್ರಯೋಗ ಮಾಡಲು ಹೋಗಿ, ಈತ ಮಾಡಿದ ಎಡವಟ್ಟು ನೋಡಿ....
ದಂಪತಿಗಳ ಅತ್ಯಂತ ವೈಯಕ್ತಿಕ ಸಮಯದಲ್ಲಿ ನಡೆಸುವ ಕಾಮದಾಟದಲ್ಲಿ ಪರಸ್ಪರ ಒಪ್ಪಿಗೆಯಾಗುವ ಯಾವ ಕ್ರಿಯೆಯಾದರೂ ಚೆನ್ನವೇ. ಇದಕ್ಕಾಗಿ ಕೆಲವು ಉಪಕರಣಗಳನ್ನೂ ಬಳಸುವುದು ತಪ್ಪಲ್ಲ. ಆದರೆ ಇವುಗಳ ಬಳಕೆಯಲ್ಲಿ ಏನಾದರೂ ಎಡವಟ್ಟಾದರೆ ಮಾತ್ರ ಇದು ವಿಷಮಸ್ಥಿತಿಗೆ ತಲುಪಬಹುದು ಹಾಗೂ ಮುಜಗರದ ಕಾರಣ ವೈದ್ಯರ ಹೊರತಾಗಿ ಬೇರೆಯವರ ನೆರವನ್ನೂ ಪಡೆಯಲು ಸಾಧ್ಯವಾಗದಿರುವುದು ಇನ್ನೊಂದು ತೊಂದರೆಯಾಗಿದೆ.
ಚೀನಾದ ಓರ್ವ ವ್ಯಕ್ತಿಗೆ ಆಗಿದ್ದೂ ಇದೇ! ಕಾಮದಾಟದಲ್ಲಿ ಏನೋ ಹೊಸ ಪ್ರಯೋಗ ನಡೆಸಲು ಹೋಗಿ ಎಡವಟ್ಟಾದ ಬಳಿಕ ಈ ಪುರುಷನನ್ನು ಆಸ್ಪತ್ರೆಗೆ ಕರೆತಂದು ವಿಲಿವಿಲಿ ಒದ್ದಾಡುತ್ತಿದ್ದವನ ನೋವಿಗೆ ಕಾರಣವೇನೆಂದು ವೈದ್ಯರು ಪರಿಶೀಲಿಸಿದಾಗ ಅವರಿಗೆ ಜೀವಮಾನದ ಅಚ್ಚರಿ ಕಾದಿತ್ತು. ಈತನ ಗುದದ್ವಾರದಲ್ಲಿ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿತ್ತು....ಮುಂದೇನಾಯಿತು ನೋಡೋಣ...

ಈತನ ಪರಿಚಯವನ್ನು ಬಚ್ಚಿಡಲಾಗಿದೆ
ಚೀನಾ ನಾಗರಿಕನಾದ ಈ ಮೂವತ್ತಮೂರು ವರ್ಷದ ಪುರುಷರ ಪರಿಚಯವನ್ನು ಬಚ್ಚಿಡಲಾಗಿದ್ದು ಈತ ವಿವಾಹಿತನಾಗಿದ್ದು ನಾಲ್ವರು ಮಕ್ಕಳ ತಂದೆಯೂ ಆಗಿದ್ದಾನೆ. ಒಂದು ದಿನ ನಡುರಾತ್ರಿ ಎರಡು ಗಂಟೆಗೆ ತಾಳಲಾರದ ನೋವಿನಿಂದ ವಿಲಿವಿಲಿಗುಟ್ಟುತ್ತಿದ್ದ ಈ ವ್ಯಕ್ತಿಯನ್ನು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಕರೆತರಲಾಗಿತ್ತು.

ಈ ಸ್ಥಿತಿಯಲ್ಲಾತ ಎರಡು ದಿನ ಇದ್ದ!
ಯಾವುದೋ ಪ್ರಯೋಗ ಮಾಡಲೆಂದು ಹೋಗಿ ಗುದದ್ವಾರದಲ್ಲಿ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿದ್ದು ಬಳಿಕ ಹೊರತೆಗೆಯಲಾಗದೇ ಹಾಗೇ ಉಳಿದು ಹೋಗಿತ್ತು. ಕೊಂಚ ಹೊತ್ತು ಕಾದು ನೋಡುವ ಎಂದು ಎರಡು ದಿನ ಇತ ಕಾದ ಬಳಿಕ ನೋವು ತಾಳಲಾರದಷ್ಟು ಹೆಚ್ಚಿದ್ದರಿಂದ ಕಡೆಗೂ ಆತ್ಮೀಯರ ನೆರವಿನಿಂದ ಈತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಈತನ ಹಿಂಭಾಗ ಭಾರೀ ಒತ್ತಡದಿಂದ ಊದಿಕೊಂಡಿದ್ದು ನೋವು ಅಪಾರವಾಗಿತ್ತು.

ವೈದ್ಯರಿಗೂ ಎದುರಾದ ಗೊಂದಲ
ರೋಗಿಯ ದೇಹವನ್ನು ತಪಾಸಿಸಿ ನೋವಿಗೆ ಕಾರಣ ಏನೆಂದು ಹುಡುಕಿದ ವೈದ್ಯರಿಗೆ ಈತನ ಗುದದ್ವಾರದಲ್ಲಿ ಇಡಿಯ ಒಂದು ದೊಡ್ಡ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿದ್ದುದು ಕಂಡುಬಂದಿತ್ತು. ಈಗ ವೈದ್ಯರಿಗೆ ನಿಜವಾಗಿಯೂ ಗೊಂದಲ ಹಾಗೂ ಗಾಬರಿ ಉಂಟಾಗಿತ್ತು. ಏಕೆಂದರೆ ಗಾಜು ಸುಲಭವಾಗಿ ಪುಡಿಯಾಗುವ ವಸ್ತುವಾಗಿದ್ದು ಇದರ ಮೇಲೆ ಯಾವುದೇ ಒತ್ತಡ ಹೇರಿದರೂ ಇದು ದೇಹದ ಒಳಗೇ ಸ್ಫೋಟಗೊಂಡಂತೆ ಒಡೆದು ಗಾಜಿನ ಚೂರುಗಳೆಲ್ಲಾ ದೇಹದ ಮುಖ್ಯ ಅಂಗಗಳಿಗೆಲ್ಲ ಚುಚ್ಚಿ ಹರಿದು ಪರಿಸ್ಥಿತಿಯನ್ನು ವಿಷಮವಾಗಿಸುತ್ತಿತ್ತು. ಇದು ಸಾವಿಗೂ ಕಾರಣವಾಗಬಹುದು.

ಶಸ್ತ್ರಕ್ರಿಯೆ ಅನಿವಾರ್ಯವಾಗಿತ್ತು
ತಕ್ಷಣವೇ ಕಟುನಿರ್ಧಾರ ತೆಗೆದುಕೊಂಡ ವೈದ್ಯರ ತಂಡ ಕೂಡಲೇ ಈ ವ್ಯಕ್ತಿಯ ಹಿಂಭಾಗಕ್ಕೆ ಅರವಳಿಕೆಯ ಇಂಜೆಕ್ಷನ್ ನೀಡಿ ಮರಗಟ್ಟಿಸಿದರು. ಆದರೂ ಅಪಾಯವಿಲ್ಲದಂತೆ ಕಪ್ ಅನ್ನು ಹೊರತೆಗೆಯುವ ಭರವಸೆಯಂತೂ ಆ ಹೊತ್ತಿನಲ್ಲಿ ಯಾವ ವೈದ್ಯರೂ ನೀಡಲು ತಯಾರಿರಲಿಲ್ಲ. ಏಕೆಂದರೆ ಗಾಜು ಅತಿ ನಯವಾಗಿದ್ದು ಜಾರುತ್ತಿದ್ದ ಕಾರಣ ಹಿಡಿತಕ್ಕೇ ಸಿಗುತ್ತಿರಲಿಲ್ಲ. ಬಳಿಕ ಶಸ್ತ್ರಕ್ರಿಯೆ ನಡೆಸಿ ಗಾಜು ಒಡೆಯದಂತೆ ಸುರಕ್ಷಿತವಾಗಿ ಹೊರತೆಗೆಯಲಾಯ್ತು. ಬಳಿಕ ಈ ವ್ಯಕ್ತಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ ಈ ಕಪ್ ತನ್ನ ದೇಹದೊಳಗೆ ಹೇಗೆ ಬಂದಿತ್ತು ಎಂಬ ಪ್ರಶ್ನೆಗೆ ಆತ ಉತ್ತರ ನೀಡಬಯಸದೇ ಗೌಪ್ಯತೆ ಕಾಪಾಡಿಕೊಂಡಿದ್ದಾನೆ. ಈತನ ದೇಹದೊಳಗೆ ಕಪ್ ಹೋಗಿದ್ದಾದರೂ ಹೇಗೆ? ಏನು ಸಂಭವಿಸಿರಬಹುದು? ಈ ಬಗ್ಗೆ ನಿಮ್ಮ ಕಲ್ಪನೆಯನ್ನು ಬರೆದು ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.



Click it and Unblock the Notifications