Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏನೋ ಹೊಸ ಪ್ರಯೋಗ ಮಾಡಲು ಹೋಗಿ, ಈತ ಮಾಡಿದ ಎಡವಟ್ಟು ನೋಡಿ....
ದಂಪತಿಗಳ ಅತ್ಯಂತ ವೈಯಕ್ತಿಕ ಸಮಯದಲ್ಲಿ ನಡೆಸುವ ಕಾಮದಾಟದಲ್ಲಿ ಪರಸ್ಪರ ಒಪ್ಪಿಗೆಯಾಗುವ ಯಾವ ಕ್ರಿಯೆಯಾದರೂ ಚೆನ್ನವೇ. ಇದಕ್ಕಾಗಿ ಕೆಲವು ಉಪಕರಣಗಳನ್ನೂ ಬಳಸುವುದು ತಪ್ಪಲ್ಲ. ಆದರೆ ಇವುಗಳ ಬಳಕೆಯಲ್ಲಿ ಏನಾದರೂ ಎಡವಟ್ಟಾದರೆ ಮಾತ್ರ ಇದು ವಿಷಮಸ್ಥಿತಿಗೆ ತಲುಪಬಹುದು ಹಾಗೂ ಮುಜಗರದ ಕಾರಣ ವೈದ್ಯರ ಹೊರತಾಗಿ ಬೇರೆಯವರ ನೆರವನ್ನೂ ಪಡೆಯಲು ಸಾಧ್ಯವಾಗದಿರುವುದು ಇನ್ನೊಂದು ತೊಂದರೆಯಾಗಿದೆ.
ಚೀನಾದ ಓರ್ವ ವ್ಯಕ್ತಿಗೆ ಆಗಿದ್ದೂ ಇದೇ! ಕಾಮದಾಟದಲ್ಲಿ ಏನೋ ಹೊಸ ಪ್ರಯೋಗ ನಡೆಸಲು ಹೋಗಿ ಎಡವಟ್ಟಾದ ಬಳಿಕ ಈ ಪುರುಷನನ್ನು ಆಸ್ಪತ್ರೆಗೆ ಕರೆತಂದು ವಿಲಿವಿಲಿ ಒದ್ದಾಡುತ್ತಿದ್ದವನ ನೋವಿಗೆ ಕಾರಣವೇನೆಂದು ವೈದ್ಯರು ಪರಿಶೀಲಿಸಿದಾಗ ಅವರಿಗೆ ಜೀವಮಾನದ ಅಚ್ಚರಿ ಕಾದಿತ್ತು. ಈತನ ಗುದದ್ವಾರದಲ್ಲಿ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿತ್ತು....ಮುಂದೇನಾಯಿತು ನೋಡೋಣ...

ಈತನ ಪರಿಚಯವನ್ನು ಬಚ್ಚಿಡಲಾಗಿದೆ
ಚೀನಾ ನಾಗರಿಕನಾದ ಈ ಮೂವತ್ತಮೂರು ವರ್ಷದ ಪುರುಷರ ಪರಿಚಯವನ್ನು ಬಚ್ಚಿಡಲಾಗಿದ್ದು ಈತ ವಿವಾಹಿತನಾಗಿದ್ದು ನಾಲ್ವರು ಮಕ್ಕಳ ತಂದೆಯೂ ಆಗಿದ್ದಾನೆ. ಒಂದು ದಿನ ನಡುರಾತ್ರಿ ಎರಡು ಗಂಟೆಗೆ ತಾಳಲಾರದ ನೋವಿನಿಂದ ವಿಲಿವಿಲಿಗುಟ್ಟುತ್ತಿದ್ದ ಈ ವ್ಯಕ್ತಿಯನ್ನು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಕರೆತರಲಾಗಿತ್ತು.

ಈ ಸ್ಥಿತಿಯಲ್ಲಾತ ಎರಡು ದಿನ ಇದ್ದ!
ಯಾವುದೋ ಪ್ರಯೋಗ ಮಾಡಲೆಂದು ಹೋಗಿ ಗುದದ್ವಾರದಲ್ಲಿ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿದ್ದು ಬಳಿಕ ಹೊರತೆಗೆಯಲಾಗದೇ ಹಾಗೇ ಉಳಿದು ಹೋಗಿತ್ತು. ಕೊಂಚ ಹೊತ್ತು ಕಾದು ನೋಡುವ ಎಂದು ಎರಡು ದಿನ ಇತ ಕಾದ ಬಳಿಕ ನೋವು ತಾಳಲಾರದಷ್ಟು ಹೆಚ್ಚಿದ್ದರಿಂದ ಕಡೆಗೂ ಆತ್ಮೀಯರ ನೆರವಿನಿಂದ ಈತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಈತನ ಹಿಂಭಾಗ ಭಾರೀ ಒತ್ತಡದಿಂದ ಊದಿಕೊಂಡಿದ್ದು ನೋವು ಅಪಾರವಾಗಿತ್ತು.

ವೈದ್ಯರಿಗೂ ಎದುರಾದ ಗೊಂದಲ
ರೋಗಿಯ ದೇಹವನ್ನು ತಪಾಸಿಸಿ ನೋವಿಗೆ ಕಾರಣ ಏನೆಂದು ಹುಡುಕಿದ ವೈದ್ಯರಿಗೆ ಈತನ ಗುದದ್ವಾರದಲ್ಲಿ ಇಡಿಯ ಒಂದು ದೊಡ್ಡ ಎಂಟಿಂಚಿನ ಗಾಜಿನ ಕಪ್ ಒಂದನ್ನು ತೂರಿಸಲಾಗಿದ್ದುದು ಕಂಡುಬಂದಿತ್ತು. ಈಗ ವೈದ್ಯರಿಗೆ ನಿಜವಾಗಿಯೂ ಗೊಂದಲ ಹಾಗೂ ಗಾಬರಿ ಉಂಟಾಗಿತ್ತು. ಏಕೆಂದರೆ ಗಾಜು ಸುಲಭವಾಗಿ ಪುಡಿಯಾಗುವ ವಸ್ತುವಾಗಿದ್ದು ಇದರ ಮೇಲೆ ಯಾವುದೇ ಒತ್ತಡ ಹೇರಿದರೂ ಇದು ದೇಹದ ಒಳಗೇ ಸ್ಫೋಟಗೊಂಡಂತೆ ಒಡೆದು ಗಾಜಿನ ಚೂರುಗಳೆಲ್ಲಾ ದೇಹದ ಮುಖ್ಯ ಅಂಗಗಳಿಗೆಲ್ಲ ಚುಚ್ಚಿ ಹರಿದು ಪರಿಸ್ಥಿತಿಯನ್ನು ವಿಷಮವಾಗಿಸುತ್ತಿತ್ತು. ಇದು ಸಾವಿಗೂ ಕಾರಣವಾಗಬಹುದು.

ಶಸ್ತ್ರಕ್ರಿಯೆ ಅನಿವಾರ್ಯವಾಗಿತ್ತು
ತಕ್ಷಣವೇ ಕಟುನಿರ್ಧಾರ ತೆಗೆದುಕೊಂಡ ವೈದ್ಯರ ತಂಡ ಕೂಡಲೇ ಈ ವ್ಯಕ್ತಿಯ ಹಿಂಭಾಗಕ್ಕೆ ಅರವಳಿಕೆಯ ಇಂಜೆಕ್ಷನ್ ನೀಡಿ ಮರಗಟ್ಟಿಸಿದರು. ಆದರೂ ಅಪಾಯವಿಲ್ಲದಂತೆ ಕಪ್ ಅನ್ನು ಹೊರತೆಗೆಯುವ ಭರವಸೆಯಂತೂ ಆ ಹೊತ್ತಿನಲ್ಲಿ ಯಾವ ವೈದ್ಯರೂ ನೀಡಲು ತಯಾರಿರಲಿಲ್ಲ. ಏಕೆಂದರೆ ಗಾಜು ಅತಿ ನಯವಾಗಿದ್ದು ಜಾರುತ್ತಿದ್ದ ಕಾರಣ ಹಿಡಿತಕ್ಕೇ ಸಿಗುತ್ತಿರಲಿಲ್ಲ. ಬಳಿಕ ಶಸ್ತ್ರಕ್ರಿಯೆ ನಡೆಸಿ ಗಾಜು ಒಡೆಯದಂತೆ ಸುರಕ್ಷಿತವಾಗಿ ಹೊರತೆಗೆಯಲಾಯ್ತು. ಬಳಿಕ ಈ ವ್ಯಕ್ತಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ ಈ ಕಪ್ ತನ್ನ ದೇಹದೊಳಗೆ ಹೇಗೆ ಬಂದಿತ್ತು ಎಂಬ ಪ್ರಶ್ನೆಗೆ ಆತ ಉತ್ತರ ನೀಡಬಯಸದೇ ಗೌಪ್ಯತೆ ಕಾಪಾಡಿಕೊಂಡಿದ್ದಾನೆ. ಈತನ ದೇಹದೊಳಗೆ ಕಪ್ ಹೋಗಿದ್ದಾದರೂ ಹೇಗೆ? ಏನು ಸಂಭವಿಸಿರಬಹುದು? ಈ ಬಗ್ಗೆ ನಿಮ್ಮ ಕಲ್ಪನೆಯನ್ನು ಬರೆದು ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.



Click it and Unblock the Notifications











