Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇದು ಖಾಲಿ ಬಿಯರ್ ಬಾಟಲ್ಗಳಿಂದ ನಿರ್ಮಿಸಲಾದ ದೇವಾಲಯ!!
ವಿಶ್ವದಲ್ಲಿ ಅಚ್ಚರಿಗಳು ಪ್ರತೀದಿನ ನಡೆಯುತ್ತಲೇ ಇರುತ್ತದೆ. ಮಾನವರು ಕೂಡ ಕೆಲವೊಂದು ಅಚ್ಚರಿ ಮೂಡಿಸುವಂತಹ ಕೆಲಸ ಮಾಡುತ್ತಾ ಇರುತ್ತಾರೆ. ಪ್ರಕೃತಿ ನಿರ್ಮಿತ ಅಚ್ಚರಿಗಳು ಒಂದು ಕಡೆಯಾದರೆ ಮಾನವ ನಿರ್ಮಿತ ಅಚ್ಚರಿಗಳು ನಮ್ಮನ್ನು ಮತ್ತಷ್ಟು ಬೆರಗುಗೊಳಿಸುವುದು. ಅದರಲ್ಲೂ ಥೈಲ್ಯಾಂಡ್ನಲ್ಲಿ ಇರುವಂತಹ ದೇವಾಲಯವೊಂದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
ಯಾಕೆಂದರೆ ಇದನ್ನು ಖಾಲಿ ಬಿಯರ್ ಬಾಟಲಿಗಳಿಂದ ನಿರ್ಮಿಸಲಾಗಿದೆ. ಕೆಲವರು ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟಿಸಿದ್ದಾರೆ. ಆದರೆ ಇದನ್ನು ನಿರ್ಮಿಸಿದವರು ಮಾತ್ರ ಕೇವಲ ಬಿಯರ್ ಬಾಟಲಿಗಳನ್ನು ಬಳಸಿಕೊಂಡು ಎಲ್ಲರನ್ನು ಅಚ್ಚರಿಗೀಡು ಮಾಡಿದ್ದಾರೆ.

ಈ ಅಚ್ಚರಿ ಮೂಡಿಸುವ ದೇವಾಲಯದ ಬಗ್ಗೆ ಓದುತ್ತಾ ಸಾಗಿ....
ಗೆಳೆಯರು ತಮ್ಮ ಮನೆಗಳನ್ನು ಬಿಯರ್ ಬಾಟಲಿಗಳಿಂದ ಶೃಂಗರಿಸುವುದನ್ನು ನೋಡಿದಂತಹ ಸನ್ಯಾಸಿಯೊಬ್ಬರು ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಯಾಕೆ ಮಾಡಬಾರದು ಎಂದು 80ರ ದಶಕದಲ್ಲೇ ಆಲೋಚಿಸಿದ್ದರು. ಈ ಆಲೋಚನೆಯನ್ನು ಮುಕ್ತವಾಗಿ ಸ್ವಾಗತಿಸಿದ ಜನರು ತಮ್ಮ ಮನೆಯಲ್ಲಿ ಇದ್ದ ಬಾಟಲಿಗಳನ್ನು ನೀಡಲು ಆರಂಭಿಸಿದರು. ಮಂದಿರ ನಿರ್ಮಾಣ ಮಾಡುವಷ್ಟು ಬಾಟಲಿಗಳು ಈಗ ಲಭ್ಯವಾಗಿದೆ.

ಖಾಲಿ ಬಾಟಲಿಗಳ ರಾಶಿ!
ಸನ್ಯಾಸಿಯು ಹಲವಾರು ವಿಧದ ಬಾಟಲಿಗಳನ್ನು ಕೋಟಿಗಟ್ಟಲೆ ಸಂಗ್ರಹಿಸಿದ್ದಾರೆ. ಇದರ ಬಳಿಕ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಇದು ನೋಡಲು ಸುಂದರ ಮಂದಿರವಾಗಿದೆ.

ಬಿಯರ್ ಬಾಟಲಿಗಳಿಂದಲೇ ಸಂಪೂರ್ಣ ದೇಗುಲ!
ಮಂದಿರ ನಿರ್ಮಾಣದ ಪ್ರತಿಯೊಂದು ಹಂತವನ್ನು ಖಾಲಿ ಬಿಯರ್ ಬಾಟಲಿಗಳಿಂದಲೇ ಮಾಡಲಾಗಿದೆ. ಇಡೀ ಬಾಟಲಿಯಿಂದ ಹಿಡಿದು ಅದನ್ನು ತುಂಡು ಮಾಡಿ ಕೂಡ ಬಳಸಲಾಗಿದೆ. ಈಗ ಮಂದಿರವು ತುಂಬಾ ಸುಂದರವಾಗಿ ಕಾಣಿಸುತ್ತಾ ಇದೆ. ಒಬ್ಬ ವಾಸ್ತುಶಿಲ್ಪಿಗೂ ಇದು ಸವಾಲಾಗಿದೆ. ಶೌಚಾಲಯದಿಂದ ಹಿಡಿದು ಸ್ಮಶಾನದ ತನಕ ಪ್ರತಿಯೊಂದನ್ನು ಬಾಟಲಿಯಿಂದಲೇ ತಯಾರಿಸಲಾಗಿದೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಮಂದಿರದಲ್ಲಿ ಎರಡು ಬುದ್ಧನ ಪ್ರತಿಮೆಯಿದೆ. ಇದನ್ನು ಬಾಟಲಿಗಳಿಂದ ಮಾಡಲಾಗಿಲ್ಲ. ಆದರೆ ಇದನ್ನು ಬಂಗಾರದ ಗಾಜಿನ ಮೊಸಾಯಿಕ್ ನಿಂದ ತಯಾರಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಅಲ್ಲಿ ದಢೂತಿ ಬುದ್ಧನನ್ನು ನೋಡಬಹುದು. ಇದನ್ನು ಹೆಚ್ಚಿನವರು ಬುದೈ ಎಂದು ಕರೆಯುತ್ತಾರೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಮಾಡಿರುವುದು ಒಳ್ಳೆಯ ಆಲೋಚನೆಯಾ ಎಂದು ತಿಳಿದಿಲ್ಲ. ಆದರೆ ಬಿಸಾಕುವ ವಸ್ತುಗಳನ್ನು ಬಳಸಿಕೊಳ್ಳುವುದು ಒಳ್ಳೆಯ ವಿಚಾರ. ಇದರ ಬಗ್ಗೆ ನಿಮ್ಮ ಯಾವುದೇ ಅನಿಸಿಕೆಗಳು ಇದ್ದರೆ ಅದನ್ನು ನಮಗೆ ಕಮೆಂಟ್ ಬಾಕ್ಸ್ನಲ್ಲಿ ಹಾಕಿ ತಿಳಿಸಿ.



Click it and Unblock the Notifications