Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಇದು ಖಾಲಿ ಬಿಯರ್ ಬಾಟಲ್ಗಳಿಂದ ನಿರ್ಮಿಸಲಾದ ದೇವಾಲಯ!!
ವಿಶ್ವದಲ್ಲಿ ಅಚ್ಚರಿಗಳು ಪ್ರತೀದಿನ ನಡೆಯುತ್ತಲೇ ಇರುತ್ತದೆ. ಮಾನವರು ಕೂಡ ಕೆಲವೊಂದು ಅಚ್ಚರಿ ಮೂಡಿಸುವಂತಹ ಕೆಲಸ ಮಾಡುತ್ತಾ ಇರುತ್ತಾರೆ. ಪ್ರಕೃತಿ ನಿರ್ಮಿತ ಅಚ್ಚರಿಗಳು ಒಂದು ಕಡೆಯಾದರೆ ಮಾನವ ನಿರ್ಮಿತ ಅಚ್ಚರಿಗಳು ನಮ್ಮನ್ನು ಮತ್ತಷ್ಟು ಬೆರಗುಗೊಳಿಸುವುದು. ಅದರಲ್ಲೂ ಥೈಲ್ಯಾಂಡ್ನಲ್ಲಿ ಇರುವಂತಹ ದೇವಾಲಯವೊಂದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
ಯಾಕೆಂದರೆ ಇದನ್ನು ಖಾಲಿ ಬಿಯರ್ ಬಾಟಲಿಗಳಿಂದ ನಿರ್ಮಿಸಲಾಗಿದೆ. ಕೆಲವರು ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟಿಸಿದ್ದಾರೆ. ಆದರೆ ಇದನ್ನು ನಿರ್ಮಿಸಿದವರು ಮಾತ್ರ ಕೇವಲ ಬಿಯರ್ ಬಾಟಲಿಗಳನ್ನು ಬಳಸಿಕೊಂಡು ಎಲ್ಲರನ್ನು ಅಚ್ಚರಿಗೀಡು ಮಾಡಿದ್ದಾರೆ.

ಈ ಅಚ್ಚರಿ ಮೂಡಿಸುವ ದೇವಾಲಯದ ಬಗ್ಗೆ ಓದುತ್ತಾ ಸಾಗಿ....
ಗೆಳೆಯರು ತಮ್ಮ ಮನೆಗಳನ್ನು ಬಿಯರ್ ಬಾಟಲಿಗಳಿಂದ ಶೃಂಗರಿಸುವುದನ್ನು ನೋಡಿದಂತಹ ಸನ್ಯಾಸಿಯೊಬ್ಬರು ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಯಾಕೆ ಮಾಡಬಾರದು ಎಂದು 80ರ ದಶಕದಲ್ಲೇ ಆಲೋಚಿಸಿದ್ದರು. ಈ ಆಲೋಚನೆಯನ್ನು ಮುಕ್ತವಾಗಿ ಸ್ವಾಗತಿಸಿದ ಜನರು ತಮ್ಮ ಮನೆಯಲ್ಲಿ ಇದ್ದ ಬಾಟಲಿಗಳನ್ನು ನೀಡಲು ಆರಂಭಿಸಿದರು. ಮಂದಿರ ನಿರ್ಮಾಣ ಮಾಡುವಷ್ಟು ಬಾಟಲಿಗಳು ಈಗ ಲಭ್ಯವಾಗಿದೆ.

ಖಾಲಿ ಬಾಟಲಿಗಳ ರಾಶಿ!
ಸನ್ಯಾಸಿಯು ಹಲವಾರು ವಿಧದ ಬಾಟಲಿಗಳನ್ನು ಕೋಟಿಗಟ್ಟಲೆ ಸಂಗ್ರಹಿಸಿದ್ದಾರೆ. ಇದರ ಬಳಿಕ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಇದು ನೋಡಲು ಸುಂದರ ಮಂದಿರವಾಗಿದೆ.

ಬಿಯರ್ ಬಾಟಲಿಗಳಿಂದಲೇ ಸಂಪೂರ್ಣ ದೇಗುಲ!
ಮಂದಿರ ನಿರ್ಮಾಣದ ಪ್ರತಿಯೊಂದು ಹಂತವನ್ನು ಖಾಲಿ ಬಿಯರ್ ಬಾಟಲಿಗಳಿಂದಲೇ ಮಾಡಲಾಗಿದೆ. ಇಡೀ ಬಾಟಲಿಯಿಂದ ಹಿಡಿದು ಅದನ್ನು ತುಂಡು ಮಾಡಿ ಕೂಡ ಬಳಸಲಾಗಿದೆ. ಈಗ ಮಂದಿರವು ತುಂಬಾ ಸುಂದರವಾಗಿ ಕಾಣಿಸುತ್ತಾ ಇದೆ. ಒಬ್ಬ ವಾಸ್ತುಶಿಲ್ಪಿಗೂ ಇದು ಸವಾಲಾಗಿದೆ. ಶೌಚಾಲಯದಿಂದ ಹಿಡಿದು ಸ್ಮಶಾನದ ತನಕ ಪ್ರತಿಯೊಂದನ್ನು ಬಾಟಲಿಯಿಂದಲೇ ತಯಾರಿಸಲಾಗಿದೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಮಂದಿರದಲ್ಲಿ ಎರಡು ಬುದ್ಧನ ಪ್ರತಿಮೆಯಿದೆ. ಇದನ್ನು ಬಾಟಲಿಗಳಿಂದ ಮಾಡಲಾಗಿಲ್ಲ. ಆದರೆ ಇದನ್ನು ಬಂಗಾರದ ಗಾಜಿನ ಮೊಸಾಯಿಕ್ ನಿಂದ ತಯಾರಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಅಲ್ಲಿ ದಢೂತಿ ಬುದ್ಧನನ್ನು ನೋಡಬಹುದು. ಇದನ್ನು ಹೆಚ್ಚಿನವರು ಬುದೈ ಎಂದು ಕರೆಯುತ್ತಾರೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಮಾಡಿರುವುದು ಒಳ್ಳೆಯ ಆಲೋಚನೆಯಾ ಎಂದು ತಿಳಿದಿಲ್ಲ. ಆದರೆ ಬಿಸಾಕುವ ವಸ್ತುಗಳನ್ನು ಬಳಸಿಕೊಳ್ಳುವುದು ಒಳ್ಳೆಯ ವಿಚಾರ. ಇದರ ಬಗ್ಗೆ ನಿಮ್ಮ ಯಾವುದೇ ಅನಿಸಿಕೆಗಳು ಇದ್ದರೆ ಅದನ್ನು ನಮಗೆ ಕಮೆಂಟ್ ಬಾಕ್ಸ್ನಲ್ಲಿ ಹಾಕಿ ತಿಳಿಸಿ.



Click it and Unblock the Notifications











