Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದು ಖಾಲಿ ಬಿಯರ್ ಬಾಟಲ್ಗಳಿಂದ ನಿರ್ಮಿಸಲಾದ ದೇವಾಲಯ!!
ವಿಶ್ವದಲ್ಲಿ ಅಚ್ಚರಿಗಳು ಪ್ರತೀದಿನ ನಡೆಯುತ್ತಲೇ ಇರುತ್ತದೆ. ಮಾನವರು ಕೂಡ ಕೆಲವೊಂದು ಅಚ್ಚರಿ ಮೂಡಿಸುವಂತಹ ಕೆಲಸ ಮಾಡುತ್ತಾ ಇರುತ್ತಾರೆ. ಪ್ರಕೃತಿ ನಿರ್ಮಿತ ಅಚ್ಚರಿಗಳು ಒಂದು ಕಡೆಯಾದರೆ ಮಾನವ ನಿರ್ಮಿತ ಅಚ್ಚರಿಗಳು ನಮ್ಮನ್ನು ಮತ್ತಷ್ಟು ಬೆರಗುಗೊಳಿಸುವುದು. ಅದರಲ್ಲೂ ಥೈಲ್ಯಾಂಡ್ನಲ್ಲಿ ಇರುವಂತಹ ದೇವಾಲಯವೊಂದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
ಯಾಕೆಂದರೆ ಇದನ್ನು ಖಾಲಿ ಬಿಯರ್ ಬಾಟಲಿಗಳಿಂದ ನಿರ್ಮಿಸಲಾಗಿದೆ. ಕೆಲವರು ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟಿಸಿದ್ದಾರೆ. ಆದರೆ ಇದನ್ನು ನಿರ್ಮಿಸಿದವರು ಮಾತ್ರ ಕೇವಲ ಬಿಯರ್ ಬಾಟಲಿಗಳನ್ನು ಬಳಸಿಕೊಂಡು ಎಲ್ಲರನ್ನು ಅಚ್ಚರಿಗೀಡು ಮಾಡಿದ್ದಾರೆ.

ಈ ಅಚ್ಚರಿ ಮೂಡಿಸುವ ದೇವಾಲಯದ ಬಗ್ಗೆ ಓದುತ್ತಾ ಸಾಗಿ....
ಗೆಳೆಯರು ತಮ್ಮ ಮನೆಗಳನ್ನು ಬಿಯರ್ ಬಾಟಲಿಗಳಿಂದ ಶೃಂಗರಿಸುವುದನ್ನು ನೋಡಿದಂತಹ ಸನ್ಯಾಸಿಯೊಬ್ಬರು ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಯಾಕೆ ಮಾಡಬಾರದು ಎಂದು 80ರ ದಶಕದಲ್ಲೇ ಆಲೋಚಿಸಿದ್ದರು. ಈ ಆಲೋಚನೆಯನ್ನು ಮುಕ್ತವಾಗಿ ಸ್ವಾಗತಿಸಿದ ಜನರು ತಮ್ಮ ಮನೆಯಲ್ಲಿ ಇದ್ದ ಬಾಟಲಿಗಳನ್ನು ನೀಡಲು ಆರಂಭಿಸಿದರು. ಮಂದಿರ ನಿರ್ಮಾಣ ಮಾಡುವಷ್ಟು ಬಾಟಲಿಗಳು ಈಗ ಲಭ್ಯವಾಗಿದೆ.

ಖಾಲಿ ಬಾಟಲಿಗಳ ರಾಶಿ!
ಸನ್ಯಾಸಿಯು ಹಲವಾರು ವಿಧದ ಬಾಟಲಿಗಳನ್ನು ಕೋಟಿಗಟ್ಟಲೆ ಸಂಗ್ರಹಿಸಿದ್ದಾರೆ. ಇದರ ಬಳಿಕ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಇದು ನೋಡಲು ಸುಂದರ ಮಂದಿರವಾಗಿದೆ.

ಬಿಯರ್ ಬಾಟಲಿಗಳಿಂದಲೇ ಸಂಪೂರ್ಣ ದೇಗುಲ!
ಮಂದಿರ ನಿರ್ಮಾಣದ ಪ್ರತಿಯೊಂದು ಹಂತವನ್ನು ಖಾಲಿ ಬಿಯರ್ ಬಾಟಲಿಗಳಿಂದಲೇ ಮಾಡಲಾಗಿದೆ. ಇಡೀ ಬಾಟಲಿಯಿಂದ ಹಿಡಿದು ಅದನ್ನು ತುಂಡು ಮಾಡಿ ಕೂಡ ಬಳಸಲಾಗಿದೆ. ಈಗ ಮಂದಿರವು ತುಂಬಾ ಸುಂದರವಾಗಿ ಕಾಣಿಸುತ್ತಾ ಇದೆ. ಒಬ್ಬ ವಾಸ್ತುಶಿಲ್ಪಿಗೂ ಇದು ಸವಾಲಾಗಿದೆ. ಶೌಚಾಲಯದಿಂದ ಹಿಡಿದು ಸ್ಮಶಾನದ ತನಕ ಪ್ರತಿಯೊಂದನ್ನು ಬಾಟಲಿಯಿಂದಲೇ ತಯಾರಿಸಲಾಗಿದೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಮಂದಿರದಲ್ಲಿ ಎರಡು ಬುದ್ಧನ ಪ್ರತಿಮೆಯಿದೆ. ಇದನ್ನು ಬಾಟಲಿಗಳಿಂದ ಮಾಡಲಾಗಿಲ್ಲ. ಆದರೆ ಇದನ್ನು ಬಂಗಾರದ ಗಾಜಿನ ಮೊಸಾಯಿಕ್ ನಿಂದ ತಯಾರಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಅಲ್ಲಿ ದಢೂತಿ ಬುದ್ಧನನ್ನು ನೋಡಬಹುದು. ಇದನ್ನು ಹೆಚ್ಚಿನವರು ಬುದೈ ಎಂದು ಕರೆಯುತ್ತಾರೆ.

ಮಂದಿರದಲ್ಲಿ ಬುದ್ಧನ ಪ್ರತಿಮೆ
ಬಿಯರ್ ಬಾಟಲಿಗಳಿಂದ ಮಂದಿರ ನಿರ್ಮಾಣ ಮಾಡಿರುವುದು ಒಳ್ಳೆಯ ಆಲೋಚನೆಯಾ ಎಂದು ತಿಳಿದಿಲ್ಲ. ಆದರೆ ಬಿಸಾಕುವ ವಸ್ತುಗಳನ್ನು ಬಳಸಿಕೊಳ್ಳುವುದು ಒಳ್ಳೆಯ ವಿಚಾರ. ಇದರ ಬಗ್ಗೆ ನಿಮ್ಮ ಯಾವುದೇ ಅನಿಸಿಕೆಗಳು ಇದ್ದರೆ ಅದನ್ನು ನಮಗೆ ಕಮೆಂಟ್ ಬಾಕ್ಸ್ನಲ್ಲಿ ಹಾಕಿ ತಿಳಿಸಿ.



Click it and Unblock the Notifications











