Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಈ ಊರಿನ ಜನರು 'ಹೆಣ್ಣು ಋತುಮತಿ'ಯಾದರೆ, ಕುಣಿದು ಕುಪ್ಪಳಿಸುತ್ತಾರೆ!!
ಹಿಂದಿನ ದಿನಗಳಲ್ಲಿ ಭಾರತೀಯ ಮಹಿಳೆಯರನ್ನು ತಿಂಗಳ ರಜಾದಿನಗಳ ಕಾಲ ಪ್ರತ್ಯೇಕವಾದ ಕೋಣೆಯಲ್ಲಿರಿಸಲಾಗುತ್ತಿತ್ತು. ಈ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿ ಸಿಗಲಿ ಎಂದು ಹಿರಿಯರು ಮಾಡಿದ ಕ್ರಮವೇ ಆಗಿತ್ತು. ಕೆಲವು ಸಂಪ್ರದಾಯಗಳಲ್ಲಿ ಈ ಅವಧಿಯಲ್ಲಿ ಮಹಿಳೆಯರು ಮನೆಯ ಹೊರಗಿನ ಹುಲ್ಲಿನ ಮನೆಯೊಂದರಲ್ಲಿ ಯಾರಿಗೂ ಕಾಣದಂತೆಯೂ ಇರಬೇಕಾಗಿತ್ತು.
ಆದರೆ ಒರಿಸ್ಸಾ ರಾಜ್ಯದಲ್ಲಿ ಇದಕ್ಕೆ ವ್ಯತಿರಿಕ್ತವಾದ ಪದ್ಧತಿಯೊಂದಿದೆ. ಇಲ್ಲಿನ ಬುಡಕಟ್ಟು ಜನಾಂಗವೊಂದು ತಮ್ಮ ಕುಟುಂಬದ ಹೆಣ್ಣುಮಗಳು ಋತುಮತಿಯಾದರೆ, ಸಂತಸದಿಂದ ಕುಣಿದು ಕುಪ್ಪಳಿಸಿ ದೊಡ್ಡ ಹಬ್ಬವನ್ನೇ ಆಚರಿಸುತ್ತಾರೆ ಹಾಗೂ ಈ ಆಚರಣೆಗೆ 'ರಾಜಾ ಉತ್ಸವ' ಎಂಬ ಹೆಸರನ್ನೂ ನೀಡುತ್ತಾರೆ....

ರಾಜಾ ಉತ್ಸವ
ಬುಡಕಟ್ಟು ಸಂಪ್ರದಾಯದ ಮೂಲಕ ಪ್ರಾರಂಭಗೊಂಡ ರಾಜಾ ಉತ್ಸವ ಕಾಲಕ್ರಮೇಣ ಹಲವು ಬದಲಾವಣೆಗಳನ್ನು ಕಂಡಿದೆ. ಮೂಲತಃ ಇದೊಂದು ತಾಂತ್ರಿಕ ವಿದ್ಯೆಯ ವಿಧಿಯಾಗಿದ್ದು ಈ ಕ್ರಿಯೆಯಲ್ಲಿ ಋತುಮತಿಯ ದೇಹದಿಂದ ವಿಸರ್ಜನೆಗೊಂಡ ರಕ್ತವನ್ನು ಚಿಮುಕಿಸಲಾಗುತ್ತಿತ್ತು. ಈ ರಕ್ತವನ್ನು ಅವರು ಜೀವನದ ಶಕ್ತಿ ಎಂದು ಪರಿಗಣಿಸುತ್ತಾರೆ. ಆದರೆ ಜನಾಂಗದಿಂದ ಜನಾಂಗಕ್ಕೆ ನಿಧಾನವಾಗಿ ಬದಲಾವಣೆಗೆ ಒಳಪಡುತ್ತಾ ಬಂದಿದೆ.

ಹಿಂದಿನ ಪದ್ಧತಿ
ಹಿಂದಿನ ಸಮಯದಲ್ಲಿ ಕೃಷಿಯೇ ಪ್ರಧಾನವಾಗಿದ್ದಾಗ ಕಟಾವಿನ ಸಂಭ್ರಮದ ಜೊತೆಗೇ ಈ ಹಬ್ಬವನ್ನೂ ಆಚರಿಸಲಾಗುತ್ತಿತ್ತು.

ಈಗ ಕಾಲಬದಲಾಗಿದೆ...
ಈಗ ಹಲವು ಬದಲಾವಣೆಗಳಾಗಿದ್ದರೂ ಪ್ರಧಾನವಾಗಿ ಹೆಣ್ಣುಮಕ್ಕಳ ಈ ದಿನಗಳನ್ನು ಪವಿತ್ರವೆಂದು ಭಾವಿಸಿ ಅವರಿಗೆ ಅತಿ ಹೆಚ್ಚಿನ ಗೌರವ ನೀಡಿ ಸಂಭ್ರಮಿಸಲಾಗುತ್ತಿದೆ.

ಅನಿಷ್ಟ ಪದ್ಧತಿಗಳಿಂದ ಹೊರಬರುವ ಹೋರಾಟದ ಸಂಕೇತ
ಈ ಹಬ್ಬವನ್ನು ಕೆಲವೇ ಸ್ಥಳಗಳಲ್ಲಿ ಮಾತ್ರವೇ ಅಚರಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಆಚರಣೆಯಲ್ಲಿದ್ದ ಮಹಿಳೆಯರ ಶೋಷಣೆ, ಅವಮಾನ ಹಾಗೂ ಧಾರ್ಮಿಕ ನಿಷೇಧಗಳಂತಹ ಅನಿಷ್ಟ ಪದ್ಧತಿಗಳಿಂದ ಹೊರಬರುವ ಹೋರಾಟದ ಸಂಕೇತವೂ ಆಗಿದೆ.

ಇದು ಮಹಿಳೆಯರಿಗೆ ಸಮಾನ ಗೌರವನ್ನು ನೀಡುವ ಹಬ್ಬ
ಹಿಂದಿನ ದಿನಗಳಲ್ಲಿ ಆಚರಣೆಯಲ್ಲಿದ್ದ ಕೆಲವು ಸಂಪ್ರದಾಯಗಳನ್ನು ಕೊನೆಗೊಳಿಸುವುದು ಇಂದಿನ ಅಗತ್ಯವಾದರೆ ಮಹಿಳೆಯರಿಗೆ ಸಮಾನ ಗೌರವನ್ನು ನೀಡುವ ಇಂತಹ ಹಬ್ಬಗಳನ್ನು ಉಳಿಸಿಕೊಳ್ಳಬೇಕಾಗಿದೆ.



Click it and Unblock the Notifications